ಗುರ್​​ಗಾಂವ್​​​ನಲ್ಲಿ ಮತ್ತೆ ನಮಾಜ್​​ಗೆ ತಕರಾರು; ಅದೇ ಜಾಗದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು

ಕಳೆದ ಹಲವು ವಾರಗಳಿಂದ ಈ  ಸೈಟ್‌ಗಳಲ್ಲಿ ಪ್ರತಿಭಟನೆ ಮತ್ತು ಬೆದರಿಕೆಯ ಮೆರವಣಿಗೆ ಎದುರಿಸುತ್ತಿರುವ ಮುಸ್ಲಿಂ ಸಂಘಟನೆಗಳು ಇಂದು ಈ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಬಾಂಧವರ ಜತೆ ಒಪ್ಪಂದ ಮಾಡಿಕೊಳ್ಳುವವರೆಗೂ ಇಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ.

ಗುರ್​​ಗಾಂವ್​​​ನಲ್ಲಿ ಮತ್ತೆ ನಮಾಜ್​​ಗೆ ತಕರಾರು; ಅದೇ ಜಾಗದಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸುತ್ತೇವೆ ಎಂದ ಪ್ರತಿಭಟನಾಕಾರರು
ಗುರುಗ್ರಾಮದಲ್ಲಿ ಪೊಲೀಸರ ರಕ್ಷಣೆಯೊಂದಿಗೆ ನಮಾಜ್ ಮಾಡುತ್ತಿರುವುದು (ಸಂಗ್ರಹ ಚಿತ್ರ)
Follow us
| Updated By: ರಶ್ಮಿ ಕಲ್ಲಕಟ್ಟ

Updated on: Nov 12, 2021 | 6:18 PM

ಗುರ್​​ಗಾಂವ್: ಹರ್ಯಾಣದ (Haryana) ಗುರ್‌ಗಾಂವ್‌ನಲ್ಲಿ (Gurgaon) ತೆರೆದ ಸ್ಥಳಗಳಲ್ಲಿ ನಮಾಜ್‌ಗೆ (Namaz) ವಿರೋಧದ ಕೂಗು ಮತ್ತೆ ಜೋರಾಗಿದೆ. ಹಿಂದೂ ಗುಂಪುಗಳ ಸದಸ್ಯರು ಮುಸ್ಲಿಮರು ಪ್ರಾರ್ಥನೆ ಮಾಡುವುದನ್ನು ತಡೆಯಲು ಸೆಕ್ಟರ್ 12A ನಲ್ಲಿ ಸೈಟ್ ಅನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸೈಟ್‌ ಸುತ್ತಲೂ ಕುಳಿತಿರುವುದು ವಿಡಿಯೊದಲ್ಲಿದೆ. ಅವರು ಬೆಳಿಗ್ಗೆ ಇಲ್ಲಿ ಬಂದು ಸೇರಿದ್ದು ಈ ಜಾಗದಲ್ಲಿ ವಾಲಿಬಾಲ್ ಕೋರ್ಟ್ (Volleyball Court)ಮಾಡುವುದಾಗಿ ಹೇಳಿದ್ದಾರೆ. ಆದಾಗ್ಯೂ, ಅವರು ಪ್ರಾರ್ಥನೆಗಳನ್ನು ನಡೆಯದಂತೆ ತಡೆಯುತ್ತಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. “ನಾವು ಇಲ್ಲಿ ಮೌನವಾಗಿ ಕುಳಿತಿದ್ದೇವೆ. ಆದರೆ ಪ್ರಾರ್ಥನೆಗೆ ಅವಕಾಶ ನೀಡುವುದಿಲ್ಲ. ನಾವು ಇಲ್ಲಿ ಕ್ರೀಡಾಂಗಣಕ್ಕೆ ಯೋಜಿಸುತ್ತೇವೆ” ಎಂದು ಮೈದಾನವನ್ನು ಆಕ್ರಮಿಸಿಕೊಂಡವರಲ್ಲಿ ಒಬ್ಬರಾದ ಪರ್ಮಿಳಾ ಚಾಹರ್ ಹೇಳಿದರು. ಮತ್ತೊಬ್ಬ ವ್ಯಕ್ತಿ ವೀರ್ ಯಾದವ್: “ನಾವು ನೆಟ್ ಕಟ್ಟುತ್ತೇವೆ. ಇಲ್ಲಿ ವಾಲಿಬಾಲ್ ಅಂಕಣವನ್ನು ನಿರ್ಮಿಸುತ್ತೇವೆ. ಮಕ್ಕಳು ಆಟವಾಡುತ್ತಾರೆ, ಏನೇ ಆದರೂ ನಮಾಜ್‌ಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಸಮೀಪದಲ್ಲಿ ಕಳೆದ ವಾರ ಹರಡಲಾಗಿದ್ದ ಹಸುವಿನ ಬೆರಣಿ ಹಾಗೇ ಇದೆ.  ಬಲಪಂಥೀಯ ಗುಂಪುಗಳು ನಮಾಜ್ ಪ್ರಾರ್ಥನಾ ಸ್ಥಳದ ಮೇಲೆ ಸಗಣಿ ಹರಡುವುದನ್ನು ಒಳಗೊಂಡ “ಪೂಜೆ” ನಡೆಸಿದ ನಂತರ ಅವು ಅಲ್ಲಿಯೇ ಉಳಿದಿದೆ.

ಕಳೆದ ಹಲವು ವಾರಗಳಿಂದ ಈ  ಸೈಟ್‌ಗಳಲ್ಲಿ ಪ್ರತಿಭಟನೆ ಮತ್ತು ಬೆದರಿಕೆಯ ಮೆರವಣಿಗೆ ಎದುರಿಸುತ್ತಿರುವ ಮುಸ್ಲಿಂ ಸಂಘಟನೆಗಳು ಇಂದು ಈ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹಿಂದೂ ಬಾಂಧವರ ಜತೆ ಒಪ್ಪಂದ ಮಾಡಿಕೊಳ್ಳುವವರೆಗೂ ಇಲ್ಲಿ ಪ್ರಾರ್ಥನೆ ಸಲ್ಲಿಸುವುದಿಲ್ಲ ಎಂದು ಎಲ್ಲರಿಗೂ ಹೇಳಿದ್ದೇವೆ. ಡಿಸಿ ಸಾಹೇಬರು ನಮಗೆ ಒಂದು ವಾರ ಕಾಲಾವಕಾಶವನ್ನೂ ನೀಡಿದ್ದಾರೆ ಎಂದು ಮುಸ್ಲಿಂ ಸಂಘಟನೆಗಳು ಹೇಳಿವೆ.

ಇಂದಿನ ಪ್ರತಿಭಟನೆಗಳು ಎರಡು ಕಡೆಯ ನಡುವೆ ವಾರಕ್ಕೊಮ್ಮೆ ನಡೆಯುವ ಮುಖಾಮುಖಿ ಆಗಿ ಮಾರ್ಪಟ್ಟಿವೆ ಎಂದು ಕೆಲವು ಗುರ್​​ಗಾಂವ್ ನೆರೆಹೊರೆಗಳ ನಿವಾಸಿಗಳು, ಬಲಪಂಥೀಯ ಗುಂಪುಗಳ ಸದಸ್ಯರು ವರದಿ ಮಾಡಿದ್ದಾರೆ. ಇದರಿಂದಾಗಿ ಮುಸ್ಲಿಮರ ಪ್ರಾರ್ಥನೆಗೆ ಸಮಸ್ಯೆ ಆಗಿದೆ.

2018 ರಲ್ಲಿ ಇದೇ ರೀತಿಯ ಘರ್ಷಣೆಗಳ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಒಪ್ಪಂದದ ನಂತರ ನಮಾಜ್ ಗಾಗಿ ನೀಡಿದ 29 ಜಾಗಗಳ (ಈ ಹಿಂದೆ 37 ಆಗಿತ್ತು) ಪೈಕಿ ಸೆಕ್ಟರ್ 12A ಕೂಡಾ ಒಂದು ಜಾಗವಾಗಿದೆ. ಈ ಸ್ಥಳಗಳಲ್ಲಿ ಕೆಲವು ವಾಸ್ತವವಾಗಿ, ಸೆಕ್ಟರ್ 47 ರಲ್ಲಿ ಒಂದರಂತೆ ಸಾರ್ವಜನಿಕ ಆಸ್ತಿಯಾಗಿದೆ. ಆದಾಗ್ಯೂ, ಇತರವು ಖಾಸಗಿ ಆಸ್ತಿಯಾಗಿದ್ದು, ನಮಾಜ್ ಪ್ರಸ್ತಾಪಕ್ಕೆ ಯಾವುದೇ ಸಂಭವನೀಯ ಆಕ್ಷೇಪಣೆಯನ್ನು ವ್ಯಕ್ತಪಡಿಸಲಾಗುವುದಿಲ್ಲ.

ಕಳೆದ ವಾರ (ನವೆಂಬರ್ 5 ರಂದು ಶುಕ್ರವಾರದ ಪ್ರಾರ್ಥನೆಯ ಮೊದಲು) ಗುರ್​​ಗಾಂವ್ ಅಧಿಕಾರಿಗಳು ಈ ಎಂಟು “ನಿಯೋಜಿತ” ಸೈಟ್‌ಗಳಲ್ಲಿ ನಮಾಜ್ ಮಾಡಲು ಅನುಮತಿಯನ್ನು ಹಿಂತೆಗೆದುಕೊಂಡರು. ಇದು “ಆಕ್ಷೇಪಣೆಗಳ” ನಂತರ ಎಂದು ಆಡಳಿತವು ಹೇಳಿದೆ ಮತ್ತು ಇತರ ಸೈಟ್‌ಗಳಲ್ಲಿ ಇದೇ ರೀತಿಯ “ಆಕ್ಷೇಪಣೆ” ಯನ್ನು ಎತ್ತಿದರೆ, “ಅಲ್ಲಿ ಅನುಮತಿ ನೀಡಲಾಗುವುದಿಲ್ಲ” ಎಂದು ಎಚ್ಚರಿಸಿದೆ.

“ಯಾವುದೇ ಸಾರ್ವಜನಿಕ ಮತ್ತು ತೆರೆದ ಸ್ಥಳದಲ್ಲಿ ನಮಾಜ್ ಮಾಡಲು ಆಡಳಿತದ ಒಪ್ಪಿಗೆ ಅಗತ್ಯ” ಎಂದು ಅದು ಹೇಳಿದೆ, “ಸ್ಥಳೀಯ ಜನರು ಇತರ ಸ್ಥಳಗಳಲ್ಲಿ ಆಕ್ಷೇಪಣೆಗಳನ್ನು ಹೊಂದಿದ್ದರೆ, ಅನುಮತಿ ನೀಡಲಾಗುವುದಿಲ್ಲ…” ಡೆಪ್ಯೂಟಿ ಕಮಿಷನರ್ ಯಶ್ ಗಾರ್ಗ್ ಅವರು ರಚಿಸುವ ಸಮಿತಿಯು ಪರ್ಯಾಯ ಸೈಟ್‌ಗಳನ್ನು ಗುರುತಿಸುವ ಕುರಿತು ಚರ್ಚೆ ನಡೆಸಲಿದೆ ಎಂದು ಆಡಳಿತ ಹೇಳಿದೆ. ಆದರೆ ಸಮಿತಿಯು ಸಭೆ ನಡೆಸಿದೆಯೇ ಅಥವಾ ಅಂತಹ ಸ್ಥಳಗಳನ್ನು ಆಯ್ಕೆ ಮಾಡುವಲ್ಲಿ ಪ್ರಗತಿ ಕಂಡುಬಂದಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ನವೆಂಬರ್ 5 ರ ಹಿಂದಿನ ವಾರ ಪೊಲೀಸರು ಸೆಕ್ಟರ್ 12A ನಿಂದ 30 ಪ್ರತಿಭಟನಾಕಾರರನ್ನು ಬಂಧಿಸಿದರು.  ಈ ಘಟನೆಯ ವಿಡಿಯೊದಲ್ಲಿ” ಗುರ್​​ಗಾಂವ್ ಆಡಳಿತ, ನಿಮ್ಮ ನಿದ್ದೆಯಿಂದ ಎದ್ದೇಳಿ” ಎಂಬ ಫಲಕಗಳು ಕಾಣಿಸಿದ್ದವು.  ಕಳೆದ ತಿಂಗಳು ಅವರು 12A ಮತ್ತು 47 ಸೇರಿದಂತೆ ಹಲವಾರು ಇತರ ವಲಯಗಳಲ್ಲಿ ಮುಖಾಮುಖಿ ಆಗಿದ್ದು , ಅದರಲ್ಲಿ ಹತ್ತಾರು ಜನರು ‘ಜೈ ಶ್ರೀ ರಾಮ್’ ಎಂದು ಜಪಿಸುತ್ತಿದ್ದರು ಮತ್ತು ‘ತೆರೆದ ಜಾಗಗಳಲ್ಲಿ ನಮಾಜ್ ನಿಲ್ಲಿಸಿ’ ಎಂಬ ಫಲಕಗಳನ್ನು ಹಿಡಿದಿದ್ದರು.  ಈ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವಂತೆ ಒತ್ತಾಯಿಸಲಾಯಿತು.

“ರೋಹಿಂಗ್ಯಾ ನಿರಾಶ್ರಿತರು” ಪ್ರದೇಶದಲ್ಲಿ ಅಪರಾಧಗಳನ್ನು ಮಾಡಲು ಪ್ರಾರ್ಥನೆಗಳನ್ನು ಬಳಸುತ್ತಾರೆ ಎಂದು ಪ್ರತಿಭಟನಾಕಾರರು ಹೇಳುತ್ತಾರೆ. ಹರ್ಯಾಣ ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರು ಪ್ರಾರ್ಥನೆ ಮಾಡುವ ಹಕ್ಕು ಎಲ್ಲರಿಗೂ ಇದೆ ಎಂದು ಹೇಳಿದ್ದಾರೆ, ಆದರೆ ಅವರು “ಪ್ರಾರ್ಥನೆ ಮಾಡುವವರು ರಸ್ತೆ ಸಂಚಾರವನ್ನು ನಿರ್ಬಂಧಿಸಬಾರದು” ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಕಿರಿಯ ಸಾಮಾಜಿಕ ನ್ಯಾಯ ಸಚಿವ ಸಚಿವ ಕ್ರಿಶನ್ ಪಾಲ್ ಗುರ್ಜರ್ ಅವರ ಕ್ಷೇತ್ರವು ಹರಿಯಾಣದಲ್ಲಿದೆ ಅಂತಹ ಉದ್ದೇಶಗಳಿಗಾಗಿ ಸೈಟ್‌ಗಳನ್ನು ಗೊತ್ತುಪಡಿಸಿದ್ದರೆ ಜನರಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹಲವು ಕಂಪನಿ, ಯೋಜನೆಗಳ ರಾಯಭಾರಿಯಾಗಿದ್ದರು ಪುನೀತ್: ಇಲ್ಲಿದೆ ಅವುಗಳ ಸಂಪೂರ್ಣ ಮಾಹಿತಿ

Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ನಾಲ್ಕನೇ ದಿನದ ರಾಶಿ ಭವಿಷ್ಯ ತಿಳಿಯಿರಿ
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ