AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ 2ನೇ ಅಲೆಗಿಂತ 3ನೇ ಅಲೆಯಲ್ಲಿ ಮರಣ ಪ್ರಮಾಣ ಗಣನೀಯವಾಗಿ ಕಡಿಮೆ: ಆರೋಗ್ಯ ಸಚಿವಾಲಯ

Covid-19: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳು 'ಕಾಳಜಿಯ ರಾಜ್ಯ'ಗಳಲ್ಲಿ ಸೇರಿವೆ ಎಂದಿದ್ದಾರೆ.

ಕೊವಿಡ್ 2ನೇ ಅಲೆಗಿಂತ 3ನೇ ಅಲೆಯಲ್ಲಿ ಮರಣ ಪ್ರಮಾಣ ಗಣನೀಯವಾಗಿ ಕಡಿಮೆ: ಆರೋಗ್ಯ ಸಚಿವಾಲಯ
ಸುದ್ದಿಗೋಷ್ಠಿಯಲ್ಲಿ ರಾಜೇಶ್ ಭೂಷಣ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 20, 2022 | 5:24 PM

Share

ದೆಹಲಿ: ಆರೋಗ್ಯ ಸಚಿವಾಲಯವು ಗುರುವಾರ ಭಾರತದಲ್ಲಿ ಕೊವಿಡ್ -19 (Covid-19)  ಸಾಂಕ್ರಾಮಿಕದ 2 ನೇ ಮತ್ತು 3 ನೇ ಅಲೆ ನಡುವಿನ ಹೋಲಿಕೆಯನ್ನು ಪ್ರಸ್ತುತಪಡಿಸಿದ್ದು ಸಾವಿನ ಸಂಖ್ಯೆ ಮತ್ತು ವ್ಯಾಕ್ಸಿನೇಷನ್(Vaccination) ವ್ಯಾಪ್ತಿಯ ವ್ಯತ್ಯಾಸವನ್ನು ಗಮನಿಸಿದೆ. ಮೊದಲ ಬಾರಿಗೆ, ಆರೋಗ್ಯ ಸಚಿವಾಲಯವು ಪ್ರಸ್ತುತ ಉಲ್ಬಣವನ್ನು ದೇಶದಲ್ಲಿ ಸಾಂಕ್ರಾಮಿಕ ರೋಗದ ಮೂರನೇ ಅಲೆ ಎಂದು ಬಣ್ಣಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ದೆಹಲಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಆರು ರಾಜ್ಯಗಳು ‘ಕಾಳಜಿಯ ರಾಜ್ಯ’ಗಳಲ್ಲಿ ಸೇರಿವೆ ಎಂದಿದ್ದಾರೆ. ಕೇಂದ್ರವು ಈ ರಾಜ್ಯಗಳಿಗೆ ವಿಶೇಷ ಆರೋಗ್ಯ ತಂಡಗಳನ್ನು ಕಳುಹಿಸಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ಹೇಳಿದರು. ಭೂಷಣ್ ಅವರ ಪ್ರಕಾರ, ಏಷ್ಯಾ ಕಳೆದ ನಾಲ್ಕು ವಾರಗಳಲ್ಲಿ ಜಾಗತಿಕ ಕೊಡುಗೆಯಲ್ಲಿ 7.9 ಶೇಕಡಾದಿಂದ ಸುಮಾರು 18.4 ಶೇಕಡಾಕ್ಕೆ ತೀವ್ರ ಏರಿಕೆಯನ್ನು ತೋರಿಸುತ್ತಿದೆ. “ಭಾರತದಲ್ಲಿ ಕೊವಿಡ್ ಪ್ರಕರಣಗಳಲ್ಲಿ ತೀಕ್ಷ್ಣವಾದ ಉಲ್ಬಣವು ಕಂಡುಬಂದಿದೆ ಎಂದು ಅವರು ಹೇಳಿದರು. ಕಳೆದ 24 ಗಂಟೆಗಳಲ್ಲಿ ಭಾರತವು 3,17,532 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 3,82,18,773 ಕ್ಕೆ ಏರಿದೆ. ಇದರಲ್ಲಿ ಒಮಿಕ್ರಾನ್ ರೂಪಾಂತರದ 9,287 ಪ್ರಕರಣಗಳು ಸೇರಿವೆ ಎಂದು ಅಧಿಕೃತ ಡೇಟಾ ತೋರಿಸುತ್ತದೆ.

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಯುಪಿ, ಗುಜರಾತ್, ಒಡಿಶಾ, ದೆಹಲಿ ಮತ್ತು ರಾಜಸ್ಥಾನಗಳನ್ನು ಒಳಗೊಂಡಿರುವ 10 ರಾಜ್ಯಗಳು ಸಕ್ರಿಯ ಪ್ರಕರಣಗಳ ವಿಷಯದಲ್ಲಿ ಅಗ್ರ 10 ರಾಜ್ಯಗಳಲ್ಲಿ ಸೇರಿವೆ. ಸಂಪೂರ್ಣವಾಗಿ ಲಸಿಕೆ ಪಡೆದ ಜನರ ಪ್ರಮಾಣವು ಶೇಕಡಾ 72 ರಷ್ಟಿದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳು 1,92,4,051 ಆಗಿದ್ದು, ಸಾವಿನ ಸಂಖ್ಯೆ 491 ಹೊಸ ಸಾವುಗಳೊಂದಿಗೆ 4,87,693 ಕ್ಕೆ ಏರಿದೆ. ಬುಧವಾರದಿಂದ ಒಮಿಕ್ರಾನ್ ಪ್ರಕರಣಗಳಲ್ಲಿ ಶೇ.3.63ರಷ್ಟು ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿಯ ಮುಖ್ಯಾಂಶಗಳು

1. ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ಒಡಿಶಾ, ದೆಹಲಿ ಮತ್ತು ರಾಜಸ್ಥಾನಗಳು ಪ್ರತಿದಿನ ಗರಿಷ್ಠ ಸಂಖ್ಯೆಯ ಪ್ರಕರಣಗಳನ್ನು ದಾಖಲಿಸುವ ಟಾಪ್ ರಾಜ್ಯಗಳಾಗಿವೆ.

2. ಜನವರಿ 19 ರಂದು ಕೊನೆಗೊಳ್ಳುವ ವಾರದಲ್ಲಿ, ಭಾರತವು 515 ಜಿಲ್ಲೆಗಳಲ್ಲಿ ಸಾಪ್ತಾಹಿಕ ಪ್ರಕರಣಗಳ ಧನಾತ್ಮಕತೆ ಶೇ 5 ಕ್ಕಿಂತ ಹೆಚ್ಚು ವರದಿ ಮಾಡಿದೆ.

3. ಏಪ್ರಿಲ್ 30, 2021 ರಂದು, ಎರಡನೇ ಅಲೆ ದೇಶದಲ್ಲಿ ಉತ್ತುಂಗದಲ್ಲಿದ್ದಾಗ, 3,86,452 ಹೊಸ ಪ್ರಕರಣಗಳು, 3,059 ಸಾವುಗಳು ಮತ್ತು 31,70,228 ಸಕ್ರಿಯ ಪ್ರಕರಣಗಳಿದ್ದವು. ಸಂಪೂರ್ಣವಾಗಿ ಲಸಿಕೆ ಪಡೆದ ಜನರ ಪ್ರಮಾಣವು ಶೇ 2 ಆಗಿತ್ತು.

4. ಜನವರಿ 20, 2022 ರಂದು, 3,17,532 ಹೊಸ ಪ್ರಕರಣಗಳು, 380 ಸಾವುಗಳು ಮತ್ತು 19,24,051 ಸಕ್ರಿಯ ಪ್ರಕರಣಗಳಿವೆ. ಸಂಪೂರ್ಣವಾಗಿ ಲಸಿಕೆ ಪಡೆದ ಜನರ ಪ್ರಮಾಣ ಶೇ 72

5. ಲಸಿಕೆ ವ್ಯಾಪ್ತಿಯಿಂದಾಗಿ ಭಾರತದಲ್ಲಿ 3ನೇ ಅಲೆಯ ತೀವ್ರತೆಗೆ ಸಾಕ್ಷಿಯಾಗುತ್ತಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಮಹಾನಿರ್ದೇಶಕ ಡಾ ಬಲರಾಮ್ ಭಾರ್ಗವ ಹೇಳಿದ್ದಾರೆ.

6. ನೀತಿ ಆಯೋಗದ ಸದಸ್ಯ (ಆರೋಗ್ಯ) ವಿಕೆ ಪೌಲ್ ಅವರು ಒಟ್ಟಾರೆ ಧನಾತ್ಮಕತೆಯ ದರ ಶೇ16 ಭಾರತಕ್ಕೆ ಸಾಕಷ್ಟು ಹೆಚ್ಚು ಎಂದು ಹೇಳಿದರು. ಉಲ್ಬಣವು ಒಮಿಕ್ರಾನ್ ನಿಂದ ಉಂಟಾಗುತ್ತದೆ ಎಂದು ಪೌಲ್ ಹೇಳಿದರು.

7. ಕೇಂದ್ರ ಆರೋಗ್ಯ ಸಚಿವಾಲಯವು ದೆಹಲಿಯಲ್ಲಿ ಕೊವಿಡ್‌ನ 2 ನೇ ಮತ್ತು 3 ನೇ ಉಲ್ಬಣದ ಹೋಲಿಕೆಯನ್ನು ಪ್ರಸ್ತುತಪಡಿಸಿದೆ, ಇದು 3 ನೇ ಉಲ್ಬಣದ ಸಮಯದಲ್ಲಿ ಭರ್ತಿಯಾದ ಕೊವಿಡ್ ಹಾಸಿಗೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ತೋರಿಸುತ್ತದೆ.

ಇದನ್ನೂ ಓದಿಜನರ ಜೀವ, ಜೀವನ ಗಮನದಲ್ಲಿಟ್ಟುಕೊಂಡು ಹೊಸ ಕೊವಿಡ್ ಮಾರ್ಗಸೂಚಿಯ ತೀರ್ಮಾನ: ಆರ್ ಅಶೋಕ್

Published On - 4:56 pm, Thu, 20 January 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?