AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಕ್ಲೋನ್ ಎಫೆಕ್ಟ್​: ನಂದಿಬೆಟ್ಟವನ್ನು ತಬ್ಬಿದ ಮಂಜು

ಚಳಿಗಾಲದ ಆರಂಭದೊಂದಿಗೆ, ವಿಶ್ವವಿಖ್ಯಾತ ನಂದಿಗಿರಿಧಾಮ ಮಂಜಿನಿಂದ ಆವೃತವಾಗಿದೆ. ಚಂಡಮಾರುತದ ಪ್ರಭಾವದಿಂದ ಮಂಜು ಹೆಚ್ಚಾಗಿದ್ದು, ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತಿದೆ. ಪ್ರೇಮಿಗಳು, ಚಾರಣಿಗರು ಮತ್ತು ಪ್ರಕೃತಿ ಪ್ರಿಯರಿಗೆ ನಂದಿಬೆಟ್ಟ ಆದರ್ಶ ತಾಣವಾಗಿದೆ. ಮಂಜಿನ ನಡುವಿನ ಸೌಂದರ್ಯ ಮತ್ತು ಚಳಿಯ ಅನುಭವ ಅನನ್ಯವಾಗಿದೆ. ಇಲ್ಲಿವೆ ಫೋಟೋಸ್​

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Dec 13, 2024 | 9:45 PM

Share
ಅದು ವಿಶ್ವವಿಖ್ಯಾತ ನಂದಿಗಿರಿಧಾಮ. ಅದರಲ್ಲೂ ಈಗ ಚಳಿಗಾಲ, ಜೊತೆಗೆ ಸೈಕ್ಲೋನ್ ಬೇರೆ. ಚಳಿಗಾಲದ ಆರಂಭದ ಜೊತೆ ಜೊತೆಯಲ್ಲೇ ಸೈಕ್ಲೋನ್ ಎಫೆಕ್ಟ್ ಗೆ ನಂದಿಬೆಟ್ಟವಂತೂ ಸಖತ್ ಕೂಲ್ ಕೂಲ್ ಆಗಿದೆ. ಮಂಜಿನಿಂದ ಆವೃತವಾದ ನಂದಿಬೆಟ್ಟ ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ ಭಾಸವಾಗಿದೆ.

ಅದು ವಿಶ್ವವಿಖ್ಯಾತ ನಂದಿಗಿರಿಧಾಮ. ಅದರಲ್ಲೂ ಈಗ ಚಳಿಗಾಲ, ಜೊತೆಗೆ ಸೈಕ್ಲೋನ್ ಬೇರೆ. ಚಳಿಗಾಲದ ಆರಂಭದ ಜೊತೆ ಜೊತೆಯಲ್ಲೇ ಸೈಕ್ಲೋನ್ ಎಫೆಕ್ಟ್ ಗೆ ನಂದಿಬೆಟ್ಟವಂತೂ ಸಖತ್ ಕೂಲ್ ಕೂಲ್ ಆಗಿದೆ. ಮಂಜಿನಿಂದ ಆವೃತವಾದ ನಂದಿಬೆಟ್ಟ ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ ಭಾಸವಾಗಿದೆ.

1 / 5
ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಸದ್ಯ ಮಂಜಿನಿಂದ ಆವೃತವಾಗಿದೆ. ಎದುರಗಡೆ ಇರುವ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮಂಜು ಆವರಿಸಿದೆ. ಮಂಜಿನ ನಡುವೆಯೇ ಪ್ರೇಮಿಗಳ ಕಲರವ. ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮವಾಗಿದೆ. 

ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಸದ್ಯ ಮಂಜಿನಿಂದ ಆವೃತವಾಗಿದೆ. ಎದುರಗಡೆ ಇರುವ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮಂಜು ಆವರಿಸಿದೆ. ಮಂಜಿನ ನಡುವೆಯೇ ಪ್ರೇಮಿಗಳ ಕಲರವ. ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮವಾಗಿದೆ. 

2 / 5
ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದೆ.

3 / 5
ಚಳಿಯ ನಡುವೆ ಮಂಜಿನ ಸೊಗಸು ನೋಡುವುದೆ ಚೆಂದ. ಎಷ್ಟೇ ಚಳಿ ಆದರೂ ಬೆಚ್ಚನೆಯ ಕಾಫಿ ಸವಿದು ನಂದಿಬೆಟ್ಟದಲ್ಲಿ ಓಡಾಡುವ ಮಜಾವೇ ಬೇರೆ. ಪ್ರೇಮಿಗಳು ಕೈ ಹಿಡಿದು ಪಿಸು ಮಾತುಗಳನ್ನಾಡುತ್ತಾ ನಂದಿ ಬೆಟ್ಟದಲ್ಲಿ ಕಳೆದ ಕಾಲ ಮರೆಯಲಾಗದ ನೆನಪು. ಇಂತಹ ನಂದಿಬೆಟ್ಟಕ್ಕೆ ಲಗ್ಗೆಯಿಡುವ ಪ್ರೇಮಿಗಳು ಫೋಟೋ, ಸೆಲ್ಫಿ ತೆಗೆದುಕೊಂಡು ಸಖತ್ ಎಂಜಾಯ್ ಮಾಡಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗುವಂತಾಗಿದೆ.

ಚಳಿಯ ನಡುವೆ ಮಂಜಿನ ಸೊಗಸು ನೋಡುವುದೆ ಚೆಂದ. ಎಷ್ಟೇ ಚಳಿ ಆದರೂ ಬೆಚ್ಚನೆಯ ಕಾಫಿ ಸವಿದು ನಂದಿಬೆಟ್ಟದಲ್ಲಿ ಓಡಾಡುವ ಮಜಾವೇ ಬೇರೆ. ಪ್ರೇಮಿಗಳು ಕೈ ಹಿಡಿದು ಪಿಸು ಮಾತುಗಳನ್ನಾಡುತ್ತಾ ನಂದಿ ಬೆಟ್ಟದಲ್ಲಿ ಕಳೆದ ಕಾಲ ಮರೆಯಲಾಗದ ನೆನಪು. ಇಂತಹ ನಂದಿಬೆಟ್ಟಕ್ಕೆ ಲಗ್ಗೆಯಿಡುವ ಪ್ರೇಮಿಗಳು ಫೋಟೋ, ಸೆಲ್ಫಿ ತೆಗೆದುಕೊಂಡು ಸಖತ್ ಎಂಜಾಯ್ ಮಾಡಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗುವಂತಾಗಿದೆ.

4 / 5
ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟ ತನ್ನ ಪ್ರಾಕೃತಿಕ ಸೊಬಗು ಹಿಮ್ಮಡಿಗೊಳಿಸಿದ್ದು, ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಸೈಕ್ಲೋನ್ ಸಹ ಮತ್ತಷ್ಟು ಮೆರೆಗು ನೀಡಿದ್ದು ಪ್ರವಾಸಿಗರಂತೂ ಮೈ ಚಳಿ ಬಿಟ್ಟು ಹೋಗುವ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾರೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟ ತನ್ನ ಪ್ರಾಕೃತಿಕ ಸೊಬಗು ಹಿಮ್ಮಡಿಗೊಳಿಸಿದ್ದು, ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಸೈಕ್ಲೋನ್ ಸಹ ಮತ್ತಷ್ಟು ಮೆರೆಗು ನೀಡಿದ್ದು ಪ್ರವಾಸಿಗರಂತೂ ಮೈ ಚಳಿ ಬಿಟ್ಟು ಹೋಗುವ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾರೆ.

5 / 5

Published On - 9:43 pm, Fri, 13 December 24

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು