AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pahalgam Attack: ಹಸಿರು ಕಣಿವೆಯಲ್ಲಿ ಹರಿಯಿತು ಅಮಾಯಕರ ರಕ್ತ: ವರ್ಷ ಕಳೆದರೂ ಚೇತರಿಸಿಕೊಳ್ಳದ ಪಹಲ್ಗಾಮ್ ಸಂತ್ರಸ್ತ ಕುಟುಂಬಗಳು

ಒಂದು ವರ್ಷದ ಹಿಂದೆ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿ ಅಮಾಯಕ ಪ್ರವಾಸಿಗರ ಪ್ರಾಣ ತೆಗೆದು, ಹಲವು ಕುಟುಂಬಗಳನ್ನು ಛಿದ್ರಗೊಳಿಸಿತು. ಘಟನೆಯ ವರ್ಷಾಚರಣೆ ಕಳೆದರೂ, ಸಂತ್ರಸ್ತರ ನೋವು, PTSD ಕಾಡುತ್ತಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರ ಆಕ್ರಂದನ, ಶಾಶ್ವತವಾಗಿ ಬದಲಾದ ಬದುಕಿನ ಚಿತ್ರಣವನ್ನು ಈ ಸುದ್ದಿ ಎತ್ತಿ ತೋರಿಸುತ್ತದೆ. ನ್ಯಾಯಕ್ಕಾಗಿ ಕಾಯುವಿಕೆ ಇಂದಿಗೂ ಮುಂದುವರೆದಿದೆ.

Pahalgam Attack: ಹಸಿರು ಕಣಿವೆಯಲ್ಲಿ ಹರಿಯಿತು ಅಮಾಯಕರ ರಕ್ತ: ವರ್ಷ ಕಳೆದರೂ ಚೇತರಿಸಿಕೊಳ್ಳದ ಪಹಲ್ಗಾಮ್ ಸಂತ್ರಸ್ತ ಕುಟುಂಬಗಳು
ಪಹಲ್ಗಾಮ್ Image Credit source: PTI
ನಯನಾ ರಾಜೀವ್
|

Updated on: Apr 22, 2026 | 7:56 AM

Share

ಬೈಸರನ್, ಏಪ್ರಿಲ್ 22: ಮಿನಿ ಸ್ವಿಟ್ಜರ್ಲೆಂಡ್ ಎಂದು ಕರೆಯಲ್ಪಡುವ ಪಹಲ್ಗಾಮ್‌(Pahalgam)ನ ಬೈಸರನ್ ಕಣಿವೆಯಲ್ಲಿ ಇಂದು ಪ್ರವಾಸಿಗರ ಗದ್ದಲವಿರಬಹುದು, ಆದರೆ ಒಂದು ವರ್ಷದ ಹಿಂದೆ ಅಲ್ಲಿ ಕೇಳಿಬಂದ ಗುಂಡಿನ ಚಕಮಕಿ ಮತ್ತು ಸಾವು-ನೋವಿನ ಆಕ್ರಂದನ ಇಂದಿಗೂ ಅಲ್ಲಿನ ಗಾಳಿಯಲ್ಲಿ ಪ್ರತಿಧ್ವನಿಸುತ್ತಿದೆ. ಅಮಾಯಕ ಪ್ರವಾಸಿಗರನ್ನು, ವಿಶೇಷವಾಗಿ ಪುರುಷರನ್ನು ಗುರಿಯಾಗಿಸಿಕೊಂಡು ನಡೆದ ಆ ದಾಳಿ ಅನೇಕ ಸುಂದರ ಕುಟುಂಬಗಳನ್ನು ಛಿದ್ರಗೊಳಿಸಿದೆ.

ಸಂತೋಷದ ಪ್ರವಾಸ  ನೋವಿನಲ್ಲಿ ಅಂತ್ಯ ವಿಶಾಖಪಟ್ಟಣಂನ ನಿವೃತ್ತ ಬ್ಯಾಂಕ್ ಅಧಿಕಾರಿ, 68 ವರ್ಷದ ಚಂದ್ರಮೌಳಿ ಅವರು ತಮ್ಮ ಪತ್ನಿ ನಾಗಮಣಿ ಮತ್ತು ಸ್ನೇಹಿತರೊಂದಿಗೆ ಕಾಶ್ಮೀರದ ಸೌಂದರ್ಯ ಸವಿಯಲು ಹೋಗಿದ್ದರು. ದಾಲ್ ಸರೋವರದ ಶಿಕಾರ ಸವಾರಿ, ಟುಲಿಪ್ ಗಾರ್ಡನ್‌ನ ಸೌಂದರ್ಯ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಅವರಿಗೆ ಆ ಪ್ರವಾಸವೇ ಕೊನೆಯದಾಗುತ್ತದೆ ಎಂದು ತಿಳಿದಿರಲಿಲ್ಲ. ಏಪ್ರಿಲ್ 22ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೈಸರನ್ ಕಣಿವೆಯಲ್ಲಿ ಎಲ್ಲವೂ ಸುಂದರವಾಗಿತ್ತು. ಆದರೆ ಹಠಾತ್ ಅಪ್ಪಳಿಸಿದ ಗುಂಡಿನ ಸದ್ದು ಎಲ್ಲವನ್ನೂ ಬದಲಿಸಿತು.

ಬೇಡಿದರೂ ಬಿಡದ ಹಂತಕರು ಪ್ರತ್ಯಕ್ಷದರ್ಶಿಗಳ ಪ್ರಕಾರ, ಚಂದ್ರಮೌಳಿ ಅವರು ಶೌಚಾಲಯದಿಂದ ಹಿಂತಿರುಗುತ್ತಿದ್ದಾಗ ದಾಳಿ ನಡೆಯಿತು. ಜೀವ ಉಳಿಸಿಕೊಳ್ಳಲು ಅವರು ಬೇಲಿ ದಾಟಲು ಪ್ರಯತ್ನಿಸಿದರೂ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ವೇಗವಾಗಿ ಓಡಲು ಸಾಧ್ಯವಾಗಲಿಲ್ಲ. ಹತ್ತಿರ ಬಂದ ಭಯೋತ್ಪಾದಕರ ಮುಂದೆ ಚಂದ್ರಮೌಳಿ ಅವರು ಕರುಣೆಗಾಗಿ ಬೇಡಿಕೊಂಡರೂ, ಕ್ರೂರ ದಾಳಿಕೋರರು ಕಿಂಚಿತ್ತೂ ದಯೆ ತೋರದೆ ಅವರ ಮೇಲೆ ಗುಂಡು ಹಾರಿಸಿದರು.

ಕಣ್ಣೆದುರೇ ಕಂಡ ನರಕಯಾತನೆ ಪತ್ನಿ ನಾಗಮಣಿ ಮತ್ತು ಇತರರು ಪೊದೆಗಳ ಹಿಂದೆ ಅಡಗಿ ಪ್ರಾಣ ಉಳಿಸಿಕೊಂಡರಾದರೂ, ತಮ್ಮ ಪ್ರೀತಿಪಾತ್ರರನ್ನು ತಮ್ಮ ಕಣ್ಣೆದುರೇ ಕಳೆದುಕೊಂಡಿದ್ದರು. ಏಪ್ರಿಲ್ 23ರಂದು ಚಂದ್ರಮೌಳಿ ಅವರ ಪಾರ್ಥಿವ ಶರೀರ ವಿಶಾಖಪಟ್ಟಣಕ್ಕೆ ಬಂದಾಗ ಇಡೀ ನಗರವೇ ಕಣ್ಣೀರು ಸುರಿಸಿತ್ತು. ‘ಆಪರೇಷನ್ ಸಿಂಧೂರ್’ ಮೂಲಕ ಸರ್ಕಾರ ಉಗ್ರರನ್ನು ಸದೆಬಡಿದಿರಬಹುದು, ಆದರೆ ಕಳೆದುಹೋದ ಜೀವಗಳು ಮತ್ತೆ ಬರಲು ಸಾಧ್ಯವಿಲ್ಲ.

ಮತ್ತಷ್ಟು ಓದಿ: Operation Mahadev:ಆಪರೇಷನ್ ಮಹಾದೇವ್: ಪಹಲ್ಗಾಮ್ ದಾಳಿಕೋರರ ಮೇಲೆ ಸೇನೆಯ ಅಟ್ಟಹಾಸ, ಸಂಹಾರದ ಸಂಪೂರ್ಣ ರೋಚಕ ಕಥೆ

ಬದುಕುಳಿದವರ ಹೋರಾಟ ಇಂದು ಒಂದು ವರ್ಷ ಕಳೆದರೂ, ಆ ಘಟನೆಯಿಂದ ಬದುಕುಳಿದವರು ‘ಪೋಸ್ಟ್ ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್’ (PTSD) ನಿಂದ ಬಳಲುತ್ತಿದ್ದಾರೆ. ಸಣ್ಣ ಶಬ್ದ ಕೇಳಿದರೂ ನಡುಗುವುದು, ಜನದಟ್ಟಣೆಯ ಸ್ಥಳಗಳನ್ನು ಕಂಡು ಹೆದರುವುದು ಅವರ ಜೀವನದ ಭಾಗವಾಗಿದೆ. ನಾಗಮಣಿ ಅವರಂತಹ ಎಷ್ಟೋ ಮಹಿಳೆಯರಿಗೆ ಕಾಶ್ಮೀರದ ನೆನಪು ಎಂದರೆ ಈಗ ಕೇವಲ ರಕ್ತ ಮತ್ತು ಗುಂಡಿನ ಸದ್ದಾಗಿದೆ. ಬೈಸರನ್ ಕಣಿವೆ ಇಂದು ಸುಂದರವಾಗಿ ಕಾಣುತ್ತಿರಬಹುದು, ಆದರೆ ಅಲ್ಲಿನ ಮಣ್ಣಿನಲ್ಲಿ ಬೆರೆತಿರುವ ಅಮಾಯಕರ ರಕ್ತದ ಕಥೆ ಇಂದಿಗೂ ನ್ಯಾಯಕ್ಕಾಗಿ ಕಾಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ