AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi Speech: ಹಿರಿಯ ನಾಗರಿಕರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್: ಮೋದಿ ಭಾಷಣದ ಮುಖ್ಯ ಅಂಶಗಳಿವು

ಮಾಸ್ಕ್​ಗಳನ್ನು ಬಳಸಿ ಮತ್ತು ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳಿ, ಸದಾ ಎಚ್ಚರದಿಂದ ಇರಿ ಎಂದು ಸಲಹೆ ಮಾಡಿದರು.

PM Narendra Modi Speech: ಹಿರಿಯ ನಾಗರಿಕರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್: ಮೋದಿ ಭಾಷಣದ ಮುಖ್ಯ ಅಂಶಗಳಿವು
ಪ್ರಧಾನಿ ಮೋದಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 25, 2021 | 10:52 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಡಿ.25) ದೇಶವನ್ನು ಉದ್ದೇಶಿಸಿ ತುರ್ತು ಭಾಷಣ ಮಾಡಿದರು. ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಒಮಿಕ್ರಾನ್ ಆತಂಕ ದೇಶದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಿಗೆ ವಿಶೇಷ ಮಹತ್ವ ಪಡೆದಿತ್ತು. ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದರ ಜೊತೆಗೆ ಎಚ್ಚರ ವಹಿಸಬೇಕು ಎಂದು ಪ್ರಧಾನಿ ಕಿವಿಮಾತು ಹೇಳಿದರು. ವಿಶ್ವದ ಹಲವು ದೇಶಗಳಲ್ಲಿ ಕೊವಿಡ್ ರೂಪಾಂತರಿ ಒಮಿಕ್ರಾನ್​ ಆತಂಕ ಹೆಚ್ಚಾಗಿದೆ. ಭಾರತದಲ್ಲಿಯೂ ಕೆಲ ಪ್ರಕರಣಗಳು ವರದಿಯಾಗಿವೆ. ನೀವ್ಯಾರೂ ಆತಂಕಗೊಳ್ಳಬಾರದು ಎಂದು ನಾನು ಕರೆನೀಡುತ್ತೇನೆ. ಮಾಸ್ಕ್​ಗಳನ್ನು ಬಳಸಿ ಮತ್ತು ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳಿ, ಸದಾ ಎಚ್ಚರದಿಂದ ಇರಿ ಎಂದು ಸಲಹೆ ಮಾಡಿದರು.

ದೇಶದಲ್ಲಿ ಇಂದು 18 ಲಕ್ಷ ಐಸೊಲೇಶನ್, 1.4 ಲಕ್ಷ ಐಸಿಯು ಬೆಡ್​ಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಿಗಾಗಿ 90 ಸಾವಿರ ವಿಶೇಷ ಬೆಡ್​ಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು 3000 ಆಮ್ಲಜನಕ ಘಟಕಗಳ ಮತ್ತು 4 ಲಕ್ಷ ಆಕ್ಸಿಜನ್ ಸಿಲಿಂಡರ್​ಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ಜಾಗತಿಕ ಪಿಡುಗಾಗಿರುವ ಕೊರೊನಾ ಸೋಂಕು ಎದುರಿಸುವ ವಿಚಾರದಲ್ಲಿ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ವೈಯಕ್ತಿಕ ಮಟ್ಟದಲ್ಲಿ ಅನುಸರಿಸುವುದು ಎಲ್ಲರ ಕರ್ತವ್ಯ ಆಗಬೇಕು. ಅದು ವೈರಸ್ ಎದುರಿಸಲು ನಮಗಿರುವ ದೊಡ್ಡ ಅಸ್ತ್ರ. ಎರಡನೇ ಅಸ್ತ್ರವೆಂದರೆ ಲಸಿಕಾಕರಣ. ಲಸಿಕೆ ಕುರಿತ ಸಂಶೋಧನೆ, ಅನುಮತಿ ನೀಡುವ ಪ್ರಕ್ರಿಯೆ, ಪೂರೈಕೆ ವ್ಯವಸ್ಥೆ, ವಿತರಣೆ, ತರಬೇತಿ, ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ಪ್ರಮಾಣಪತ್ರದ ಬಗ್ಗೆಯೂ ಶೀಘ್ರದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡೆವು. ಕಳೆದ ಜನವರಿ 16ರಿಂದ ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆ ವೇಗವಾಗಿ ನಡೆಯಿತು ಎಂದರು. 15ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಜನವರಿ 3ರಿಂದ ಲಸಿಕಾಕರಣ ಆರಂಭವಾಗಲಿದೆ. ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಫ್ರಂಟ್​ಲೈನ್ ಕಾರ್ಯಕರ್ತರಿಗೆ ಜನವರಿ 10ರಿಂದ ಲಸಿಕೆ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮಕ್ಕಳಿಗೂ ಶೀಘ್ರ ಕೊರೊನಾ ಲಸಿಕೆ: ಕೊವ್ಯಾಕ್ಸಿನ್ ನೀಡಲು ಡಿಸಿಜಿಐ ಅನುಮತಿ ಇದನ್ನೂ ಓದಿ: ಬಿಜೆಪಿ ನಿಧಿಗೆ 1000 ರೂ.ದೇಣಿಗೆ ನೀಡಿದ ಪ್ರಧಾನಿ ಮೋದಿ; ಕೈಲಾದಷ್ಟು ಹಣ ನೀಡಿ, ಪಕ್ಷ ಸದೃಢಗೊಳಿಸಲು ಕರೆ

Published On - 10:50 pm, Sat, 25 December 21

ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಅದ್ಭುತ ಡೈವಿಂಗ್ ಕ್ಯಾಚ್... ಟೀಕಾಕಾರರ ಬಾಯಿ ಮುಚ್ಚಿಸಿದ ಸರ್ಫರಾಝ್ ಖಾನ್
ಅದ್ಭುತ ಡೈವಿಂಗ್ ಕ್ಯಾಚ್... ಟೀಕಾಕಾರರ ಬಾಯಿ ಮುಚ್ಚಿಸಿದ ಸರ್ಫರಾಝ್ ಖಾನ್
ಹಾಲು ತರಕಾರಿ ಮಾರಲು ಬಿಡೋದಿಲ್ಲ ಅಂತ ಬಾಲಕೃಷ್ಣ ಯಾಕೆ ಹೇಳಿದ್ದಾರೋ? ಸಚಿವ
ಹಾಲು ತರಕಾರಿ ಮಾರಲು ಬಿಡೋದಿಲ್ಲ ಅಂತ ಬಾಲಕೃಷ್ಣ ಯಾಕೆ ಹೇಳಿದ್ದಾರೋ? ಸಚಿವ
ಬಾಯ್ ಡೆಲಿವರಿ ಮಾಡಲು ಹೋದಾಗ ಸ್ಕೂಟರ್​​ನಲ್ಲಿದ್ದ ಸಾಮಾನು ಲಪಟಾಯಿಸಿ ಪರಾರಿ
ಬಾಯ್ ಡೆಲಿವರಿ ಮಾಡಲು ಹೋದಾಗ ಸ್ಕೂಟರ್​​ನಲ್ಲಿದ್ದ ಸಾಮಾನು ಲಪಟಾಯಿಸಿ ಪರಾರಿ
ಮದುವೆ ಬಳಿಕವೂ ಚಿತ್ರರಂಗದಲ್ಲಿ ಸೋನಲ್ ಬ್ಯುಸಿ; ಇದರ ಕ್ರೆಡಿಟ್ ತರುಣ್​ಗೆ
ಮದುವೆ ಬಳಿಕವೂ ಚಿತ್ರರಂಗದಲ್ಲಿ ಸೋನಲ್ ಬ್ಯುಸಿ; ಇದರ ಕ್ರೆಡಿಟ್ ತರುಣ್​ಗೆ
ಬೆಳಗಾವಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪರಮೇಶ್ವರ್ ಹೇಳಿದ್ದೇನು ನೋಡಿ
ಬೆಳಗಾವಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಪರಮೇಶ್ವರ್ ಹೇಳಿದ್ದೇನು ನೋಡಿ
VIDEO: ಅಪೀಲ್ ಮಾಡುವ ಮುನ್ನವೇ ಔಟ್ ನೀಡಿದ ಅಂಪೈರ್
VIDEO: ಅಪೀಲ್ ಮಾಡುವ ಮುನ್ನವೇ ಔಟ್ ನೀಡಿದ ಅಂಪೈರ್