
ನವದೆಹಲಿ, ಮಾರ್ಚ್ 27: ಈ ವರ್ಷ, ಅಯೋಧ್ಯೆ(Ayodhya)ಯಲ್ಲಿ ರಾಮ ನವಮಿ ಕೇವಲ ಧಾರ್ಮಿಕ ಹಬ್ಬವಾಗಿರಲಿಲ್ಲ, ಜನರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಕ್ಷಣವಾಗಿದೆ. ದೇವಾಲಯ ಸಂಕೀರ್ಣದಾದ್ಯಂತ ಜೈ ಶ್ರೀ ರಾಮ್ ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಿದ್ದಂತೆ, ಬಾಲ ರಾಮನ ಹಣೆಗೆ ಸೂರ್ಯನ ರಶ್ಮಿ ತಿಲಕ ಇಟ್ಟಿತ್ತು. ಈ ಕ್ಷಣವನ್ನು ಪ್ರಧಾನಿ ಮೋದಿ ಕಣ್ತುಂಬಿಕೊಂಡರು. ಈ ಸಂಪೂರ್ಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ತಿಂಗಳುಗಳ ಸಂಶೋಧನೆ ಬೇಕಾಯಿತು.
ಇದನ್ನು ರೂರ್ಕಿಯಲ್ಲಿರುವ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್ಐ) ಮತ್ತು ಬೆಂಗಳೂರಿನ ತಜ್ಞರು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಸೂರ್ಯನ ವೇಗ, ಕೋನ ಮತ್ತು ಸಮಯದ ನಿಖರವಾದ ಲೆಕ್ಕಾಚಾರಗಳಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಒಂದು ಸೆಕೆಂಡಿನ ದೋಷವು ಸಹ ಇಡೀ ದೃಶ್ಯದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ವಿಜ್ಞಾನಿಗಳು ಹೇಳುತ್ತಾರೆ.
Ram Navami celebrations across #world .
PM Modi offers prayers on the birth of Bhagwan Shree Ram 🚩#RamNavami #Modi #Ayodhya pic.twitter.com/FOWpweoJuf— VARTA ( वार्ता ) (@varta24news) March 27, 2026
ಈ ತಿಲಕವು ಪ್ರಾಣ-ಪ್ರತಿಷ್ಠೆಯ ನಂತರ ಎರಡನೇ ಬಾರಿಗೆ ಬಾಲರಾಮನ ಹಣೆಗೆ ಸೂರ್ಯ ತಿಲಕ ಬಿದ್ದಿದೆ. ಸೂರ್ಯ ತಿಲಕದ ನಂತರ, ರಾಮ ಲಲ್ಲಾಗೆ 56 ಭಕ್ಷ್ಯಗಳನ್ನು ಅರ್ಪಿಸಲಾಗುತ್ತದೆ. ಬೆಳಗ್ಗೆ 5.30ಕ್ಕೆ ರಾಮಲಲ್ಲಾಗೆ ಆರತಿ ಮಾಡಲಾಯಿತು. ಭಗವಂತನ ವಿಗ್ರಹಕ್ಕೆ ಹಳದಿ ಬಟ್ಟೆ ಹೊದಿಸಲಾಗಿತ್ತು. ಭಕ್ತರು ಬೆಳಗ್ಗೆ 5 ರಿಂದ ರಾತ್ರಿ 11 ರವರೆಗೆ, ಅಂದರೆ ಒಟ್ಟು 18 ಗಂಟೆಗಳ ಕಾಲ ರಾಮಲಲ್ಲಾ ದರ್ಶನ ಪಡೆಯಲು ಸಾಧ್ಯವಾಗುತ್ತದೆ.
ಮತ್ತಷ್ಟು ಓದಿ: ಬಂಗಾಳದಲ್ಲಿ ಬಾಬರಿ ಮಸೀದಿ ವಿವಾದದ ಬೆನ್ನಲ್ಲೇ ಅಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧತೆ
ಈ ಹಿಂದೆ ದರ್ಶನ ಸಮಯ ಬೆಳಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಇತ್ತು. ರಾಮಲಲ್ಲಾ ದರ್ಶನ ಪಡೆಯಲು ಸುಮಾರು 10 ಲಕ್ಷ ಜನರು ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಹೋಗಿದ್ದಾರೆ. ರಾಮ ಪಥ, ಭಕ್ತಿ ಪಥ ಮತ್ತು ಜನ್ಮಭೂಮಿ ಪಥ್ಗಳಲ್ಲಿ ಭಾರಿ ಜನಸಂದಣಿ ಕಂಡುಬರುತ್ತಿದ್ದು, ಉದ್ದನೆಯ ಸರತಿ ಸಾಲುಗಳು ಸೃಷ್ಟಿಯಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Fri, 27 March 26