AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಅಪಘಾತದ ಸಂತ್ರಸ್ತರಿಗೆ 48 ಗಂಟೆಗಳಲ್ಲಿ ಉಚಿತ ಚಿಕಿತ್ಸೆ: ಪಂಜಾಬ್ ಸರ್ಕಾರದ ‘ಫರಿಶ್ತೆ’ ಯೋಜನೆ

Farishtey scheme: ಈ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವವರನ್ನು ಗೌರವಿಸಿ ₹ 2,000 ಬಹುಮಾನ ನೀಡಲಾಗುವುದು ಎಂದು ರಸ್ತೆ ಸುರಕ್ಷತೆ ಕುರಿತ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ತಿಳಿಸಿದರು. ರಸ್ತೆ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಕರೆತರುವ ವ್ಯಕ್ತಿಯ ಆಸ್ಪತ್ರೆಯ ಅಧಿಕಾರಿಗಳು, ವ್ಯಕ್ತಿ ಪ್ರತ್ಯಕ್ಷದರ್ಶಿಯಾಗಲು ಬಯಸುವವರೆಗೆ ಪ್ರಶ್ನಿಸಬಾರದು ಎಂದು ಸಚಿವರು ಹೇಳಿದ್ದಾರೆ.

ರಸ್ತೆ ಅಪಘಾತದ ಸಂತ್ರಸ್ತರಿಗೆ 48 ಗಂಟೆಗಳಲ್ಲಿ ಉಚಿತ ಚಿಕಿತ್ಸೆ: ಪಂಜಾಬ್ ಸರ್ಕಾರದ 'ಫರಿಶ್ತೆ' ಯೋಜನೆ
ಬಲ್ಬೀರ್ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on: Sep 06, 2023 | 8:59 PM

Share

ಚಂಡೀಗಢ ಸೆಪ್ಟೆಂಬರ್ 06: ಪಂಜಾಬ್ (Punjab) ಸರ್ಕಾರವು ತನ್ನ ‘ಫರಿಶ್ತೆ’ ಯೋಜನೆಯ (Farishtey scheme) ಭಾಗವಾಗಿ ಅಪಘಾತ ಸಂಭವಿಸಿದ 48 ಗಂಟೆಗಳ ಒಳಗೆ ಎಲ್ಲಾ ರಸ್ತೆ ಅಪಘಾತ ಸಂತ್ರಸ್ತರಿಗೆ (Road Accident) ಉಚಿತ ಚಿಕಿತ್ಸೆ ನೀಡಲಿದೆ ಎಂದು ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಮಂಗಳವಾರ ಹೇಳಿದ್ದಾರೆ. “ಗೋಲ್ಡನ್ ಅವರ್” ಎಂಬುದು ರಸ್ತೆ ಅಪಘಾತದ ನಂತರದ ಮೊದಲ ನಿರ್ಣಾಯಕ ಅವಧಿಯಾಗಿದೆ. ಈ ಸಮಯದಲ್ಲಿ, ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಕ್ರಿಟಿಕಲ್ ಕೇರ್ ನೀಡಿದರೆ, ಬದುಕುಳಿಯುವ ಸಾಧ್ಯತೆಗಳು ಹೆಚ್ಚು ಎಂದು ಅವರು ಹೇಳಿದರು.

ಈ ಯೋಜನೆಯಡಿ ರಸ್ತೆ ಅಪಘಾತದಲ್ಲಿ ಸಂತ್ರಸ್ತರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವವರನ್ನು ಗೌರವಿಸಿ ₹ 2,000 ಬಹುಮಾನ ನೀಡಲಾಗುವುದು ಎಂದು ರಸ್ತೆ ಸುರಕ್ಷತೆ ಕುರಿತ ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು ತಿಳಿಸಿದರು. ರಸ್ತೆ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ಕರೆತರುವ ವ್ಯಕ್ತಿಯ ಆಸ್ಪತ್ರೆಯ ಅಧಿಕಾರಿಗಳು, ವ್ಯಕ್ತಿ ಪ್ರತ್ಯಕ್ಷದರ್ಶಿಯಾಗಲು ಬಯಸುವವರೆಗೆ ಪ್ರಶ್ನಿಸಬಾರದು ಎಂದು ಸಚಿವರು ಹೇಳಿದ್ದಾರೆ.

ಪಂಜಾಬ್ ಸರ್ಕಾರವು ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲಾ ಆಂಬ್ಯುಲೆನ್ಸ್‌ಗಳನ್ನು ಒಟ್ಟಿಗೆ ಜೋಡಿಸುವ ವ್ಯವಸ್ಥೆಯನ್ನು ಸ್ಥಾಪಿಸುತ್ತಿದೆ. ಇದರಿಂದಾಗಿ ತುರ್ತು ಪರಿಸ್ಥಿತಿಯಲ್ಲಿರುವ ಜನರು ತಮ್ಮ ಸೇವೆಗಳನ್ನು 15 ನಿಮಿಷಗಳಷ್ಟು ಕಡಿಮೆ ಸಮಯದಲ್ಲಿ ಪಡೆಯಬಹುದು ಎಂದು ಅವರು ಹೇಳಿದರು.

ಇದನ್ನೂ ಓದಿ: ಜಿ20 ಶೃಂಗಸಭೆಗೆ ಮುನ್ನ ಜಕಾರ್ತಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ; ಪ್ರವಾಸದ ವೇಳಾಪಟ್ಟಿ ಹೀಗಿದೆ

“ನಾವು ರಾಜ್ಯ ಹೆದ್ದಾರಿಗಳಲ್ಲಿ ನೆಲೆಗೊಂಡಿರುವ ಸರ್ಕಾರಿ ಆಸ್ಪತ್ರೆಗಳನ್ನು ಸಹ ಗುರುತಿಸುತ್ತಿದ್ದೇವೆ. ಅಲ್ಲಿ ಕ್ರಿಟಿಕಲ್ ಕೇರ್ ಘಟಕಗಳನ್ನು ಸ್ಥಾಪಿಸಿ ಸಕ್ರಿಯಗೊಳಿಸುತ್ತೇವೆ. ಇದರಿಂದ ಜನರು ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿ ವಿಶ್ವದರ್ಜೆಯ ಚಿಕಿತ್ಸೆಯನ್ನು ಪಡೆಯಬಹುದು ಎಂದು ಸಚಿವರು ಹೇಳಿದರು.

‘ಸಡಕ್ ಸುರಾಖ್ಯ ಫೋರ್ಸ್’ (ರಸ್ತೆ ಸುರಕ್ಷತಾ ಪಡೆ) ಅನ್ನು ಪರಿಚಯಿಸುವ ದೇಶದ ಮೊದಲ ರಾಜ್ಯವಾಗಲು ಪಂಜಾಬ್ ಸಜ್ಜಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮರದೀಪ್ ಸಿಂಗ್ ರಾಯ್ ಹೇಳಿದ್ದಾರೆ. ಈ ಪಡೆಯ ಸಿಬ್ಬಂದಿಗೆ ಹೈಟೆಕ್ ವಾಹನಗಳು ಮತ್ತು ಪ್ರತ್ಯೇಕ ಸಮವಸ್ತ್ರವನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. “ರಾಜ್ಯ ಸರ್ಕಾರದ ಈ ದೊಡ್ಡ ಉಪಕ್ರಮವು ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ನಾವು ನಿಜವಾಗಿಯೂ ಭಾವಿಸುತ್ತೇವೆ” ಎಂದು ರಾಯ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ