AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಕ್ಲೋನ್ ಎಫೆಕ್ಟ್​: ನಂದಿಬೆಟ್ಟವನ್ನು ತಬ್ಬಿದ ಮಂಜು

ಚಳಿಗಾಲದ ಆರಂಭದೊಂದಿಗೆ, ವಿಶ್ವವಿಖ್ಯಾತ ನಂದಿಗಿರಿಧಾಮ ಮಂಜಿನಿಂದ ಆವೃತವಾಗಿದೆ. ಚಂಡಮಾರುತದ ಪ್ರಭಾವದಿಂದ ಮಂಜು ಹೆಚ್ಚಾಗಿದ್ದು, ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತಿದೆ. ಪ್ರೇಮಿಗಳು, ಚಾರಣಿಗರು ಮತ್ತು ಪ್ರಕೃತಿ ಪ್ರಿಯರಿಗೆ ನಂದಿಬೆಟ್ಟ ಆದರ್ಶ ತಾಣವಾಗಿದೆ. ಮಂಜಿನ ನಡುವಿನ ಸೌಂದರ್ಯ ಮತ್ತು ಚಳಿಯ ಅನುಭವ ಅನನ್ಯವಾಗಿದೆ. ಇಲ್ಲಿವೆ ಫೋಟೋಸ್​

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Dec 13, 2024 | 9:45 PM

Share
ಅದು ವಿಶ್ವವಿಖ್ಯಾತ ನಂದಿಗಿರಿಧಾಮ. ಅದರಲ್ಲೂ ಈಗ ಚಳಿಗಾಲ, ಜೊತೆಗೆ ಸೈಕ್ಲೋನ್ ಬೇರೆ. ಚಳಿಗಾಲದ ಆರಂಭದ ಜೊತೆ ಜೊತೆಯಲ್ಲೇ ಸೈಕ್ಲೋನ್ ಎಫೆಕ್ಟ್ ಗೆ ನಂದಿಬೆಟ್ಟವಂತೂ ಸಖತ್ ಕೂಲ್ ಕೂಲ್ ಆಗಿದೆ. ಮಂಜಿನಿಂದ ಆವೃತವಾದ ನಂದಿಬೆಟ್ಟ ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ ಭಾಸವಾಗಿದೆ.

ಅದು ವಿಶ್ವವಿಖ್ಯಾತ ನಂದಿಗಿರಿಧಾಮ. ಅದರಲ್ಲೂ ಈಗ ಚಳಿಗಾಲ, ಜೊತೆಗೆ ಸೈಕ್ಲೋನ್ ಬೇರೆ. ಚಳಿಗಾಲದ ಆರಂಭದ ಜೊತೆ ಜೊತೆಯಲ್ಲೇ ಸೈಕ್ಲೋನ್ ಎಫೆಕ್ಟ್ ಗೆ ನಂದಿಬೆಟ್ಟವಂತೂ ಸಖತ್ ಕೂಲ್ ಕೂಲ್ ಆಗಿದೆ. ಮಂಜಿನಿಂದ ಆವೃತವಾದ ನಂದಿಬೆಟ್ಟ ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ ಭಾಸವಾಗಿದೆ.

1 / 5
ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಸದ್ಯ ಮಂಜಿನಿಂದ ಆವೃತವಾಗಿದೆ. ಎದುರಗಡೆ ಇರುವ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮಂಜು ಆವರಿಸಿದೆ. ಮಂಜಿನ ನಡುವೆಯೇ ಪ್ರೇಮಿಗಳ ಕಲರವ. ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮವಾಗಿದೆ. 

ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಸದ್ಯ ಮಂಜಿನಿಂದ ಆವೃತವಾಗಿದೆ. ಎದುರಗಡೆ ಇರುವ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮಂಜು ಆವರಿಸಿದೆ. ಮಂಜಿನ ನಡುವೆಯೇ ಪ್ರೇಮಿಗಳ ಕಲರವ. ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮವಾಗಿದೆ. 

2 / 5
ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದೆ.

3 / 5
ಚಳಿಯ ನಡುವೆ ಮಂಜಿನ ಸೊಗಸು ನೋಡುವುದೆ ಚೆಂದ. ಎಷ್ಟೇ ಚಳಿ ಆದರೂ ಬೆಚ್ಚನೆಯ ಕಾಫಿ ಸವಿದು ನಂದಿಬೆಟ್ಟದಲ್ಲಿ ಓಡಾಡುವ ಮಜಾವೇ ಬೇರೆ. ಪ್ರೇಮಿಗಳು ಕೈ ಹಿಡಿದು ಪಿಸು ಮಾತುಗಳನ್ನಾಡುತ್ತಾ ನಂದಿ ಬೆಟ್ಟದಲ್ಲಿ ಕಳೆದ ಕಾಲ ಮರೆಯಲಾಗದ ನೆನಪು. ಇಂತಹ ನಂದಿಬೆಟ್ಟಕ್ಕೆ ಲಗ್ಗೆಯಿಡುವ ಪ್ರೇಮಿಗಳು ಫೋಟೋ, ಸೆಲ್ಫಿ ತೆಗೆದುಕೊಂಡು ಸಖತ್ ಎಂಜಾಯ್ ಮಾಡಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗುವಂತಾಗಿದೆ.

ಚಳಿಯ ನಡುವೆ ಮಂಜಿನ ಸೊಗಸು ನೋಡುವುದೆ ಚೆಂದ. ಎಷ್ಟೇ ಚಳಿ ಆದರೂ ಬೆಚ್ಚನೆಯ ಕಾಫಿ ಸವಿದು ನಂದಿಬೆಟ್ಟದಲ್ಲಿ ಓಡಾಡುವ ಮಜಾವೇ ಬೇರೆ. ಪ್ರೇಮಿಗಳು ಕೈ ಹಿಡಿದು ಪಿಸು ಮಾತುಗಳನ್ನಾಡುತ್ತಾ ನಂದಿ ಬೆಟ್ಟದಲ್ಲಿ ಕಳೆದ ಕಾಲ ಮರೆಯಲಾಗದ ನೆನಪು. ಇಂತಹ ನಂದಿಬೆಟ್ಟಕ್ಕೆ ಲಗ್ಗೆಯಿಡುವ ಪ್ರೇಮಿಗಳು ಫೋಟೋ, ಸೆಲ್ಫಿ ತೆಗೆದುಕೊಂಡು ಸಖತ್ ಎಂಜಾಯ್ ಮಾಡಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗುವಂತಾಗಿದೆ.

4 / 5
ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟ ತನ್ನ ಪ್ರಾಕೃತಿಕ ಸೊಬಗು ಹಿಮ್ಮಡಿಗೊಳಿಸಿದ್ದು, ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಸೈಕ್ಲೋನ್ ಸಹ ಮತ್ತಷ್ಟು ಮೆರೆಗು ನೀಡಿದ್ದು ಪ್ರವಾಸಿಗರಂತೂ ಮೈ ಚಳಿ ಬಿಟ್ಟು ಹೋಗುವ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾರೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟ ತನ್ನ ಪ್ರಾಕೃತಿಕ ಸೊಬಗು ಹಿಮ್ಮಡಿಗೊಳಿಸಿದ್ದು, ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಸೈಕ್ಲೋನ್ ಸಹ ಮತ್ತಷ್ಟು ಮೆರೆಗು ನೀಡಿದ್ದು ಪ್ರವಾಸಿಗರಂತೂ ಮೈ ಚಳಿ ಬಿಟ್ಟು ಹೋಗುವ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾರೆ.

5 / 5

Published On - 9:43 pm, Fri, 13 December 24

Follow Us
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್