AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ವ್ಯಕ್ತಿಯಲ್ಲಿ ಪತ್ತೆಯಾದ ಬಿಳಿ ಫಂಗಸ್​; ‘ಮಾತು ತೊದಲುತ್ತಿತ್ತು..ಗಾಯ ದೊಡ್ಡದಾಗುತ್ತಿತ್ತು..!‘

White Fungus: ವೈಟ್ ಫಂಗಸ್ ಕಾರಣದಿಂದಲೇ ಮಿದುಳಲ್ಲಿ ಬಾವು ಬಂದು, ಗಂಟುಗಂಟಾಗಿತ್ತು ಎಂದು ರೋಗಿಗೆ ಸರ್ಜರಿ ಮಾಡಿದ ಹೈದರಾಬಾದ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 

ಹೈದರಾಬಾದ್ ವ್ಯಕ್ತಿಯಲ್ಲಿ ಪತ್ತೆಯಾದ ಬಿಳಿ ಫಂಗಸ್​; ‘ಮಾತು ತೊದಲುತ್ತಿತ್ತು..ಗಾಯ ದೊಡ್ಡದಾಗುತ್ತಿತ್ತು..!‘
ಸಾಂಕೇತಿಕ ಚಿತ್ರ
TV9 Web
| Edited By: |

Updated on:Aug 07, 2021 | 12:51 PM

Share

ಹೈದರಾಬಾದ್​ನಲ್ಲಿ ಕೊವಿಡ್​ 19ನಿಂದ ಚೇತರಿಸಿಕೊಂಡವರೊಬ್ಬರಲ್ಲಿ ಬಿಳಿ ಫಂಗಸ್​​ (White Fungus) ಕಾಣಿಸಿಕೊಂಡಿದೆ. ಬಿಳಿ ಫಂಗಸ್​ ಅಥವಾ ಆಸ್ಪರ್ಗಿಲ್ಲಸ್ (Aspergillus)​ ತುಂಬ ಅಪರೂಪವಾಗಿದ್ದು, ಶಿಲೀಂದ್ರದಿಂದ ರೋಗಿಯ ಮಿದುಳಿನಲ್ಲಿ ಬಾವು ಉಂಟಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ವ್ಯಕ್ತಿ ಮೇ ತಿಂಗಳಲ್ಲಿ ಕೊವಿಡ್​ ಸೋಂಕಿ (Covid 19) ಗೆ ಒಳಗಾಗಿ ನಂತರ ಗುಣಮುಖರಾಗಿದ್ದರು. ಆದರೆ ಬರಬರುತ್ತ ಅವರ ಕೈಕಾಲುಗಳು ತುಂಬ ದುರ್ಬಲವಾದವು. ಮಾತು ಕೂಡ ಸರಿಯಾಗಿ ಆಡಲು ಸಾಧ್ಯವಾಗುತ್ತಿರಲಿಲ್ಲ. ನಂತರ ಮಿದುಳಿ (Brain)ನ ಸ್ಕ್ಯಾನ್​ ಮಾಡಿದಾಗ ಅದರಲ್ಲಿ ಗಂಟಾದ ರಚನೆಗಳು ಕಂಡುಬಂತು. ಅದಕ್ಕಾಗಿ ಔಷಧಗಳನ್ನು ನೀಡಲಾಯಿತಾದರೂ ರೋಗಿ ಚೇತರಿಸಿಕೊಂಡಿಲ್ಲ. ನಂತರ ಅದನ್ನು ಸರ್ಜರಿ ಮೂಲಕ ತೆಗೆಯಬೇಕಾಯಿತು. ಹಾಗೆ, ಶಸ್ತ್ರಚಿಕಿತ್ಸೆ ಮಾಡಿದಾಗಲೇ ಆ ವ್ಯಕ್ತಿಯ ಮಿದುಳಲ್ಲಿ ಬಿಳಿ ಶಿಲೀಂದ್ರ ಇದ್ದಿದ್ದು ಗೊತ್ತಾಯಿತು. ಈ ವೈಟ್ ಫಂಗಸ್ (White Fungus)​ ಕಾರಣದಿಂದಲೇ ಅಲ್ಲಿ ಬಾವು ಬಂದು, ಗಂಟುಗಂಟಾಗಿತ್ತು ಎಂದು ಹೈದರಾಬಾದ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಅಂದಹಾಗೆ ಈ ವ್ಯಕ್ತಿಗೆ ಸರ್ಜರಿ ಮಾಡಿದ್ದು ಹೈದರಾಬಾದ್​ನ ಸನ್​ಶೈನ್​ ಆಸ್ಪತ್ರೆಯ ವೈದ್ಯ ಡಾ. ಪಿ.ರಂಗನಾಥಂ. ಇವರು ಹಿರಿಯ ನರತಜ್ಞರಾಗಿದ್ದಾರೆ. ಬಿಳಿ ಫಂಗಸ್​ ತುಂಬ ಅಪರೂಪ. ಇದು ಮಿದುಳು ಪ್ರವೇಶಿಸಿ, ಅಲ್ಲಿ ತೊಂದರೆ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಡಯಾಬಿಟಿಸ್​ ಇದ್ದವರಿಗೆ ಕೊವಿಡ್​ 19 ಬಂದು ನಂತರ ಗುಣಮುಖರಾದಾಗ ಅಂಥವರಲ್ಲಿ ಫಂಗಲ್ ಸೋಂಕು ಕಾಣಿಸಿಕೊಳ್ಳುತ್ತದೆ. ಆದರೆ ಈಗ ವೈಟ್​ ಫಂಗಸ್​ ಪತ್ತೆಯಾದ ವ್ಯಕ್ತಿಗೆ ಸಕ್ಕರೆ ಕಾಯಿಲೆ ಇರಲಿಲ್ಲ. ಅದರಲ್ಲೂ ರೋಗಿಯಲ್ಲಿ ಬಿಳಿ ಫಂಗಸ್​ ಹೇಗೆ ಮಿದುಳಿಗೆ ತಗುಲಿತು ಎಂಬುದು ಗೊತ್ತಾಗಿಲ್ಲ. ಕಪ್ಪು ಶಿಲೀಂದ್ರ ಮೂಗಿನ ನಾಳದ ಮೂಲಕ ಮಿದುಳು ಸೇರುತ್ತದೆ. ಆದರೆ ಈ ವ್ಯಕ್ತಿಯ ಪರಾನಾಸಲ್ ಸೈನಸ್​ನಗಳ ಮೂಲಕ ಬಿಳಿ ಶಿಲೀಂದ್ರ ವರ್ಗಾವಣೆಯಾಗಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ವೈದ್ಯ ರಂಗನಾಥಂ ಮಾಹಿತಿ ನೀಡಿದ್ದಾರೆ.

ಕೊವಿಡ್ 19ನಿಂದ ಈ ವ್ಯಕ್ತಿ ಚೇತರಿಸಿಕೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಕೈಕಾಲುಗಳೆಲ್ಲ ತುಂಬ ದುರ್ಬಲ ಆಗಲು ಶುರುವಾಯಿತು. ಮಾತನಾಡಲೂ ತೊದಲುತ್ತಿದ್ದರು. ಹೀಗೆ ಆಗಲು ಶುರುವಾಗಿ ಆರು ದಿನಗಳ ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಪ್ರಾರಂಭದಲ್ಲಿ ಅವರಿಗೆ ಹೆಮಟೋಮಾ ಚಿಕಿತ್ಸೆ ನೀಡಲಾಯಿತು. ಆದರೆ ಮತ್ತೊಮ್ಮೆ ಎಂಆರ್​ಐ ಸ್ಕ್ಯಾನ್ ಮಾಡಿದಾಗ ಅದು ಹೆಮಟೋಮಾ ಅಲ್ಲವೆಂದು ಗೊತ್ತಾಗಿ, ಚಿಕಿತ್ಸೆ ನಿಲ್ಲಿಸಿದೆವು. ಅಷ್ಟೇ ಅಲ್ಲ, ಮಿದುಳಿನ ಒಳಗಿನ ಗಾಯ ಇನ್ನಷ್ಟು ದೊಡ್ಡಾಗಿ ಗೋಚವಾಯಿತು. ಶಸ್ತ್ರಚಿಕಿತ್ಸೆ ನಡೆಸಿದಾಗಲೇ ಅದು ಬಿಳಿ ಫಂಗಸ್​ ಎಂಬುದು ಗೊತ್ತಾಯಿತು. ಮೃದುವಾದ ನೆಕ್ರೋಟಿಕ್​ ವಸ್ತುಗಳಿಂದ ಸುತ್ತುವರಿದ ಬಾವು ಮಿದುಳಿನಿಂದ ಹೊರಗೆ ಎದ್ದುಬಂದಿತ್ತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಸಿಎಂ ಬೊಮ್ಮಾಯಿಗೆ ಸಿ.ಟಿ.ರವಿ ಮನವಿ

Raj Kundra: ‘ತಕ್ಷಣ ಬಿಡುಗಡೆ ಮಾಡಿ’ ಎಂದು ರಾಜ್ ಕುಂದ್ರಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್!

Published On - 12:38 pm, Sat, 7 August 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ