ಖನಿಜ ಗಣಿಗಾರಿಕೆ ಪ್ರವೇಶಿಸುವ ಸ್ಟಾರ್ಟ್ ಅಪ್ ಗಳು ಭವಿಷ್ಯದ ಆಶಾಕಿರಣ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ

Pralhad Joshi: ಮಹಾರಾಷ್ಟ್ರದ ಮುಂಬೈನಲ್ಲಿರುವ IITಯಲ್ಲಿಂದು ಪ್ರಪ್ರಥಮ ಮೈನಿಂಗ್ ಸ್ಟಾರ್ಟ್ಅಪ್ ಶೃಂಗಸಭೆಯನ್ನುದ್ದೇಶಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಾತನಾಡಿದರು.

ಖನಿಜ ಗಣಿಗಾರಿಕೆ ಪ್ರವೇಶಿಸುವ ಸ್ಟಾರ್ಟ್ ಅಪ್ ಗಳು ಭವಿಷ್ಯದ ಆಶಾಕಿರಣ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ
ಖನಿಜ ಗಣಿಗಾರಿಕೆ ಪ್ರವೇಶಿಸುವ ಸ್ಟಾರ್ಟ್ ಅಪ್ ಗಳು ಭವಿಷ್ಯದ ಆಶಾಕಿರಣ
ಸಾಧು ಶ್ರೀನಾಥ್​

Updated on: May 29, 2023 | 5:26 PM

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ IITಯಲ್ಲಿಂದು ಪ್ರಪ್ರಥಮ ಮೈನಿಂಗ್ ಸ್ಟಾರ್ಟ್ಅಪ್ ಶೃಂಗಸಭೆಯನ್ನುದ್ದೇಶಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು (Pralhad Joshi) ಮಾತನಾಡಿದರು. ಪರಿಶೋಧನೆ, ಆಟೊಮೇಷನ್, ಡ್ರೋನ್ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸೇರಿದಂತೆ ಪ್ರಮುಖ ತ‌ಂತ್ರಜ್ಞಾನದ ಕಂಪನಿಗಳು ಈ ಮೈನಿಂಗ್ (mineral mining) ಸ್ಟಾರ್ಟ್ಅಪ್ (Startups) ಶೃಂಗಸಭೆಯಲ್ಲಿ ಭಾಗವಹಿಸಿದ್ದರಿಂದಾಗಿ ಈ ಪ್ರಥಮ ಶೃಂಗಸಭೆಯ ಉದ್ದೇಶ ಸಾರ್ಥಕವಾದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವದ ಬ್ಯಾಂಕ್ ನಿಂದ ಹಿಡಿದು ವಿಶ್ವದ ಕಾರ್ಖಾನೆಯಾಗುವವರೆಗೆ, ಪ್ರಧಾನಿ ನರೇಂದ್ರ ಮೋದಿಯವರ ‌ನೇತೃತ್ವದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ ಎಂದ ಅವರು, ಈ ಶೃಂಗಸಭೆಯಲ್ಲಿ, ಖನಿಜ ಗಣಿಗಾರಿಕೆ ಕ್ಷೇತ್ರವನ್ನು ಪ್ರವೇಶಿಸುವ ಸ್ಟಾರ್ಟ್‌ಅಪ್‌ಗಳು ಯಾವ ರೀತಿ ಎಲ್ಲರಿಗೂ ಉಪಯುಕ್ತ ಎಂಬುದರ ಬಗ್ಗೆಯೂ ಬೆಳಕು ಚೆಲ್ಲಿದರು.

Also Read: ರಾಜ್ಯಕ್ಕೆ ಬರುವ ಕೇಂದ್ರದ ಹಣ ಕಡಿಮೆ ಎಂಬ ಆರೋಪಕ್ಕೆ ಅಂಕಿ-ಸಂಖ್ಯೆಯೊಂದಿಗೆ ತಿರುಗೇಟು ಕೊಟ್ಟ ಸಚಿವ ಜೋಶಿ

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಿಂದ ನಾವು ನಿರಂತರವಾಗಿ ಭೂವಿಜ್ಞಾನ ಪರಿಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ ಎಂದ ಅವರು, ಹೀಗೆ ಪರಿಶೋಧನೆಯಲ್ಲಿರುವ ಪ್ರದೇಶದ ವಿಸ್ತೀರ್ಣವೀಗ ಸುಮಾರು 2 ಲಕ್ಷ ಚದರ ಮೀಟರ್‌ಗೆ ತಲುಪಿದೆ. ಇದರಿಂದಾಗಿ ಶೇಕಡಾ 40% ಕ್ಕಿಂತ ಹೆಚ್ಚು ಅನ್ವೇಷಣೆಯನ್ನು ಈವರೆಗೆ ಸಾಧಿಸಲಾಗಿದೆ ಎಂದರು.

ಈ ಪ್ರಪ್ರಥಮ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಜೊತೆ ಮಹಾರಾಷ್ಟ್ರದ ಸಚಿವ ದಾದಾಜಿ ಭೂಸೆಯವರು ಉಪಸ್ಥಿತರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Mon, 29 May 23

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us