ಹಿಜಾಬ್ ವಿವಾದ ಬಗ್ಗೆ ಪತ್ರಕರ್ತನ ಪ್ರಶ್ನೆ ; ಅವರು ಹೇಗೆ ಬದುಕುತ್ತಾರೋ ಹಾಗೆ ಬದುಕಲು ಬಿಡಿ ಎಂದು ಉತ್ತರಿಸಿದ ಹರ್ನಾಜ್ ಸಂಧು

ಪತ್ರಕರ್ತರ  ಪ್ರಶ್ನೆಗೆ ತುಂಬಾ ಸಂಯಮದಿಂದ ಉತ್ತರಿಸಿದ ಸಂಧು ನೀವು ಯಾಕೆ ಯಾವಾಗಲೂ ಹುಡುಗಿಯರನ್ನೇಕೆ ಟಾರ್ಗೆಟ್ ಮಾಡ್ತೀರಿ? ಈಗಲೂ ನೋಡಿ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಅಂದಹಾಗೆ, ಹಿಜಾಬ್ ವಿಷಯದಲ್ಲೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ...

ಹಿಜಾಬ್ ವಿವಾದ ಬಗ್ಗೆ ಪತ್ರಕರ್ತನ ಪ್ರಶ್ನೆ ; ಅವರು ಹೇಗೆ ಬದುಕುತ್ತಾರೋ ಹಾಗೆ ಬದುಕಲು ಬಿಡಿ ಎಂದು ಉತ್ತರಿಸಿದ ಹರ್ನಾಜ್ ಸಂಧು
ಹರ್ನಾಜ್ ಸಂಧು
Edited By: ರಶ್ಮಿ ಕಲ್ಲಕಟ್ಟ

Updated on: Mar 27, 2022 | 10:45 PM

ನೀವು ಯಾವಾಗಲೂ ಹುಡುಗಿಯರನ್ನೇಕೆ ಟಾರ್ಗೆಟ್ ಮಾಡುತ್ತೀರಿ? ಹುಡುಗಿಯರನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸಿ, ಅವರು ಹೇಗೆ ಬದುಕುತ್ತಾರೋ ಹಾಗೆ ಬದುಕಲು ಬಿಡಿ ಎಂದು ಭುವನ ಸುಂದರಿ ಹರ್ನಾಜ್ ಸಂಧು (Harnaaz Sandhu) ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ್ದಾರೆ. ಹಿಜಾಬ್ ವಿವಾದ (Hijab Row) ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಪತ್ರಕರ್ತರೊಬ್ಬರು ಸಂಧು ಅವರಲ್ಲಿ ಪ್ರಶ್ನೆ ಕೇಳಿದ್ದಾರೆ. ಆಗ ಕಾರ್ಯಕ್ರಮದ ನಿರೂಪಕರು ರಾಜಕೀಯದ ಪ್ರಶ್ನೆಗಳನ್ನು ಕೇಳಬೇಡಿ, ಮಿಸ್ ಯೂನಿವರ್ಸ್ (Miss Universe 2021) ಸಂಧು ಅವರ ಜೀವನ ಪಯಣದ ಬಗ್ಗೆ ಕೇಳಿ ಎಂದು ಪತ್ರಕರ್ತರಿಗೆ ಹೇಳಿದ್ದಾರೆ. ಇದಕ್ಕೆ ಪತ್ರಕರ್ತರು ಕಾರ್ಯಕ್ರಮ ನಿರೂಪಣೆ ಮಾತ್ರ ನಿಮ್ಮದು, ನಾನು ಮಿಸ್ ಸಂಧು ಅವರಲ್ಲಿ ಪ್ರಶ್ನೆ ಕೇಳುತ್ತಿದ್ದೇನೆ. ಅವರು ಉತ್ತರಿಸಲಿ ಎಂದಿದ್ದಾರೆ. ಈ ವೇಳೆ ಪತ್ರಕರ್ತರ  ಪ್ರಶ್ನೆಗೆ ತುಂಬಾ ಸಂಯಮದಿಂದ ಉತ್ತರಿಸಿದ ಸಂಧು ನೀವು ಯಾಕೆ ಯಾವಾಗಲೂ ಹುಡುಗಿಯರನ್ನೇಕೆ ಟಾರ್ಗೆಟ್ ಮಾಡ್ತೀರಿ? ಈಗಲೂ ನೋಡಿ, ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಅಂದಹಾಗೆ, ಹಿಜಾಬ್ ವಿಷಯದಲ್ಲೂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅವರು (ಹುಡುಗಿಯರು) ಆಯ್ಕೆಮಾಡಿದ ರೀತಿಯಲ್ಲಿ ಬದುಕಲಿ, ಅವರು ಗಮ್ಯಸ್ಥಾನವನ್ನು ತಲುಪಲಿ, ಅವಳನ್ನು ಹಾರಲು ಬಿಡಿ, ಅವಳ ರೆಕ್ಕೆಗಳನ್ನು ಕತ್ತರಿಸಬೇಡಿ, ನೀವು ಬೇರೊಬ್ಬರ ರೆಕ್ಕೆಗಳನ್ನು ಕತ್ತರಿಸಬೇಕೆಂದು ಬಯಸಿದರೆ ನಿಮ್ಮ ರೆಕ್ಕೆಗಳನ್ನೇ ಕತ್ತರಿಸಿ ಎಂದಿದ್ದಾರೆ.

ನೀವು ನನ್ನ ಪಯಣ, ತಾನು ಎದುರಿಸಿದ ಅಡೆತಡೆಗಳು ಮತ್ತು ಸೌಂದರ್ಯ ಸ್ಪರ್ಧೆಯ ಯಶಸ್ಸಿನ ಬಗ್ಗೆ ಕೇಳಿ. ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲುವುದರ ಬಗ್ಗೆ ಹಲವಾರು ಅಭಿಪ್ರಾಯಗಳು ಇವೆ. ನೀವು ನೋಡಲು ಚಂದ ಇದ್ದೀರಿ ಎಂಬುದು ಮಾತ್ರ ಅಲ್ಲ.ಅದು ಕೇವಲ ಶೇ 1 ರಷ್ಟು ಮಾತ್ರ. ಅದು ನಿಮ್ಮ ಆತ್ಮಧೈರ್ಯ, ನಿಮ್ಮ ದನಿ, ನಿಮ್ಮ ಸಿದ್ಧಾಂತ, ನಿಮ್ಮ ವ್ಯಕ್ತಿತ್ವ ಮತ್ತು ನೀವು ಸಮಾಜದಲ್ಲಿ ಬದಲಾವಣೆ ತರುವ ಧೈರ್ಯ ಹೊಂದಿದ್ದೀರಾ ಎಂಬುದಾಗಿದೆ. ಹೌದು, ಇದಕ್ಕೆಲ್ಲ ನಾನು ಸಮರ್ಥಳಾಗಿರುವುದಕ್ಕೆ ನಾನು ಇಲ್ಲಿ ಇದ್ದೇನೆ ಎಂದಿದ್ದಾರೆ.ಸಂಧು ಅವರ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ಮಿಸ್ ಯೂನಿವರ್ಸ್ 2021 ಭಾರತಕ್ಕೆ ಬಂದ ಗೌರವಾರ್ಥವಾಗಿ ಮಾರ್ಚ್ 17 ರಂದು ಇಲ್ಲಿ ನಡೆದ ಕಾರ್ಯಕ್ರಮದ್ದಾಗಿದೆ.

ಶಿಕ್ಷಣ ಸಂಸ್ಥೆಗಳ ತರಗತಿ ಕೊಠಡಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠ ಇತ್ತೀಚೆಗೆ ವಜಾಗೊಳಿಸಿದ್ದು, ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಉಡುಗೆ ನಿಯಮವನ್ನು ಅನುಸರಿಸಬೇಕು ಎಂದು ಹೇಳಿದೆ.

ಇದನ್ನೂ ಓದಿ: ಬಹ್ರೇನ್‌ನಲ್ಲಿ ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಿದ ಭಾರತೀಯ ರೆಸ್ಟೋರೆಂಟ್ ಬಂದ್: ವರದಿ

Published On - 10:43 pm, Sun, 27 March 22

Web contact

TV9 Kannada

Read More
Follow Us