ಒಂದೇ ವಾರದಲ್ಲಿ 2ನೇ ಬಾರಿ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಾಗಿಲು ಓಪನ್; ಕಾರಣ ಇಲ್ಲಿದೆ
Puri Jagannath Temple: ಒಡಿಶಾ ಸರ್ಕಾರ ಹೊರಡಿಸಿದ SOPಗಳನ್ನು ಅನುಸರಿಸಿ ಪುರಿ ಜಗನ್ನಾಥ ದೇವಾಲಯದ 'ರತ್ನ ಭಂಡಾರ'ದ ಬಾಗಿಲನ್ನು ತೆರೆಯಲಾಯಿತು. ಜುಲೈ 13ರಂದು ಒಡಿಶಾ ಸರ್ಕಾರವು ಅಲ್ಲಿ ಸಂಗ್ರಹವಾಗಿರುವ ಆಭರಣಗಳು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಸ್ಥಳಾಂತರಿಸಲು ರತ್ನ ಭಂಡಾರವನ್ನು ತೆರೆಯಲು ಅನುಮೋದನೆ ನೀಡಿತು.

ಪುರಿ: 12ನೇ ಶತಮಾನದ ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ಪುರಿ ಜಗನ್ನಾಥ ದೇವಸ್ಥಾನದ ಅಧಿಕಾರಿಗಳು ನಿಷೇಧಿಸಿದ್ದಾರೆ. ಇಂದು (ಗುರುವಾರ) ಯಾವುದೇ ಭಕ್ತರಿಗೆ ಪುರಿ ಜಗನ್ನಾಥ ದೇವಸ್ಥಾನದ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ. ರತ್ನ ಭಂಡಾರದ (ಖಜಾನೆ) ಒಳಗಿನ ಕೊಠಡಿಯಿಂದ ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ‘ಸ್ಟ್ರಾಂಗ್ ರೂಂ’ಗೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪುರಿ ಜಗನ್ನಾಥ ದೇವಾಲಯದ ನೆಲಮಾಳಿಗೆಯಲ್ಲಿರುವ ರತ್ನ ಭಂಡಾರವು ಹೊರ ಮತ್ತು ಒಳ ಕೋಣೆಯನ್ನು ಹೊಂದಿದೆ. ಜಗನ್ನಾಥ ದೇವಸ್ಥಾನದ ಆಡಳಿತ (ಎಸ್ಜೆಟಿಎ) ಮುಖ್ಯಸ್ಥ ಅರವಿಂದ ಪಾಧಿ ಅವರು ರತ್ನ ಭಂಡಾರದ ಒಳಗಿನ ಕೋಣೆಯನ್ನು ಮತ್ತೆ ತೆರೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಆದ್ದರಿಂದ ನಾವು ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿದ್ದೇವೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ 8 ಗಂಟೆಯ ನಂತರ ದೇವಸ್ಥಾನಕ್ಕೆ ಯಾರಿಗೂ ಪ್ರವೇಶ ನೀಡುತ್ತಿಲ್ಲ.
ಇಂದು ಬೆಳಗ್ಗೆ 8 ಗಂಟೆಯ ನಂತರ ಅಧಿಕೃತ ವ್ಯಕ್ತಿಗಳು ಮತ್ತು ಸೇವಕರಿಗೆ ಮಾತ್ರ ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು ಎಂದು ದೇವಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರು ತಿಳಿಸಿದ್ದಾರೆ. ಇಂದು ಈ ದೇವಾಲಯದ ಸಿಂಗ್ ದ್ವಾರ (ಮುಂಭಾಗದ ಬಾಗಿಲು) ಮಾತ್ರ ತೆರೆಯಲಾಯಿತು. ಉಳಿದ ಎಲ್ಲಾ ಬಾಗಿಲುಗಳು ಮುಚ್ಚಲ್ಪಟ್ಟವು. ಅಲ್ಲಿರುವ ಅಮೂಲ್ಯ ವಸ್ತುಗಳನ್ನು ಸ್ಟ್ರಾಂಗ್ ರೂಮ್ಗೆ ವರ್ಗಾಯಿಸಲಾಗುತ್ತದೆ.
ಇದನ್ನೂ ಓದಿ: Ratna Bhandar: 4 ದಶಕಗಳ ಬಳಿಕ ನಾಳೆ ಬಯಲಾಗುತ್ತಾ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ
ಹಲವಾರು ವರ್ಷಗಳಿಂದ ಭಕ್ತರು ದೇವರಿಗೆ ದಾನ ಮಾಡಿದ ಅಮೂಲ್ಯ ವಸ್ತುಗಳನ್ನು ದೇವಾಲಯದ ಸಂಕೀರ್ಣದೊಳಗಿನ ತಾತ್ಕಾಲಿಕ ‘ಸ್ಟ್ರಾಂಗ್ ರೂಮ್’ಗೆ ಸ್ಥಳಾಂತರಿಸಲಾಗಿದೆ ಎಂದು ಪಾಧಿ ಹೇಳಿದರು. ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತವು (ಎಸ್ಜೆಟಿಎ) ಇಂದು ರತ್ನ ಭಂಡಾರದ ಒಳಗಿನ ಕೋಣೆಯನ್ನು ಪುನಃ ತೆರೆದು ಆಭರಣಗಳನ್ನು 12ನೇ ಶತಮಾನದ ದೇವಾಲಯದ ಸಂಕೀರ್ಣದೊಳಗೆ ಸ್ಥಾಪಿಸಲಾದ ತಾತ್ಕಾಲಿಕ ಉಗ್ರಾಣಕ್ಕೆ ಸ್ಥಳಾಂತರಿಸಿದೆ ಎಂದು ಅವರು ಹೇಳಿದ್ದಾರೆ. 46 ವರ್ಷಗಳ ಅಂತರದ ನಂತರ ಕ್ಯಾಟಲಾಗ್ ಮತ್ತು ರಿಪೇರಿಗಾಗಿ ಈ ದೇವಸ್ಥಾನವನ್ನು ತೆರೆಯಲಾಯಿತು.
VIDEO | The inner chamber of Ratna Bhandar at Puri’s Jagannath Temple will be opened between 9.51 am and 12.15 pm today to shift the valuables to a strong room inside the temple complex. pic.twitter.com/jy2LWqgslp
— Press Trust of India (@PTI_News) July 18, 2024
ಇಂದು ಬೆಳಿಗ್ಗೆ 9:51ರಿಂದ ಮಧ್ಯಾಹ್ನ 12:15ರವರೆಗೆ ಭಿತ್ರ ರತ್ನ ಭಂಡಾರವನ್ನು ಪ್ರವೇಶಿಸಲಾಗುವುದು ಎಂದು ನ್ಯಾಯಮೂರ್ತಿ ರಾಥ್ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು. ಒಳಗಿನ ಕೊಠಡಿಯಲ್ಲಿ ಇರಿಸಲಾಗಿರುವ ಬೆಲೆಬಾಳುವ ವಸ್ತುಗಳನ್ನು ತಾತ್ಕಾಲಿಕ ಉಗ್ರಾಣಕ್ಕೆ ಸ್ಥಳಾಂತರಿಸಲಾಗುವುದು ಮತ್ತು ಎಎಸ್ಐ ಸದಸ್ಯರು ಅದರ ಮೌಲ್ಯಮಾಪನವನ್ನು ಮಾಡುತ್ತಾರೆ. ಈ ಇಡೀ ಕಾರ್ಯಕ್ರಮವನ್ನು ವಿಡಿಯೋ ಮಾಡಲಾಗುವುದು.
ಇದನ್ನೂ ಓದಿ: ಕೀ ಇಲ್ಲದಿದ್ದರೂ 46 ವರ್ಷಗಳ ಬಳಿಕ ತೆರೆಯಿತು ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ
ಬೆಲೆಬಾಳುವ ವಸ್ತುಗಳನ್ನು ತುಂಬಿದ ಎಲ್ಲಾ ಪೆಟ್ಟಿಗೆಗಳನ್ನು ಸ್ಥಳಾಂತರಿಸಲು ಸವಾಲುಗಳಿರುವ ಕಾರಣದಿಂದ ಈ ಕಂಟೈನರ್ಗಳಲ್ಲಿ ಇರಿಸಲಾದ ಆಭರಣಗಳನ್ನು ದೇವಾಲಯದ ಆವರಣದಲ್ಲಿರುವ ತಾತ್ಕಾಲಿಕ ಖಜಾನೆಗೆ ಸ್ಥಳಾಂತರಿಸಲಾಗುವುದು ಎಂದು ನ್ಯಾಯಮೂರ್ತಿ ರಥ್ ತಿಳಿಸಿದ್ದಾರೆ. ಈ ತಾತ್ಕಾಲಿಕ ಸೌಲಭ್ಯದಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಅಗ್ನಿ ಸುರಕ್ಷತಾ ಕ್ರಮಗಳು ಮತ್ತು ಇತರ ಅಗತ್ಯ ಮುನ್ನೆಚ್ಚರಿಕೆಗಳನ್ನು ಅಳವಡಿಸಲಾಗಿದೆ.
ಇಂದು (ಜುಲೈ 18) ರತ್ನ ಭಂಡಾರವು ಪುನರಾರಂಭಗೊಂಡಾಗ ದೇವಾಲಯದ ಪ್ರವೇಶಕ್ಕೆ ವಿಧಿಸಲಾದ ನಿರ್ಬಂಧಗಳನ್ನು ಅನುಸರಿಸಲು ಭಕ್ತರಿಗೆ SJTA ಮನವಿ ಮಾಡಿದೆ ಎಂದು ಪಾಧಿ ಹೇಳಿದ್ದಾರೆ. ಜುಲೈ 14ರಂದು ದೇವಸ್ಥಾನದ ಮೂರು ಬೀಗಗಳನ್ನು ಕತ್ತರಿಸಿ 46 ವರ್ಷಗಳ ನಂತರ ದೇವರ ಭಂಡಾರದ ಒಳಕೋಣೆಯನ್ನು ಪುನಃ ತೆರೆಯಲಾಗಿತ್ತು. ಈ ತಂಡವು ಒಳಗಿನ ಕೊಠಡಿಯೊಳಗೆ ಬಾಕ್ಸ್ಗಳು ಮತ್ತು ಕಪಾಟುಗಳನ್ನು ಗಮನಿಸಿತ್ತು. ಆದರೆ, ಮುಂಬರುವ ಬಹುದಾ ಯಾತ್ರೆ (ಜುಲೈ 15) ಮತ್ತು ಸುನಾ ಬೇಷಾ (ಜುಲೈ 17) ಕಾರ್ಯಕ್ರಮಗಳ ಕಾರಣದಿಂದ ಆಭರಣಗಳನ್ನು ಗೊತ್ತುಪಡಿಸಿದ ಸ್ಟ್ರಾಂಗ್ರೂಮ್ಗೆ ಸ್ಥಳಾಂತರಿಸಲು ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿತು.
ಪುರಿ ಜಗನ್ನಾಥ ದೇವಾಲಯದ ಪವಿತ್ರವಾದ ‘ರತ್ನ ಭಂಡಾರ’ವನ್ನು ಇತಿಹಾಸದಲ್ಲಿ ಎರಡು ಬಾರಿ ತೆರೆಯಲಾಯಿತು. ಮೊದಲು 1978ರಲ್ಲಿ ಮೇ 13ರಿಂದ ಜುಲೈ 23ರವರೆಗೆ ಮತ್ತು 1985ರ ಜುಲೈ 14ರಂದು ತೆರೆಯಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Thu, 18 July 24