AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶ: ಅತಿಸಾರದಿಂದ 7 ಮಂದಿ ಸಾವು, 150 ಜನರು ಅಸ್ವಸ್ಥ

ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಮಂಡ್ಲಾ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಅತಿಸಾರ ಹಾಗೂ ನೀರಿನಿಂದ ಹರಡುವ ಯಾವುದೋ ರೋಗಕ್ಕೆ ಜನರು ಬಲಿಯಾಗುತ್ತಿದ್ದಾರೆ.

ಮಧ್ಯಪ್ರದೇಶ: ಅತಿಸಾರದಿಂದ 7 ಮಂದಿ ಸಾವು, 150 ಜನರು ಅಸ್ವಸ್ಥ
ಆಸ್ಪತ್ರೆImage Credit source: IndiaToday
ನಯನಾ ರಾಜೀವ್
|

Updated on: Jul 28, 2024 | 12:14 PM

Share

ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಮಂಡ್ಲಾ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಅತಿಸಾರ ಹಾಗೂ ನೀರಿನಿಂದ ಹರಡುವ ಯಾವುದೋ ರೋಗಕ್ಕೆ ಜನರು ಬಲಿಯಾಗುತ್ತಿದ್ದಾರೆ. ಇದುವರೆಗೆ 7 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಘುಘ್ರಿ ಬ್ಲಾಕ್‌ನ ದೇವ್ರಹಾ ಬಹಮನಿ ಗ್ರಾಮದಲ್ಲಿ ನಾಲ್ವರು ಮತ್ತು ಬಿಚಿಯಾ ಬ್ಲಾಕ್‌ನ ಮಾಧೋಪುರ ಗ್ರಾಮದ ಮೂವರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಸಾಂಕ್ರಾಮಿಕ ನಿಯಂತ್ರಣ ಅಧಿಕಾರಿ ಡಾ.ಯತೀಂದ್ರ ಝರಿಯಾ ತಿಳಿಸಿದ್ದಾರೆ.

ಮಾಧೋಪುರ ಗ್ರಾಮದ ನಿವಾಸಿ ಏಳನೇ ವ್ಯಕ್ತಿ ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಘುಘ್ರಿ ಬ್ಲಾಕ್‌ನ ಕೆಲವು ರೋಗಿಗಳನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.

ಜಾಗೃತಿ ಮೂಡಿಸುವುದರ ಜೊತೆಗೆ ಈ ಪ್ರದೇಶಗಳಲ್ಲಿ ಅತಿಸಾರವನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ತಂಡಗಳು ಪ್ರಯತ್ನಿಸುತ್ತಿವೆ ಎಂದು ಜಾರಿಯಾ ಹೇಳಿದರು. ಉಮಾರಿಯಾ ಜಿಲ್ಲೆಯ ಎರಡು ಗ್ರಾಮಗಳಲ್ಲಿ ತಂದೆ-ಮಗ ಸೇರಿದಂತೆ ಮೂವರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ರೋಗಕ್ಕೆ ತುತ್ತಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಮತ್ತಷ್ಟು ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ವಾಂತಿ ಭೇದಿ ಪ್ರಕರಣ: ಬೆಂಗಳೂರಿನಲ್ಲಿ ಡಯೇರಿಯಾ, ಅತಿಸಾರ ಆರ್ಭಟ

ಪ್ರಕರಣಗಳು ಬೆಳಕಿಗೆ ಬಂದ ನಂತರ ಪ್ರದೇಶ ಆರೋಗ್ಯ ಮೇಲ್ವಿಚಾರಕರನ್ನು ಅಮಾನತುಗೊಳಿಸಲಾಗಿದ್ದು, ಇನ್ನಿಬ್ಬರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಸುರಕ್ಷಿತ ಕುಡಿಯುವ ನೀರು ಮತ್ತು ಸಾಕಷ್ಟು ನೈರ್ಮಲ್ಯದ ಮೂಲಕ ಗಮನಾರ್ಹ ಪ್ರಮಾಣದಲ್ಲಿ ಅತಿಸಾರ ರೋಗವನ್ನು ತಡೆಗಟ್ಟಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ