AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂರ್ತಿ ಸಂಬಳ ನನಗೇ ಕೊಡು ಎಂದು ಪತ್ನಿಯನ್ನು ಥಳಿಸುವ ಪತಿ; ವಿದೇಶಕ್ಕೆ ಹೋದರೂ ಸರಿಯಾಗದ ವರ್ತನೆ, ಪೊಲೀಸರಿಗೆ ದೂರು

Gujarat: ಈ ದಂಪತಿ 2018ರ ಆಗಸ್ಟ್​​ನಲ್ಲಿ ಮದುವೆಯಾಗಿದ್ದಾರೆ. ಮಹಿಳೆ ಚಾರ್ಟರ್ಡ್​ ಅಕೌಂಟೆಂಟ್​. ಮದವೆಯಾದ ಕೆಲವೇ ದಿನದಲ್ಲಿ ಪತಿ ಆಕೆಯ ಬಳಿ ನಿನ್ನ ಪೂರ್ತಿ ಸಂಬಳವನ್ನೂ ನನಗೇ ಕೊಡಬೇಕು ಎಂದು ಹೇಳಿದ್ದ.

ಪೂರ್ತಿ ಸಂಬಳ ನನಗೇ ಕೊಡು ಎಂದು ಪತ್ನಿಯನ್ನು ಥಳಿಸುವ ಪತಿ; ವಿದೇಶಕ್ಕೆ ಹೋದರೂ ಸರಿಯಾಗದ ವರ್ತನೆ, ಪೊಲೀಸರಿಗೆ ದೂರು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Oct 01, 2021 | 12:17 PM

Share

ಉದ್ಯೋಗದಲ್ಲಿರುವ ಪತ್ನಿ  ಸಂಬಳವನ್ನು ತನ್ನ ಕೈಗೆ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಪತಿ ಆಕೆಗೆ ಮನಬಂದಂತೆ ಥಳಿಸಿರುವ ಘಟನೆ ಗುಜರಾತ್ (Gujarat)​​ನ ಅಹ್ಮದಾಬಾದ್​ನ ನಾನಾ ಚಿಲೋಡಾ ಎಂಬಲ್ಲಿ ನಡೆದಿದೆ. ಪತಿಯಿಂದ ಹಿಂಸೆಗೆ ಒಳಗಾಗಿರುವ 27ವರ್ಷದ ಮಹಿಳೆ ಇದೀಗ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.  ನನ್ನ ಸಂಪೂರ್ಣ ಸಂಬಳವನ್ನೂ ಪತಿ ಕಸಿದುಕೊಳ್ಳುತ್ತಾರೆ. ನಾನು ಅದಕ್ಕೆ ಪ್ರತಿರೋಧ ಒಡ್ಡಿದರೆ ಮನಬಂದಂತೆ ಥಳಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ.  ಎಫ್​ಐಆರ್​ ಕೂಡ ದಾಖಲಾಗಿದೆ. 

ಈ ದಂಪತಿ 2018ರ ಆಗಸ್ಟ್​​ನಲ್ಲಿ ಮದುವೆಯಾಗಿದ್ದಾರೆ. ಮಹಿಳೆ ಚಾರ್ಟರ್ಡ್​ ಅಕೌಂಟೆಂಟ್​. ಮದವೆಯಾದ ಕೆಲವೇ ದಿನದಲ್ಲಿ ಪತಿ ಆಕೆಯ ಬಳಿ ನಿನ್ನ ಪೂರ್ತಿ ಸಂಬಳವನ್ನೂ ನನಗೇ ಕೊಡಬೇಕು ಎಂದು ಹೇಳಿದ್ದ. ಆತ ಸ್ವತಃ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಪತ್ನಿಯ ಸಂಬಳವೂ ತನಗೇ ಬೇಕು ಎಂಬುದು ಆಗ್ರಹವಾಗಿತ್ತು.  ಆದರೆ ಮಹಿಳೆ ಅರ್ಧ ಸಂಬಳ ತಾನಿಟ್ಟುಕೊಂಡು ಇನ್ನರ್ಧವನ್ನು ಆತನಿಗೆ ಕೊಟ್ಟಿದ್ದರು. ಅಷ್ಟಕ್ಕೇ ತೀವ್ರವಾಗಿ ಕೋಪಗೊಂಡಿದ್ದ ಆತ ಮನಬಂದಂತೆ ಹೊಡೆದಿದ್ದ. ನಾನು ನಿನ್ನನ್ನು ಮದುವೆಯಾಗಿದ್ದೇ ಸಂಬಳಕ್ಕಾಗಿ ಎಂದು ಪತ್ನಿಗೆ ನೇರವಾಗಿಯೇ ಹೇಳಿದ್ದ ಅವನು, ಸ್ಯಾಲರಿ ಕೊಡದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯನ್ನೂ ಹಾಕಿದ್ದ. ಈ ಎಲ್ಲ ವಿವರಗಳನ್ನೂ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಈ ದಂಪತಿ 2019ರಲ್ಲಿ ದಕ್ಷಿಣ ಆಫ್ರಿಕಾದ ಬೋಟ್ಸ್​ವಾನಾಕ್ಕೆ ಉದ್ಯೋಗಕ್ಕಾಗಿ ತೆರಳಿದ್ದರು. ಅಲ್ಲಿ ಹೋದರೆ ಈ ಜಗಳ, ಹೊಡೆದಾಟ ತಪ್ಪಬಹುದು ಎಂಬ ಆಸೆಯಿತ್ತು. ಆದರೆ ಅಲ್ಲಿಯೂ ಇದೇ ಪರಿಸ್ಥಿತಿಯೇ ಮುಂದುವರಿದಿತ್ತು. ಪತಿ ಹೊಡೆಯುವುದು, ಹಿಂಸಿಸುವುದು ತಪ್ಪಲಿಲ್ಲ. ನಂತರ 2020ರ ಸೆಪ್ಟೆಂಬರ್​​ನಲ್ಲಿ ಮತ್ತೆ ವಾಪಸ್​ ಬಂದೆವು ಎಂದೂ ಮಹಿಳೆ ಹೇಳಿದ್ದಾರೆ.   ಇನ್ನು ಕಳೆದ ವಾರ ನನ್ನ ತಂದೆ-ತಾಯಿ ನನ್ನ ಮನೆಗೆ ಬಂದಿದ್ದರು. ಆಗ ಕೂಡ ನನ್ನ ಪತಿ ಸರಿಯಾಗಿ ವರ್ತಿಸಲಿಲ್ಲ. ಅವರ ಬಳಿ ನಮ್ಮ ಮನೆಗೆ ಬರಬೇಡಿ ಎಂದು ಹೇಳಿದ. ಇದಾದ ಬಳಿಕ ನನಗೂ ತುಂಬ ನೋವಾಯಿತು. ನಾನೂ ಮನೆಬಿಟ್ಟು ಹೋಗಿ ಅಪ್ಪ-ಅಮ್ಮನ ಜತೆ ವಾಸಿಸಲು ಶುರುಮಾಡಿದ್ದೇನೆ ಎಂದೂ ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಚಿತ್ರಮಂದಿರಗಳಲ್ಲಿ ಹೌಸ್​ಫುಲ್ ಪ್ರದರ್ಶನಕ್ಕೆ ಅವಕಾಶ; ಜಗ್ಗೇಶ್ ಪುತ್ರ ಗುರುರಾಜ್ ನಟನೆಯ ‘ಕಾಗೆ ಮೊಟ್ಟೆ’ ಬಿಡುಗಡೆ

ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್​​ ಸಿಬ್ಬಂದಿ!

Published On - 12:14 pm, Fri, 1 October 21

ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು
ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?