AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಕ್ಸ್‌ಪೈರಿ ದಿನಾಂಕ ಬದಲಿಸಿ ಜನರ ಜೀವದ ಜೊತೆ ಚೆಲ್ಲಾಟ:ಮುಂಬೈನಲ್ಲಿ 75.5 ಲಕ್ಷ ರೂ. ಮೌಲ್ಯದ ಮ್ಯಾಗಿ, ಲೇಸ್, ಕುರ್ಕುರೆ ಜಪ್ತಿ

ಮುಂಬೈನಲ್ಲಿ ಅವಧಿ ಮೀರಿದ ಮ್ಯಾಗಿ, ಲೇಸ್, ಕುರ್ಕುರೆಗಳಂತಹ ಆಹಾರ ಉತ್ಪನ್ನಗಳಿಗೆ ಹೊಸ ಸ್ಟಿಕ್ಕರ್ ಹಚ್ಚಿ ಮರುಮಾರಾಟ ಮಾಡುತ್ತಿದ್ದ ಭಾರಿ ವಂಚನೆ ಬಯಲಾಗಿದೆ. ಮಹಾರಾಷ್ಟ್ರ FDA ಮತ್ತು ಪೊಲೀಸರು 75.5 ಲಕ್ಷ ರೂ. ಮೌಲ್ಯದ ಅವಧಿ ಮೀರಿದ ಆಹಾರ ಜಪ್ತಿ ಮಾಡಿದ್ದಾರೆ. ಜನರ ಜೀವದ ಜೊತೆ ಚೆಲ್ಲಾಟವಾಡುವ ಈ ಆಹಾರ ಕಲಬೆರಕೆ ತಡೆಯಲು, ಗ್ರಾಹಕರು ಉತ್ಪನ್ನಗಳ ಮೂಲ ದಿನಾಂಕ ಮತ್ತು ಪ್ಯಾಕಿಂಗ್ ಸೀಲ್‌ಗಳನ್ನು ಪರಿಶೀಲಿಸುವುದು ಕಡ್ಡಾಯ.

ಎಕ್ಸ್‌ಪೈರಿ ದಿನಾಂಕ ಬದಲಿಸಿ ಜನರ ಜೀವದ ಜೊತೆ ಚೆಲ್ಲಾಟ:ಮುಂಬೈನಲ್ಲಿ  75.5 ಲಕ್ಷ ರೂ. ಮೌಲ್ಯದ ಮ್ಯಾಗಿ, ಲೇಸ್, ಕುರ್ಕುರೆ ಜಪ್ತಿ
ಆಹಾರ
ನಯನಾ ರಾಜೀವ್
|

Updated on: Sep 01, 2026 | 8:55 AM

Share

ಮುಂಬೈ, ಸೆಪ್ಟೆಂಬರ್ 1: ಖ್ಯಾತ ಕಂಪನಿಗಳ ಆಹಾರ(Food) ಉತ್ಪನ್ನಗಳ ಅವಧಿ ಮುಗಿದ ದಿನಾಂಕಗಳನ್ನು ತಿರುಚಿ, ಹೊಸ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರುಕಟ್ಟೆಗೆ ಬಿಡುತ್ತಿದ್ದ ಆಹಾರ ಕಲಬೆರಕೆ ಹಾಗೂ ವಂಚನೆ ದಂಧೆಯನ್ನು ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಹಾಗೂ ನವಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಬಯಲಿಗೆಳೆದಿದ್ದಾರೆ.

ತುರ್ಬೆಯ ಟಿಟಿಸಿ (TTC) ಕೈಗಾರಿಕಾ ಪ್ರದೇಶದಲ್ಲಿರುವ ‘ಸಾಧನಾ ಎಂಟರ್‌ಪ್ರೈಸಸ್’ ಘಟಕದ ಮೇಲೆ ಸತತ ದಾಳಿ ನಡೆಸಿದ ಅಧಿಕಾರಿಗಳು, ಬರೋಬ್ಬರಿ75.5 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಲೇಸ್, ಕುರ್ಕುರೆ, ಮ್ಯಾಗಿ ನೂಡಲ್ಸ್ ಸೇರಿದಂತೆ ಭಾರಿ ಪ್ರಮಾಣದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ದಿನಾಂಕ ಮತ್ತು ಲೇಬಲ್ ತಿದ್ದುಪಡಿ: ಗೋದಾಮಿನಲ್ಲಿ ಅವಧಿ ಮುಗಿದ ಆಹಾರ ಪ್ಯಾಕೆಟ್‌ಗಳ ಮೂಲ ಉತ್ಪಾದನಾ ದಿನಾಂಕ (Mfg Date), ಮುಕ್ತಾಯ ದಿನಾಂಕ (Expiry Date) ಹಾಗೂ ಪೌಷ್ಠಿಕಾಂಶದ ಲೇಬಲ್‌ಗಳನ್ನು ಅಳಿಸಿ, ನಕಲಿ ಸ್ಟಿಕ್ಕರ್‌ಗಳ ಮೂಲಕ ಹೊಸ ದಿನಾಂಕಗಳನ್ನು ಮುದ್ರಿಸಿ ಮರುಪ್ಯಾಕ್ ಮಾಡಲಾಗುತ್ತಿತ್ತು.

ವಶಪಡಿಸಿಕೊಂಡ ಸಾಮಗ್ರಿಗಳು: ಲೇಸ್ ಚಿಪ್ಸ್, ವಿವಿಧ ಶೈಲಿಯ ಕುರ್ಕುರೆ, ಫನ್ ಫ್ಲಿಪ್ಸ್, ಮ್ಯಾಗಿ ಮಸಾಲಾ ಹಾಗೂ ಅಟ್ಟಾ ನೂಡಲ್ಸ್ ಸೇರಿದಂತೆ ರೆಡಿ ಟು ಈಟ್, ರೆಡಿ ಟು ಕುಕ್ ತಿಂಡಿಗಳ ಒಟ್ಟು 8,442 ಬಾಕ್ಸ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.ಲೈಸೆನ್ಸ್ ಅಮಾನತು: ನಿಯಮಬಾಹಿರ ಕೃತ್ಯ ಎಸಗಿದ ಸಾಧನಾ ಎಂಟರ್‌ಪ್ರೈಸಸ್‌ನ ಅಧಿಕೃತ ಪರವಾನಗಿಯನ್ನು ಎಫ್‌ಡಿಎ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.

ಮತ್ತಷ್ಟು ಓದಿ: ಜೊಮಾಟೊದಲ್ಲಿ ‘ಅನಲಾಗ್ ಡೈರಿ’ ಆಹಾರ ಪದಾರ್ಥಗಳಿಗೆ ನಿಷೇಧ: ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳ ಮೇಲಾಗುವ ಪರಿಣಾಮಗಳು

ಕಾನೂನು ಕ್ರಮ: ಎಫ್​ಎಸ್​ಎಸ್​ಎಐ ಪರವಾನಗಿ ಹಾಗೂ ಖರೀದಿ ಬಿಲ್‌ಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಯುನಿಕ್ ಫ್ರಾಗ್ರನ್ಸಸ್ ಮತ್ತು ಪ್ರಿಸ್ಟೈನ್ ವರ್ಲ್ಡ್‌ವೈಡ್ ಸಂಸ್ಥೆಗಳ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006(FSS Act) ಹಾಗೂ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ತುರ್ಬೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಪೋಸ್ಟ್​

ಕರ್ನಾಟಕದ ನಕಲಿ ಪನ್ನೀರ್ ಜಾಲ: ಇತ್ತೀಚೆಗಷ್ಟೇ ಕರ್ನಾಟಕದ ಬೆಂಗಳೂರು ಹಾಗೂ ಬೆಳಗಾವಿ ಸೇರಿದಂತೆ ಹಲವು ಭಾಗಗಳಲ್ಲಿ ಕಲಬೆರಕೆ ಹಾಲಿನ ಪೌಡರ್ ಮತ್ತು ಹಾನಿಕಾರಕ ರಾಸಾಯನಿಕ ಬಳಸಿ ತಯಾರಿಸುತ್ತಿದ್ದ ನಕಲಿ ಪನ್ನೀರ್ ತಯಾರಿಕಾ ಘಟಕಗಳ ಮೇಲೆ ಎಫ್‌ಡಿಎ ಸರಣಿ ದಾಳಿ ನಡೆಸಿ ಕ್ವಿಂಟಾಲ್‌ಗಟ್ಟಲೆ ಕಳಪೆ ಪನ್ನೀರ್ ವಶಪಡಿಸಿಕೊಂಡಿತ್ತು.

ಗ್ರಾಹಕರಿಗೆ ತಜ್ಞರ ಎಚ್ಚರಿಕೆ: ಪ್ಯಾಕೇಜ್ಡ್ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಕೇವಲ ಮೇಲೆ ಅಂಟಿಸಲಾದ ಸ್ಟಿಕ್ಕರ್ ದಿನಾಂಕಗಳನ್ನು ಮಾತ್ರ ನಂಬದೆ, ಕಂಪನಿಯ ಮೂಲ ಮುದ್ರಣ, ಪ್ಯಾಕಿಂಗ್ ಸೀಲ್ ಹಾಗೂ ಬಾರ್‌ಕೋಡ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆ ಮತ್ತು ಸಂಶಯಾಸ್ಪದ ಉತ್ಪನ್ನಗಳ ಬಗ್ಗೆ ತಕ್ಷಣವೇ ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗೆ ದೂರು ನೀಡುವಂತೆ ಸೂಚಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK