ಜೂನ್ ತಿಂಗಳಿಂದ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ; ಅರ್ಜಿಗಳನ್ನು ಈ ವೆಬ್ಸೈಟ್ನಲ್ಲಿ ಸಲ್ಲಿಸಿ
ಕೊವಿಡ್-19 ಬಳಿಕ ಐದು ವರ್ಷಗಳ ಅಂತರದ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ ನಿಂದ ಪುನರಾರಂಭಗೊಳ್ಳಲಿದೆ. ಈ ಯಾತ್ರೆಗೆ ಅರ್ಜಿಗಳನ್ನು kmy.gov.in ವೆಬ್ಸೈಟ್ನಲ್ಲಿ ಸಲ್ಲಿಸಬಹುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಸಹಿ ಹಾಕಿದ ಒಪ್ಪಂದದಡಿಯಲ್ಲಿ ಡೆಮ್ಚೋಕ್ ಮತ್ತು ಡೆಪ್ಸಾಂಗ್ನ ಉಳಿದ ಎರಡು ಘರ್ಷಣೆ ಸ್ಥಳಗಳಲ್ಲಿ ಉಭಯ ದೇಶಗಳು ಸೈನ್ಯವನ್ನು ಬೇರ್ಪಡಿಸಿದ ನಂತರ ಸಂಬಂಧಗಳನ್ನು ಸುಧಾರಿಸಲು ಭಾರತ ಮತ್ತು ಚೀನಾ ಮಾಡಿದ ಪ್ರಯತ್ನಗಳ ಒಂದು ಭಾಗವಾಗಿ ಯಾತ್ರೆಯ ಪುನರಾರಂಭ ಮಾಡಲಾಗಿದೆ.

ನವದೆಹಲಿ, ಏಪ್ರಿಲ್ 26: ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ ತಿಂಗಳಿನಿಂದ ಪುನರಾರಂಭಗೊಳ್ಳಲಿದೆ ಎಂದು ಭಾರತ ಇಂದು ಘೋಷಿಸಿದೆ. 5 ವರ್ಷಗಳ ಅಂತರದ ನಂತರ ನಡೆಯುತ್ತಿರುವ ಈ ಯಾತ್ರೆಯ ಪುನರಾರಂಭ ಕಳೆದ ವರ್ಷ ಅಕ್ಟೋಬರ್ನಲ್ಲಿ ಸಹಿ ಹಾಕಿದ ಒಪ್ಪಂದದಡಿಯಲ್ಲಿ ಡೆಮ್ಚೋಕ್ ಮತ್ತು ಡೆಪ್ಸಾಂಗ್ನ ಉಳಿದ ಎರಡು ಘರ್ಷಣೆ ಸ್ಥಳಗಳಲ್ಲಿ ಉಭಯ ದೇಶಗಳು ಸೈನ್ಯವನ್ನು ರದ್ದುಗೊಳಿಸಿದ ನಂತರ ಸಂಬಂಧಗಳನ್ನು ಸುಧಾರಿಸಲು ಭಾರತ ಮತ್ತು ಚೀನಾ ಮಾಡಿದ ಪ್ರಯತ್ನಗಳ ಒಂದು ಭಾಗವೆಂದು ಪರಿಗಣಿಸಲಾಗುತ್ತಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಆಯೋಜಿಸಿರುವ ಕೈಲಾಸ ಮಾನಸ ಸರೋವರ ಯಾತ್ರೆ ಜೂನ್ ನಿಂದ ಆಗಸ್ಟ್ ತಿಂಗಳವರೆಗೆ ನಡೆಯಲಿದೆ.
2020ರಿಂದ ಕೈಲಾಸ ಮಾನಸ ಸರೋವರ ಯಾತ್ರೆ ನಡೆದಿರಲಿಲ್ಲ. “ಈ ವರ್ಷ 50 ಯಾತ್ರಿಗಳನ್ನು ಒಳಗೊಂಡ 5 ಬ್ಯಾಚ್ಗಳು ಮತ್ತು 50 ಯಾತ್ರಿಗಳನ್ನು ಒಳಗೊಂಡ 10 ಬ್ಯಾಚ್ಗಳು ಕ್ರಮವಾಗಿ ಉತ್ತರಾಖಂಡ ರಾಜ್ಯದ ಲಿಪುಲೇಖ್ ಪಾಸ್ನಲ್ಲಿ ಮತ್ತು ಸಿಕ್ಕಿಂ ರಾಜ್ಯದ ನಾಥು ಲಾ ಪಾಸ್ನಲ್ಲಿ ಕ್ರಾಸಿಂಗ್ ಮೂಲಕ ಪ್ರಯಾಣಿಸಲಿವೆ” ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಈ ಯಾತ್ರೆಗೆ ಅರ್ಜಿಗಳನ್ನು kmy.gov.in ವೆಬ್ಸೈಟ್ನಲ್ಲಿ ಸಲ್ಲಿಸಬಹುದು.
ಇದನ್ನೂ ಓದಿ: Kailash Mansarovar Yatra 2025: ಐದು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನರಾರಂಭ
ಕೇಂದ್ರ ಸರ್ಕಾರವು ಪ್ರತಿ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಉತ್ತರಾಖಂಡದ ಲಿಪುಲೇಖ್ ಪಾಸ್ (1981ರಿಂದ) ಮತ್ತು ಸಿಕ್ಕಿಂನ ನಾಥು ಲಾ ಪಾಸ್ (2015ರಿಂದ) ಎರಡು ಅಧಿಕೃತ ಮಾರ್ಗಗಳ ಮೂಲಕ ಆಯೋಜಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Sat, 26 April 25