ವ್ಯಕ್ತಿಯ ಕಿಡ್ನ್ಯಾಪ್, ಕೊಲೆ ಬೆದರಿಕೆ ಹಿನ್ನೆಲೆ: ಹೈದರಾಬಾದ್‌ ಪೊಲೀಸರಿಂದ ಮಾಜಿ ಸಚಿವೆ ಅರೆಸ್ಟ್​

ವ್ಯಕ್ತಿಯೊಬ್ಬರ ಕಿಡ್ನ್ಯಾಪ್ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಸಚಿವೆ ಬೂಮಾ ಅಖಿಲಪ್ರಿಯ ಅವರನ್ನು ಹೈದರಾಬಾದ್‌ನ ಬೊಯಿನಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯ ಕಿಡ್ನ್ಯಾಪ್, ಕೊಲೆ ಬೆದರಿಕೆ ಹಿನ್ನೆಲೆ: ಹೈದರಾಬಾದ್‌ ಪೊಲೀಸರಿಂದ ಮಾಜಿ ಸಚಿವೆ ಅರೆಸ್ಟ್​
ಭೂ ಅಕ್ರಮ‌ ಹಾಗೂ ವ್ಯಕ್ತಿಯೋರ್ವರ‌ ಕಿಡ್ನ್ಯಾಪ್ ಮತ್ತು ಜೀವ ಬೆದರಿಕೆ‌ ಪ್ರಕರಣದಲ್ಲಿ ದಂಪತಿ ವಿರುದ್ಧ ಆರೋಪ
ಸಾಧು ಶ್ರೀನಾಥ್​ Edited By:

Updated on: Jan 06, 2021 | 5:03 PM

ಹೈದರಾಬಾದ್: ವ್ಯಕ್ತಿಯೊಬ್ಬರ ಕಿಡ್ನ್ಯಾಪ್ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮಾಜಿ ಸಚಿವೆ ಬೂಮಾ ಅಖಿಲಪ್ರಿಯ ಅವರನ್ನು ಹೈದರಾಬಾದ್‌ನ ಬೊಯಿನಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈಗ ಬಂಧನಕ್ಕೊಳಗಾಗಿರುವ ಬೂಮಾ ಅಖಿಲಪ್ರಿಯ, ಚಂದ್ರಬಾಬು ನಾಯ್ಡು ಸಂಪುಟದಲ್ಲಿ ಸಚಿವೆಯಾಗಿದ್ದರು. ಈ ಮಧ್ಯೆ ಬೂಮಾ ಅಖಿಲಪ್ರಿಯ ಪತಿ ಭಾರ್ಗವ ರಾಮ್ ಪರಾರಿಯಾಗಿದ್ದಾರೆ. ಭೂ ಅಕ್ರಮ‌ ಹಾಗೂ ವ್ಯಕ್ತಿಯೋರ್ವರ‌ ಕಿಡ್ನ್ಯಾಪ್ ಮತ್ತು ಜೀವ ಬೆದರಿಕೆ‌ ಪ್ರಕರಣದಲ್ಲಿ ದಂಪತಿ ವಿರುದ್ಧ ಆರೋಪ ಕೇಳಿಬಂದಿತ್ತು.

Published On - 5:02 pm, Wed, 6 January 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us