Swachh Bharat Mission Urban 2.0 ಸ್ವಚ್ಛ ಭಾರತ ಮಿಷನ್-ಅರ್ಬನ್, ಅಮೃತ್ ಯೋಜನೆಯ ಎರಡನೇ ಹಂತಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

PM Narendra Modi: ಈ ಎರಡನೇ ಹಂತದಲ್ಲಿ, ನಾವು ಕೊಳಚೆ ಮತ್ತು ಸುರಕ್ಷಾ ನಿರ್ವಹಣೆಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ನಗರಗಳನ್ನು ಜಲ-ಸುರಕ್ಷಿತವಾಗಿಸುತ್ತೇವೆ ಮತ್ತು ಕೊಳಕು ತೋಡುಗಳು ನದಿಗಳಲ್ಲಿ ವಿಲೀನವಾಗದಂತೆ ನೋಡಿಕೊಳ್ಳುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

Swachh Bharat Mission Urban 2.0 ಸ್ವಚ್ಛ ಭಾರತ ಮಿಷನ್-ಅರ್ಬನ್, ಅಮೃತ್ ಯೋಜನೆಯ ಎರಡನೇ ಹಂತಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Oct 01, 2021 | 1:41 PM

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು (ಅಕ್ಟೋಬರ್ 1) ಸ್ವಚ್ಛ ಭಾರತ ಮಿಷನ್-ಅರ್ಬನ್ (Swachh Bharat Mission-Urban) ಮತ್ತು ಅಟಲ್ ಮಿಷನ್ ಫಾರ್ ರಿಜುವೆನೇಶನ್ ಅಂಡ್ ಅರ್ಬನ್ ಟ್ರಾನ್ಸ್ ಫಾರ್ಮೇಶನ್ (AMRUT) ನ ಎರಡನೇ ಹಂತಕ್ಕೆ ಚಾಲನೆ ನೀಡಿದ್ದಾರೆ.  ‘ಸ್ವಚ್ಛ ಭಾರತ ಮಿಷನ್ 2.0 ನ ಗುರಿ ನಗರಗಳನ್ನು ಕಸ ಮುಕ್ತವಾಗಿಸುವುದು. ಈ ಎರಡನೇ ಹಂತದಲ್ಲಿ, ನಾವು ಕೊಳಚೆ ಮತ್ತು ಸುರಕ್ಷಾ ನಿರ್ವಹಣೆಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದೇವೆ. ನಗರಗಳನ್ನು ಜಲ-ಸುರಕ್ಷಿತವಾಗಿಸುತ್ತೇವೆ ಮತ್ತು ಕೊಳಕು ತೋಡುಗಳು ನದಿಗಳಲ್ಲಿ ವಿಲೀನವಾಗದಂತೆ ನೋಡಿಕೊಳ್ಳುತ್ತೇವೆ’ ಎಂದು ದೆಹಲಿಯಲ್ಲಿ ಸ್ವಚ್ಛ ಭಾರತ ಮಿಷನ್-ಅರ್ಬನ್ 2.0 ಮತ್ತು ಅಮೃತ್ 2.0 ಚಾಲನೆ ಸಮಾರಂಭದಲ್ಲಿ ಮೋದಿ ಹೇಳಿದರು.

ಸ್ವಚ್ಛ ಭಾರತ ಮಿಷನ್ (ಸ್ವಚ್ಛ ಭಾರತ ಮಿಷನ್) ಯಶಸ್ವಿಯಾದದ್ದು ಲಕ್ಷಗಟ್ಟಲೆ ಶೌಚಾಲಯಗಳನ್ನು ನಿರ್ಮಿಸಿದ ಕಾರಣ ಅಥವಾ ತ್ಯಾಜ್ಯ ಸಂಸ್ಕರಣೆಯನ್ನು 70 ಪ್ರತಿಶತಕ್ಕೆ ಏರಿಸಲಾಯಿತು. ಅದೇ ವೇಳೆ ಪ್ರಧಾನಿ ಮೋದಿ ಈ ಯೋಜನೆಯನ್ನು ‘ಜನ ಆಂದೋಲನ’ವನ್ನಾಗಿ ಮಾಡಿದ್ದರು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಸ್ವಚ್ಛ ಭಾರತ ಮಿಷನ್ 2.0 ಬಿಡುಗಡೆ ಸಮಾರಂಭದಲ್ಲಿ ಹೇಳಿದರು.

ಈ ಪ್ರಮುಖ ಕಾರ್ಯಕ್ರಮಗಳು ಭಾರತವನ್ನು ವೇಗವಾಗಿ ನಗರೀಕರಣಗೊಳಿಸುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವತ್ತ ಸಾಗುವ ಹೆಜ್ಜೆಯನ್ನು ಸೂಚಿಸುತ್ತವೆ. 2030 ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿಯವರ ಕಛೇರಿಯು ಸೆಪ್ಟೆಂಬರ್ 30 ರಂದು ಹೇಳಿದೆ.

ಸ್ವಚ್ಛ ಭಾರತ ಮಿಷನ್ 2.0 ಎಲ್ಲಾ ನಗರಗಳನ್ನು ‘ಕಸ ಮುಕ್ತ’ ಮಾಡಲು ಮತ್ತು ಅಮೃತ್ ಅಡಿಯಲ್ಲಿರುವ ನಗರಗಳನ್ನು ಹೊರತುಪಡಿಸಿ ಎಲ್ಲಾ ನಗರಗಳಲ್ಲಿ ಬೂದು ಮತ್ತು ಕಪ್ಪು ನೀರಿನ ನಿರ್ವಹಣೆಯನ್ನು ಖಾತ್ರಿಪಡಿಸುತ್ತದೆ. ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳನ್ನು “ODF+” ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವಲ್ಲಿ ODF ++ ” ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯವನ್ನು ಸಾಧಿಸುವುದಾಗಿದೆ.

ಒಂದು ದಿನದಲ್ಲಿ ಒಬ್ಬ ವ್ಯಕ್ತಿಯು ಬಯಲಿನಲ್ಲಿ ಮಲವಿಸರ್ಜನೆ ಮಾಡುವುದು ಅಥವಾ ಮೂತ್ರ ವಿಸರ್ಜನೆ ಮಾಡುವುದು ಕಂಡುಬಂದಿಲ್ಲ ಮತ್ತು ಎಲ್ಲಾ ಸಮುದಾಯ ಮತ್ತು ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುವುದಾದರೆ ಒಂದು ಪ್ರದೇಶವನ್ನು ಒಡಿಎಫ್+ ಎಂದು ಘೋಷಿಸಲಾಗಿದೆ. ODF ++ ಎಂದು ಘೋಷಿಸಲು ತ್ಯಾಜ್ಯಮತ್ತು ಒಳಚರಂಡಿಯ ಸುರಕ್ಷಿತ ನಿರ್ವಹಣೆ ಮತ್ತು ಸಂಸ್ಕರಣೆಯ ಅಗತ್ಯವಿರುತ್ತದೆ, ಚರಂಡಿಗಳು, ಜಲಮೂಲಗಳು ಅಥವಾ ತೆರೆದ ಪ್ರದೇಶಗಳಲ್ಲಿ ಮಲವಿಸರ್ಜನೆ ಅಥವಾ ಕಸ ರಾಶಿ ಹಾಕುವಂತಿಲ್ಲ.

ಸ್ವಚ್ಛ ಭಾರತ ಮಿಷನ್ ದೇಶದಲ್ಲಿ ಬಯಲು ಶೌಚವನ್ನು ತೊಡೆದುಹಾಕುವ ಗುರಿಯನ್ನು ಹೊಂದಿದೆ. ಈ ಅಭಿಯಾನವು ಘನ ತ್ಯಾಜ್ಯದ ಮೂಲ ವಿಭಜನೆ, 3R ಗಳ ತತ್ವಗಳನ್ನು ಬಳಸುವುದು (ಕಡಿಮೆ ಮಾಡುವುದು, ಮರುಬಳಕೆ ಮಾಡುವುದು, ರೀಸೈಕಲ್ ಮಾಡುವುದು) ಆಗಿದೆ. ಎಲ್ಲಾ ರೀತಿಯ ಘನ ತ್ಯಾಜ್ಯಗಳ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತದೆ.  SBM-U 2.0 ನ ವೆಚ್ಚ ಸುಮಾರು ₹ 1.41 ಲಕ್ಷ ಕೋಟಿ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಮೃತ್ 2.0 ಸುಮಾರು 2.68 ಕೋಟಿ ಟ್ಯಾಪ್ ಸಂಪರ್ಕಗಳನ್ನು ಒದಗಿಸುವ ಮೂಲಕ ಸುಮಾರು 4,700 ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಮನೆಗಳಿಗೆ 100 ಪ್ರತಿಶತ ನೀರಿನ ಪೂರೈಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು 500 ಅಮೃತ್ ನಗರಗಳಲ್ಲಿ ಸುಮಾರು 2.64 ಕೋಟಿ ಒಳಚರಂಡಿ/ಕೊಳಚೆ ಸಂಪರ್ಕಗಳನ್ನು ಒದಗಿಸುವ ಮೂಲಕ 100 ಶೇಕಡಾ ಒಳಚರಂಡಿ ಮತ್ತು ಕೊಳಚೆನೀರು ಹರಿದು ಹೋಗಲು ವ್ಯವಸ್ಥೆ ಒದಗಿಸುತ್ತದೆ. ಇದರಿಂದ 10.5 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ.

ಇದು ವೃತ್ತಾಕಾರದ ಆರ್ಥಿಕತೆಯ ತತ್ವಗಳನ್ನು ಅಳವಡಿಸಿಕೊಳ್ಳುತ್ತದೆ ಮತ್ತು ಮೇಲ್ಮೈ ಮತ್ತು ಅಂತರ್ಜಲ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ. ಪೇ ಜಲ್ ಸರ್ವೇಕ್ಷಣ್ (ಕುಡಿಯುವ ನೀರಿನ ಸಮೀಕ್ಷೆ) ನಗರಗಳ ನಡುವೆ ಸ್ಪರ್ಧೆಯನ್ನು ಉತ್ತೇಜಿಸಲು ನಡೆಸಲಾಗುತ್ತದೆ. ಅಮೃತ್ 2.0 ವೆಚ್ಚ ಸುಮಾರು ₹ 2.87 ಲಕ್ಷ ಕೋಟಿ.

ಇದನ್ನೂ ಓದಿ: Swachh Bharat Mission Urban 2.0: ನಗರಗಳಲ್ಲಿ ಸ್ವಚ್ಛ ಭಾರತ ಮಿಷನ್ 2.0 ಗೆ ಶುಕ್ರವಾರ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ತಾಜಾ ಸುದ್ದಿ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
ಜೈಲಿನಲ್ಲಿ ದರ್ಶನ್​ನ​ ಅಪ್ಪಿ ಕಣ್ಣೀರು ಹಾಕಿದ ತಾಯಿ ಮೀನಾ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Devotional: ಸನಾತನ ಧರ್ಮದಲ್ಲಿ 108ರ ಮಹತ್ವ ತಿಳಿದುಕೊಳ್ಳಿ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
Daily Horoscope: ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ