AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !

ಖಟಿಮಾ ಎಂಬಲ್ಲಿ ರೈಲು ನಿಂತ ಬಳಿಕ, ಪ್ರಯಾಣಿಕರನ್ನು ತನಕ್​ಪುರಕ್ಕೆ ಬಸ್​​ ಮೂಲಕ ಕಳಿಸಲಾಗಿದೆ. ರೈಲು ಹಿಮ್ಮುಖವಾಗಿ ಚಲಿಸಿದೆ ಹೊರತು ಯಾರಿಗೂ ಯಾವುದೇ ಅಪಾಯವಾಗಲಿಲ್ಲ.

ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !
ಹಿಮ್ಮುಖವಾಗಿ ಚಲಿಸಿದ ರೈಲು
Lakshmi Hegde
| Edited By: |

Updated on:Mar 18, 2021 | 2:53 PM

Share

ರೈಲು ಹಿಮ್ಮುಖವಾಗಿ ಚಲಿಸಿದ್ದನ್ನು ನೀವೆಲ್ಲಾದರೂ ನೋಡಿದ್ದೀರಾ? ಅರೆ, ಟ್ರೇನ್​ ಹಿಮ್ಮುಖವಾಗಿ ಚಲಿಸಲು ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿದ್ದರೆ.. ವೈರಲ್​ ಆಗಿರುವ ಈ ವಿಡಿಯೋವನ್ನು ನೋಡಲೇಬೇಕು. ದೆಹಲಿಯಿಂದ ಉತ್ತರಾಖಂಡಕ್ಕೆ ಸಂಚರಿಸುತ್ತಿದ್ದ, ಪ್ರಯಾಣಿಕರಿದ್ದ ರೈಲು 35 ಕಿ.ಮೀ.ದೂರ ಹಿಮ್ಮುಖವಾಗಿ ಚಲಿಸಿದೆ. ಹೀಗೆ ಅಷ್ಟು ದೂರ ಹಿಮ್ಮುಖವಾಗಿಯೇ, ವೇಗವಾಗಿ ಚಲಿಸಿದ ರೈಲು ಕೊನೆಗೆ ಉತ್ತರಾಖಂಡ ಖಟಿಮಾ ಎಂಬಲ್ಲಿ ನಿಂತಿದೆ.

ಪೂರ್ಣಗಿರಿ ಜನಶತಾಬ್ದಿ ಎಕ್ಸ್​​ಪ್ರೆಸ್​ ರೈಲು ದೆಹಲಿಯಿಂದ ಉತ್ತರಾಖಂಡ್​ದ ತನಕ್​ಪುರಕ್ಕೆ ತೆರಳುತ್ತಿತ್ತು. ಆಗ ರೈಲ್ವೆ ಹಳಿಯ ಮೇಲೆ ಅಡ್ಡಾಡುತ್ತಿದ್ದ ಪ್ರಾಣಿಯನ್ನು ಕಂಡ ರೈಲು ಚಾಲಕ, ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬ್ರೇಕ್​ ಹಾಕಿದ್ದಾರೆ. ಇದಾದ ಬಳಿಕ ಚಾಲಕ ಲೊಕೊಮೋಟಿವ್​ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಹಾಗಾಗಿ ರೈಲು ಒಂದೇ ಸಮ ಹಿಮ್ಮುಖವಾಗಿ ಚಲಿಸಿದೆ. ಅದರಲ್ಲಿದ್ದ ಪ್ರಯಾಣಿಕರಂತೂ ತುಂಬ ಕಂಗಾಲಾಗಿದ್ದರು.

ಖಟಿಮಾ ಎಂಬಲ್ಲಿ ರೈಲು ನಿಂತ ಬಳಿಕ, ಪ್ರಯಾಣಿಕರನ್ನು ತನಕ್​ಪುರಕ್ಕೆ ಬಸ್​​ ಮೂಲಕ ಕಳಿಸಲಾಗಿದೆ. ರೈಲು ಹಿಮ್ಮುಖವಾಗಿ ಚಲಿಸಿದೆ ಹೊರತು ಯಾರಿಗೂ ಯಾವುದೇ ಅಪಾಯವಾಗಲಿಲ್ಲ. ಲೋಕೋ ಪೈಲಟ್​ ಮತ್ತು ಗಾರ್ಡ್​​ನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಈಶಾನ್ಯ ರೈಲ್ವೆ ಆಡಳಿತ ತಿಳಿಸಿದೆ.

Published On - 2:32 pm, Thu, 18 March 21

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ