AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವ ನಿತಿನ್ ಗಡ್ಕರಿಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯ ಬಂಧನ

ಕೇಂದ್ರ ಸಚಿವ ನಿತಿನ್ ಗಡ್ಕರಿಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರತನ್ ಕಾರ್ತಿಕ್ ಕಸ್ತೂರಿ (33) ಎಂದು ಗುರುತಿಸಲಾಗಿದೆ. ಗಡ್ಕರಿಯವರ ಆಪ್ತ ಸಹಾಯಕ ಕೌಸ್ತುಭ್ ಫಲ್ಟಂಕರ್ ನೀಡಿದ ದೂರಿನ ಪ್ರಕಾರ, ರತನ್​​ನನ್ನು ಬಂಧಿಸಲಾಗಿದೆ. ಕೌಸ್ತುಭ್ ಅವರ ಪತ್ನಿ ಬಂಗಲೆಯ ನೆಲ ಮಹಡಿಯಲ್ಲಿ ವಕೀಲರ ಕಚೇರಿ ನಡೆಸುತ್ತಿದ್ದಾರೆ

ಕೇಂದ್ರ ಸಚಿವ ನಿತಿನ್ ಗಡ್ಕರಿಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯ ಬಂಧನ
ನಿತಿನ್ ಗಡ್ಕರಿ
ನಯನಾ ರಾಜೀವ್
|

Updated on: Oct 23, 2025 | 9:46 AM

Share

ನಾಗ್ಪುರ, ಅಕ್ಟೋಬರ್ 23: ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari)ಯ ಆಪ್ತ ಸಹಾಯಕನ ಮನೆಗೆ ಕನ್ನ ಹಾಕಲು ಯತ್ನಿಸಿದ್ದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರತನ್ ಕಾರ್ತಿಕ್ ಕಸ್ತೂರಿ (33) ಎಂದು ಗುರುತಿಸಲಾಗಿದೆ. ಗಡ್ಕರಿಯವರ ಆಪ್ತ ಸಹಾಯಕ ಕೌಸ್ತುಭ್ ಫಲ್ಟಂಕರ್ ನೀಡಿದ ದೂರಿನ ಪ್ರಕಾರ, ರತನ್​​ನನ್ನು ಬಂಧಿಸಲಾಗಿದೆ.

ಕೌಸ್ತುಭ್ ಅವರ ಪತ್ನಿ ಬಂಗಲೆಯ ನೆಲ ಮಹಡಿಯಲ್ಲಿ ವಕೀಲರ ಕಚೇರಿ ನಡೆಸುತ್ತಿದ್ದಾರೆ. ರಾತ್ರಿ 10.55 ರ ಸುಮಾರಿಗೆ, ಇತ್ತೀಚೆಗೆ ಬಂಗಲೆಯ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡ ಕಸ್ತೂರಿ, ಕಚೇರಿಗೆ ಪ್ರವೇಶಿಸಿ ಕದಿಯುವ ಉದ್ದೇಶದಿಂದ ಡ್ರಾಯರ್ ತೆರೆಯಲು ಪ್ರಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಮತ್ತಷ್ಟು ಓದಿ: ನನ್ನ ವಿರುದ್ಧ ಪೇಯ್ಡ್ ಅಭಿಯಾನ; ಆನ್‌ಲೈನ್‌ನಲ್ಲಿ ಎಥೆನಾಲ್ ಮಿಶ್ರಿತ ಇಂಧನ ಬಿಡುಗಡೆ ಕುರಿತ ಟೀಕೆಗೆ ನಿತಿನ್ ಗಡ್ಕರಿ ಬೇಸರ

ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಕೆಲಸಗಾರ ಅದನ್ನು ಗಮನಿಸಿ ಫಾಲ್ಟಂಕರ್ ಅವರಿಗೆ ತಿಳಿಸಿದಾಗ, ಅವರು ಕಚೇರಿಗೆ ಬೀಗ ಹಾಕಿ ಪೊಲೀಸರಿಗೆ ಕರೆ ಮಾಡಿದರು. ಬೆಲ್ತರೋಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 305 (2) (ವಾಸದ ಮನೆಯಲ್ಲಿ ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ