AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಹಿರಿಯ ಸುಪ್ರೀಂ ಕೋರ್ಟ್ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪನ್ನು ಇಂದು ಕಾಯ್ದಿರಿಸಿತು. ತಮ್ಮ ಎರಡು ವಿವಾದಾತ್ಮಕ ಟ್ಟ್ವೀಟ್​ಗಳ ಹಿನ್ಲೆನೆಯಲ್ಲಿ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದಾರೆ. ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ಪೀಠವು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮಂಡಿಸಿದ ವಾದವನ್ನು ಮಂಗಳವಾರದಂದು ಆಲಿಸಿತು. ಪ್ರಶಾಂತ್ ಭೂಷಣ್ ಪರವಾಗಿ ಕೋರ್ಟ್​ನಲ್ಲಿ ವಾದಿಸಿದ ವಕೀಲ ರಾಜೀವ ಧವನ್, ‘‘ನಾಯಮೂರ್ತಿ ಮಿಶ್ರಾ ಅವರು […]

ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 25, 2020 | 4:53 PM

ಹಿರಿಯ ಸುಪ್ರೀಂ ಕೋರ್ಟ್ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ತೀರ್ಪನ್ನು ಇಂದು ಕಾಯ್ದಿರಿಸಿತು. ತಮ್ಮ ಎರಡು ವಿವಾದಾತ್ಮಕ ಟ್ಟ್ವೀಟ್​ಗಳ ಹಿನ್ಲೆನೆಯಲ್ಲಿ ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದಾರೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನೇತೃತ್ವದ ಪೀಠವು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮಂಡಿಸಿದ ವಾದವನ್ನು ಮಂಗಳವಾರದಂದು ಆಲಿಸಿತು. ಪ್ರಶಾಂತ್ ಭೂಷಣ್ ಪರವಾಗಿ ಕೋರ್ಟ್​ನಲ್ಲಿ ವಾದಿಸಿದ ವಕೀಲ ರಾಜೀವ ಧವನ್, ‘‘ನಾಯಮೂರ್ತಿ ಮಿಶ್ರಾ ಅವರು ಕೊಲ್ಕತಾ ಹೈಕೋರ್ಟ್​ನಲ್ಲಿದ್ದಾಗ ಮಮತಾ ಬ್ಯಾನರ್ಜಿ ಕೋರ್ಟಿನ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ನ್ಯಾಯಮೂರ್ತಿ ಬಗ್ಚಿ ತೀರ್ಪನ್ನು ಬರೆದರಾದರೂ ನ್ಯಾಯಮೂರ್ತಿ ಮಿಶ್ರಾ, ‘ಮಮತಾ ಒಬ್ಬ ರಾಜಕಾರಣಿಯಾಗಿರುವುದರಿಂದ ಕೋರ್ಟ್ ಅವರಿಗೆ ಶಿಕ್ಷೆಗೊಳಪಡಿಸುವುದಿಲ್ಲ’ ಎಂದಿದ್ದರು. ಮಮತಾರವರು ಸಾರ್ವಜನಿಕ ವ್ಯಕ್ತಿಯಾಗಿರುವ ಹಿನ್ನಲೆಯಲ್ಲಿ ಅವರನ್ನು ಕ್ಷಮಿಸುವುದಾದರೆ, ಪ್ರಶಾಂತ್ ಭೂಷಣ್ ಅವರನ್ನು ಹುತಾತ್ಮರನ್ನಾಗಿಸಬೇಡಿ,’’ ಎಂದರು.

ಶಿಕ್ಷೆಯ ತೀರ್ಪು ಘೋಷಣೆಗೆ ಮೊದಲು, ಕೋರ್ಟ್ ಪ್ರಶಾಂತ್ ಭೂಷಣ್ ಅವರಿಗೆ 30 ನಿಮಿಷಗಳ ಕಾಲಾವಕಾಶ ನೀಡಿ, ನ್ಯಾಯಾಂಗದ ವಿರುದ್ಧ ಮಾಡಿರುವ ಆಪಾದನೆಗಳನ್ನು ಮತ್ತು ಭಾರತದ ಮುಖ್ಯ ನ್ಯಾಯಾಧೀಶ ಎಸ್ ಎ ಬೊಬ್ಡೆ ಅವರ ವಿರುದ್ಧ ಬರೆದಿರುವ ಟ್ವೀಟ್​ಗಳ ಬಗ್ಗೆ ಕ್ಷಮೆಯಾಚಿಸದಿರುವ ತಮ್ಮ ನಿಲುವನ್ನು ಪುನರ್​ಪರಿಶೀಲಿಸುವಂತೆ ಹೇಳಿತು.

ಎಜಿ ವೇಣುಗೋಪಾಲ ಅವರು ಸಹ ಪ್ರಶಾಂತ್ ಭೂಷಣ್ ಅವರನ್ನು ಕ್ಷಮಿಸುವಂತೆ ಪೀಠಕ್ಕೆ ಮನವಿ ಮಾಡಿದಾಗಲೂ ಭೂಷಣ್ ಆವರಿಗೆ ಮತ್ತೊಂದು ಅವಕಾಶವನ್ನು ಪೀಠ ನೀಡಿತು. ಆದರೆ, ಪ್ರಶಾಂತ್ ಭೂಷಣ್‌ ತಮ್ಮ ನಿಲುವನ್ನು ಬದಲಿಸಲು ನಿರಾಕರಿಸಿದರು.

ಅಂತಿಮವಾಗಿ ಪೀಠವು ಶಿಕ್ಷೆ ಪ್ರಮಾಣ ಪ್ರಕಟಿಸುವ ತೀರ್ಪನ್ನು ಕಾಯ್ದಿರಿಸಿತು.

ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
‘ನಟಿ ಗ್ಲಾಮರಸ್ ಆಗಿದ್ರೆ ಮಾತ್ರ ನನ್ನ ಕಣ್ಣು ಬೀಳುತ್ತೆ’; ರವಿಚಂದ್ರನ್
‘ನಟಿ ಗ್ಲಾಮರಸ್ ಆಗಿದ್ರೆ ಮಾತ್ರ ನನ್ನ ಕಣ್ಣು ಬೀಳುತ್ತೆ’; ರವಿಚಂದ್ರನ್
ಅಪಘಾತದಲ್ಲಿ ಕಾರಿನ ಮುಂಭಾಗ, ಅಂಗಡಿ ಮುಂದೆ ನಿಂತಿದ್ದ ಸ್ಕೂಟರ್ ಜಖಂ
ಅಪಘಾತದಲ್ಲಿ ಕಾರಿನ ಮುಂಭಾಗ, ಅಂಗಡಿ ಮುಂದೆ ನಿಂತಿದ್ದ ಸ್ಕೂಟರ್ ಜಖಂ
ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಚಿಕ್ಕಮಗಳೂರು ಬಂದ್
ಸುಹಾಸ್ ಶೆಟ್ಟಿ ಕೊಲೆ ಖಂಡಿಸಿ ಚಿಕ್ಕಮಗಳೂರು ಬಂದ್
ಫೈನ್ ಬಿದ್ದರೂ ನಿಲ್ಲದ ದಿಗ್ವೇಶ್ ನೋಟ್​ಬುಕ್ ಸೆಲೆಬ್ರೇಷನ್
ಫೈನ್ ಬಿದ್ದರೂ ನಿಲ್ಲದ ದಿಗ್ವೇಶ್ ನೋಟ್​ಬುಕ್ ಸೆಲೆಬ್ರೇಷನ್
ಮಹಾರಾಷ್ಟ್ರ: ರಾಯಗಢದಲ್ಲಿ ಬಸ್ ಪಲ್ಟಿಯಾಗಿ 35 ಪ್ರಯಾಣಿಕರಿಗೆ ಗಾಯ
ಮಹಾರಾಷ್ಟ್ರ: ರಾಯಗಢದಲ್ಲಿ ಬಸ್ ಪಲ್ಟಿಯಾಗಿ 35 ಪ್ರಯಾಣಿಕರಿಗೆ ಗಾಯ