AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI ಮೂಲಕ ಬಿಎಂಟಿಸಿಗೆ ಹರಿದುಬಂತು 1 ಕೋಟಿ ರೂ., ದೇಶದಲ್ಲೇ ಮೊದಲು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್​​ ನಲ್ಲಿ ಯುಪಿಐ ಪಾವತಿಯ ಮೂಲಕ ದಿನಕ್ಕೆ ಒಂದು ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಹೊಸ ದಾಖಲೆ ನಿರ್ಮಾಣವಾಗಿದೆ. ಫೆಬ್ರವರಿಯಲ್ಲಿ ಕಳೆದ ಮೂರು ದಿನಗಳಿಂದ ಈ ಸಾಧನೆ ಸಾಧ್ಯವಾಗಿದೆ. ಇದು ಚಿಲ್ಲರೆ ಸಮಸ್ಯೆಗೆ ಪರಿಹಾರವಾಗಿದ್ದು, ನಿರ್ವಾಹಕರು ಮತ್ತು ಪ್ರಯಾಣಿಕರ ನಡುವಿನ ಚಿಲ್ಲರೆ ಜಗಳಕ್ಕೆ ತೆರೆ ಎಳೆದಿದೆ. ಬಿಎಂಟಿಸಿಯ ಯಶಸ್ಸು ಇತರ ಸಾರಿಗೆ ನಿಗಮಗಳಿಗೆ ಮಾದರಿಯಾಗಿದೆ.

Kiran Surya
| Edited By: |

Updated on: Feb 07, 2025 | 8:15 AM

Share
 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್​​ನಲ್ಲಿ ಬೆಂಗಳೂರು ಜನತೆಯ ಜೀವನಾಡಿಯಾಗಿದೆ. ಪ್ರತಿದಿನ  ನಲವತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆರು ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತದೆ. ಆದರೆ, ಅದರಲ್ಲಿ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಕಲೆಕ್ಷನ್ ಆಗುವ ಹೊಸ ದಾಖಲೆ ಸೃಷ್ಟಿಯಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್​​ನಲ್ಲಿ ಬೆಂಗಳೂರು ಜನತೆಯ ಜೀವನಾಡಿಯಾಗಿದೆ. ಪ್ರತಿದಿನ ನಲವತ್ತು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆರು ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತದೆ. ಆದರೆ, ಅದರಲ್ಲಿ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಕಲೆಕ್ಷನ್ ಆಗುವ ಹೊಸ ದಾಖಲೆ ಸೃಷ್ಟಿಯಾಗಿದೆ.

1 / 6
ಈ ಹಿಂದೆ ಬಿಎಂಟಿಸಿ ಯಪಿಐ ಮೂಲಕ ಪ್ರತಿ ತಿಂಗಳಿಗೆ 8 ರಿಂದ 10 ಕೋಟಿ ಕಲೆಕ್ಷನ್ ಮಾಡ್ತಿತ್ತು, ಆದರೆ ಜನವರಿ 4 ರ ನಂತರ ಯುಪಿಐ ಮ‌ೂಲಕ ಟಿಕೆಟ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇದೀಗ ಕಳೆದ ಮೂರು ದಿನಗಳಿಂದ ಅಂದರೆ ಫೆಬ್ರವರಿಯಲ್ಲಿ ಪ್ರತಿದಿನ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಬಿಎಂಟಿಸಿಗೆ ಬರುತ್ತಿದೆ.

ಈ ಹಿಂದೆ ಬಿಎಂಟಿಸಿ ಯಪಿಐ ಮೂಲಕ ಪ್ರತಿ ತಿಂಗಳಿಗೆ 8 ರಿಂದ 10 ಕೋಟಿ ಕಲೆಕ್ಷನ್ ಮಾಡ್ತಿತ್ತು, ಆದರೆ ಜನವರಿ 4 ರ ನಂತರ ಯುಪಿಐ ಮ‌ೂಲಕ ಟಿಕೆಟ್ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇದೀಗ ಕಳೆದ ಮೂರು ದಿನಗಳಿಂದ ಅಂದರೆ ಫೆಬ್ರವರಿಯಲ್ಲಿ ಪ್ರತಿದಿನ ಯುಪಿಐ ಮೂಲಕ ಒಂದು ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಬಿಎಂಟಿಸಿಗೆ ಬರುತ್ತಿದೆ.

2 / 6
ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಆದಾಯ ಸಂಗ್ರಹಿಸುವ ಮೂಲಕ ಬಿಎಂಟಿಸಿ ಮೂರೂ ಸಾರಿಗೆ ನಿಗಮಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಈ ಮೂಲಕ ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದಂತೆ ಆಗಿದೆ. ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ಕಿರಿಕ್ ಯುಪಿಐನಿಂದ ನಿಂತಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಆದಾಯ ಸಂಗ್ರಹಿಸುವ ಮೂಲಕ ಬಿಎಂಟಿಸಿ ಮೂರೂ ಸಾರಿಗೆ ನಿಗಮಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ. ಈ ಮೂಲಕ ಚಿಲ್ಲರೆ ಸಮಸ್ಯೆಗೆ ಬ್ರೇಕ್ ಹಾಕಿದಂತೆ ಆಗಿದೆ. ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ಕಿರಿಕ್ ಯುಪಿಐನಿಂದ ನಿಂತಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

3 / 6
ಬಿಎಂಟಿಸಿಯಲ್ಲಿ 6500 ಬಸ್​ಗಳಿವೆ, ಆ ಬಸ್​ಗಳಿಂದ ಪ್ರತಿದಿನ 5 ರಿಂದ 6 ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಹರಿದು ಬರುತ್ತದೆ. ತಿಂಗಳಿಗೆ 180 ಕೋಟಿಯಷ್ಟು ಸಂಗ್ರಹವಾದರೆ, ಅದರಲ್ಲಿ 90 ಕೋಟಿಯಷ್ಟು ಶಕ್ತಿ ಯೋಜನೆ ಟಿಕೆಟ್ ಕಲೆಕ್ಷನ್ ಆಗುತ್ತಿದೆ.

ಬಿಎಂಟಿಸಿಯಲ್ಲಿ 6500 ಬಸ್​ಗಳಿವೆ, ಆ ಬಸ್​ಗಳಿಂದ ಪ್ರತಿದಿನ 5 ರಿಂದ 6 ಕೋಟಿ ರೂಪಾಯಿ ಟಿಕೆಟ್ ಮೂಲಕ ಆದಾಯ ಹರಿದು ಬರುತ್ತದೆ. ತಿಂಗಳಿಗೆ 180 ಕೋಟಿಯಷ್ಟು ಸಂಗ್ರಹವಾದರೆ, ಅದರಲ್ಲಿ 90 ಕೋಟಿಯಷ್ಟು ಶಕ್ತಿ ಯೋಜನೆ ಟಿಕೆಟ್ ಕಲೆಕ್ಷನ್ ಆಗುತ್ತಿದೆ.

4 / 6
ಅದರಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಕಲೆಕ್ಷನ್ ಆಗುತ್ತಿರುವುದು ವಿಶೇಷ. ಬಿಎಂಟಿಸಿಯ ಎಲ್ಲಾ ಬಸ್​ಗಳಲ್ಲೂ UPI ಕೋಡ್ ಅಳವಡಿಸಲಾಗಿದೆ. ಇದರಿಂದ ಬಿಎಂಟಿಸಿಯಲ್ಲಿ ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ಮುಖಂಡ ಜಗದೀಶ್ ಇದಕ್ಕೆ ನಮ್ಮ ಬಿಎಂಟಿಸಿ ನಿರ್ವಾಹಕರು ಕಾರಣ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ಅದರಲ್ಲಿ ಒಂದು ಕೋಟಿ ರೂಪಾಯಿ ಯುಪಿಐ ಮೂಲಕ ಕಲೆಕ್ಷನ್ ಆಗುತ್ತಿರುವುದು ವಿಶೇಷ. ಬಿಎಂಟಿಸಿಯ ಎಲ್ಲಾ ಬಸ್​ಗಳಲ್ಲೂ UPI ಕೋಡ್ ಅಳವಡಿಸಲಾಗಿದೆ. ಇದರಿಂದ ಬಿಎಂಟಿಸಿಯಲ್ಲಿ ಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ಈ ಬಗ್ಗೆ ಮಾತನಾಡಿದ ಸಾರಿಗೆ ಮುಖಂಡ ಜಗದೀಶ್ ಇದಕ್ಕೆ ನಮ್ಮ ಬಿಎಂಟಿಸಿ ನಿರ್ವಾಹಕರು ಕಾರಣ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

5 / 6
ಒಟ್ಟಿನಲ್ಲಿ ಪ್ರತಿದಿನ ಬಿಎಂಟಿಸಿ ಬಸ್​ನಲ್ಲಿ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ದೊಡ್ಡ ಜಗಳಕ್ಕೆ ಈ ಯುಪಿಐ ಪೇಮೆಂಟ್ ಬ್ರೇಕ್ ಹಾಕಿರುವುದಂತು ಸುಳ್ಳಲ್ಲ.

ಒಟ್ಟಿನಲ್ಲಿ ಪ್ರತಿದಿನ ಬಿಎಂಟಿಸಿ ಬಸ್​ನಲ್ಲಿ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆಗಾಗಿ ನಡೆಯುತ್ತಿದ್ದ ದೊಡ್ಡ ಜಗಳಕ್ಕೆ ಈ ಯುಪಿಐ ಪೇಮೆಂಟ್ ಬ್ರೇಕ್ ಹಾಕಿರುವುದಂತು ಸುಳ್ಳಲ್ಲ.

6 / 6
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್