AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದ ಬಳಿ ಪ್ರಬಲ ಡಿಫೆನ್ಸ್ ಸಿಸ್ಟಂ ಇದ್ದರೂ ವಿಫಲವಾಗಿದ್ದು ಹೇಗೆ? ಭಾರತದ ತಂತ್ರ, ಜಾಣ್ಮೆ ಬಿಚ್ಚಿಟ್ಟ ಜಾನ್ ಸ್​ಪೆನ್ಸರ್

Air Defense in the Modern Era: No Silver Bullets, Only Layers, says John Spencer: ಆಪರೇಷನ್ ಸಿಂದೂರ ಹಾಗೂ ನಂತರದ ಚಕಮಕಿಯಲ್ಲಿ ಭಾರತವು ಪಾಕಿಸ್ತಾನವನ್ನು ಸಮರದ ಎಲ್ಲಾ ತಂತ್ರಗಳಲ್ಲಿ ಲೀಲಾಜಾಲವಾಗಿ ಹಿಂದಿಕ್ಕಿದೆ. ಪಾಕಿಸ್ತಾನದ ಬಳಿಕ ಮೇಲ್ನೋಟಕ್ಕೆ ಬಹಳ ಬಲಿಷ್ಠವಾಗಿರುವ ಚೀನೀ ನಿರ್ಮಿತ ಡಿಫೆನ್ಸ್ ಸಿಸ್ಟಂ ಇದ್ದರೂ ಭಾರತ ಸುಲಭವಾಗಿ ಅದನ್ನು ಭೇದಿಸಿದೆ. ಇದು ಹೇಗೆ ಸಾಧ್ಯವಾಯಿತು ಎಂಬುದನ್ನು ಈ ಕ್ಷೇತ್ರದ ತಜ್ಞ ಜಾನ್ ಸ್ಪೆನ್ಸರ್ ತಮ್ಮ ಬ್ಲಾಗ್​​​ನಲ್ಲಿ ಬಿಚ್ಚಿಟ್ಟಿದ್ದಾರೆ.

ಪಾಕಿಸ್ತಾನದ ಬಳಿ ಪ್ರಬಲ ಡಿಫೆನ್ಸ್ ಸಿಸ್ಟಂ ಇದ್ದರೂ ವಿಫಲವಾಗಿದ್ದು ಹೇಗೆ? ಭಾರತದ ತಂತ್ರ, ಜಾಣ್ಮೆ ಬಿಚ್ಚಿಟ್ಟ ಜಾನ್ ಸ್​ಪೆನ್ಸರ್
ಭಾರತದ ಏರ್ ಡಿಫೆನ್ಸ್ ಸಿಸ್ಟಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 11, 2025 | 4:42 PM

Share

ನವದೆಹಲಿ, ಮೇ 11: ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಬಾರಿಯ ಸಂಘರ್ಷವು (India Pakistan war) ಅನೇಕ ಕುತೂಹಲ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪಾಕಿಸ್ತಾನದ ಸಾಲು ಸಾಲು ಡ್ರೋನ್ ಮತ್ತು ಕ್ಷಿಪಣಿಗಳು ಭಾರತದ ರಕ್ಷಣಾ ಜಾಲವನ್ನು ಭೇದಿಸಲು ಹೇಗೆ ವಿಫಲವಾದುವು ಎಂಬುದು ವೇದ್ಯವಾಗಿದೆ. ಹಾಗೆಯೇ, ಭಾರತವು ಆಪರೇಷನ್ ಸಿಂದೂರ ಮೂಲಕ 24 ಕ್ಷಿಪಣಿಗಳನ್ನು ಪಾಕಿಸ್ತಾನದೊಳಗೆ ನುಗ್ಗಿಸಿ ನಿಖರವಾಗಿ ಉಗ್ರರ ತಾಣಗಳನ್ನು ನಾಶ ಮಾಡಿದ ಘಟನೆಯೂ ಭಾರತದ ತಂತ್ರಜ್ಞಾನ ಸಾಮರ್ಥ್ಯವನ್ನು ತೋರಿಸಿದೆ. ಡಿಫೆನ್ಸ್ ಕ್ಷೇತ್ರದ ತಜ್ಞರಾದ ಜಾನ್ ಸ್ಪೆನ್ಸರ್ ಪ್ರಕಾರ, ಭಾರತವು ಈ ಯುದ್ಧ ಸಾಮರ್ಥ್ಯ ಹೊಂದಿರುವುದು ಯಾವುದೋ ದೊಡ್ಡ ಖರೀದಿಯಿಂದಲ್ಲ, ಬದಲಾಗಿ, ಇರುವ ಸಂಪನ್ಮೂಲವನ್ನು ಜಾಣತನದಿಂದ ಸಂಯೋಜಿಸಿದ ಫಲವಾಗಿ ಸಮರದಲ್ಲಿ ಬಲಿಷ್ಠತೆಯನ್ನು ತೋರಿಸಲು ಶಕ್ಯವಾಗಿದೆ.

ಹೊಸ ಏರ್ ಡಿಫೆನ್ಸ್ ವ್ಯವಸ್ಥೆ ಹೇಗೆ ಬೆಳವಣಿಗೆ ಹೊಂದುತ್ತಿದೆ, ಹೇಗೆ ಅದನ್ನು ಅಭಿವೃದ್ಧಿಪಡಿಸಬಹುದು, ಹೇಗೆ ಅದನ್ನು ಕರಾರುವಾಕ್ ಫಲಿತಾಂಶಕ್ಕೆ ಎಡೆ ಮಾಡಿಕೊಡುವಂತೆ ರೂಪಿಸಬಹುದು ಎಂಬುದನ್ನು ಭಾರತವು ಈ ಯುದ್ಧದಲ್ಲಿ ತೋರಿಸಿದೆ ಎಂದು ಹೇಳುತ್ತಾರೆ ಸ್ಪೆನ್ಸರ್.

ಇದನ್ನೂ ಓದಿ
Image
1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್
Image
ಅಮೆರಿಕದ ಮಧ್ಯಪ್ರವೇಶ ಭಾರತಕ್ಕೆ ಇಷ್ಟವಾಗಲಿಲ್ಲವಾ?
Image
ಭಾರತದ ಈ ಮಿಸೈಲ್ ದಾಳಿಗೆ ಪಾಕ್ ಮಾತ್ರವಲ್ಲ, ಅಮೆರಿಕಕ್ಕೂ ಆಗಿತ್ತು ನಡುಕ
Image
ಕದನ ವಿರಾಮ ಎಂದರೇನು? ಭಾರತ- ಪಾಕಿಸ್ತಾನದ ನಡುವೆ ಮುಂದೆ ಏನಾಗುತ್ತೆ?

ಇದನ್ನೂ ಓದಿ: ಕದನವಿರಾಮ ಪ್ರಸಂಗ: ಬೇರೆಯೇ ಕಥೆ ಹೇಳುತ್ತವೆ ಭಾರತ ಮತ್ತು ಪಾಕಿಸ್ತಾನ ನಾಯಕರ ಹೇಳಿಕೆಗಳು

ಭಾರತದ ರಕ್ಷಣಾ ವ್ಯವಸ್ಥೆ ಹೇಗಿದೆ?

ಭಾರತದ ಬಳಿ ಇಸ್ರೇಲ್​​ನ ಬರಾಕ್-8 ಸಿಸ್ಟಮ್ಸ್ ಮತ್ತು ರಷ್ಯಾ ನಿರ್ಮಿತ ಎಸ್-400 ಸಿಸ್ಟಮ್ಸ್ ಇದೆ. ಇದರ ಜೊತೆಗೆ ದೇಶೀಯವಾಗಿ ಅಭಿವೃದ್ದಿಪಡಿಸಲಾದ ಆಕಾಶ್ ಮತ್ತು ಕ್ಯೂಆರ್​​ಎಸ್​​ಎಎಂ ಸಿಸ್ಟಂಗಳನ್ನು ಸಂಯೋಜಿಸಲಾಗಿದೆ. ಇವೆಲ್ಲವೂ ಪ್ರತ್ಯೇಕವಾಗಿ ನೋಡಿದಾಗ ಭಿನ್ನ ಭಿನ್ನ ಎನಿಸುತ್ತವೆ. ಇವುಗಳನ್ನು ಪರಿಸ್ಪರ ಪೂರಕವಾಗಿ ವರ್ತಿಸುವ ರೀತಿಯಲ್ಲಿ ದೂರ ಶ್ರೇಣಿ, ಮಧ್ಯಮ ಶ್ರೇಣಿ ಮತ್ತು ಕಿರು ಶ್ರೇಣಿ ಎಳೆಗಳಾಗಿ ಭಾರತವು ರೂಪಿಸಿದೆ ಎಂದು ಜಾನ್ ಸ್ಪೆನ್ಸರ್ ತಮ್ಮ ಬ್ಲಾಗ್​​​ನಲ್ಲಿ ವಿವರಿಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಬಲಿಷ್ಠ ಎನಿಸಿದರೂ ವಿಫಲವಾಗಿದ್ದು ಯಾಕೆ?

ಪಾಕಿಸ್ತಾನದ ಬಳಿ ಚೀನೀ ನಿರ್ಮಿತ ಎಚ್​​ಕ್ಯು-9/ಪಿ, ಎಲ್​​ವೈ-80 ಮತ್ತು ಎಫ್​​ಎಂ-90 ಇತ್ಯಾದಿ ಡಿಫೆನ್ಸ್ ಸಿಸ್ಟಮ್ಸ್ ಇದೆ. ಮೇಲ್ನೋಟಕ್ಕೆ ಇವೇನೂ ಸಾಧಾರಣ ಅಲ್ಲ. ರಷ್ಯಾದ ಎಸ್-300 ಡಿಫೆನ್ಸ್ ಸಿಸ್ಟಂ ರೀತಿಯಲ್ಲೇ ಎಚ್​​ಕ್ಯು-9/ಪಿ ಸಿಸ್ಟಂ ಅನ್ನು ಚೀನಾ ನಿರ್ಮಿಸಿದೆ. ಇದು ಅತ್ಯಾಧುನಿಕ ಡಿಫೆನ್ಸ್ ಸಿಸ್ಟಂಗಳಲ್ಲಿ ಒಂದೆನಿಸುತ್ತದೆ. ಆದರೆ, ಭಾರತದೊಂದಿಗಿನ ಯುದ್ಧದಲ್ಲಿ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಪೂರ್ಣ ವಿಫಲವಾಯಿತು. ಈ ಅಂಶವನ್ನು ಜಾನ್ ಸ್ಪೆನ್ಸರ್ ಎತ್ತಿಹೇಳಿದ್ದಾರೆ. ಎಲೆಕ್ಟ್ರಾನಿಕ್ ವಾರ್​​ಫೇರ್, ಕೈನೆಟಿಕ್ ಸ್ಟ್ರೈಕ್ಸ್ ಇತ್ಯಾದಿಯ ಸಂಯೋಜನೆಯಿಂದ ಡಿಫೆನ್ಸ್ ಸಿಸ್ಟಂ ಅನ್ನು ಭೇದಿಸಬಹುದು ಎಂಬುದನ್ನು ಭಾರತ ತೋರಿಸಿಕೊಟ್ಟಿದೆ ಎಂದೆನ್ನುತ್ತಾರೆ ಸ್ಪೆನ್ಸರ್.

ಇದನ್ನೂ ಓದಿ: 1971 ಹಾಗೂ 2025ರ ಪರಿಸ್ಥಿತಿಯಲ್ಲಿ ವ್ಯತ್ಯಾಸವಿದೆ: ಶಶಿ ತರೂರ್

ಉಕ್ರೇನ್​​ನಿಂದಲೂ ಯುದ್ಧ ತಂತ್ರಜ್ಞಾನದ ಜಾಣತನದ ಬಳಕೆ

ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಸಂಯೋಜನೆಯಿಂದ ನಿಖರ ಪರಿಣಾಮ ಸಾಧಿಸಬಹುದು ಎನ್ನುವುದಕ್ಕೆ ಜಾನ್ ಸ್ಪೆನ್ಸರ್ ಅವರು ಉಕ್ರೇನ್ ಉದಾಹರಣೆಯನ್ನೂ ನೀಡಿದ್ದಾರೆ. ಆರು ಲಕ್ಷ ಚದರ ಕಿಮೀಯಷ್ಟು ಬೃಹತ್ ಬಹಿರಂಗ ಪ್ರದೇಶ ಮತ್ತು ನಗರ ಸೌಕರ್ಯ ಹೊಂದಿರುವ ಉಕ್ರೇನ್​​​ನಲ್ಲಿ ಅತ್ಯಾಧುನಿಕವಾದ ಆದರೆ, ಕಡಿಮೆ ಸಂಖ್ಯೆಯ ಸಿಸ್ಟಂಗಳನ್ನು ನೆಚ್ಚಿಕೊಂಡು ಇರರಲು ಆಗುವುದಿಲ್ಲ. ತನ್ನಲ್ಲಿ ಲಭ್ಯ ಇರುವ ಪ್ರತಿಯೊಂದನ್ನೂ ಅದು ಸರಿಯಾಗಿ ಬಳಸಬೇಕು. ಅಮೆರಿಕದ ಎಸ್​​ಎಎಂಗಳು, ಸೋವಿಯತ್ ಕಾಲದ ಬುಕ್, ಎಸ್-300 ಯುನಿಟ್​​ಗಳು, ಜರ್ಮನ್ ನಿರ್ಮಿತ ಆಂಟಿ ಏರ್​​ಕ್ರಾಫ್ಟ್ ಗನ್, ಐರಿಸ್ ಟಿ ಬ್ಯಾಟರಿ, ಮ್ಯಾನ್​​ಪ್ಯಾಡ್ ಡಿಫೆನ್ಸ್ ಸಿಸ್ಟಂ ಹೀಗೆ ಸಾಕಷ್ಟು ಯುದ್ಧೋಪಕರಣಗಳು ಉಕ್ರೇನ್​​ನಲ್ಲಿವೆ. ಇವುಗಳನ್ನು ಉಕ್ರೇನ್ ಒಂದಕ್ಕೊಂದು ಪೂರಕವಾಗುವ ರೀತಿಯಲ್ಲಿ ವ್ಯವಸ್ಥೆ ರೂಪಿಸಿದ ಪರಿಣಾಮವಾಗಿ ರಷ್ಯಾವನ್ನು ಸುದೀರ್ಘ ಕಾಲ ಎದುರಿಸಲು ಸಾಧ್ಯವಾಗಿದೆ ಎನ್ನುವ ವಿಚಾರವನ್ನು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:42 pm, Sun, 11 May 25

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ