AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chicken Pox: ಬೇಸಿಗೆಯಲ್ಲಿ ಚಿಕನ್​ಪಾಕ್ಸ್​ ಸೋಂಕು ಹರಡುವಿಕೆ ತಡೆಯಲು ಈ 4 ಆಹಾರ ಸೇವಿಸಿ

ಚಿಕನ್​ಪಾಕ್ಸ್ ಮುಖ್ಯವಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ವೈರಲ್ ಸೋಂಕು. ಇದು ವಯಸ್ಕರಲ್ಲಿಯೂ ಸಹ ಕಾಣಿಸಿಕೊಳ್ಳುತ್ತದೆ. ಆದರೆ, ಮಕ್ಕಳಿಗೆ ಈ ಸೋಂಕಿನಿಂದ ತೊಂದರೆ ಹೆಚ್ಚು. ಜ್ವರ, ತಲೆನೋವು, ಗಂಟಲುನೋವು, ಮೈ ತುಂಬ ದದ್ದುಗಳು ಚಿಕನ್​ಪಾಕ್ಸ್​ ಸೋಂಕಿನ ಸಾಮಾನ್ಯ ಲಕ್ಷಣಗಳು. ಚಿಕನ್​ಪಾಕ್ಸ್ ರೋಗದ ನಿಯಂತ್ರಣಕ್ಕೆ ಸಹಾಯ ಮಾಡುವ 4 ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸುಷ್ಮಾ ಚಕ್ರೆ
|

Updated on: Mar 01, 2024 | 4:39 PM

Share
ಚಿಕನ್​ಪಾಕ್ಸ್​ ಮಾರಣಾಂತಿಕ ಸೋಂಕು ಅಲ್ಲದಿದ್ದರೂ ಕೆಲವೊಮ್ಮೆ ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅಧಿಕ ಜ್ವರ, ತಲೆನೋವು, ಗಂಟಲು ನೋವು, ಸುಸ್ತು ಮತ್ತು ಚರ್ಮದ ಮೇಲಿನ ದದ್ದು ಈ ಸೋಂಕಿನ ಲಕ್ಷಣಗಳಾಗಿವೆ. ಚಿಕನ್​ಪಾಕ್ಸ್ ಚಿಕಿತ್ಸೆಗೆ ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ.

ಚಿಕನ್​ಪಾಕ್ಸ್​ ಮಾರಣಾಂತಿಕ ಸೋಂಕು ಅಲ್ಲದಿದ್ದರೂ ಕೆಲವೊಮ್ಮೆ ಹೆಚ್ಚು ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅಧಿಕ ಜ್ವರ, ತಲೆನೋವು, ಗಂಟಲು ನೋವು, ಸುಸ್ತು ಮತ್ತು ಚರ್ಮದ ಮೇಲಿನ ದದ್ದು ಈ ಸೋಂಕಿನ ಲಕ್ಷಣಗಳಾಗಿವೆ. ಚಿಕನ್​ಪಾಕ್ಸ್ ಚಿಕಿತ್ಸೆಗೆ ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ.

1 / 7
ನೀವು ವರಿಸೆಲ್ಲಾ ಜೋಸ್ಟರ್ ವೈರಸ್‌ಗೆ ಒಡ್ಡಿಕೊಂಡ 10ರಿಂದ 21 ದಿನಗಳ ನಂತರ ಚಿಕನ್​ಪಾಕ್ಸ್‌ನಿಂದ ಉಂಟಾಗುವ ದದ್ದು ಕಾಣಿಸಿಕೊಳ್ಳುತ್ತದೆ. ರಾಶ್ ಸಾಮಾನ್ಯವಾಗಿ 5ರಿಂದ 10 ದಿನಗಳವರೆಗೆ ಇರುತ್ತದೆ.

ನೀವು ವರಿಸೆಲ್ಲಾ ಜೋಸ್ಟರ್ ವೈರಸ್‌ಗೆ ಒಡ್ಡಿಕೊಂಡ 10ರಿಂದ 21 ದಿನಗಳ ನಂತರ ಚಿಕನ್​ಪಾಕ್ಸ್‌ನಿಂದ ಉಂಟಾಗುವ ದದ್ದು ಕಾಣಿಸಿಕೊಳ್ಳುತ್ತದೆ. ರಾಶ್ ಸಾಮಾನ್ಯವಾಗಿ 5ರಿಂದ 10 ದಿನಗಳವರೆಗೆ ಇರುತ್ತದೆ.

2 / 7
ಬೇವಿನ ಎಲೆಗಳು: ಕಹಿ ರುಚಿಯ ಹೊರತಾಗಿಯೂ ಬೇವಿನ ಎಲೆಗಳು ಸಿಡುಬು, ಚಿಕನ್​ಪಾಕ್ಸ್ ಮುಂತಾದ ವೈರಸ್‌ಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ. ಈ ವೈರಲ್ ಸೋಂಕುಗಳಿಂದ ಬಳಲುತ್ತಿರುವವರಿಗೆ ಬೇವಿನ ಎಲೆಗಳಿಂದ ಮಾಡಿದ ಪೇಸ್ಟ್ ಹಚ್ಚಿದರೆ ಬೇಗ ಗುಣವಾಗುತ್ತದೆ.

ಬೇವಿನ ಎಲೆಗಳು: ಕಹಿ ರುಚಿಯ ಹೊರತಾಗಿಯೂ ಬೇವಿನ ಎಲೆಗಳು ಸಿಡುಬು, ಚಿಕನ್​ಪಾಕ್ಸ್ ಮುಂತಾದ ವೈರಸ್‌ಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ. ಈ ವೈರಲ್ ಸೋಂಕುಗಳಿಂದ ಬಳಲುತ್ತಿರುವವರಿಗೆ ಬೇವಿನ ಎಲೆಗಳಿಂದ ಮಾಡಿದ ಪೇಸ್ಟ್ ಹಚ್ಚಿದರೆ ಬೇಗ ಗುಣವಾಗುತ್ತದೆ.

3 / 7
ಕ್ಯಾರೆಟ್: ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಚಿಕನ್​ಪಾಕ್ಸ್ ರೋಗಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆರೋಗ್ಯಕರ ಚರ್ಮ ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳಲು ವಿಟಮಿನ್ ಎ ಅತ್ಯಗತ್ಯ. ಆದರೆ ಬೀಟಾ ಕ್ಯಾರೋಟಿನ್ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ, ಸೋಂಕು ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅನಾರೋಗ್ಯದ ಸಮಯದಲ್ಲಿ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಕ್ಯಾರೆಟ್: ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಕ್ಯಾರೆಟ್ ಚಿಕನ್​ಪಾಕ್ಸ್ ರೋಗಿಗಳಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಆರೋಗ್ಯಕರ ಚರ್ಮ ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳಲು ವಿಟಮಿನ್ ಎ ಅತ್ಯಗತ್ಯ. ಆದರೆ ಬೀಟಾ ಕ್ಯಾರೋಟಿನ್ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ, ಸೋಂಕು ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ. ಆಹಾರದಲ್ಲಿ ಕ್ಯಾರೆಟ್ ಅನ್ನು ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅನಾರೋಗ್ಯದ ಸಮಯದಲ್ಲಿ ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

4 / 7
ಎಲೆಕೋಸು: ಚಿಕನ್​ಪಾಕ್ಸ್ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ, ಕಡಿಮೆ ಪ್ರೋಟೀನ್ ಮತ್ತು ದ್ರವ ಆಧಾರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಎಲೆಕೋಸು ಜೀರ್ಣಾಂಗ ವ್ಯವಸ್ಥೆಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.

ಎಲೆಕೋಸು: ಚಿಕನ್​ಪಾಕ್ಸ್ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವ, ಕಡಿಮೆ ಪ್ರೋಟೀನ್ ಮತ್ತು ದ್ರವ ಆಧಾರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಎಲೆಕೋಸು ಜೀರ್ಣಾಂಗ ವ್ಯವಸ್ಥೆಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ.

5 / 7
ನುಗ್ಗೆಸೊಪ್ಪು: ನುಗ್ಗೆಸೊಪ್ಪು ಚಿಕನ್​ಪಾಕ್ಸ್ ಅನ್ನು ಬೇಗ ತಡೆಯಲು ಸಹಾಯ ಮಾಡುತ್ತದೆ. ಮಾರ್ಚ್ ಮತ್ತು ಏಪ್ರಿಲ್‌ನಂತಹ ನಿರ್ದಿಷ್ಟ ತಿಂಗಳುಗಳಲ್ಲಿ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಅದರ ರೋಗನಿರೋಧಕ ಉತ್ತೇಜಿಸುವ ಗುಣಲಕ್ಷಣಗಳ ಕಾರಣದಿಂದಾಗಿ ಬಹಳ ಪ್ರಯೋಜನವಿದೆ. ಇದು ಚಿಕನ್​ಪಾಕ್ಸ್ ಮತ್ತು ಇತರ ಗಾಳಿಯಿಂದ ಹರಡುವ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.

ನುಗ್ಗೆಸೊಪ್ಪು: ನುಗ್ಗೆಸೊಪ್ಪು ಚಿಕನ್​ಪಾಕ್ಸ್ ಅನ್ನು ಬೇಗ ತಡೆಯಲು ಸಹಾಯ ಮಾಡುತ್ತದೆ. ಮಾರ್ಚ್ ಮತ್ತು ಏಪ್ರಿಲ್‌ನಂತಹ ನಿರ್ದಿಷ್ಟ ತಿಂಗಳುಗಳಲ್ಲಿ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಅದರ ರೋಗನಿರೋಧಕ ಉತ್ತೇಜಿಸುವ ಗುಣಲಕ್ಷಣಗಳ ಕಾರಣದಿಂದಾಗಿ ಬಹಳ ಪ್ರಯೋಜನವಿದೆ. ಇದು ಚಿಕನ್​ಪಾಕ್ಸ್ ಮತ್ತು ಇತರ ಗಾಳಿಯಿಂದ ಹರಡುವ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.

6 / 7
ಈ ಆಹಾರಗಳು ಚಿಕನ್​ಪಾಕ್ಸ್ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಿದ್ದರೂ ಇದರ ಜೊತೆಗೆ ವೈದ್ಯರ ಚಿಕಿತ್ಸೆಯೂ ಅತ್ಯಗತ್ಯ. ಹೀಗಾಗಿ, ಚಿಕನ್​ಪಾಕ್ಸ್ ಉಂಟಾದಾಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ.

ಈ ಆಹಾರಗಳು ಚಿಕನ್​ಪಾಕ್ಸ್ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಿದ್ದರೂ ಇದರ ಜೊತೆಗೆ ವೈದ್ಯರ ಚಿಕಿತ್ಸೆಯೂ ಅತ್ಯಗತ್ಯ. ಹೀಗಾಗಿ, ಚಿಕನ್​ಪಾಕ್ಸ್ ಉಂಟಾದಾಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ.

7 / 7
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!