AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆಯಲ್ಲಿದ್ದ ನವಜಾತ ಶಿಶುವನ್ನು ರಾತ್ರಿ ಇಡೀ ತನ್ನ ಮಗುವಿನಂತೆ ಜೋಪಾನ ಮಾಡಿದ ಬೀದಿ ನಾಯಿಗಳು

ಸಾಮಾನ್ಯವಾಗಿ ಬೀದಿನಾಯಿ(Stray Dog)ಗಳೆಂದರೆ ಕಚ್ಚುವುದು, ಬೇರೆಯವರಿಗೆ ತೊಂದರೆ ಕೊಡುವುದು ಎಂದಷ್ಟೇ ನಮ್ಮ ಮನಸ್ಸಿನಲ್ಲಿ ಆಳವಾಗಿ ಹೊಕ್ಕಿದೆ. ಆದರೆ ಆಗಷ್ಟೇ ಹುಟ್ಟಿದ್ದ ನವಜಾತ ಶಿಶುವನ್ನು ಒಂದು ಚೂರು ಮುಟ್ಟದೆ ತಾಯಿ ರೀತಿಯಲ್ಲಿ ಗುಂಪುಗೂಡಿ ಅದನ್ನು ರಕ್ಷಣೆ ಮಾಡಿರುವುದನ್ನು ಎಲ್ಲಾದರೂ ಕಂಡಿದ್ದೀರಾ. ಅಂಥಾ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಕಾರ್ಮಿಕರರುವ ವಸಾಹತು ಪ್ರದೇಶದ ಶೌಚಾಲಯದ ಹೊರಗೆ ಕೆಲವು ಗಂಟೆಗಳ ಹಿಂದೆ ಜನಿಸಿದ್ದ ಶಿಶು ಪತ್ತೆಯಾಗಿದೆ.

ರಸ್ತೆಯಲ್ಲಿದ್ದ ನವಜಾತ ಶಿಶುವನ್ನು ರಾತ್ರಿ ಇಡೀ ತನ್ನ ಮಗುವಿನಂತೆ ಜೋಪಾನ ಮಾಡಿದ ಬೀದಿ ನಾಯಿಗಳು
ಸಾಂದರ್ಭಿಕ ಚಿತ್ರ
ನಯನಾ ರಾಜೀವ್
|

Updated on:Dec 03, 2025 | 7:24 AM

Share

ನಾಡಿಯಾ, ಡಿಸೆಂಬರ್ 03: ಸಾಮಾನ್ಯವಾಗಿ ಬೀದಿನಾಯಿ(Stray Dog)ಗಳೆಂದರೆ ಕಚ್ಚುವುದು, ಬೇರೆಯವರಿಗೆ ತೊಂದರೆ ಕೊಡುವುದು ಎಂದಷ್ಟೇ ನಮ್ಮ ಮನಸ್ಸಿನಲ್ಲಿ ಆಳವಾಗಿ ಹೊಕ್ಕಿದೆ. ಆದರೆ ಆಗಷ್ಟೇ ಹುಟ್ಟಿದ್ದ ನವಜಾತ ಶಿಶುವನ್ನು ಒಂದು ಚೂರು ಮುಟ್ಟದೆ ತಾಯಿ ರೀತಿಯಲ್ಲಿ ಗುಂಪುಗೂಡಿ ಅದನ್ನು ರಕ್ಷಣೆ ಮಾಡಿರುವುದನ್ನು ಎಲ್ಲಾದರೂ ಕಂಡಿದ್ದೀರಾ. ಅಂಥಾ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಕಾರ್ಮಿಕರಿರುವ ವಸಾಹತು ಪ್ರದೇಶದ ಶೌಚಾಲಯದ ಹೊರಗೆ ಕೆಲವು ಗಂಟೆಗಳ ಹಿಂದೆ ಜನಿಸಿದ್ದ ಶಿಶು ಪತ್ತೆಯಾಗಿದೆ.

ಮಗು ಹುಟ್ಟಿದ ಬಳಿಕ ಅದರ ಮೈಮೇಲಿದ್ದ ರಕ್ತವನ್ನು ಕೂಡ ಯಾರೂ ಒರೆಸಿರಲಿಲ್ಲ, ಮಗುವಿಗೆ ಬಟ್ಟೆ ಇರಲಿಲ್ಲ, ಮೈಮೇಲೆ ಯಾವುದೇ ಬೆಚ್ಚನೆಯ ವಸ್ತುಗಳು ಕೂಡ ಇರಲಿಲ್ಲ.ಆದರೆ ಮಗು ಒಂಟಿಯಾಗಿರಲಿಲ್ಲ, ಅದರ ರಕ್ಷಣೆಗೆ ನಾಲ್ಕೈದು ನಾಯಿಗಳು ಕೂಡಾ ಇದ್ದವು.

ಇದೊಂದು ಪವಾಡದಂತಿತ್ತು. ಜನರು ಪ್ರತಿದಿನ ಓಡಿಸುವ ನಾಯಿಗಳ ಗುಂಪೇ ಈ ನವಜಾತ ಶಿಶುವಿನ ರಕ್ಷಣೆಗೆ ನಿಂತಿತ್ತು, ನಾಯಿಯ ಗುಂಪು ಮಗುವಿನ ಸುತ್ತಲೂ ಕುಳಿತು ಅದಕ್ಕೆ ರಕ್ಷಣೆ ನೀಡಿದ್ದವು. ಬೊಗಳಲೂ ಇಲ್ಲ, ಅಲ್ಲಿಂದ ಕದಲಲೂ ಇಲ್ಲ ರಾತ್ರಿ ಇಡೀ ಕುಳಿತು ಕಾವಲು ಕಾದಿವೆ. ಬೆಳಗಿನ ಬೆಳಕನ್ನು ಹೊರತುಪಡಿಸಿ ರಾತ್ರಿ ಇಡೀ ನಾಯಿಗಳು ಯಾರನ್ನೂ ಅಥವಾ ಯಾವ ಪ್ರಾಣಿಯನ್ನೂ ಹತ್ತಿರ ಬಿಡಲಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು

ನಮಗೆ ಎಚ್ಚರವಾದಾಗ ಈ ಘಟನೆ ನೋಡಿ ರೋಮಾಂಚನವಾಯಿತು ಎಂದು ಸುಕ್ಲಾ ಮಂಡಲ್ ಎಂಬುವವರು ತಿಳಿಸಿದ್ದಾರೆ. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ. ಅವು ಎಚ್ಚರವಾಗಿಯೇ ಇದ್ದವು, ತಾಯಿಯಂತೆ ಶಿಶುವನ್ನು ಕಾಳಜಿ ಮಾಡಿದ್ದವು. ಮತ್ತೊಬ್ಬ ನಿವಾಸಿ ಸುಭಾಷ್ ಮಾತನಾಡಿ, ಬೆಳಗ್ಗೆ ಮಗು ಅಳು ಕೇಳಿ ಎಚ್ಚರವಾಗಿತ್ತು.ಯಾರದ್ದೋ ಮನೆಯಲ್ಲಿ ಮಗುವಿಗೆ ಅನಾರೋಗ್ಯ ಉಂಟಾಗಿರಬೇಕು ಅದಕ್ಕಾಗಿ ಅಳುತ್ತಿದೆ ಎಂದೇ ಭಾವಿಸಿದ್ದೆ ಆದರೆ ಮಗುವಿನ ಸುತ್ತಲೂ ಹೀಗೆ ನಾಯಿಗಳು ಕಾವಲು ಕಾಯುತ್ತವೆ ಎಂದು ಒಮ್ಮೆಯೋ ಆಲೋಚಿಸರಲಿಲ್ಲ.

ಶುಕ್ಲಾ ಅವರು ಹತ್ತಿರ ಬಂದಾಗ ನಾಯಿಗಳು ಸ್ವಲ್ಪ ದೂರ ಸರಿದವು. ಅವರು ಮಗುವನ್ನು ದುಪಟ್ಟಾದಲ್ಲಿ ಸುತ್ತಿ ಬಳಿಕ ಅಕ್ಕಪಕ್ಕದ ಮನೆಯವರನ್ನು ಸಹಾಯಕ್ಕಾಗಿ ಕರೆದರು. ಶಿಶುವನ್ನು ಮೊದಲು ಮಹೇಶ್​ಗಂಜ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದರು. ತಲೆಯ ಮೇಲಿನ ರಕ್ತ ಮಗು ಹುಟ್ಟಬೇಕಿದ್ದಾಗ ಆಗಿದ್ದಾಗಿರಬಹುದು ಎಂದು ಹೇಳಿದ್ದಾರೆ.ರಾತ್ರಿ ಹೊತ್ತು ಯಾರೋ ಮಗುವನ್ನು ಅಲ್ಲಿ ಬಿಟ್ಟು ಹೋಗಿರಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 7:23 am, Wed, 3 December 25

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಆತ್ಮಲಿಂಗವನ್ನೇ ಮುಳುಗಿಸಿದ ಕೊಳಚೆ ನೀರು
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಮೊಬೈಲ್ ನಂಬರ್​ನ ಕೊನೇ 2 ಸಂಖ್ಯೆ ಯಾವುದಿರಬೇಕು?
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ಇಂದು ಈ ರಾಶಿಯವರ ವಿವಾಹ ವಿಚಾರದಲ್ಲಿ ಪ್ರಗತಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಚುನಾವಣೆಯಲ್ಲಿ ನಿಲ್ಲದೇ ಸಿಎಂ ಆದ ಕಥೆ: ಇದು ‘ಕಾಮನ್ ಮ್ಯಾನ್’ ಸಸ್ಪೆನ್ಸ್
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಕೆನಡಾದಲ್ಲಿ ಭಾರತೀಯ ಯುವಕರ ಬಳಿ ಸಹಾಯ ಕೇಳಿದ ಯುವತಿ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ಟ್ರಕ್​ಗೆ ಡಿಕ್ಕಿಯಾಗಿ KSRTC ಬಸ್ ನುಜ್ಜುಗುಜ್ಜು: ತಪ್ಪಿದ ಭಾರೀ ಅನಾಹುತ
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು
ದಿಲೀಪ್ ರಾಜ್​ ನಿಧನ ಹೊಂದಿ ತಿಂಗಳು ಕಳೆದರೂ ಕಡಿಮೆ ಆಗಿಲ್ಲ ಕಣ್ಣೀರು