AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಸೆಂಬರ್ ಒಳಗೆ 30 ಕೋಟಿ ಕೊವಿಡ್​ ಲಸಿಕೆ​ ರೆಡಿ, ಬೆಲೆ ಎಷ್ಟು ಇರುತ್ತೆ ಗೊತ್ತಾ?

ದಾರಿಗೆ ಅಡ್ಡಬಂದವರನ್ನ ಬಲಿ ಪಡೆಯುತ್ತಿರುವ ಕೊರೊನಾ ಮಹಾಮಾರಿಯ ಎದುರು ಜಗತ್ತೇ ಮಂಡಿ ಊರುವಂಥ ಸ್ಥಿತಿ ಬಂದಿದೆ. ಈ ಮಧ್ಯೆ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವಾರು ದೇಶಗಳು ತಕ್ಕ ಔಷಧದ ಹುಡುಕಾಟದಲ್ಲಿ ತೊಡಗಿದೆ. ಅದರಲ್ಲಿ ಇಂಗ್ಲೆಂಡ್​ ಸಹ ಒಂದು. ಇದೀಗ ಇಂಗ್ಲೆಂಡ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾ ಜೆನೆಕಾ (Astra Zeneca) ಸಹ ಭಾಗಿತ್ವದಲ್ಲಿ ತಯಾರಾಗಿರುವ ಕೊವಿಡ್​ ಲಸಿಕೆ ಮಾನವ ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶವನ್ನ ನೀಡುತ್ತಿದೆ. ಹಾಗಾಗಿ, ವಿಶ್ವದಾದ್ಯಂತ ಜನರಲ್ಲಿ ಕೊಂಚ ಭರವಸೆ ಮೂಡಿದೆ. ಇದೀಗ ಭಾರತದ ಪ್ರಖ್ಯಾತ […]

ಡಿಸೆಂಬರ್ ಒಳಗೆ 30 ಕೋಟಿ ಕೊವಿಡ್​ ಲಸಿಕೆ​ ರೆಡಿ, ಬೆಲೆ ಎಷ್ಟು ಇರುತ್ತೆ ಗೊತ್ತಾ?
KUSHAL V
| Edited By: |

Updated on:Jul 22, 2020 | 4:57 PM

Share

ದಾರಿಗೆ ಅಡ್ಡಬಂದವರನ್ನ ಬಲಿ ಪಡೆಯುತ್ತಿರುವ ಕೊರೊನಾ ಮಹಾಮಾರಿಯ ಎದುರು ಜಗತ್ತೇ ಮಂಡಿ ಊರುವಂಥ ಸ್ಥಿತಿ ಬಂದಿದೆ. ಈ ಮಧ್ಯೆ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವಾರು ದೇಶಗಳು ತಕ್ಕ ಔಷಧದ ಹುಡುಕಾಟದಲ್ಲಿ ತೊಡಗಿದೆ. ಅದರಲ್ಲಿ ಇಂಗ್ಲೆಂಡ್​ ಸಹ ಒಂದು.

ಇದೀಗ ಇಂಗ್ಲೆಂಡ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾ ಜೆನೆಕಾ (Astra Zeneca) ಸಹ ಭಾಗಿತ್ವದಲ್ಲಿ ತಯಾರಾಗಿರುವ ಕೊವಿಡ್​ ಲಸಿಕೆ ಮಾನವ ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶವನ್ನ ನೀಡುತ್ತಿದೆ. ಹಾಗಾಗಿ, ವಿಶ್ವದಾದ್ಯಂತ ಜನರಲ್ಲಿ ಕೊಂಚ ಭರವಸೆ ಮೂಡಿದೆ. ಇದೀಗ ಭಾರತದ ಪ್ರಖ್ಯಾತ ಲಸಿಕೆ ತಯಾರಿಕಾ ಕಂಪನಿಯಾದ ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ (Serum Institute of India) ಮುಖ್ಯಸ್ಥ ಅದಾರ್​ ಪೂನಾವಾಲಾ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

‘ಪ್ರತಿ ಲಸಿಕೆಯ ಬೆಲೆ 1 ಸಾವಿರ ರೂಪಾಯಿ’ ಹೌದು, ಅದಾರ್​ ಪೂನಾವಾಲಾ ಡಿಸೆಂಬರ್ ಒಳಗೆ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್​ನ ಕನಿಷ್ಠ 30 ಕೋಟಿ ಲಸಿಕೆಗಳನ್ನು ತಯಾರಿಸುವುದಾಗಿ ಮಾಹಿತಿ ನೀಡಿದ್ದಾರೆ. ಕೋವಿಶೀಲ್ಡ್ (Covishield) ಎಂಬ ಹೆಸರಿನಲ್ಲಿ ಈ ಲಸಿಕೆ ತಯಾರಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಭಾರತದಲ್ಲಿ ಪ್ರತಿ ಲಸಿಕೆಯು 1,000 ರೂಪಾಯಿ ದರದಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ಸಹ ನೀಡಿದ್ದಾರೆ.

ಈ ಆಕ್ಸ್​ಫರ್ಡ್ ಲಸಿಕೆ ಎಲ್ಲಾ ಮಾನವ ಪ್ರಯೋಗಿಕ ಹಂತದಲ್ಲಿ ಪೂರ್ಣಪ್ರಮಾಣವಾಗಿ ಯಶಸ್ಸನ್ನು ಕಂಡ ಕೂಡಲೇ ಅದನ್ನು ತಯಾರಿಸಲು ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾವನ್ನ ಆಸ್ಟ್ರಾ ಜೆನೆಕಾ ಆಯ್ಕೆ ಮಾಡಿದೆ. ಜೊತೆಗೆ, ಕೇಂದ್ರ ಸರ್ಕಾರಕ್ಕೆ ದೇಶದಲ್ಲಿ ಇದರ ಮಾನವ ಪ್ರಯೋಗಕ್ಕೆ ಅನುಮತಿ ಪಡೆದು ಭಾರತದಲ್ಲೂ ಇದರ ಟ್ರಯಲ್​ ಆರಂಭಿಸುತ್ತೇವೆ ಎಂದು ಅದಾರ್​ ಪೂನಾವಾಲಾ ತಿಳಿಸಿದ್ದಾರೆ.

Published On - 5:13 pm, Tue, 21 July 20

Follow Us
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬೈಕ್​​ ತಪ್ಪಿಸಲು ಹೋಗಿ ಖಾಸಗಿ ಬಸ್​​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು ಆರೋಪ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಬಿಯರ್ ಬಾಕ್ಸ್ ಲಾರಿ ಪಲ್ಟಿ, ಅಡಿಕೆ ತೋಟದಲ್ಲಿ ಬಿಯರ್ ಬಾಟಲಿಗಳ ಸುರಿಮಳೆ!
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಸಹೋದರರ ನಡುವೆ ಬಿರುಕು? ಹಾರ್ದಿಕ್ ಔಟಾದಾಗ ಕೃನಾಲ್ ಅತಿರೇಕದ ಸಂಭ್ರಮ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ
ಚಹಾಲ್ ಮೆಸೇಜ್ ಸ್ಕ್ರೀನ್ ಶಾಟ್ ಹಂಚಿಕೊಂಡ ಉಲ್ಲು ನಟಿ ತಾನಿಯಾ