AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ: ಹುತಾತ್ಮ ಯೋಧ ಆಶಿಶ್​ ತಾಯಿಯ ಭಾವುಕ ಮಾತು

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ಅವರ ಪಾರ್ಥಿವ ಶರೀರ ಶುಕ್ರವಾರ ಪಾಣಿಪತ್ ತಲುಪಿದೆ.ಈ ಸಂದರ್ಭದಲ್ಲಿ ಮಾತನಾಡಿದ ಆಶಿಶ್ ಅವರ ತಾಯಿ‘‘ನಾನು ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ, ಭಯೋತ್ಪಾದಕರಿಗೆ ಬೆನ್ನು ತೋರಿಸಿ ಓಡಿಹೋಗಲಿಲ್ಲ ನನ್ನ ಮಗ, ಆತ ಭಯೋತ್ಪಾದಕರನ್ನು ಎದುರಿಸಿ ಹುತಾತ್ಮನಾಗಿದ್ದಾನೆ, ಆತನ ಬಗ್ಗೆ ಹೆಮ್ಮೆ ಇದೆ’’ ಎಂದರು.

ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ: ಹುತಾತ್ಮ ಯೋಧ ಆಶಿಶ್​ ತಾಯಿಯ ಭಾವುಕ ಮಾತು
ಮೇಜರ್ ಆಶಿಶ್ Image Credit source: Indian Express
ನಯನಾ ರಾಜೀವ್
|

Updated on: Sep 15, 2023 | 10:00 AM

Share

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್(Anantnag)​ನಲ್ಲಿ ನಡೆದ ಎನ್​ಕೌಂಟರ್(Encounter)​ನಲ್ಲಿ ಹುತಾತ್ಮ(Martyr)ರಾದ ಮೇಜರ್ ಆಶಿಶ್ ಅವರ ಪಾರ್ಥಿವ ಶರೀರ ಶುಕ್ರವಾರ ಪಾಣಿಪತ್ ತಲುಪಿದೆ.ಈ ಸಂದರ್ಭದಲ್ಲಿ ಮಾತನಾಡಿದ ಆಶಿಶ್( Ashish) ಅವರ ತಾಯಿ‘‘ನಾನು ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ, ಭಯೋತ್ಪಾದಕರಿಗೆ ಬೆನ್ನು ತೋರಿಸಿ ಓಡಿಹೋಗಲಿಲ್ಲ ನನ್ನ ಮಗ, ಆತ ಭಯೋತ್ಪಾದಕರನ್ನು ಎದುರಿಸಿ ಹುತಾತ್ಮನಾಗಿದ್ದಾನೆ, ಆತನ ಬಗ್ಗೆ ಹೆಮ್ಮೆ ಇದೆ’’ ಎಂದರು.

ಪಾಣಿಪತ್‌ನ ಬೀದಿಗಳಲ್ಲಿ ಒಂದೇ ಒಂದು ಘೋಷಣೆ ಪ್ರತಿಧ್ವನಿಸುತ್ತಿತ್ತು.‘ಮೇಜರ್ ಆಶಿಶ್ ಅಮರ್ ರಹೇ’. ಯೋಧನ ಮೃತದೇಹದ ಅಂತಿಮ ದರ್ಶನ ಪಡೆಯಲು ಪಾಣಿಪತ್ ನ ಸೆಕ್ಟರ್ 7ರಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.

ಅವರ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರು ಬಿಂಜೌಲ್‌ನಲ್ಲಿ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ.ಅವರ ಪಾರ್ಥಿವ ಶರೀರವನ್ನು ಅವರು ನಿರ್ಮಿಸಿದ ಟಿಡಿಐ ಸಿಟಿಯಲ್ಲಿರುವ ಅವರ ಹೊಸ ಮನೆಗೆ ತರಲಾಯಿತು.

ಮತ್ತಷ್ಟು ಓದಿ: ಅನಂತ್​ನಾಗ್​ನಲ್ಲಿ ಮುಂದುವರೆದ ಎನ್​ಕೌಂಟರ್​ನಲ್ಲಿ ಮತ್ತೋರ್ವ ಯೋಧ ಹುತಾತ್ಮ

ಮೇಜರ್ ಆಶಿಶ್ ಸೇನಾ ಪದಕ ಪಡೆದಿದ್ದರು ಮೇಜರ್ ಆಶಿಶ್ ಅವರ ಶೌರ್ಯಕ್ಕಾಗಿ ಈ ವರ್ಷದ ಆಗಸ್ಟ್ 15 ರಂದು ದೇಶದ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಂದ ಸೇನಾ ಪದಕ ಪಡೆದಿದ್ದರು. ಭಯೋತ್ಪಾದಕರ ವಿರುದ್ಧ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹುತಾತ್ಮ ಯೋಧ ಆಶಿಶ್ ಅವರ ಸೋದರ ಮಾವ ಸುರೇಶ್ ಹೇಳಿದ್ದಾರೆ.

ಪಾಣಿಪತ್ ನಲ್ಲಿ ಹೊಸ ಮನೆ ಕಟ್ಟಲಾಗಿದೆ. ಆಶಿಶ್ ರಜೆ ಪಡೆದು ಮನೆಗೆ ಮರಳಲು ಮುಂದಾಗಿದ್ದರು. ಅವರ ಹುಟ್ಟುಹಬ್ಬ ಅಕ್ಟೋಬರ್‌ನಲ್ಲಿಯೇ ಇತ್ತು. 23ರಂದು ಅವರ ಹುಟ್ಟುಹಬ್ಬ ಆಚರಿಸಿ, ಅದೇ ದಿನ ಹೊಸ ಮನೆಗೆ ತೆರಳಲು ಕುಟುಂಬಸ್ಥರು ನಿರ್ಧರಿಸಿದ್ದರು. ಆಶಿಶ್ 2012ರಲ್ಲಿ ಸೇನೆಗೆ ಸೇರಿದ್ದರು.

ಆಶಿಶ್ ಮೊದಲಿನಿಂದಲೂ ಸೇನೆಗೆ ಸೇರಲು ಬಯಸಿದ್ದರು, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು, ಸ್ನಾತಕೋತ್ತರ ಪದವಿವರೆಗೆ ಓದಿದ್ದರು. ಕುಟುಂಬ ಪಾಣಿಪತ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?