AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಹಂಚಿದ ಕಾಶ್ಮೀರ್ ಫೈಲ್ಸ್ ಸಿನಿಮಾ ಟಿಕೆಟ್ ಹರಿದು ಹಾಕಿದ ಆರ್​​ಜೆಡಿ,ಸಿಪಿಐಎಂಎಲ್ ಶಾಸಕರು

ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ, “ನಿರುದ್ಯೋಗ ಮತ್ತು ಸಾಮಾನ್ಯ ಜನರ ಹಿತಾಸಕ್ತಿಯ ವಿಷಯಗಳ ಕುರಿತು ಸರ್ಕಾರವು ನಮಗೆ ಚಲನಚಿತ್ರಗಳನ್ನು ಏಕೆ ತೋರಿಸುವುದಿಲ್ಲ? ಅವರು ‘ಕಾಶ್ಮೀರ್ ಫೈಲ್ಸ್’ ನಂತಹ ಚಲನಚಿತ್ರವನ್ನು ಪ್ರದರ್ಶಿಸುವ ಮೂಲಕ ತಮ್ಮ ಕೋಮುವಾದಿ ಅಜೆಂಡಾವನ್ನು ಮುಂದುವರಿಸಲು ಬಯಸುತ್ತಾರೆ

ಬಿಹಾರ ವಿಧಾನಸಭೆಯಲ್ಲಿ ಬಿಜೆಪಿ ಹಂಚಿದ ಕಾಶ್ಮೀರ್ ಫೈಲ್ಸ್ ಸಿನಿಮಾ ಟಿಕೆಟ್ ಹರಿದು ಹಾಕಿದ ಆರ್​​ಜೆಡಿ,ಸಿಪಿಐಎಂಎಲ್ ಶಾಸಕರು
ಬಿಹಾರ ವಿಧಾನಸಭೆ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Mar 28, 2022 | 9:01 PM

Share

ಆರ್‌ಜೆಡಿ ಮತ್ತು ಸಿಪಿಐ(ಎಂಎಲ್) ಶಾಸಕರು ಸೋಮವಾರ ಬಿಹಾರ (Bihar) ವಿಧಾನಸಭೆಯೊಳಗೆ ‘ದಿ ಕಾಶ್ಮೀರ ಫೈಲ್ಸ್’  (The Kashmir Files) ಚಿತ್ರದ ಟಿಕೆಟ್‌ಗಳನ್ನು ಹರಿದು ಹಾಕಿದ್ದರಿಂದ ಗದ್ದಲ ಉಂಟಾಗಿ ಸ್ಪೀಕರ್ ಮೊದಲಾರ್ಧದಲ್ಲಿ ಸದನವನ್ನು ಮುಂದೂಡುವಂತೆ ಒತ್ತಾಯಿಸಿದರು. ಇದೇ ವೇಳೆ ವಿಧಾನಸೌಧದಲ್ಲಿ ಬಿಜೆಪಿ ವಿತರಿಸಿದ ಟಿಕೆಟ್‌ಗಳನ್ನು ಕಾಂಗ್ರೆಸ್ ಶಾಸಕರು ಸ್ವೀಕರಿಸಲಿಲ್ಲ. ಟಿಕೆಟ್ ಹರಿದ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಸದನದಲ್ಲಿ ಹಾಜರಿದ್ದರು. ಈ ಬಗ್ಗೆ ಮಾತನಾಡಿದ ಸಿಪಿಐ(ಎಂಎಲ್) ಶಾಸಕ ಮೆಹಬೂಬ್ ಆಲಂ, “ಚಿತ್ರವು ಮುಸ್ಲಿಮರನ್ನು ನಿಂದಿಸುವಂತೆ ಕಾಶ್ಮೀರದ ಫೈಲ್ಸ್ ಟಿಕೆಟ್‌ಗಳು ದ್ವೇಷವನ್ನು ಸಂಕೇತಿಸುತ್ತವೆ. ಬಿಹಾರದಲ್ಲಿ ಕೋಮು ಸೌಹಾರ್ದವನ್ನು ಹಾಳು ಮಾಡಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.ಬಿಹಾರ ವಿಧಾನಸಭೆಯಲ್ಲಿ ಸಿಪಿಐ(ಎಂಎಲ್) 12 ಶಾಸಕರನ್ನು ಹೊಂದಿದೆ.  ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ತಾರ್ಕಿಶೋರ್ ಪ್ರಸಾದ್ ಅವರು ಸೋಮವಾರ ಸಂಜೆ ರಾಜ್ಯ ಸರ್ಕಾರವು ತೆರಿಗೆ ಮುಕ್ತ ಎಂದು ಘೋಷಿಸಿದ ಚಲನಚಿತ್ರವನ್ನು ವೀಕ್ಷಿಸಲು ಎಲ್ಲಾ ಶಾಸಕರನ್ನು ಆಹ್ವಾನಿಸಿದ್ದರು. ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಯಿತು. ಬಿಜೆಪಿ ಮತ್ತು ಜೆಡಿಯುನ ಬಹುತೇಕ ಶಾಸಕರು ಸೋಮವಾರ ಸಂಜೆ ಗಾಂಧಿ ಮೈದಾನದ ಬಳಿಯ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿದರು.

ಆರ್‌ಜೆಡಿ ವಕ್ತಾರ ಮೃತ್ಯುಂಜಯ್ ತಿವಾರಿ, “ನಿರುದ್ಯೋಗ ಮತ್ತು ಸಾಮಾನ್ಯ ಜನರ ಹಿತಾಸಕ್ತಿಯ ವಿಷಯಗಳ ಕುರಿತು ಸರ್ಕಾರವು ನಮಗೆ ಚಲನಚಿತ್ರಗಳನ್ನು ಏಕೆ ತೋರಿಸುವುದಿಲ್ಲ? ಅವರು ‘ಕಾಶ್ಮೀರ್ ಫೈಲ್ಸ್’ ನಂತಹ ಚಲನಚಿತ್ರವನ್ನು ಪ್ರದರ್ಶಿಸುವ ಮೂಲಕ ತಮ್ಮ ಕೋಮುವಾದಿ ಅಜೆಂಡಾವನ್ನು ಮುಂದುವರಿಸಲು ಬಯಸುತ್ತಾರೆ. ಸಿಎಂ ನಿತೀಶ್ ಕುಮಾರ್ ಅವರು ಬಿಜೆಪಿ ಬಲೆಗೆ ಬಿದ್ದಿರುವುದನ್ನು ನಾವು ಟೀಕಿಸುತ್ತೇವೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂತೋಷ್ ಪಾಠಕ್, “ಚಿತ್ರವು ಕಾಶ್ಮೀರದ ಸತ್ಯಗಳನ್ನು ತೋರಿಸಿದೆ. ಆರ್​​ಜೆಡಿ, ಸಿಪಿಐ(ಎಂಎಲ್) ಮತ್ತು ಕಾಂಗ್ರೆಸ್ ಸತ್ಯವನ್ನು ನೋಡಲು ಬಯಸುವುದಿಲ್ಲ. ಏಕೆಂದರೆ ಈ ಪಕ್ಷಗಳು ಸರ್ಕಾರವನ್ನು ರಚಿಸುವ ರಾಜಕೀಯವನ್ನು ಮಾಡಿವೆ, ರಾಷ್ಟ್ರವನ್ನು ನಿರ್ಮಿಸುವುದಿಲ್ಲ. ವಿಧಾನಸಭೆಯಲ್ಲಿ ಸಿನಿಮಾ ಟಿಕೆಟ್ ಹರಿದ ಶಾಸಕರ ವರ್ತನೆಯನ್ನು ಖಂಡಿಸುತ್ತೇವೆ. ಅವರು ವಿರೋಧವನ್ನು ತೋರಿಸಲು ಬಯಸಿದರೆ, ಅವರು ಚಲನಚಿತ್ರ ಟಿಕೆಟ್‌ಗಳನ್ನು ಸ್ವೀಕರಿಸುತ್ತಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ದಿ ಕಾಶ್ಮೀರ್​ ಫೈಲ್ಸ್​​’ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಹಿನ್ನೆಲೆ ಏನು? ಇಲ್ಲಿದೆ ಅವರ ಲವ್​ಸ್ಟೋರಿ

Published On - 8:57 pm, Mon, 28 March 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?