AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾದಕ ವಸ್ತುಗಳ ಜಪ್ತಿ ಪ್ರಮಾಣ 4 ವರ್ಷಗಳಲ್ಲಿ ಭರ್ಜರಿ ಏರಿಕೆ; ಕಳ್ಳಸಾಗಣೆಯ ಕೇಂದ್ರವಾಗುತ್ತಿದೆ ಭಾರತ, ತನಿಖಾ ದಳಗಳಿಗೆ ತಲೆನೋವು

ಸದ್ಯ ಎನ್​ಸಿಬಿ, ಡಿಆರ್​ಐ ಮೂಲಗಳು ಹೇಳುವ ಪ್ರಕಾರ ಈ ಮಾದಕ ವಸ್ತುಗಳ ಕಳ್ಳಸಾಗಣೆ ಭಾರತದ ಸಾಗರ ಮಾರ್ಗಗಳ ಮೂಲಕ ನಡೆಯುತ್ತಿದೆ. ಭಾರತದ ಕರಾವಳಿ ತೀರಗಳು ಹಲವು ಚಿಕ್ಕಚಿಕ್ಕ ಬಂದರುಗಳನ್ನು ಹೊಂದಿರುವುದರಿಂದ ಸಾಗಣೆದಾರರಿಗೆ ಅನುಕೂಲವಾಗಿದೆ.

ಮಾದಕ ವಸ್ತುಗಳ ಜಪ್ತಿ ಪ್ರಮಾಣ 4 ವರ್ಷಗಳಲ್ಲಿ ಭರ್ಜರಿ ಏರಿಕೆ; ಕಳ್ಳಸಾಗಣೆಯ ಕೇಂದ್ರವಾಗುತ್ತಿದೆ ಭಾರತ, ತನಿಖಾ ದಳಗಳಿಗೆ ತಲೆನೋವು
ಸಾಂಕೇತಿಕ ಚಿತ್ರ
TV9 Web
| Edited By: |

Updated on: Dec 11, 2021 | 7:16 PM

Share

ಈಗೀಗಂತೂ ದೇಶದಲ್ಲಿ ಮಾದಕ ವಸ್ತುಗಳ (Drugs) ಬಳಕೆ, ಸಾಗಾಟ, ಪ್ರಕರಣಗಳು ಹೆಚ್ಚುತ್ತಿವೆ. ಉಡ್ತಾ ಪಂಜಾಬ್​ ಎಂಬುದು ಈ ಮೊದಲೇ ಭರ್ಜರಿ ಸುದ್ದಿ ಮಾಡಿದ ಪ್ರಕರಣ. ಆದರೆ ಈಗೀಗ ಕರ್ನಾಟಕದ ಸ್ಯಾಂಡಲ್​ವುಡ್​, ದೇಶದ ಹಿಂದಿ ಚಿತ್ರೋದ್ಯಮವಾದ ಬಾಲಿವುಡ್​, ರಾಜಕಾರಣಿಗಳ ಮನೆಯಂಗಳದಿಂದಲೂ ಡ್ರಗ್ಸ್​ ಸುದ್ದಿ ಕೇಳಿಬರುತ್ತಿದೆ. ದೊಡ್ಡದೊಡ್ಡ ಗಣ್ಯರ ಹೆಸರೇ ಇದರಲ್ಲಿ ಕೇಳಿಬರುತ್ತಿದೆ. ಹಾಗೇ, ಇನ್ನೊಂದೆಡೆ ಈ ಮಾದಕ ವಸ್ತುಗಳನ್ನು ಕೇಂದ್ರದ ತನಿಖಾ ಪಡೆಗಳು ವಶಪಡಿಸಿಕೊಳ್ಳುವ ಪ್ರಮಾಣವೂ ಜಾಸ್ತಿಯಾಗಿದೆ. ಈ ಬಗ್ಗೆ ಎನ್​ಸಿಬಿ ( Narcotics Control Bureau-ಮಾದಕ ವಸ್ತು ನಿಯಂತ್ರಣ ಮಂಡಳಿ)  ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ನ್ಯೂಸ್ 18 ವರದಿ ಮಾಡಿದೆ.

2018ರಿಂದ 2021ರವರೆಗೆ ಅಂದರೆ ಕೇವಲ ನಾಲ್ಕು ವರ್ಷದಲ್ಲಿ ಹೆರಾಯಿನ್​ ವಶಪಡಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ. 2018ರಲ್ಲಿ ಒಂದು ಬಾರಿಗೆ 8-9 ಕೆಜಿ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ 2021ರಲ್ಲಿ ಒಂದು ಸಲಕ್ಕೇ 3 ಸಾವಿರ ಕೆಜಿಯಷ್ಟು ಪ್ರಮಾಣದಲ್ಲಿ ಹೆರಾಯಿನ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬರೀ ನಾಲ್ಕೇ ವರ್ಷದಲ್ಲಿ ಭಾರತದಲ್ಲಿ ಜಪ್ತಿಯಾಗುವ ಮಾದಕ ವಸ್ತುವಿನ ಪ್ರಮಾಣ ಮಿತಿಮೀರಿದೆ ಎಂದು ಹೇಳಿದ್ದಾರೆ. ಯಾವುದೇ ವಸ್ತುಗಳ ಕಳ್ಳಸಾಗಣೆಯ ಮೇಲೆ ಈ ಗುಪ್ತಚರ ಕಂದಾಯ ಇಲಾಖೆ ನಿಗಾ ಇಡುತ್ತದೆ. ಹಾಗೇ, ಎನ್​ಸಿಬಿ ಮಾದಕ ವಸ್ತುಗಳ ಕಳ್ಳಸಾಗಣೆ ನಿಯಂತ್ರಣ ಸಂಸ್ಥೆಯಾಗಿದೆ. ಈ ಎರಡೂ ಸಂಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೊವಿಡ್​ 19 ಸಾಂಕ್ರಾಮಿಕದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧ ಹೇರಿದ್ದರೂ ಕೂಡ ಈ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಮಾಣ ಹೆಚ್ಚಾಗಿದ್ದಾಗಿ ಮಾಹಿತಿ ನೀಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹೆರಾಯಿನ್​ ಸ್ಮಗ್ಲಿಂಗ್​​ನಲ್ಲಿ ಶಾಕಿಂಗ್​ ಎನ್ನಿಸುವಷ್ಟರ ಮಟ್ಟಿಗೆ ಹೆಚ್ಚಳವಾಗಿದೆ. ಇದರಿಂದಾಗಿ ಭಾರತವು ಕಳ್ಳಸಾಗಣೆದಾರರ ಸಾಗಣೆ ಕೇಂದ್ರವಾದಂತೆ ಭಾಸವಾಗುತ್ತಿದೆ ಎಂದು ಡಿಆರ್​ಐ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೆರಾಯನ್​ ಜಪ್ತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಎನ್​ಸಿಬಿ ಕೂಡ ದೃಢಪಡಿಸಿದೆ. 2017ರಲ್ಲಿ ದೇಶದಲ್ಲಿ ವಿವಿಧ ಪೊಲೀಸ್​ ಪಡೆಗಳು ಸುಮಾರು 875 ಕೆಜಿಯಷ್ಟು ಹೆರಾಯಿನ್​ನ್ನು ವಶಪಡಿಸಿಕೊಂಡಿದ್ದವು. ಅದು 2018ರ ಹೊತ್ತಿಗೆ 913 ಕೆಜಿಗೆ ಏರಿತು. 2019ರಲ್ಲಿ ಒಟ್ಟಾರೆ 2308 ಕೆಜಿ ವಶಪಡಿಸಿಕೊಳ್ಳಲಾಯಿತು. ಅದೇ 2020ರ ಹೊತ್ತಿಗೆ ಶೇ.41ರಷ್ಟು ಹೆಚ್ಚಳವಾಗಿ ಒಟ್ಟಾರೆ 3276 ಕೆಜಿ ಹೆರಾಯಿನ್​ ಜಪ್ತಿ ಮಾಡಲಾಗಿದೆ. 2021ರಕ್ಕೂ ಈ ಪ್ರಮಾಣ ಮುಂದುವರಿದಿದೆ ಎಂದು ಎನ್​ಸಿಬಿ ಡಾಟಾ ಬಿಡುಗಡೆ ಮಾಡಿದೆ.

ಭಾರತದ ಮಾರ್ಗದಲ್ಲಿ ಕಳ್ಳಸಾಗಣೆ ಈ ಮೊದಲು ಇರಾನ್​ ಮತ್ತು ಇರಾಕ್​ ಮಾರ್ಗದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಆಗುತ್ತಿತ್ತು. ಆದರೆ ಈಗೀಗ ಭಾರತವೇ ಕಳ್ಳಸಾಗಣೆಯ ಕೇಂದ್ರವಾಗುತ್ತಿದೆ ಎಂದು ಪಂಜಾಬ್​ನ ಮಾಜಿ ಡಿಜಿಪಿ ಶಶಿಕಾಂತ್ ಶರ್ಮಾ ಹೇಳಿದ್ದಾರೆ. ಮಾದಕ ವಸ್ತು ಇರಲಿ ಅಥವಾ ಇನ್ಯಾವುದೇ ವಸ್ತು ಇರಲಿ ಕಳ್ಳಸಾಗಣೆ ಮಾಡುವವರು ಆಗಾಗ ಮಾರ್ಗವನ್ನು ಬದಲಿಸುತ್ತಾರೆ. ಮೊದಲೆಲ್ಲ ಇರಾನ್, ಇರಾಕ್​ ಮಾರ್ಗವಾಗಿ ಸ್ಮಗ್ಲಿಂಗ್​ ನಡೆಯತ್ತಿತ್ತು. ಆದರೆ ಬರುಬರುತ್ತ ಅಲ್ಲೆಲ್ಲ ನಿರ್ಬಂಧಗಳನ್ನು ವಿಧಿಸಲು ಶುರು ಮಾಡಲಾಯಿತು. ಮತ್ತೆ ಅಂಥ ರಾಷ್ಟ್ರಗಳೊಂದಿಗೆ ಪಾಕಿಸ್ತಾನ ತನ್ನ ಸಂಬಂಧ ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಭಾರತದ ಮೂಲಕವೇ ಈಗ ಡ್ರಗ್ಸ್ ಸಾಗಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯ ಎನ್​ಸಿಬಿ, ಡಿಆರ್​ಐ ಮೂಲಗಳು ಹೇಳುವ ಪ್ರಕಾರ ಈ ಮಾದಕ ವಸ್ತುಗಳ ಕಳ್ಳಸಾಗಣೆ ಭಾರತದ ಸಾಗರ ಮಾರ್ಗಗಳ ಮೂಲಕ ನಡೆಯುತ್ತಿದೆ. ಭಾರತದ ಕರಾವಳಿ ತೀರಗಳು ಹಲವು ಚಿಕ್ಕಚಿಕ್ಕ ಬಂದರುಗಳನ್ನು ಹೊಂದಿರುವುದರಿಂದ ಸಾಗಣೆದಾರರಿಗೆ ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಗಲ್ಫ್​ ದೇಶಗಳಿಂದ ದೋಣಿ, ಹಡಗುಗಳ ಮೂಲಕ ಡ್ರಗ್ಸ್​ ಸಾಗಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಮಾದಕವಸ್ತುಗಳ ರವಾನೆಯನ್ನು ತಡೆಹಿಡಿಯುವುದು ಭಾರತೀಯ ಏಜೆನ್ಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಮುದ್ರ ಮಾರ್ಗಗಳ ಮೂಲಕ ಬರುವ ಎಲ್ಲ ಔಷಧಿಗಳನ್ನೂ ಪರಿಶೀಲಿಸಿಯೇ ಮುಂದೆ ಕಳಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಮೆರಿಕದ ಕೆಂಟಕಿ ಸೇರಿ ಹಲವೆಡೆ ಸುಂಟರಗಾಳಿ ಆರ್ಭಟ; 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದ ಗವರ್ನರ್​

Follow Us
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು