AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wayanad Landslide: ವಯನಾಡು ಭೂಕುಸಿತ, ದಾಖಲೆಗಳನ್ನು ಕಳೆದುಕೊಂಡವರಿಗಾಗಿ ವಿಶೇಷ ಅದಾಲತ್

ವಯನಾಡಿನಲ್ಲಿ ಸಂಭವಿಸಿದ ಭಾರಿ, ಮಳೆ ಗುಡ್ಡ ಕುಸಿತದಿಂದಾಗಿ ಜನರು ಹೈರಾಣಾಗಿದ್ದಾರೆ, ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬದುಕುಳಿದವರು ತಮ್ಮವರು, ತಮ್ಮ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ದಾಖಲೆಗಳನ್ನು ಕಳೆದುಕೊಂಡವರಿಗಾಗಿಯೇ ವಿಶೇಷ ಅದಾಲತ್ ನಡೆಸಲಾಗುತ್ತಿದೆ.

Wayanad Landslide: ವಯನಾಡು ಭೂಕುಸಿತ, ದಾಖಲೆಗಳನ್ನು ಕಳೆದುಕೊಂಡವರಿಗಾಗಿ ವಿಶೇಷ ಅದಾಲತ್
ಕೇರಳ ಭೂಕುಸಿತ
Follow us
ನಯನಾ ರಾಜೀವ್
|

Updated on: Aug 16, 2024 | 8:15 AM

ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಜನರು ತಮ್ಮ ಮನೆ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ತಮ್ಮ ದಾಖಲೆ ಪತ್ರಗಳು ಮಣ್ಣು ಪಾಲಾಗಿವೆ. ಹೀಗಾಗಿ ಇಂದು ವಿಶೇಷ ಅದಾಲತ್ ನಡೆಸಲಾಗುತ್ತಿದೆ. ಭೂಕುಸಿತಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ಹೈಕೋರ್ಟ್ ಇಂದು ಪರಿಗಣಿಸಲಿದೆ. ನ್ಯಾಯಮೂರ್ತಿ ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ವಿಎಂ ಶ್ಯಾಮ್ ಕುಮಾರ್ ಅವರಿದ್ದ ವಿಭಾಗೀಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಅರ್ಜಿಯನ್ನು ನ್ಯಾಯಾಲಯ ಇಂದು ಪರಿಗಣಿಸಲಿದೆ.

ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ವಯನಾಡಿನ ಭೂಕುಸಿತ ಪ್ರದೇಶದಲ್ಲಿ ಶೋಧ ನಡೆಸಿದಾಗ ಅಗ್ನಿಶಾಮಕ ದಳಕ್ಕೆ 4 ಲಕ್ಷ ರೂ. ವೆಲ್ಲರ್ಮಲಾ ಶಾಲೆಯ ಹಿಂದೆ ನಡೆಸಿದ ಶೋಧದ ವೇಳೆ ಹಣ ಪತ್ತೆಯಾಗಿದೆ. ಐನೂರು ರೂಪಾಯಿಯ ಏಳು ಕಟ್ಟುಗಳು ಮತ್ತು ನೂರು ರೂಪಾಯಿಯ ಐದು ಕಟ್ಟುಗಳು ಸಿಕ್ಕಿವೆ. ಹಣವನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಹಾಕಲಾಗಿತ್ತು. ಅಗ್ನಿಶಾಮಕ ದಳ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿ ನಡೆಸಿದ ಶೋಧದ ವೇಳೆ ಹಣ ಪತ್ತೆಯಾಗಿದೆ.

ಚುರಲ್‌ಮಲಾ, ಮುಂಡಕೈ ಮತ್ತು ಸಾಮ್ಲಿಮಟ್ಟಂನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 231 ಜನರು ಸಾವನ್ನಪ್ಪಿ 128 ಜನರು ನಾಪತ್ತೆಯಾದ ಹಿನ್ನೆಲೆಯಲ್ಲಿ, ಸಂತ್ರಸ್ತರ ಅವಲಂಬಿತರಿಗೆ ವಿಳಂಬವಿಲ್ಲದೆ ಅವರ ಸವಲತ್ತುಗಳು ಸಿಗುವಂತೆ ಮಾಡಲು ಕೆಲವು ವಿಧಾನಗಳನ್ನು ಸಡಿಲಗೊಳಿಸಲಾಗಿದೆ.

ಮತ್ತಷ್ಟು ಓದಿ: ವಯನಾಡು ಭೂಕುಸಿತ: ನಿಧಿ ಸಂಗ್ರಹಿಸಲು ಸತತ 3 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶಿಸಿದ ಬಾಲಕಿ

ಭೂಕುಸಿತ ಸಂತ್ರಸ್ತರ ಅವಲಂಬಿತರಿಗೆ ಎಕ್ಸ್‌ಗ್ರೇಷಿಯಾ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಇದು ಸಹಕಾರಿ. ವಿಪತ್ತು ನಿರ್ವಹಣಾ ಕಾಯಿದೆಯ ಸೆಕ್ಷನ್ 19 ರ ಅಡಿಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಸರ್ಕಾರವು ಕೋವಿಡ್ ದುರಂತದಲ್ಲಿ ಅವಲಂಬಿತರಿಗೆ ಒದಗಿಸಿದಂತೆಯೇ ಮುಂದಿನ ಸಂಬಂಧಿಕರನ್ನು ವಾರಸುದಾರರನ್ನಾಗಿ ಪರಿಗಣಿಸಲು ಆದೇಶ ಹೊರಡಿಸಿದೆ.

ಮೃತರ ಕುಟುಂಬ ಸದಸ್ಯರು ಇಲ್ಲದಿದ್ದರೆ, ಮುಂದಿನ ಸಂಬಂಧಿಕರು ಸಹ ಆರ್ಥಿಕ ನೆರವು ಪಡೆಯುತ್ತಾರೆ. ಇದಕ್ಕಾಗಿ ಉತ್ತರಾಧಿಕಾರ ಹಕ್ಕು ಪ್ರಮಾಣಪತ್ರವನ್ನು ಹಾಜರುಪಡಿಸಬೇಕು. ನಾಪತ್ತೆಯಾದವರ ಅವಲಂಬಿತರಿಗೂ ಆರ್ಥಿಕ ನೆರವು ಸಿಗಲಿದೆ.

ಭೂಕುಸಿತದಿಂದ ಕಣ್ಣು, ಕೈಕಾಲು ಕಳೆದುಕೊಂಡವರು ಹಾಗೂ ಶೇ.60ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವವರಿಗೆ 75 ಸಾವಿರ ರೂ. 40 ರಿಂದ 60 ರಷ್ಟು ಅಂಗವೈಕಲ್ಯದಿಂದ ಬಳಲುತ್ತಿರುವವರಿಗೆ ಸಿಎಂಡಿಆರ್‌ಎಫ್‌ನಿಂದ 50,000 ನೀಡಲು ನಿರ್ಧರಿಸಲಾಗಿದೆ.

ಪರಿಹಾರ ಶಿಬಿರಗಳಲ್ಲಿ ವಾಸಿಸುವ ಕುಟುಂಬಕ್ಕೆ ತಿಂಗಳಿಗೆ 6000 ರೂ ಬಾಡಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಂಬಂಧಿಕರ ಮನೆಗಳಿಗೆ ತೆರಳುವವರಿಗೂ ಬಾಡಿಗೆ ಮೊತ್ತ ಸಿಗಲಿದೆ. ಉಚಿತ ವಸತಿ ಒದಗಿಸುವುದು ಸರ್ಕಾರದ ಉದ್ದೇಶವಾಗಿರುವುದರಿಂದ ಸರ್ಕಾರಿ ಸ್ವಾಮ್ಯದ ಅಥವಾ ಇತರ ಸಾರ್ವಜನಿಕ ಸ್ವಾಮ್ಯದ ಅಥವಾ ಖಾಸಗಿ ವಸತಿಗಳಿಗೆ ತೆರಳುವ ಕುಟುಂಬಗಳು ಮಾಸಿಕ ಬಾಡಿಗೆಯನ್ನು ಪಡೆಯುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ