ಅಪ್ಪನನ್ನು ಉಳಿಸಿಕೊಳ್ಳಲು ತನ್ನ ಲಿವರ್ ನೀಡಿದ 17 ವರ್ಷದ ಬಾಲಕಿ, ತಂದೆ ಪ್ರಾಣ ಕಾಪಾಡಲು ಮಗಳು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ
ಹೆಣ್ಣು ಮಕ್ಕಳು ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಇಷ್ಟಪಡುತ್ತಾರೆ. ಹೆಣ್ಮಕ್ಳಿಗೆ ಅಪ್ಪ ಅಂದ್ರೆ ಅಚ್ಚುಮೆಚ್ಚು. ಹೌದು....ಕೇರಳದಲ್ಲಿ ಓರ್ವ 17 ವರ್ಷದ ಬಾಲಕಿ ತನ್ನ ತಂದೆಗೆ ಲೀವರ್ ದಾನ ಮಾಡಿ ಪ್ರಾಣ ಉಳಿಸಿದ್ದಾಳೆ. ಈ ಮೂಲಕ ಅಪ್ಪ-ಮಗಳ ಬಾಂಧವ್ಯವನ್ನು ಸಾಬೀತು ಮಾಡಿದ್ದಾಳೆ.
Updated on:Feb 21, 2023 | 4:58 PM

ಕೇರಳದಲ್ಲಿ ಓರ್ವ 17 ವರ್ಷದ ಬಾಲಕಿ ತನ್ನ ತಂದೆಗೆ ಲೀವರ್ ದಾನ ಮಾಡಿ ಪ್ರಾಣ ಉಳಿಸಿದ್ದಾಳೆ. ಈ ಮೂಲಕ ಅಪ್ಪ-ಮಗಳ ಬಾಂಧವ್ಯವನ್ನು ಸಾಬೀತು ಮಾಡಿದ್ದಾಳೆ.

ಹಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಂದೆಗೆ 17 ವರ್ಷದ ಬಾಲಕಿ ಲಿವರ್ ದಾನ ಮಾಡಿದ್ದಾಳೆ. ಈ ಮೂಲಕ ಭಾರತದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನ್ನುವ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಅಪ್ರಾಪ್ತ ವಯಸ್ಸಿನವರು ಬೇರೊಬ್ಬರಿಗೆ ಅಂಗಾಂಗ ದಾನ ಮಾಡುವುದು ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ದೇವಾನಂದಾ ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಳು. ವಿದ್ಯಾರ್ಥಿ ಕೋರಿದ ಮನವಿಯನ್ನು ಪುರಸ್ಕರಿಸಿದ್ದ ಕೋರ್ಟ್ ಲಿವರ್ ದಾನ ಮಾಡಲು ಅನುಮತಿ ನೀಡಿತ್ತು.

ಬಳಿಕ ದೇವಾನಂದಾ ತನ್ನ ವಿವರ್ ದಾನ ಮಾಡಲು ವೈದ್ಯರ ಸಲಹೆಯಂತೆ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಳು. ಅಲ್ಲದೇ ಜಿಮ್ನಲ್ಲಿ ವರ್ಕೌಟ್ ಸಹ ಮಾಡಿದ್ದಳು. ಹೀಗೆ ತಂದೆಯನ್ನು ಉಳಿಸಿಕೊಳ್ಳಲು ಈ ಬಾಲಕಿ ಕೊಟ್ಟ ಪರಿಶ್ರಮವನ್ನು ಆಸ್ಪತ್ರೆ ವೈದ್ಯರು ಮೆಚ್ಚಿ ಯಾವುದೇ ಶುಲ್ಕ ತೆಗೆದುಕೊಳ್ಳದೇ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿರುವ 48 ವರ್ಷದ ಪ್ರತೀಶ್ ಅವರಿಗೆ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ (Operation) ನಡೆಸದೇ ಬೇರೆ ದಾರಿಯಿಲ್ಲ ಎಂದು ವೈದ್ಯರು ಹೇಳಿದ್ದರು. ದಾನಿಗಳಿಗೆ ಎಷ್ಟೇ ಹುಡುಕಾಡಿದರೂ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಕೊನೆಗೆ ಮಗಳೇ (Daughter) ಅಪ್ಪನಿಗೆ ಲಿವರ್ ದಾನ ಮಾಡಿದ್ದಾಳೆ. ಫೆಬ್ರವರಿ 9ರಂದು ಇಲ್ಲಿನ ಆಲುವಾ ಬಳಿಯ ರಾಜಗಿರಿ ಆಸ್ಪತ್ರೆಯಲ್ಲಿ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ.

ತಂದೆಯನ್ನು ಉಳಿಸಿಕೊಳ್ಳಲು ಈ ಬಾಲಕಿ ಕೊಟ್ಟ ಪರಿಶ್ರಮವನ್ನು ಆಸ್ಪತ್ರೆ ವೈದ್ಯರು ಮೆಚ್ಚಿ ಯಾವುದೇ ಶುಲ್ಕ ತೆಗೆದುಕೊಳ್ಳದೇ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಇತ್ತೀಚೆಗೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕಿಡ್ನಿ ದಾನ ಮಾಡುವ ಮೂಲಕ ಮರುಜೀವ ನೀಡಿರುವ ಅವರ ಪುತ್ರಿ ರೋಹಿಣಿ ಆಚಾರ್ಯ ಎಲ್ಲರ ಪ್ರಶಂಶೆಗೆ ಪಾತ್ರರಾಗಿದ್ದರು.
Published On - 4:52 pm, Tue, 21 February 23

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್ ಮಾಧ್ಯಮದಿಂದ. ಒನ್ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.
Read More



