Constitution Park: ಜೈಪುರದಲ್ಲಿ ಇಂದು ಸಂವಿಧಾನ ಉದ್ಯಾನ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

TV9 Digital Desk

| Edited By: Rakesh Nayak Manchi

Updated on:Jan 03, 2023 | 7:20 AM

ರಾಜ್ಯಪಾಲರ ವಿನೂತನ ಉಪಕ್ರಮದಿಂದ, ಸಾಮಾನ್ಯ ಜನರಲ್ಲಿ ಸಾಂವಿಧಾನಿಕ ಅರಿವು ಮೂಡಿಸಲು ರಾಜಭವನದಲ್ಲಿ ಸಂವಿಧಾನ ಉದ್ಯಾನವನ್ನು ಸ್ಥಾಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ.

Constitution Park: ಜೈಪುರದಲ್ಲಿ ಇಂದು ಸಂವಿಧಾನ ಉದ್ಯಾನ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು
ಜೈಪುರದಲ್ಲಿ ಸಂವಿಧಾನ ಉದ್ಯಾನ ಉದ್ಘಾಟಿಸಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು

ಜೈಪುರ: ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಜನವರಿ 3 ರಂದು ರಾಜಭವನದಲ್ಲಿ ಹೊಸದಾಗಿ ನಿರ್ಮಿಸಲಾದ ಸಂವಿಧಾನ ಉದ್ಯಾನ (Constitution Park)ವನ್ನು ಉದ್ಘಾಟಿಸಲಿದ್ದಾರೆ. ಜೈಪುರ ಅಭಿವೃದ್ಧಿ ಪ್ರಾಧಿಕಾರವು 9 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಈ ಉದ್ಯಾನವನವು ಸಂವಿಧಾನದ ರಚನೆಯಿಂದ ಅದರ ಅನುಷ್ಠಾನದವರೆಗಿನ ಪ್ರತಿಮೆಗಳು ಮತ್ತು ಚಿತ್ರಗಳ ಮೂಲಕ ಅದರ ಪ್ರಯಾಣವನ್ನು ಪ್ರದರ್ಶಿಸುತ್ತದೆ ಎಂದು ರಾಜಭವನದ ವಕ್ತಾರರು ತಿಳಿಸಿದ್ದಾರೆ. ರಾಜ್ಯಪಾಲರ ವಿನೂತನ ಉಪಕ್ರಮದಿಂದ, ಸಾಮಾನ್ಯ ಜನರಲ್ಲಿ ಸಾಂವಿಧಾನಿಕ ಅರಿವು ಮೂಡಿಸಲು ರಾಜಭವನದಲ್ಲಿ ಸಂವಿಧಾನ ಉದ್ಯಾನವನ್ನು ಸ್ಥಾಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ (Rajasthan) ಪಾತ್ರವಾಗಿದೆ.

ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯವರು ಕಥೋಡಿ ಮತ್ತು ಸಹರಿಯಾ ಬುಡಕಟ್ಟು ಜನಾಂಗದವರೊಂದಿಗೆ ಸಂವಾದ ನಡೆಸಲಿದ್ದಾರೆ. ರಾಜ್ಯಪಾಲ ಕಲ್ರಾಜ್ ಮಿಶ್ರಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ವಿಧಾನಸಭಾಧ್ಯಕ್ಷ ಡಾ.ಸಿ.ಪಿ.ಜೋಶಿ, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಶಾಂತಿ ಧರಿವಾಲ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಿಶ್ರಾ, ಗೆಹ್ಲೋಟ್ ಮತ್ತು ಜೋಶಿ ಅವರು 2022ರ ಜನವರಿ 26 ರಂದು ಸಂವಿಧಾನ ಉದ್ಯಾನದ ಅಡಿಪಾಯವನ್ನು ಹಾಕಿದ್ದರು.

ಇದನ್ನೂ ಓದಿ: 108th Indian Science Congress: ನಾಗ್ಪುರದಲ್ಲಿ 108ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಸಂವಿಧಾನ ಉದ್ಯಾನವನ್ನು ಉದ್ಘಾಟಿಸುವ ಮುನ್ನ ರಾಷ್ಟ್ರಪತಿಗಳು ಮಂಗಳವಾರ ಮಯೂರ್ ಸ್ತಂಭ, ಧ್ವಜಸ್ತಂಭ, ಗಾಂಧಿ ಪ್ರತಿಮೆ ಮತ್ತು ಮಹಾರಾಣಾ ಪ್ರತಾಪ್ ಅವರ ಪ್ರತಿಮೆಗೆ ಭೇಟಿ ನೀಡಲಿದ್ದಾರೆ. ಉದ್ಯಾನವನ ಉದ್ಘಾಟನೆ ಬಳಿಕ ಸಿರೋಹಿಯಲ್ಲಿ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ‘ಆಧ್ಯಾತ್ಮಿಕ ಸಬಲೀಕರಣದಿಂದ ಸುವರ್ಣ ಭಾರತದ ಉದಯ’ ಕುರಿತ ಸಮ್ಮೇಳನದಲ್ಲಿ ಭಾಗಿಯಾಗಿ ಉದ್ಘಾಟಿಸಲಿದ್ದಾರೆ.

ಸಮ್ಮೇಳನದ ನಂತರ ಮೌಂಟ್ ಅಬುನಲ್ಲಿರುವ ಬ್ರಹ್ಮಕುಮಾರೀಸ್ ಸಂಸ್ಥಾನದ ಜ್ಞಾನ ಸರೋವರದಲ್ಲಿ ರಾಷ್ಟ್ರಪತಿಯವರು ರಾತ್ರಿ ತಂಗಲಿದ್ದಾರೆ ಎಂದು ಬ್ರಹ್ಮಕುಮಾರೀಸ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಬಿ.ಕೆ.ಮೃತ್ಯುಂಜಯ್ ತಿಳಿಸಿದ್ದಾರೆ. ಜನವರಿ 4 ರಂದು ಬೆಳಗಿನ ಧ್ಯಾನವನ್ನೂ ಮಾಡಲಿದ್ದಾರೆ. ಪಾಲಿ ಜಿಲ್ಲೆಯಲ್ಲಿ ರಾಷ್ಟ್ರಪತಿ ಮುರ್ಮು ಅವರು ರಾಷ್ಟ್ರೀಯ ಸ್ಕೌಟ್ ಜಾಂಬೋರಿಯನ್ನು ಉದ್ಘಾಟಿಸಲಿದ್ದಾರೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada