AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರಕ್ಕೆ ಬಂತು ವಿಶೇಷ ತಳಿಯ ದುಬಾರಿ ಕುದುರೆ: ನೋಡಲು ಮುಗಿಬಿದ್ದ ಜನ

ಗುಜರಾತ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾರ್ವಾಡಿ ತಳಿಯ ದುಬಾರಿ ಕುದುರೆಯ ಆಗಮನವಾಗಿದೆ. ಈ ದುಬಾರಿ ಕುದುರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಮಾರ್ವಾಡಿ ಎಂಬ ಅಪರೂಪದ ಈ ತಳಿಯನ್ನು ಉದ್ಯಮಿ ಒಬ್ಬರು ಅತ್ಯಂತ ದುಬಾರಿ ಬೆಲೆಗೆ ಖರೀದಿಸಿದ್ದಾರೆ. ಇದರ ಬೆಲೆ ಕೇಳಿದರೆ ನಿಜಕ್ಕೂ ಶಾಕ್​ ಆಗುತ್ತದೆ. ಕುದುರೆ ಫೋಟೋಸ್​ ಇಲ್ಲಿವೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ|

Updated on: Jul 20, 2025 | 9:44 PM

Share
ರಾಜ-ಮಹಾರಾಜರು ಯುದ್ದದಲ್ಲಿ ಬಳಸುತ್ತಿದ್ದ ತಳಿಯ ಕುದುರೆಯೊಂದನ್ನು ಬರೋಬ್ಬರಿ 1 ಕೋಟಿ 11 ಲಕ್ಷ ರೂ ಕೊಟ್ಟು ಖರೀದಿ ಮಾಡಲಾಗಿದೆ. ಕುದುರೆಯ ಮೈಕಟ್ಟು, ಎತ್ತರ, ನೋಟ ವೈಯಾರಕ್ಕೆ ಜನರು ಮನಸೋತಿದ್ದಾರೆ. ದುಬಾರಿ ಕುದುರೆ ತಮ್ಮೂರಿಗೆ ಬರ್ತಿದ್ದಂತೆ ರೆಡ್ ಕಾರ್ಪೆಟ್ ಹಾಕಿ, ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಮಾಡಿದ್ದಾರೆ.  

ರಾಜ-ಮಹಾರಾಜರು ಯುದ್ದದಲ್ಲಿ ಬಳಸುತ್ತಿದ್ದ ತಳಿಯ ಕುದುರೆಯೊಂದನ್ನು ಬರೋಬ್ಬರಿ 1 ಕೋಟಿ 11 ಲಕ್ಷ ರೂ ಕೊಟ್ಟು ಖರೀದಿ ಮಾಡಲಾಗಿದೆ. ಕುದುರೆಯ ಮೈಕಟ್ಟು, ಎತ್ತರ, ನೋಟ ವೈಯಾರಕ್ಕೆ ಜನರು ಮನಸೋತಿದ್ದಾರೆ. ದುಬಾರಿ ಕುದುರೆ ತಮ್ಮೂರಿಗೆ ಬರ್ತಿದ್ದಂತೆ ರೆಡ್ ಕಾರ್ಪೆಟ್ ಹಾಕಿ, ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಮಾಡಿದ್ದಾರೆ.  

1 / 6
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವರಲಕೊಂಡ ಗ್ರಾಮದ ಬಳಿಯಿರುವ ಬೆಂಗಳೂರು ಮೂಲದ ಉದ್ಯಮಿ ಶಫೀಕ್​ ಅವರಿಗೆ ಕುದುರೆ ಸವಾರಿ ಹಾಗೂ ಸಾಕುವ ಹವ್ಯಾಸ ಹೊಂದಿದ್ದು, ಈಗ ದೂರದ ಗುಜರಾತ್​ನಿಂದ ಮಾರ್ವಾರಿ ತಳಿಯ ನ್ಯಾಷನಲ್ ಲೆವೆಲ್ ಕಾಂಪಿಟೇಶನ್​ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ 1 ಕೋಟಿ 11 ಲಕ್ಷ ರೂ. ಮೌಲ್ಯದ ಕುದುರೆಯನ್ನ ಖರೀದಿಸಿದ್ದಾರೆ. ಈ ಕುದುರೆ ಅವರ ಪಾರ್ಮ ಹೌಸ್​​ಗೆ ಹೊಸ ಕಳೆ ತಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವರಲಕೊಂಡ ಗ್ರಾಮದ ಬಳಿಯಿರುವ ಬೆಂಗಳೂರು ಮೂಲದ ಉದ್ಯಮಿ ಶಫೀಕ್​ ಅವರಿಗೆ ಕುದುರೆ ಸವಾರಿ ಹಾಗೂ ಸಾಕುವ ಹವ್ಯಾಸ ಹೊಂದಿದ್ದು, ಈಗ ದೂರದ ಗುಜರಾತ್​ನಿಂದ ಮಾರ್ವಾರಿ ತಳಿಯ ನ್ಯಾಷನಲ್ ಲೆವೆಲ್ ಕಾಂಪಿಟೇಶನ್​ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ 1 ಕೋಟಿ 11 ಲಕ್ಷ ರೂ. ಮೌಲ್ಯದ ಕುದುರೆಯನ್ನ ಖರೀದಿಸಿದ್ದಾರೆ. ಈ ಕುದುರೆ ಅವರ ಪಾರ್ಮ ಹೌಸ್​​ಗೆ ಹೊಸ ಕಳೆ ತಂದಿದೆ.

2 / 6
ಉದ್ಯಮಿ ಶಫೀಕ್ ತಮ್ಮದೇ ಸ್ವಂತ ಜಾಗದಲ್ಲಿ ಹಾರ್ಸ್ ರೈಡಿಂಗ್​ಗಾಗಿ ಒಂದಷ್ಟು ಜಾಗ ಮೀಸಲಿರಿಸಿ, ಆ ಜಾಗದಲ್ಲಿ ಬೆಂಗಳೂರಿನ ತಮ್ಮ ಸ್ನೇಹಿತರು, ಪರಿಚಯಸ್ಥರು ಹಾಗೂ ಹಳ್ಳಿ ಗಾಡಿನ ಯುವಕರಿಗೆ ಹಾರ್ಸ್ ರೈಡಿಂಗ್ ಮಾಡುವ ಕಲೆಯನ್ನ ಕರಗತ ಮಾಡಿಸುತ್ತಿದ್ದಾರೆ.

ಉದ್ಯಮಿ ಶಫೀಕ್ ತಮ್ಮದೇ ಸ್ವಂತ ಜಾಗದಲ್ಲಿ ಹಾರ್ಸ್ ರೈಡಿಂಗ್​ಗಾಗಿ ಒಂದಷ್ಟು ಜಾಗ ಮೀಸಲಿರಿಸಿ, ಆ ಜಾಗದಲ್ಲಿ ಬೆಂಗಳೂರಿನ ತಮ್ಮ ಸ್ನೇಹಿತರು, ಪರಿಚಯಸ್ಥರು ಹಾಗೂ ಹಳ್ಳಿ ಗಾಡಿನ ಯುವಕರಿಗೆ ಹಾರ್ಸ್ ರೈಡಿಂಗ್ ಮಾಡುವ ಕಲೆಯನ್ನ ಕರಗತ ಮಾಡಿಸುತ್ತಿದ್ದಾರೆ.

3 / 6
ರೋಲೆಕ್ಸ್ ಎಂಬ ಹೆಸರಿನ ಈ ಕುದುರೆ, ಮಾರ್ವಾಡಿ ತಳಿಯ ಕುದುರೆ ಆಗಿದೆ. ಸೇವಾಡಿಯಾ ಮಠ್ ಅನ್ನೋ ರಾಯಲ್ ಬ್ಲಡ್ ಲೈನ್​ಗೆ ಸೇರಿದೆ. ಸದ್ಯ ಮೂರುವರೆ ವರ್ಷದ ಈ ಕುದುರೆಯ ಮಸ್ತಾದ ದೇಹಕಟ್ಟು ಹಾಗೂ ಸುರಸುಂದರಿಯರನ್ನ ಮೀರಿಸುವ ಅದರ ನಡಿಗೆ, ಕಾಲು ಪಾದ ಊರುವ ಭಂಗಿಗಳಿಂದಲೇ ಎಲ್ಲರನ್ನ ತನ್ನತ್ತ ಆಕರ್ಷಿಸುತ್ತದೆ.

ರೋಲೆಕ್ಸ್ ಎಂಬ ಹೆಸರಿನ ಈ ಕುದುರೆ, ಮಾರ್ವಾಡಿ ತಳಿಯ ಕುದುರೆ ಆಗಿದೆ. ಸೇವಾಡಿಯಾ ಮಠ್ ಅನ್ನೋ ರಾಯಲ್ ಬ್ಲಡ್ ಲೈನ್​ಗೆ ಸೇರಿದೆ. ಸದ್ಯ ಮೂರುವರೆ ವರ್ಷದ ಈ ಕುದುರೆಯ ಮಸ್ತಾದ ದೇಹಕಟ್ಟು ಹಾಗೂ ಸುರಸುಂದರಿಯರನ್ನ ಮೀರಿಸುವ ಅದರ ನಡಿಗೆ, ಕಾಲು ಪಾದ ಊರುವ ಭಂಗಿಗಳಿಂದಲೇ ಎಲ್ಲರನ್ನ ತನ್ನತ್ತ ಆಕರ್ಷಿಸುತ್ತದೆ.

4 / 6
ರೋಲೆಕ್ಸ್​ ಎರಡು ಬಾರಿ ನ್ಯಾಷನಲ್ ಲೆವೆಲ್ ಕಾಂಪಿಟೇಶನ್​ನಲ್ಲಿ ಚಾಂಪಿಯನ್ ಆಗಿದ್ದಾನೆ. ಪ್ರತಿದಿನ ಈ ಕುದುರೆಗೆ 12 ಲೀಟರ್ ಹಾಲು, 1 ಡಜನ್ ಮೊಟ್ಟೆ ಸೇರಿದಂತೆ ಹಸಿರು ಹುಲ್ಲು ಹಾಗೂ ಎರಡು ಬಾರಿ ಬಾಡಿ ಮಸಾಜ್, ಜಿಮ್ ವರ್ಕೌಟ್ ಎಲ್ಲವೂ ಮಾಡಿಸಲಾಗುತ್ತದೆ.

ರೋಲೆಕ್ಸ್​ ಎರಡು ಬಾರಿ ನ್ಯಾಷನಲ್ ಲೆವೆಲ್ ಕಾಂಪಿಟೇಶನ್​ನಲ್ಲಿ ಚಾಂಪಿಯನ್ ಆಗಿದ್ದಾನೆ. ಪ್ರತಿದಿನ ಈ ಕುದುರೆಗೆ 12 ಲೀಟರ್ ಹಾಲು, 1 ಡಜನ್ ಮೊಟ್ಟೆ ಸೇರಿದಂತೆ ಹಸಿರು ಹುಲ್ಲು ಹಾಗೂ ಎರಡು ಬಾರಿ ಬಾಡಿ ಮಸಾಜ್, ಜಿಮ್ ವರ್ಕೌಟ್ ಎಲ್ಲವೂ ಮಾಡಿಸಲಾಗುತ್ತದೆ.

5 / 6
ದೇಶದಲ್ಲಿ ನಶಿಸಿ ಹೋಗುತ್ತಿರುವ ಅಪರೂಪದ ಕುದುರೆ ತಳಿಗಳನ್ನ ಉಳಿಸುವ ಸಲುವಾಗಿಯೇ ಈ ಕುದುರೆಯನ್ನು ದುಬಾರಿ ಹಣ ಕೊಟ್ಟು ಖರೀದಿ ಮಾಡಿದ್ದಾಗಿ ಕುದುರೆ ಮಾಲೀಕರು ಹೇಳಿದ್ದಾರೆ. ಕೋಟಿ ಬೆಲೆಯ ಕುದುರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜನ ನೋಡಲು ಮುಗಿಬಿದ್ದರು.

ದೇಶದಲ್ಲಿ ನಶಿಸಿ ಹೋಗುತ್ತಿರುವ ಅಪರೂಪದ ಕುದುರೆ ತಳಿಗಳನ್ನ ಉಳಿಸುವ ಸಲುವಾಗಿಯೇ ಈ ಕುದುರೆಯನ್ನು ದುಬಾರಿ ಹಣ ಕೊಟ್ಟು ಖರೀದಿ ಮಾಡಿದ್ದಾಗಿ ಕುದುರೆ ಮಾಲೀಕರು ಹೇಳಿದ್ದಾರೆ. ಕೋಟಿ ಬೆಲೆಯ ಕುದುರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜನ ನೋಡಲು ಮುಗಿಬಿದ್ದರು.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ