AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಶೇ 7.61 ಹಣದುಬ್ಬರ ಏರಿಕೆ, ಹೇಗೆ ಗೊತ್ತಾ?

ಒಂದು ಕಡೆ ಕೊರೊನಾದ ಲಾಕ್ಡೌನ್, ಇನ್ನೊಂದು ಕಡೆ ಅತಿಯಾದ ಮಳೆಯಾಗಿದ್ದು, ಈ ಎರಡು ಕಾರಣಗಳಿಂದ ಆಹಾರ ಉತ್ಪನ್ನವನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಹಾರದ ಬೆಲೆಗಳಲ್ಲಿ ಏರಿಕೆಯಾಗಿದ್ದು, ಭಾರತದ ಆರ್ಥಿಕತೆಯ ಮೇಲೆ ಹಣದುಬ್ಬರದ ಛಾಯೆ ಆವರಿಸುವಂತೆ ಮಾಡಿದೆ. ಆಹಾರದ ಬೆಲೆಯಲ್ಲಿನ ಏರಿಕೆ ಅದರಲ್ಲೂ ವಿಶೇಷವಾಗಿ ಈರುಳ್ಳಿಯ ಬೆಲೆಯಲ್ಲಿನ ಏರಿಕೆಯು ಅಕ್ಟೋಬರ್ ಹೊತ್ತಿಗೆ ಚಿಲ್ಲರೆ ಬೆಲೆಯ ಹಣದುಬ್ಬರವನ್ನು ಹೆಚ್ಚಿಸಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮೂಲಕ ಚಿಲ್ಲರೆ ಬೆಲೆ ಹಣದುಬ್ಬರವನ್ನು ಅಳೆಯಲಾಗಿದ್ದು, ಅಕ್ಟೋಬರಿನಲ್ಲಿ […]

ಅಕ್ಟೋಬರ್ ತಿಂಗಳಿನಲ್ಲಿ ಭಾರತದಲ್ಲಿ ಶೇ 7.61 ಹಣದುಬ್ಬರ ಏರಿಕೆ, ಹೇಗೆ ಗೊತ್ತಾ?
ಸಾಧು ಶ್ರೀನಾಥ್​
|

Updated on: Nov 13, 2020 | 5:54 PM

Share

ಒಂದು ಕಡೆ ಕೊರೊನಾದ ಲಾಕ್ಡೌನ್, ಇನ್ನೊಂದು ಕಡೆ ಅತಿಯಾದ ಮಳೆಯಾಗಿದ್ದು, ಈ ಎರಡು ಕಾರಣಗಳಿಂದ ಆಹಾರ ಉತ್ಪನ್ನವನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ಪೂರೈಕೆ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಆಹಾರದ ಬೆಲೆಗಳಲ್ಲಿ ಏರಿಕೆಯಾಗಿದ್ದು, ಭಾರತದ ಆರ್ಥಿಕತೆಯ ಮೇಲೆ ಹಣದುಬ್ಬರದ ಛಾಯೆ ಆವರಿಸುವಂತೆ ಮಾಡಿದೆ.

ಆಹಾರದ ಬೆಲೆಯಲ್ಲಿನ ಏರಿಕೆ ಅದರಲ್ಲೂ ವಿಶೇಷವಾಗಿ ಈರುಳ್ಳಿಯ ಬೆಲೆಯಲ್ಲಿನ ಏರಿಕೆಯು ಅಕ್ಟೋಬರ್ ಹೊತ್ತಿಗೆ ಚಿಲ್ಲರೆ ಬೆಲೆಯ ಹಣದುಬ್ಬರವನ್ನು ಹೆಚ್ಚಿಸಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮೂಲಕ ಚಿಲ್ಲರೆ ಬೆಲೆ ಹಣದುಬ್ಬರವನ್ನು ಅಳೆಯಲಾಗಿದ್ದು, ಅಕ್ಟೋಬರಿನಲ್ಲಿ ಶೇಕಡಾ 7.27ರಷ್ಟಿದ್ದ ಹಣದುಬ್ಬರವು ಸೆಪ್ಟೆಂಬರ್ ವೇಳೆಗಾಗಲೇ ಶೇ 7.61ಕ್ಕೆ ಏರಿಕೆಯಾಗಿದೆ.

ರಾಷ್ಟೀಯ ಸಂಖ್ಯಾಶಾಸ್ತ್ರೀಯ ಕಚೇರಿ (ಎನ್ಎಸ್ಒ) ನೀಡಿದ ಮಾಹಿತಿಯ ಪ್ರಕಾರ, ಭಾರತದ ನಗರ ಪ್ರದೇಶಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಶೇ. 7.26 ಇದ್ದ ಸಿಪಿಐ ಅಕ್ಟೋಬರಿನಲ್ಲಿ ಶೇ 7.40 ಕ್ಕೆ ಏರಿದರೆ ಗ್ರಾಮೀಣ ಸಿಪಿಐ ಸೆಪ್ಟೆಂಬರಿನಲ್ಲಿದ್ದ ಶೇ 7.36ರಿಂದ ಅಕ್ಟೋಬರ್​ ತಿಂಗಳಿಗಾಲೇ ಶೇ 7.69ಕ್ಕೆ ಏರಿದೆ.

ಅಂಕಿಅಂಶಗಳ ಪ್ರಕಾರ, ಆಹಾರ ಬೆಲೆ ಸೂಚ್ಯಂಕವು ಸೆಪ್ಟೆಂಬರ್ ನಲ್ಲಿ ಶೇ. 10.68 ರಿಂದ ಅಕ್ಟೋಬರ್​ ವೇಳೆಗೆ ಶೇ 11.7 ರಷ್ಟು ಏರಿಕೆಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಿಎಫ್ಪಿಐ ಆಹಾರ ಉತ್ಪನ್ನಗಳ ಚಿಲ್ಲರೆ ಬೆಲೆಯಲ್ಲಿ ಉಂಟಾದ ಬದಲಾವಣೆಗಳನ್ನು ಅಳೆಯುತ್ತದೆ.

ಬೆಲೆ ಏರಿಕೆಯೊಂದಿಗೆ ಗುರುತಿಸಿಕೊಂಡ ಉತ್ಪನ್ನಗಳು:

* YOY (Year after Year) ಹಣದುಬ್ಬರ ದರದಲ್ಲಿ ತರಕಾರಿಗಳು, ಬೇಳೆಕಾಳುಗಳು ಮತ್ತು ಇತರೇ ಉತ್ಪನ್ನಗಳ ಬೆಲೆಗಳು ಅಕ್ಟೋಬರಿನಲ್ಲಿ ಕ್ರಮವಾಗಿ ಶೇಕಡಾ 22.51 ಮತ್ತು 18.34ರಷ್ಟು ಏರಿಕೆಯಾಗಿದೆ.

* ಮಾಂಸ ಮತ್ತು ಮೀನುಗಳ ಬೆಲೆಗಳು ಶೇಕಡಾ 18.70 ಏರಿಕೆಯಾಗಿದೆ.

* ಮೊಟ್ಟೆಗಳು ಶೇಕಡಾ 21.81 ಏರಿಕೆಯಾಗಿದೆ.

* ಸಿಪಿಐ ಅಡಿಯಲ್ಲಿ ಇಂಧನ ಮತ್ತು ಬೆಳಕಿನ ವಿಭಾಗವು ಶೇಕಡಾ 2.28 ಏರಿಕೆಯಾಗಿದೆ.

* ತರಕಾರಿ ಬೆಲೆಗಳು 22.51 % ರಷ್ಟು ಏರಿಕೆಯಾಗಿದ್ದರೆ, ದ್ವಿದಳ ಧಾನ್ಯಗಳು ಮತ್ತು ಉತ್ಪನ್ನಗಳ ಬೆಲೆ ಅಕ್ಟೋಬರಿನಲ್ಲಿ 18.34 % ರಷ್ಟು ಏರಿಕೆಯಾಗಿದೆ.

‘ಅನುಕೂಲಕರ ಮತ್ತು ಹೇರಳವಾದ ಖಾರೀಫ್ ಬೆಳೆಯ ನಡುವೆಯೂ ತರಕಾರಿ ಮತ್ತು ಇತರ ವಸ್ತುಗಳ ವಿಷಯದಲ್ಲಿ ಅಕ್ಟೋಬರ್ ಹೊತ್ತಿಗೆ ಆಹಾರ ಹಣದುಬ್ಬರವು ಮತ್ತಷ್ಟು ಹೆಚ್ಚಾಗಿದೆ. ಅದಾಗಿಯೂ ಮಾರುಕಟ್ಟೆಗೆ ಹೊಸ ಉತ್ಪನ್ನಗಳು ಬರಲಿದ್ದು, ಬೆಲೆಯಲ್ಲಿನ ಏರಿಕೆಯನ್ನು ತಣ್ಣಗಾಗಿಸಲು ಇದು ಸಹಾಯ ಮಾಡುತ್ತದೆ’ ಎಂದಿದ್ದಾರೆ ಐಸಿಆರ್ಎ ಪ್ರಾಂಶುಪಾಲರಾದ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್.

ಆತಂಕಕಾರಿ ಸಂಗತಿಯೆಂದರೆ ಸೆಪ್ಟೆಂಬರಿನಲ್ಲಿ ಶೇ 5.5ರಷ್ಟಿದ್ದ ಹಣದುಬ್ಬರವು ಅಕ್ಟೋಬರ್ ವೇಳೆಗೆ ಶೇ 5.7ಕ್ಕೆ ಏರಿದೆ. ಇದು ನೇರವಾಗಿ ಬಟ್ಟೆ, ಪಾದರಕ್ಷೆಗಳು, ವಸತಿ ಆರೋಗ್ಯ ಮತ್ತು ಮನರಂಜನೆಯಂತಹ ಹಲವಾರು ವಸ್ತುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾಯರ್ ಹೇಳಿದರು.

ಹಣದುಬ್ಬರದ ಮಟ್ಟವು ಆತಂಕಕ್ಕೆ ಕಾರಣವಾಗಿದೆ ಮತ್ತು ಬಡ್ಡಿ ದರಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವ ಆರ್ಬಿಐ ಸಾಮರ್ಥ್ಯದ ಮೇಲೆಯೂ ಇದು ಪರಿಣಾಮ ಬೀರುತ್ತದೆ. ಆದರೂ 2021ರ ಅಂತ್ಯದ ವೇಳೆಗೆ ಹಣದುಬ್ಬರವು ಸಾಧಾರಣವಾಗಲಿದೆ ಎಂಬ ನಿರೀಕ್ಷೆ ಕೇಂದ್ರ ಬ್ಯಾಂಕಿನದ್ದಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ