AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಗಂಡ, ಅತ್ತೆ-ಮಾವನಿಂದ ಕಿರುಕುಳ; 22ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ

ತನ್ನ 7 ವರ್ಷದ ಮಾನಸಿಕ ಅಸ್ವಸ್ಥ ಮಗನನ್ನು ನೋಡಿಕೊಳ್ಳಲು ತನ್ನ ಪತಿ ಮತ್ತು ಮಾವಂದಿರನ್ನು ಮನವೊಲಿಸಲು ವಿಫಲವಾದ ಕಾರಣ 36 ವರ್ಷದ ವಿವಾಹಿತ ಮಹಿಳೆ ಕಟ್ಟಡದ 22ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ.

Crime News: ಗಂಡ, ಅತ್ತೆ-ಮಾವನಿಂದ ಕಿರುಕುಳ; 22ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ
ಮೃತ ಮಹಿಳೆ ಸ್ವಾತಿImage Credit source: News18
TV9 Web
| Updated By: ಸುಷ್ಮಾ ಚಕ್ರೆ|

Updated on:Jan 18, 2023 | 12:27 PM

Share

ಹೈದರಾಬಾದ್: ಮಾನಸಿಕ ಅಸ್ವಸ್ಥ ಮಗನನ್ನು ನೋಡಿಕೊಳ್ಳಲು ತನ್ನ ಗಂಡ ಹಾಗೂ ಅತ್ತೆ-ಮಾವನ ಮನವೊಲಿಸಲು ವಿಫಲರಾದ ಮಹಿಳೆಯೊಬ್ಬರು ಅಪಾರ್ಟ್​ಮೆಂಟ್​ನ 22ನೇ ಮಹಡಿಯಿಂದ ಕೆಳಗೆ ಹಾರಿ ಮೃತಪಟ್ಟಿದ್ದಾರೆ. ತೆಲಂಗಾಣದಲ್ಲಿ (Telangana) ಈ ಘಟನೆ ನಡೆದಿದೆ. ಮೃತ ಮಹಿಳೆಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಪತಿ, ಅತ್ತೆ, ಆಕೆಯ ಪತಿಯ ಸಹೋದರಿ ಮತ್ತು ಆಕೆಯ ಸಹೋದರಿಯ ಪತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತನ್ನ 7 ವರ್ಷದ ಮಾನಸಿಕ ಅಸ್ವಸ್ಥ ಮಗನನ್ನು ನೋಡಿಕೊಳ್ಳಲು ತನ್ನ ಪತಿ ಮತ್ತು ಮಾವಂದಿರನ್ನು ಮನವೊಲಿಸಲು ವಿಫಲವಾದ ಕಾರಣ 36 ವರ್ಷದ ವಿವಾಹಿತ ಮಹಿಳೆ ಕಟ್ಟಡದ 22ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನ ಕುಕಟ್‌ಪಲ್ಲಿ ಹೌಸಿಂಗ್ ಬೋರ್ಡ್ (ಕೆಪಿಎಚ್‌ಬಿ) ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಭೀಕರ ಅಪಘಾತದಲ್ಲಿ ತಾಯಿ-ಮಗು ಸಾವು, ಎದೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ

ಆಂಧ್ರಪ್ರದೇಶದ ಕಾಕಿನಾಡದ ಸಾಮರ್ಲಕೋಟ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಶ್ರೀಧರ್ 2013ರಲ್ಲಿ ಅದೇ ಗ್ರಾಮದ ಸರ್ಪವರಂನ ರಾಮ ವೆಂಕಟ ಲಕ್ಷ್ಮೀ ಗಣಪತು ಸ್ವಾತಿ ಎಂಬುವವರನ್ನು ವಿವಾಹವಾಗಿದ್ದರು. ಅವರ 7 ವರ್ಷದ ಮಗನಿಗೆ ಮಾನಸಿಕ ಅಸ್ವಸ್ಥತೆ ಇತ್ತು. ಸ್ವಾತಿ ಅವರ ಪತಿ ಶ್ರೀಧರ್ ಮತ್ತು ಆತನ ಪೋಷಕರು ಆ ಬಾಲಕನನ್ನು ನಗರದ ಅನಾಥಾಶ್ರಮಕ್ಕೆ ಕಳುಹಿಸುವಂತೆ ಆಕೆಯ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ, ಅದಕ್ಕೆ ಆಕೆ ಒಪ್ಪಿರಲಿಲ್ಲ. ಇದರಿಂದ ಅವರು ಸ್ವಾತಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು.

ಸ್ವಾತಿ ತನ್ನ ಮಗನಿಗೆ ಚಿಕಿತ್ಸೆ ನೀಡಲು ಪೋಷಕರಿಂದ ಆರ್ಥಿಕ ಸಹಾಯ ಪಡೆದಿದ್ದರು. ಇದನ್ನು ಸ್ವಾತಿಯ ಗಂಡನ ಮನೆಯವರು ಒಪ್ಪಿರಲಿಲ್ಲ. ಇದರಿಂದ ಬೇಸತ್ತ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ರಾತ್ರಿ 9.30ಕ್ಕೆ ಅಪಾರ್ಟ್​ಮೆಂಟ್​ನ 22ನೇ ಮಹಡಿ ತಲುಪಿದ ಸ್ವಾತಿ ಅಲ್ಲಿಂದ ಜಿಗಿದಿದ್ದಾರೆ. ಕಟ್ಟಡದ ಮೊದಲ ಮಹಡಿಯ ಕಾರಿಡಾರ್‌ಗೆ ಬಿದ್ದ ತಕ್ಷಣ ಆಕೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢ: ಚಲಿಸುತ್ತಿದ್ದ ಬಸ್ಸಿನ ಚಕ್ರದ ಮುಂದೆ ಮಲಗಿ ಯುವಕ ಆತ್ಮಹತ್ಯೆ; ಕ್ಯಾಮೆರಾದಲ್ಲಿ ಸಾವಿನ ದೃಶ್ಯ ಸೆರೆ

ಮದುವೆಯಾಗಿ 3 ವರ್ಷಗಳ ನಂತರ ಸ್ವಾತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗು ಮಾನಸಿಕ ಅಸ್ವಸ್ಥನಾಗಿದ್ದು, 3 ವರ್ಷಗಳಿಂದ ನನ್ನ ಸೋದರ ಮಾವ ಶ್ರೀಧರ್ ಮತ್ತು ಆತನ ತಂದೆ-ತಾಯಿ ನೋಡಲು ಬಂದಿರಲಿಲ್ಲ. ಮಗನನ್ನು ಬೇರೆ ಕಡೆ ಬಿಟ್ಟು ಮತ್ತೊಂದು ಮಗುವಿಗೆ ಜನ್ಮ ನೀಡುವಂತೆ ಸ್ವಾತಿ ಮೇಲೆ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಧರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸ್ವಾತಿಯ ಸಹೋದರ ಹೇಮಂತ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:26 pm, Wed, 18 January 23