- TV9 Kannada Photo gallery Akshay Tritiya, Prabhu Shri Ramlalla Sarkar has been offered the bhog of mangoes
ಅಕ್ಷಯ ತೃತೀಯ; 11000 ಮಾವಿನ ಹಣ್ಣುಗಳಿಂದ ಅಯೋಧ್ಯಾ ರಾಮನಿಗೆ ಅಲಂಕಾರ
ಪ್ರಾಣ ಪ್ರತಿಷ್ಠೆಯ ನಂತರ ಮೊದಲ ಬಾರಿಗೆ ರಾಮಮಂದಿರದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹಾರಾಷ್ಟ್ರದ ರಾಮಭಕ್ತ ಶ್ರೀ ವಿನಾಯಕ ಸೇಠ್ ಭಾಲಚಂದ್ರ ಕಂಚಿ ಕುಟುಂಬದವರು ವಿಶೇಷ ಪ್ರಸಾದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 12 ಗಂಟೆಗೆ ಆರತಿ ಪೂಜೆಯ ನಂತರ ಮೊದಲ ನೈವೇದ್ಯವಾಗಿ ಬಾಲರಾಮನಿಗೆ ಮಾವಿನ ಹಣ್ಣನ್ನು ಅರ್ಪಿಸಲಾಯಿತು.
Updated on: May 11, 2024 | 6:32 PM

ಪ್ರಾಣ ಪ್ರತಿಷ್ಠೆಯ ನಂತರ ಮೊದಲ ಬಾರಿಗೆ ರಾಮಮಂದಿರದಲ್ಲಿ ಅಕ್ಷಯ ತೃತೀಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

11000 ಮಾವಿನ ಹಣ್ಣುಗಳಿಂದ ಅಯೋಧ್ಯಾ ರಾಮನನ್ನು ಅಲಂಕರಿಸಿದ ಸುಂದರ ಕ್ಷಣದ ಫೋಟೋಗಳನ್ನು ಅಯೋಧ್ಯಾ ರಾಮಮಂದಿರದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ದೇವಾಲಯದ ಆವರಣವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದರೆ, ಗರ್ಭಗುಡಿಯ ಮುಖ್ಯದ್ವಾರದಲ್ಲಿ ಹಣ್ಣುಗಳ ಮಾಲೆಗಳು ದೇವಾಲಯದ ವೈಭವವನ್ನು ಹೆಚ್ಚಿಸಿದವು.

ಪುಣೆಯಿಂದ ಅಯೋಧ್ಯೆ ರಾಮಮಂದಿರಕ್ಕೆ 11000 ಅಲ್ಫಾನ್ಸೋ ಮಾವಿನ ಹಣ್ಣುಗಳ ಬುಟ್ಟಿಗಳನ್ನು ಕಳುಹಿಸಲಾಗಿತ್ತು.

ಅಕ್ಷಯ ತೃತೀಯದ ಅಂಗವಾಗಿ ಅಯೋಧ್ಯಾ ರಾಮನಿಗೆ ವಿಶೇಷ ಪೂಜೆ ಸಲ್ಲಿಸಿ, ಈ ಋತುವಿನಲ್ಲಿ ಬೆಳೆದ ಮೊದಲ ಹಣ್ಣಿನಿಂದ ಗರ್ಭಗುಡಿಯನ್ನು ಅಲಂಕರಿಸಲಾಯಿತು.

ಮಹಾರಾಷ್ಟ್ರದ ರಾಮಭಕ್ತ ಶ್ರೀ ವಿನಾಯಕ ಸೇಠ್ ಭಾಲಚಂದ್ರ ಕಂಚಿ ಕುಟುಂಬದವರು ವಿಶೇಷ ಪ್ರಸಾದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 12 ಗಂಟೆಗೆ ರಾಮಲಲ್ಲ ಆರತಿ ಪೂಜೆಯ ನಂತರ ಮೊದಲ ನೈವೇದ್ಯವಾಗಿ ಮಾವಿನ ಹಣ್ಣನ್ನು ಅರ್ಪಿಸಲಾಯಿತು.

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



