AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಲ್ತಾ ಹೈ ಧೋರಣೆ ಬೇಡ, ದೇಶದ ಅಭಿವೃದ್ಧಿ ಮುಖ್ಯವಾಗಲಿ: ಭಾರತೀಯ ಯುವಜನರಿಗೆ ಪ್ರಧಾನಿ ಮೋದಿ ಕರೆ

PM Narendra Modi at Viksit Bharat Young Leaders Dialogue: 2047ರೊಳಗೆ ಭಾರತವು ವಿಕಸಿತ ದೇಶವಾಗಿ ರೂಪುಗೊಳ್ಳುವ ದೊಡ್ಡ ಗುರಿಯನ್ನು ಕೇಂದ್ರ ಸರ್ಕಾರ ಇರಿಸಿದೆ. ನವದೆಹಲಿಯ ಭಾರತ್ ಮಂಡಪಂನಲ್ಲಿ ಜನವರಿ 12ರಂದು ಆಯೋಜನೆಗೊಂಡ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಯುವಜನರ ಮಹತ್ವದ ಬಗ್ಗೆ ಮಾತನಾಡಿದರು. ಚಲ್ತಾ ಹೈ ಧೋರಣೆಯ ವ್ಯಕ್ತಿಗಳು ಸತ್ತ ಹೆಣಕ್ಕಿಂತ ಭಿನ್ನವಲ್ಲ ಎಂದ ಅವರು ಪ್ರತಿಯೊಂದು ಜೀವನದಲ್ಲೂ ಗುರಿ ಇರಬೇಕು ಎಂದು ಕರೆ ನೀಡಿದರು.

ಚಲ್ತಾ ಹೈ ಧೋರಣೆ ಬೇಡ, ದೇಶದ ಅಭಿವೃದ್ಧಿ ಮುಖ್ಯವಾಗಲಿ: ಭಾರತೀಯ ಯುವಜನರಿಗೆ ಪ್ರಧಾನಿ ಮೋದಿ ಕರೆ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 12, 2025 | 4:56 PM

Share

ನವದೆಹಲಿ, ಜನವರಿ 12: ಮುಂದಿನ 25 ವರ್ಷದಲ್ಲಿ ಭಾರತವು ವಿಕಸಿತ ದೇಶವಾಗಿ ರೂಪುಗೊಳ್ಳಲು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ. ಯುವಜನರು ವಿಕಸಿತ ಭಾರತ ನಿರ್ಮಾಣದಲ್ಲಿ ಮುಖ್ಯಪಾತ್ರ ವಹಿಸಬಲ್ಲುರು ಎನ್ನುವ ವಿಶ್ವಾಸ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಭಾನುವಾರ ರಾಷ್ಟ್ರರಾಜಧಾನಿಯ ಭಾರತ್ ಮಂಟಪಂನಲ್ಲಿ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದಲ್ಲಿ (Viksit Bharat Young Leaders Dialogue) ಪ್ರಧಾನಿಗಳು ಮಾತನಾಡುತ್ತಾ, ದೇಶದ ಯುವಜನರ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸ್ವಾಮಿ ವಿವೇಕಾನಂದರ ಜಯಂತಿ ಕೂಡ ಆಗಿದ್ದು ಅವರ ಗೌರವಾರ್ಥವಾಗಿ ರಾಷ್ಟ್ರೀಯ ಯುವ ದಿನವನ್ನು ಇವತ್ತು ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮ ನಡೆಸಲಾಗಿದೆ.

ಯುವ ಪೀಳಿಗೆಯ ಬಗ್ಗೆ ತನಗೆ ವಿಶ್ವಾಸ ಇದೆ. ಸ್ವಾಮಿ ವಿವೇಕಾನಂದರು ಇವತ್ತು ನಮ್ಮೊಂದಿಗಿದ್ದಿದ್ದರೆ ದೇಶಕ್ಕೆ ಹೊಸ ಭರವಸೆ ಮತ್ತು ಕನಸುಗಳನ್ನು ಕಟ್ಟಿಕೊಡುತ್ತಿರುವ ಇವತ್ತಿನ ಯುವಕರ ಗಂಭೀರ ಪ್ರಯತ್ನಗಳಿಂದ ಖುಷಿಪಡುತ್ತಿದ್ದರು ಎಂದು ಪ್ರಧಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಭಾರತೀಯ ರೈಲ್ವೆ ಗರಿಮೆ… ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ಎಂಜಿನ್ ಅಭಿವೃದ್ದಿ; ಅಗ್ಗದ ಪ್ರಯಾಣಕ್ಕೆ ಅಮೃತ್ ಭಾರತ್ 2.0

ಈ ಭಾರತ್ ಮಂಡಪಂನಲ್ಲಿ ಜಾಗತಿಕ ಬೆಳವಣಿಗೆಯ ಬಗ್ಗೆ ಚರ್ಚಿಸಲು ಜಾಗತಿಕ ನಾಯಕರು ಸೇರುತ್ತಾರೆ. ಇವತ್ತು ನಮ್ಮ ಯುವಕರು ಇಲ್ಲಿ ನಿಂತು ಮುಂದಿನ 25 ವರ್ಷಗಳಿಗೆ ಅಭಿವೃದ್ಧಿಯ ಹಾದಿಯನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ ಎಂದೂ ನರೇಂದ್ರ ಮೋದಿ ತಿಳಿಸಿದ್ದಾರೆ.

ಚಲ್ತಾ ಹೈ ಧೋರಣೆ ಬೇಡ….

ಯುವಶಕ್ತಿಯು 2047ರೊಳಗೆ ಭಾರತವು ಮುಂದುವರಿದ ದೇಶವಾಗಿ ನಿರ್ಮಾಣ ಮಾಡಬಲ್ಲುದು ಎನ್ನುವ ನಂಬಿಕೆ ಇದೆ. ಡಾಟಾ ಇಟ್ಟುಕೊಂಡು ಮಾತನಾಡುವವರಿಗೆ ಈ ಗುರಿ ಅಸಾಧ್ಯದ್ದು ಎನಿಸಬಹುದು. ಆದರೆ, ಗುರಿ ಬಹಳ ದೊಡ್ಡದಿದ್ದರೂ ಅದನ್ನು ಸಾಧಿಸುವುದು ಅಸಾಧ್ಯವೇನಲ್ಲ ಎಂದು ಹೇಳಿದ ನರೇಂದ್ರ ಮೋದಿ, ಈ ಹಾದಿಯಲ್ಲಿ ಚಲ್ತಾ ಹೈ ಧೋರಣೆ ಇರಬಾರದು ಎಂದೂ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Trump swearing in Ceremony: ಡೊನಾಲ್ಡ್​ ಟ್ರಂಪ್​ ಪ್ರಮಾಣ ವಚನ ಸಮಾರಂಭದಲ್ಲಿ ಎಸ್​ ಜೈಶಂಕರ್ ಭಾಗಿ

‘ಯಾವುದೇ ದೇಶವಾದರೂ ಅಭಿವೃದ್ಧಿ ಹೊಂದಬೇಕಾದರೆ ದೊಡ್ಡ ಗುರಿಗಳ ಬೆಂಬತ್ತಿ ಸಾಧಿಸಬೇಕು. ಕೆಲ ಜನರು ‘ಚಲ್ತಾ ಹೈ’ (ಆದ್ರಾಯ್ತು ಬಿಡಿ), ‘ಚಲ್ನೇ ದೋ’ (ಹೋದ್ರೋಯ್ತು ಬಿಡಿ) ಎನ್ನುವ ಧೋರಣೆ ಹೊಂದಿರುತ್ತಾರೆ. ಇಂಥವರಿಂದ ಯಾವ ಬದಲಾವಣೆಯೂ ಆಗುವುದಿಲ್ಲ. ಅವರು ಸತ್ತ ಹೆಣಕ್ಕೆ ಸಮಾನ. ಗುರಿ ಇದ್ದರೆ ಜೀವನ ಸುಗಮ. ಇವತ್ತು ಭಾರತ ದೇಶವೂ ಗುರಿಗಳಿಂದ ಮುನ್ನಡೆಯುತ್ತಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!