Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಏರಿಕೆಯಾಗುತ್ತಿರುವ ಕೊವಿಡ್​ 19; ಹಳದಿ ಅಲರ್ಟ್ ಘೋಷಣೆ, ಶಾಲೆ-ಕಾಲೇಜು ಬಂದ್​

ನಿರ್ಮಾಣ ಕಾಮಗಾರಿ ನಡೆಯುತ್ತದೆ. ಪಬ್ಲಿಕ್​ ಪಾರ್ಕ್​ಗಳು, ಹೊರವಲಯದಲ್ಲಿ ನಡೆಯುವ ಯೋಗ, ಸಲೂನ್​ ಮತ್ತು ಬ್ಯೂಟಿಪಾರ್ಲರ್​ಗಳು ಒಪನ್​ ಇರುತ್ತವೆ.

ದೆಹಲಿಯಲ್ಲಿ ಏರಿಕೆಯಾಗುತ್ತಿರುವ ಕೊವಿಡ್​ 19; ಹಳದಿ ಅಲರ್ಟ್ ಘೋಷಣೆ, ಶಾಲೆ-ಕಾಲೇಜು ಬಂದ್​
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Dec 28, 2021 | 5:25 PM

ದೆಹಲಿಯಲ್ಲಿ ಕೊವಿಡ್​ 19 ಮತ್ತು ಒಮಿಕ್ರಾನ್ ವೈರಾಣುಗಳ ಸೋಂಕಿತರ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ, ನಗರದಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ(Graded Response Action Plan)ಯಲ್ಲಿ ಹಳದಿ ಅಲರ್ಟ್​ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಈ ಹಳದಿ ಅಲರ್ಟ್​ ಘೋಷಣೆಯಾಗಲಿದ್ದು, ಶಾಲೆ, ಕಾಲೇಜುಗಳು, ಜಿಲ್​, ಸ್ಪಾಗಳು ಬಂದ್ ಆಗಲಿವೆ. ಹಾಗೇ, ಮೆಟ್ರೋ, ಬಸ್​ಗಳೆಲ್ಲ ಶೇ.50ರಷ್ಟು ಸಾಮರ್ಥ್ಯದಲ್ಲಿ ಸಂಚರಿಸಲಿವೆ. ದೆಹಲಿಯಲ್ಲಿ 24 ಗಂಟೆಯಲ್ಲಿ 331 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ಹೀಗಾಗಿ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದೆ. 

ನಾಳೆಯಿಂದ ದೆಹಲಿಯಲ್ಲಿ ಯಾವುದೆಲ್ಲ ಕ್ಲೋಸ್? 1. ಸಿನಿಮಾ ಹಾಲ್​, ಮಲ್ಟಿಪ್ಲೆಕ್ಸ್​ಗಳು, ಅಡಿಟೋರಿಯಂಗಳು ಬಂದ್​ 2. ಸ್ಪಾಗಳು, ಜಿಮ್​, ಯೋಗಾ ಸಂಸ್ಥೆಗಳು, ಮನರಂಜನಾ ಪಾರ್ಕ್​ಗಳೂ ಕ್ಲೋಸ್​. 3. ಶಾಲೆ-ಕಾಲೇಜುಗಳು, ತರಬೇತಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳೂ ಕಾರ್ಯನಿರ್ವಹಿಸುವುದಿಲ್ಲ 4. ಸಾಮಾಜಿಕ, ರಾಜಕೀಯ, ಧಾರ್ಮಿಕ ಕಾರ್ಯಕ್ರಮಗಳು, ಮನರಂಜನಾ ಕಾರ್ಯಕ್ರಮಗಳು, ಸಾರ್ವಜನಿಕ ಹಬ್ಬ ಆಚರಣೆಗಳು ನಿಷಿದ್ಧ.

ಯಾವುದೆಲ್ಲ ಕಾರ್ಯ ನಿರ್ವಹಿಸುತ್ತವೆ? 1.ಹೋಟೆಲ್​ಗಳು ಕಾರ್ಯನಿರ್ವಹಿಸುತ್ತವೆ. ಆದರೆ ಹೋಟೆಲ್​ ಒಳಗೆ ಔತಣಕೂಟದ ಹಾಲ್​, ಕಾನ್ಫರೆನ್ಸ್ ಹಾಲ್​ಗಳು ಕ್ಲೋಸ್ ಇರುತ್ತವೆ. 2. ರೆಸ್ಟೋರೆಂಟ್​ಗಳು ಬೆಳಗ್ಗೆ 8ಗಂಟೆಯಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸುತ್ತವೆ. ಆದರೆ ಶೇ.50ರಷ್ಟು ಸಾಮರ್ಥ್ಯಕ್ಕೆ ಅವಕಾಶ. ಹಾಗೇ, ಬಾರ್​ಗೂ ಇದೇ ಅನ್ವಯ ಆಗುತ್ತವೆ. ಆದರೆ ಬಾರ್​ಗಳು ಮಧ್ಯಾಹ್ನ 12ರಿಂದ ರಾತ್ರಿ 10ರವರೆಗೆ ಮಾತ್ರ ತೆರೆದಿರುತ್ತವೆ. 3. ದೆಹಲಿ ಮೆಟ್ರೋ ಕೂಡ ಶೇ.50ರಷ್ಟು ಸೀಟ್​ಗಳ ಸಾಮರ್ಥ್ಯದಲ್ಲಿ ಸಂಚಾರ ಮಾಡುತ್ತದೆ. ಇನ್ನು ದೆಹಲಿಯಿಂದ ಬೇರೆ ರಾಜ್ಯಗಳಿಗೆ ಸಂಚರಿಸುವ ಬಸ್​ಗಳಿಗೂ ಇದೇ ನಿಯಮ ಅನ್ವಯ ಆಗುತ್ತದೆ. 4. ಆಟೋ, ಇ ರಿಕ್ಷಾ, ಟ್ಯಾಕ್ಸಿ, ಸೈಕಲ್​ ರಿಕ್ಷಾಗಳಲ್ಲಿ ಇಬ್ಬರು ಮಾತ್ರ ಪ್ರಯಾಣ ಮಾಡಬಹುದು. 5. ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣಗಳು, ಈಜುಕೊಳಗಳು ಬಂದ್ ಇರುತ್ತವೆ. ಆದರೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳನ್ನು ಆಯೋಜಿಸಬಹುದು. 6. ಖಾಸಗಿ ಕಚೇರಿಗಳು ಬೆಳಗ್ಗೆ 9 ರಿಂದ ಸಂಜೆ 5ವರೆಗೆ ಕೆಲಸ ಮಾಡಬಹುದು. ಆದರೆ ಅರ್ಧದಷ್ಟು ಮಾತ್ರ ಉದ್ಯೋಗಿಗಳು ಆಫೀಸ್​ಗೆ ಬರಬೇಕು.

ಇನ್ನುಳಿದಂತೆ ನಿರ್ಮಾಣ ಕಾಮಗಾರಿ ನಡೆಯುತ್ತದೆ. ಪಬ್ಲಿಕ್​ ಪಾರ್ಕ್​ಗಳು, ಹೊರವಲಯದಲ್ಲಿ ನಡೆಯುವ ಯೋಗ, ಸಲೂನ್​ ಮತ್ತು ಬ್ಯೂಟಿಪಾರ್ಲರ್​ಗಳು ಒಪನ್​ ಇರುತ್ತವೆ. ದೆಹಲಿಯಲ್ಲಿ ಇತ್ತೀಚೆಗಷ್ಟೇ ನೈಟ್​ ಕರ್ಫ್ಯೂ ಹೇರಲಾಗಿದೆ. ಹಿಂದೊಮ್ಮೆ ಕರೊನಾ ಭೀಕರತೆ ಕಂಡಿದ್ದ ದೆಹಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನಮ್ಮಲ್ಲಿ ಆಕ್ಸಿಜನ್​, ಬೆಡ್​ ವ್ಯವಸ್ಥೆ ಮಾಡಿಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ತಿಳಿಸಿದ್ದಾರೆ.

ಇದನ್ನೂ ಓದಿ: Konkani : ಅಚ್ಚಿಗೂ ಮೊದಲು ; ಮಹಾಬಳೇಶ್ವರ ಸೈಲ್ ಅವರ ‘ಅದೃಷ್ಟ’ ಕಾದಂಬರಿ ಇಂದಿನಿಂದ ಲಭ್ಯ

ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಸಣ್ಣ ವಯಸ್ಸಲ್ಲಿ ಮಾಡಿದ್ದ ಆಣೆ: ಕೊಟ್ಟ ಮಾತು ನಡೆಸಿಕೊಟ್ಟ ಧ್ರುವ ಸರ್ಜಾ
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಯುವತಿಯರೊಂದಿಗೆ ಮಕ್ಕಳನ್ನು ಹೆಗಲ ಮೇಲೆ ಹೊತ್ತು ಕುಣಿದ ಗೃಹಿಣಿಯರು
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಕುಂಭಮೇಳ ಎಫೆಕ್ಟ್: ನಾಗಾಸಾಧು ವೇಷ ಹಾಕಿಕೊಂಡು ಹೋಳಿ ಆಚರಣೆ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಸಾಯುವ ಮುನ್ನ ದಿವ್ಯಾ ಕುಮಾರ್ 4 ಬಾಲ್​ನಲ್ಲಿ 20 ರನ್ ಬಾರಿಸಿದ ವಿಡಿಯೋ
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಮಾರ್ಚ್ 8ರಂದು ನಾನು ಮತ್ತು ಸಿಎಂ ಇಬ್ಬರೂ ಲಭ್ಯರಿರಲಿಲ್ಲ: ಶಿವಕುಮಾರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಮಸ್ಯೆ ಒಪ್ಪಿಕೊಂಡ ಬಿಬಿಎಂಪಿ ಕಮಿಷನರ್
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
ಹೋಳಿ ವೇಳೆ ಪೊಲೀಸ್ ಅಧಿಕಾರಿಗೆ ಡ್ಯಾನ್ಸ್ ಮಾಡಲು ತೇಜ್ ಪ್ರತಾಪ್ ಒತ್ತಾಯ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
‘ಅಪ್ಪು ಹವಾ’: ಸ್ಟಾರ್ ನಟರ ಹೊಸ ಸಿನಿಮಾಕ್ಕೂ ಸಿಗಲ್ಲ ಇಂಥಾ ಸ್ವಾಗತ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಅಧ್ಯಕ್ಷರು ಊಟಕ್ಕೆ ಕರೆದರೆ ಹೋಗದಿರಲಾಗುತ್ತದೆಯೇ? ಸತೀಶ್ ಜಾರಕಿಹೊಳಿ
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್
ಬೆಂಗಳೂರಿನ ರೈಲಿನೊಳಗೆ ಯುವಕನಿಂದ ಮೂತ್ರ ವಿಸರ್ಜನೆ; ವಿಡಿಯೋ ವೈರಲ್