AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಬೆಳೆಗಳಿಗೆ 5 ವರ್ಷದ ಎಂಎಸ್​ಪಿ ಒಪ್ಪಂದ; ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ಎಸ್​​ಕೆಎಂ

ಈ ಸಂಗ್ರಹಣೆ, ಸ್ವಾಮಿನಾಥನ್ ಆಯೋಗದ C2+50 ಶೇಕಡಾ MSP, ಅಥವಾ ಕನಿಷ್ಠ ಬೆಂಬಲ ಬೆಲೆ, ಸೂತ್ರವನ್ನು ಆಧರಿಸಿರಬೇಕು. ಅಸ್ತಿತ್ವದಲ್ಲಿರುವ A2+FL+50 ಪ್ರತಿಶತ ವಿಧಾನವಲ್ಲ ಎಂದ ಎಸ್‌ಕೆಎಂ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ರೈತರ ಬೇಡಿಕೆಗಳನ್ನು ದಿಕ್ಕುತಪ್ಪಿಸುತ್ತಿವೆ ಎಂದು ಹೇಳಿ ತಿರಸ್ಕರಿಸಿದೆ.

5 ಬೆಳೆಗಳಿಗೆ 5 ವರ್ಷದ ಎಂಎಸ್​ಪಿ ಒಪ್ಪಂದ; ಕೇಂದ್ರದ ಪ್ರಸ್ತಾಪ ತಿರಸ್ಕರಿಸಿದ ಎಸ್​​ಕೆಎಂ
ಪ್ರಾತಿನಿದಿಕ ಚಿತ್ರ
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on:Feb 19, 2024 | 9:10 PM

Share

ದೆಹಲಿ ಫೆಬ್ರುವರಿ 19: ಸರ್ಕಾರ ಮತ್ತು ರೈತರ ನಡುವಿನ ಉದ್ವಿಗ್ನ ನಿಲುವಿನ ನಡುವೆ, ರೈತ ಸಂಘಗಳ ಒಕ್ಕೂಟ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha) ಹಳೆಯ MSP ನಲ್ಲಿ ಮೂರು ವಿಧದ ಬೇಳೆಕಾಳುಗಳು, ಜೋಳ ಮತ್ತು ಹತ್ತಿಯನ್ನು ಖರೀದಿಸಲು ಕೇಂದ್ರ ಸರ್ಕಾರದ  ಐದು ವರ್ಷಗಳ ಒಪ್ಪಂದ ಪ್ರಸ್ತಾಪವನ್ನು  ತಿರಸ್ಕರಿಸಿದೆ. ಸೋಮವಾರ ಸಂಜೆ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು  ರೈತರ  ಬೇಡಿಕೆಗಳನ್ನು ದಿಕ್ಕು ತಪ್ಪಿಸುವವು ಎಂದು ಹೇಳಿ ಎಸ್‌ಕೆಎಂ ಟೀಕಿಸಿತು. ಈ ಸಂಗ್ರಹಣೆ, ಸ್ವಾಮಿನಾಥನ್ ಆಯೋಗದ C2+50 ಶೇಕಡಾ MSP, ಅಥವಾ ಕನಿಷ್ಠ ಬೆಂಬಲ ಬೆಲೆ, ಸೂತ್ರವನ್ನು ಆಧರಿಸಿರಬೇಕು. ಅಸ್ತಿತ್ವದಲ್ಲಿರುವ A2+FL+50 ಪ್ರತಿಶತ ವಿಧಾನವಲ್ಲ ಎಂದು ಎಸ್‌ಕೆಎಂ ಒತ್ತಿಹೇಳಿತು. ಕೃಷಿ ಸಚಿವ ಅರ್ಜುನ್ ಮುಂಡಾ ಸೇರಿದಂತೆ ಮೂವರು ಕೇಂದ್ರ ಸಚಿವರ ನೇತೃತ್ವದ ಇದುವರೆಗಿನ ನಾಲ್ಕು ಸುತ್ತಿನ ಮಾತುಕತೆಗಳ ಮೂಲಕ ಪಾರದರ್ಶಕತೆಯ ಕೊರತೆಯ ಬಗ್ಗೆ ಎಸ್‌ಕೆಎಂ ಸರ್ಕಾರವನ್ನು ಟೀಕಿಸಿದೆ.

ಅಂತಿಮವಾಗಿ, ಎಸ್‌ಕೆಎಂ ಸರ್ಕಾರವು ಸಾಲ ಮನ್ನಾ, ವಿದ್ಯುತ್ ದರಗಳಲ್ಲಿ ಹೆಚ್ಚಳ ಮಾಡಬಾರದು. 2020/21 ರ ಪ್ರತಿಭಟನೆಯ ಸಮಯದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಹಿಂಸಾತ್ಮಕ ಘರ್ಷಣೆಗಳನ್ನು ನಡೆಸಿದಾಗ ದಾಖಲಿಸಲಾದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಸಮಗ್ರ ಸಾರ್ವಜನಿಕ ವಲಯದ ಬೆಳೆ ವಿಮಾ ಯೋಜನೆ ಮತ್ತು 60 ವರ್ಷ ಮೇಲ್ಪಟ್ಟ ರೈತರಿಗೆ ಮಾಸಿಕ ₹ 10,000 ಪಿಂಚಣಿ ಮುಂತಾದ ಬೇಡಿಕೆಗಳ ಬಗ್ಗೆಯೂ ಯಾವುದೇ ಪ್ರಗತಿಯಾಗಿಲ್ಲ ಎಂದು ಎಸ್‌ಕೆಎಂ ಹೇಳಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂಬ ಬೇಡಿಕೆಯೂ ಇತ್ಯರ್ಥವಾಗಿಲ್ಲ.

ಸಂಯುಕ್ತ ಕಿಸಾನ್ ಮೋರ್ಚಾ ಈ ಪ್ರತಿಭಟನೆಗಳ ನೇತೃತ್ವದ ರೈತ ಸಂಘಟನೆಯಲ್ಲ, ಅದೇ ಹೆಸರಿನ ರಾಜಕೀಯೇತರ ಶಾಖೆಯ ನೇತೃತ್ವವನ್ನು ಹೊಂದಿದೆ. ಅದೇನೇ ಇದ್ದರೂ, ರೈತ ಸಂಘಗಳ ದೊಡ್ಡ ಒಕ್ಕೂಟವಾಗಿ, ಸರ್ಕಾರದೊಂದಿಗೆ ಭಾನುವಾರದ ಸಭೆಯಲ್ಲಿ ಭಾಗವಹಿಸಿದ ರೈತರ ಮೇಲೆ ಪ್ರಭಾವ ಬೀರಬಹುದು.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ನರೇಂದ್ರ ಮೋದಿ ಭೇಟಿ ಸಾಧ್ಯತೆ: ಸುವೇಂದು ಅಧಿಕಾರಿ

ರೈತರ ಪ್ರತಿಭಟನೆಗಳ ಒಟ್ಟಾರೆ ನಿರೂಪಣೆಯಲ್ಲಿ, ಇದು ನಿರ್ಣಾಯಕವಾಗಿದೆ.  ಏಕೆಂದರೆ ಈಗ ಪಂಜಾಬ್ ಮತ್ತು ಹರ್ಯಾಣ ಗಡಿಯಲ್ಲಿರುವ ಶಂಭುದಲ್ಲಿರುವವರು ಮತ್ತು ಸರ್ಕಾರದೊಂದಿಗೆ ಮಾತನಾಡುತ್ತಾ ಹೆಚ್ಚುವರಿ ಬೆಂಬಲವನ್ನು ಬಯಸುತ್ತಿದ್ದಾರೆ. ಈ ಪ್ರತಿಭಟನೆಯ ನೇತೃತ್ವದ ರೈತರ ಪ್ರತಿನಿಧಿಗಳು ಮತ್ತು ಸರ್ಕಾರವು ಚಂಡೀಗಢದಲ್ಲಿ ಭಾನುವಾರ ಸಂಜೆ ನಾಲ್ಕನೇ ಸುತ್ತಿನ ಮಾತುಕತೆಗಾಗಿ ಭೇಟಿಯಾಯಿತು. ಇದರಿಂದ ಐದು ವರ್ಷಗಳ C2 + 50 ಪ್ರತಿಶತ ಒಪ್ಪಂದವು ಬಂದಿದೆ.

ಈ ಪ್ರಸ್ತಾಪವನ್ನು ನಿರ್ಧರಿಸಲು ರೈತರು 48 ಗಂಟೆಗಳ ಕಾಲಾವಕಾಶವನ್ನು ಕೇಳಿದ್ದರು. ಆದರೆ ಇದುವರೆಗಿನ ನಡೆಗಳು ಪೂರಕವಾಗಿಲ್ಲ.  ಈ ಪ್ರಸ್ತಾಪದಿಂದ “ಪಂಜಾಬ್, ಹರಿಯಾಣ ರೈತರಿಗೆ ಯಾವುದೇ ಪ್ರಯೋಜನವಿಲ್ಲ…” ಎಂದು ಅವರು ಹೇಳುತ್ತಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:09 pm, Mon, 19 February 24

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!