AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್ ನೋಡ್ತಾ ಮೈಮರೆಯಬೇಡಿ; ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್​ನಲ್ಲೇ ಮುಳುಗಿದ್ದ ವ್ಯಕ್ತಿಗೆ ಏನಾಯ್ತು ನೋಡಿ!

Viral Video: ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ ಮೊಬೈಲ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ರೈಲ್ವೇ ಟ್ರಾಕ್​ಗೆ ಬಿದ್ದುಬಿಟ್ಟಿದ್ದಾನೆ. ಮೊಬೈಲ್ ನೋಡುತ್ತಾ ತಾನು ಎಲ್ಲಿ ಹೋಗುತ್ತಿದ್ದೇನೆ ಎಂಬ ಪರಿವೆ ಇಲ್ಲದೆ ಈ ದುರ್ಘಟನೆ ಸಂಭವಿಸಿದೆ.

ಮೊಬೈಲ್ ನೋಡ್ತಾ ಮೈಮರೆಯಬೇಡಿ; ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್​ನಲ್ಲೇ ಮುಳುಗಿದ್ದ ವ್ಯಕ್ತಿಗೆ ಏನಾಯ್ತು ನೋಡಿ!
ಮೆಟ್ರೋ ಹಳಿಗೆ ವ್ಯಕ್ತಿ ಬಿದ್ದ ದೃಶ್ಯ
TV9 Web
| Updated By: ganapathi bhat|

Updated on:Feb 07, 2022 | 1:26 PM

Share

ಇಂದಿನ ದಿನಮಾನದಲ್ಲಿ ಮೊಬೈಲ್ ಫೋನ್​ಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬಂತಾಗಿದೆ. ಏನೇ ಅದ್ರೂ ಮೊಬೈಲ್ ಇಲ್ಲದೆ ಒಂದು ಹೊತ್ತು ಕಳೆಯುವುದು ಕೂಡ ಕಷ್ಟಸಾಧ್ಯ, ಮೊಬೈಲ್ ನೇ ಅವಲಂಬಿಸಿ ದಿನನಿತ್ಯ ನೂರಾರು ಕೆಲಸಗಳನ್ನು ಮಾಡುತ್ತೇವೆ. ವೈಯಕ್ತಿಕ ಮಾಹಿತಿ ಶೇಖರಣೆ, ಖಾಸಗಿ ಮಾತುಕತೆ, ಕೆಲಸಗಳು, ಕೆಲಸಕ್ಕೆ ಸಂಬಂಧಿಸಿ ಮೈಲ್​​ಗಳು, ಬ್ಯಾಂಕಿಂಗ್, ಫಿಟ್​ನೆಸ್, ಸಮಯ, ಕುಟುಂಬ ಹೀಗೆ ನೂರಾರು ಕೆಲಸಗಳು ಅಂಗೈಯಲ್ಲೇ ಆಗುತ್ತವೆ. ಮನರಂಜನೆ, ಸಾಮಾಜಿಕ ಸಂಪರ್ಕಕ್ಕೆ ಅಂತೂ ಮೊಬೈಲ್​ ಅತಿ ಮುಖ್ಯ ವಸ್ತುವಾಗಿದೆ. ಜನರು ಸಾಮಾನ್ಯವಾಗಿ ಸಣ್ಣ ಸಮಯಾವಕಾಶ ಸಿಕ್ಕರೂ ತಮ್ಮ ಸ್ಮಾರ್ಟ್ ಫೋನ್ ಹೊರತೆಗೆದು ಕೂರುತ್ತಾರೆ. ಎಲ್ಲಿ ಮೊಬೈಲ್ ತೆಗೆಯಬಾರದು ಅಥವಾ ಇಂಥಾ ಕಡೆ ಮೊಬೈಲ್ ಬಳಕೆ ಅಪಾಯ ಎಂದು ಆದರೂ ಅಲ್ಲೂ ಮೊಬೈಲ್ ಇಲ್ಲದೆ ಬದುಕುವುದು ಜನರಿಗೆ ಕಷ್ಟ ಎಂಬ ಹಾಗೆ ಆಗಿಬಿಟ್ಟಿದೆ. ಇದರಿಂದ ಕೆಲವೊಮ್ಮೆ ಅಪಾಯವೂ ಸಂಭವಿಸುತ್ತದೆ.

ಮೊಬೈಲ್​ನಿಂದ ಸೃಷ್ಟಿಯಾದ ಅವಾಂತರದ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮೆಟ್ರೋ ರೈಲು ನಿಲ್ದಾಣದಲ್ಲಿ ಇಂತಹ ಘಟನೆಯೊಂದು ನಡೆದಿದೆ. ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿ ಮೆಟ್ರೋ ರೈಲು ನಿಲ್ದಾಣದಲ್ಲಿ ಮೊಬೈಲ್ ಹಿಡಿದು ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ರೈಲ್ವೇ ಟ್ರಾಕ್​ಗೆ ಬಿದ್ದುಬಿಟ್ಟಿದ್ದಾನೆ. ಮೊಬೈಲ್ ನೋಡುತ್ತಾ ತಾನು ಎಲ್ಲಿ ಹೋಗುತ್ತಿದ್ದೇನೆ ಎಂಬ ಪರಿವೆ ಇಲ್ಲದೆ ಈ ದುರ್ಘಟನೆ ಸಂಭವಿಸಿದೆ.

ಒಬ್ಬ ಸ್ಮಾರ್ಟ್​ಫೋನ್ ಬಳಕೆದಾರ ಬ್ಯುಸಿ ಮೆಟ್ರೋ ನಿಲ್ದಾಣ ದೆಹಲಿಯಲ್ಲಿ ರೈಲ್ವೇ ಟ್ರಾಕ್ ಮೇಲೆ ಬಿದ್ದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಬೈಲ್ ಬಳಕೆದಾರ ರೈಲ್ವೇ ಟ್ರ್ಯಾಕ್ ಮೇಲೆ ಬೀಳುವುದು ಹಾಗೂ ಆ ಬಳಿಕ ಅಲ್ಲಿಂದ ಮೇಲೆ ಹತ್ತಲು ಕಷ್ಟಪಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಆತನಿಗೆ ಅಲ್ಲಿದ್ದ ಸಿಐಎಸ್​ಎಫ್ ಸಿಬ್ಬಂದಿ ಮೇಲೆ ಹತ್ತಲು ಸಹಾಯ ಮಾಡಿದ್ದಾರೆ.

ಘಟನೆಯಲ್ಲಿ ರೈಲ್ವೇ ಟ್ರ್ಯಾಕ್​ಗೆ ಬಿದ್ದ ವ್ಯಕ್ತಿಗೆ ಹೆಚ್ಚೇನೂ ಗಾಯಗಳಾಗಿಲ್ಲ. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಯಾವುದೇ ರೈಲು ಆ ಹಳಿಯ ಮೇಲೆ ಬರುತ್ತಿರಲಿಲ್ಲ. ಹೀಗಾಗಿ ಅದೃಷ್ಟವಷಾತ್ ದೊಡ್ಡ ಅನಾಹುತವೊಂದು ಸಣ್ಣದರಲ್ಲೇ ತಪ್ಪಿದೆ. ಮೆಟ್ರೋ ಹಳಿಯ ಮೇಲೆ ರೈಲು ಬರುವ ಮೊದಲೇ ಆತ ಮೇಲೆ ಬರಲು ಅಲ್ಲಿನ ಸಿಬ್ಬಂದಿ ಕೂಡ ಸಹಕಾರ ನೀಡಿದ್ದಾರೆ. ಆದರೆ, ಈ ಘಟನೆಯಿಂದ ಮೊಬೈಲ್ ಬಳಕೆ ಮಾಡುವಾಗ ನಾವು ಎಷ್ಟು ಎಚ್ಚರವಾಗಿ ಇರಬೇಕು ಎಂದು ಅರ್ಥಮಾಡಿಕೊಳ್ಳಲೇಬೇಕು. ಮೊಬೈಲ್​ನಲ್ಲೇ ಮನಸು ಕಳೆದು, ಲೋಕವನ್ನೇ ಮರೆತು ವ್ಯವಹರಿಸಿದರೆ ಇಂತಹ ಸಮಸ್ಯೆಗಳು ಎದುರಾಗಬಹುದು. ಈ ಬಗ್ಗೆ ಸಾಮಾನ್ಯರು ಗಮನ ಇಟ್ಟುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳು, ಅಪಾಯಕಾರಿ ಸ್ಥಳಗಳಲ್ಲಿ ಹೀಗೆ ಮೈಮರೆತು ಮೊಬೈಲ್ ಬಳಸದಂತೆ ಎಚ್ಚರವಾಗಿ ಇರಬೇಕು.

ಇದನ್ನೂ ಓದಿ: ಲತಾಜೀ ಮೃತದೇಹಕ್ಕೆ ಶಾರುಖ್​ ಉಗಿದರು ಎಂಬ ಆರೋಪ; ವೈರಲ್​ ವಿಡಿಯೋದಲ್ಲಿ ನಿಜಕ್ಕೂ ಇರೋದೇನು?

ಇದನ್ನೂ ಓದಿ: ಪವಾಡಸದೃಶ ರೀತಿಯಲ್ಲಿ ಬಚಾವಾದ ಪರ್ವತಾರೋಹಿ; ಇಲ್ಲಿದೆ ವೈರಲ್ ವಿಡಿಯೋ

Published On - 1:25 pm, Mon, 7 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ