AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !

ಖಟಿಮಾ ಎಂಬಲ್ಲಿ ರೈಲು ನಿಂತ ಬಳಿಕ, ಪ್ರಯಾಣಿಕರನ್ನು ತನಕ್​ಪುರಕ್ಕೆ ಬಸ್​​ ಮೂಲಕ ಕಳಿಸಲಾಗಿದೆ. ರೈಲು ಹಿಮ್ಮುಖವಾಗಿ ಚಲಿಸಿದೆ ಹೊರತು ಯಾರಿಗೂ ಯಾವುದೇ ಅಪಾಯವಾಗಲಿಲ್ಲ.

ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !
ಹಿಮ್ಮುಖವಾಗಿ ಚಲಿಸಿದ ರೈಲು
Lakshmi Hegde
| Updated By: Digi Tech Desk|

Updated on:Mar 18, 2021 | 2:53 PM

Share

ರೈಲು ಹಿಮ್ಮುಖವಾಗಿ ಚಲಿಸಿದ್ದನ್ನು ನೀವೆಲ್ಲಾದರೂ ನೋಡಿದ್ದೀರಾ? ಅರೆ, ಟ್ರೇನ್​ ಹಿಮ್ಮುಖವಾಗಿ ಚಲಿಸಲು ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿದ್ದರೆ.. ವೈರಲ್​ ಆಗಿರುವ ಈ ವಿಡಿಯೋವನ್ನು ನೋಡಲೇಬೇಕು. ದೆಹಲಿಯಿಂದ ಉತ್ತರಾಖಂಡಕ್ಕೆ ಸಂಚರಿಸುತ್ತಿದ್ದ, ಪ್ರಯಾಣಿಕರಿದ್ದ ರೈಲು 35 ಕಿ.ಮೀ.ದೂರ ಹಿಮ್ಮುಖವಾಗಿ ಚಲಿಸಿದೆ. ಹೀಗೆ ಅಷ್ಟು ದೂರ ಹಿಮ್ಮುಖವಾಗಿಯೇ, ವೇಗವಾಗಿ ಚಲಿಸಿದ ರೈಲು ಕೊನೆಗೆ ಉತ್ತರಾಖಂಡ ಖಟಿಮಾ ಎಂಬಲ್ಲಿ ನಿಂತಿದೆ.

ಪೂರ್ಣಗಿರಿ ಜನಶತಾಬ್ದಿ ಎಕ್ಸ್​​ಪ್ರೆಸ್​ ರೈಲು ದೆಹಲಿಯಿಂದ ಉತ್ತರಾಖಂಡ್​ದ ತನಕ್​ಪುರಕ್ಕೆ ತೆರಳುತ್ತಿತ್ತು. ಆಗ ರೈಲ್ವೆ ಹಳಿಯ ಮೇಲೆ ಅಡ್ಡಾಡುತ್ತಿದ್ದ ಪ್ರಾಣಿಯನ್ನು ಕಂಡ ರೈಲು ಚಾಲಕ, ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬ್ರೇಕ್​ ಹಾಕಿದ್ದಾರೆ. ಇದಾದ ಬಳಿಕ ಚಾಲಕ ಲೊಕೊಮೋಟಿವ್​ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಹಾಗಾಗಿ ರೈಲು ಒಂದೇ ಸಮ ಹಿಮ್ಮುಖವಾಗಿ ಚಲಿಸಿದೆ. ಅದರಲ್ಲಿದ್ದ ಪ್ರಯಾಣಿಕರಂತೂ ತುಂಬ ಕಂಗಾಲಾಗಿದ್ದರು.

ಖಟಿಮಾ ಎಂಬಲ್ಲಿ ರೈಲು ನಿಂತ ಬಳಿಕ, ಪ್ರಯಾಣಿಕರನ್ನು ತನಕ್​ಪುರಕ್ಕೆ ಬಸ್​​ ಮೂಲಕ ಕಳಿಸಲಾಗಿದೆ. ರೈಲು ಹಿಮ್ಮುಖವಾಗಿ ಚಲಿಸಿದೆ ಹೊರತು ಯಾರಿಗೂ ಯಾವುದೇ ಅಪಾಯವಾಗಲಿಲ್ಲ. ಲೋಕೋ ಪೈಲಟ್​ ಮತ್ತು ಗಾರ್ಡ್​​ನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಈಶಾನ್ಯ ರೈಲ್ವೆ ಆಡಳಿತ ತಿಳಿಸಿದೆ.

Published On - 2:32 pm, Thu, 18 March 21

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ