ಕೂದಲು ಉದುರಿಹೋಯ್ತು, ಈಗ ಉಗುರುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಈ ಜಿಲ್ಲೆಯ ಜನ, ನಿಗೂಢ ಕಾಯಿಲೆ

ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದ ಬುಲ್ದಾನಾ ಜಿಲ್ಲೆಯ ಜನರಿಗೆ ಮತ್ತೊಂದು ಆತಂಕ ಎದುರಾಗಿದೆ. ಹಲವು ಜನರು ತಮ್ಮ ಉಗುರುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ದೇಹದಲ್ಲಿ ಸೆಲೆನಿಯಮ್ ಮಟ್ಟ ಹೆಚ್ಚಾಗುವುದೇ ಕೂದಲು ಮತ್ತು ಉಗುರು ಉದುರುವಿಕೆಗೆ ಕಾರಣ ಎಂದು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಕೂದಲು ಉದುರುವಿಕೆಯ ನಂತರ, ಉಗುರುಗಳಿಗೆ ಹಾನಿಯಾಗುವುದು ಆರೋಗ್ಯ ಇಲಾಖೆಗೆ ಮತ್ತೆ ಸವಾಲಾಗಿ ಪರಿಣಮಿಸಿದೆ.

ಕೂದಲು ಉದುರಿಹೋಯ್ತು, ಈಗ ಉಗುರುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಈ ಜಿಲ್ಲೆಯ ಜನ, ನಿಗೂಢ ಕಾಯಿಲೆ
ಉಗುರುಗಳು
Image Credit source: Aaj Tak

Updated on: Apr 18, 2025 | 9:45 AM

ಬುಲ್ದಾನಾ, ಏಪ್ರಿಲ್ 18: ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಜನರಲ್ಲಿ ಕೂದಲು ಉದುರುವಿಕೆ(Hairfall) ಸಮಸ್ಯೆ ಕಾಣಿಸಿಕೊಂಡಿತ್ತು. ಸುಮಾರು 18 ಹಳ್ಳಿಗಳ 200ಕ್ಕೂ ಹೆಚ್ಚು ಜನರಲ್ಲಿ ಈ ಸಮಸ್ಯೆ ಕಂಡುಬಂದಿತ್ತು. ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಐಸಿಎಂಆರ್ ತಂಡವು ಈ ಹಳ್ಳಿಗಳನ್ನು ತಲುಪಿ ವಿಭಿನ್ನ ಮಾದರಿಗಳನ್ನು ಸಂಗ್ರಹಿಸಿತ್ತು. ಕೂದಲು ಉದುರುವಿಕೆ ಸಮಸ್ಯೆ ಪ್ರಾರಂಭವಾದ ಅದೇ ಹಳ್ಳಿಯಲ್ಲಿ, ಈಗ ಕೂದಲು ಉದುರಿದವರಲ್ಲಿ 10-12 ಜನರ ಉಗುರುಗಳಿಗೆ ಕೂಡ ಹಾನಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಉಗುರುಗಳು ಹಾನಿಗೊಳಗಾಗಿ ಉದುರಿ ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖ್ಯಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು, ನಂತರ ಜಿಲ್ಲಾ ಆರೋಗ್ಯ ಇಲಾಖೆಯ ಕೆಲವು ನೌಕರರು ಅಲ್ಲಿಗೆ ತಲುಪಿ ರಕ್ತದ ಮಾದರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ದೇಹದಲ್ಲಿ ಸೆಲೆನಿಯಮ್ ಮಟ್ಟ ಹೆಚ್ಚಾಗುವುದೇ ಕೂದಲು ಮತ್ತು ಉಗುರು ಉದುರುವಿಕೆಗೆ ಕಾರಣ ಎಂದು ಆರೋಗ್ಯ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಕೂದಲು ಉದುರುವಿಕೆಯ ನಂತರ, ಉಗುರುಗಳಿಗೆ ಹಾನಿಯಾಗುವುದು ಆರೋಗ್ಯ ಇಲಾಖೆಗೆ ಮತ್ತೆ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ
ಮಹಾರಾಷ್ಟ್ರ: ಜನರ ಕೂದಲು ಹಠಾತ್ ಉದುರಿ ಬೋಳಾಗುತ್ತಿದೆ ತಲೆ, ಕಾರಣವೇನು?
ಬಾಲ್ಡ್‌ ಬೆಂಗಳೂರು: ಇದು ಬೆಂಗಳೂರಿಗರ ‘ಒಂದು ಮೊಟ್ಟೆ’ಯ ಕಥೆ!
ಕೂದಲು ಉದುರಲು ಕಾರಣವೇನು? ತಡೆಗಟ್ಟಲು ಏನು ಮಾಡಬೇಕು?
ಮರದ ಬಾಚಣಿಗೆ ಬಳಸಿದರೆ ಕೂದಲು ಉದ್ದವಾಗಿ ಬೆಳೆಯುತ್ತಾ?

ಮತ್ತಷ್ಟು ಓದಿ: ಕೂದಲು ಉದುರಿಸಿ ತಲೆ ಬೋಳು ಮಾಡುವ ಹೊಸ ವೈರಸ್​? ಮಹಾರಾಷ್ಟ್ರ ಜನರು ಹೈರಾಣ

ಕೂದಲು ಉದುರುವಿಕೆಯ ಸುದ್ದಿಯ ನಂತರ, ಐಸಿಎಂಆರ್ ತಂಡವು ಅಲ್ಲಿಗೆ ತಲುಪಿ ರೋಗಿಗಳ ಕೂದಲು ಮತ್ತು ಇತರ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿತು, ಆದರೆ ಐಸಿಎಂಆರ್ ವರದಿ ಇನ್ನೂ ಬಂದಿಲ್ಲ.
ಕೂದಲು ಉದುರುವಿಕೆ ವಿದ್ಯಮಾನದ ಹಿಂದಿನ ಕಾರಣ ದೇಹದಲ್ಲಿ ಸೆಲೆನಿಯಂ ಮಟ್ಟ ಹೆಚ್ಚಿರುವುದು ಎಂದು ಹೇಳಲಾಗಿತ್ತು. ಈಗ ಮತ್ತೆ ಅದೇ ಬಲಿಪಶುಗಳ ಉಗುರುಗಳು ಹಾನಿಗೊಳಗಾಗುತ್ತಿವೆ ಮತ್ತು ಬೀಳುತ್ತಿವೆ.

ಇದಕ್ಕೆ ಕಾರಣ ತನಿಖೆಯ ನಂತರವೇ ತಿಳಿದುಬರಲಿದೆ. ಗ್ರಾಮದ ಸರಪಂಚ್ ರಾಮ್ ಥಾರ್ಕರ್ ಮಾತನಾಡಿ, ಕಳೆದ ಕೆಲವು ದಿನಗಳಿಂದ ಜನರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿತ್ತು. ಈಗ ಉಗುರುಗಳು ಬಿರುಕು ಬಿಡುತ್ತಿವೆ. ಈ ಮಾಹಿತಿಯನ್ನು ಜಿಲ್ಲಾ ಅಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಮತ್ತು ಆಯುಷ್ ಸಚಿವ ಪ್ರತಾಪ್‌ರಾವ್ ಜಾಧವ್ ಅವರಿಗೆ ನೀಡಲಾಗಿದೆ. ಜಿಲ್ಲಾಡಳಿತದಿಂದ ಆರೋಗ್ಯ ಇಲಾಖೆಯ ತಂಡವೊಂದು ಬಂದು ತನಿಖೆ ನಡೆಸಿದೆ ಎಂದಿದ್ದಾರೆ.

ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 30 ಕ್ಕೂ ಹೆಚ್ಚು ಜನರ ಉಗುರುಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಪ್ರಶಾಂತ್ ತಂಗಡೆ ತಿಳಿಸಿದ್ದಾರೆ. ಕೆಲವು ಜನರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಮಾದರಿಗಳನ್ನು ಪರೀಕ್ಷೆಗಾಗಿ ಅಕೋಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:45 am, Fri, 18 April 25

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us