ಬಣ್ಣ ಹಚ್ಚಿ ಪ್ರೇಕ್ಷಕರನ್ನು ರಂಜಿಸಿದ ಆರಕ್ಷಕರು: ಪೊಲೀಸರ ಕಲೆಗೆ ಜನರು ಫಿದಾ

ಹಾಸನದ ಹೊಳೆನರಸೀಪುರ ಪೊಲೀಸರು ಕುರುಕ್ಷೇತ್ರದ ಪೌರಾಣಿಕ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಮೂರು ತಿಂಗಳ ತರಬೇತಿಯ ನಂತರ, ಅವರು ಈ ನಾಟಕವನ್ನು ಪ್ರದರ್ಶಿಸಿ ಜನರನ್ನು ರಂಜಿಸಿದರು. ಈ ಪ್ರದರ್ಶನವು ಪೊಲೀಸರಲ್ಲಿನ ಕಲಾತ್ಮಕ ಪ್ರತಿಭೆಯನ್ನು ಹೊರಹಾಕಿದ್ದಾರೆ ಮತ್ತು ಸಮಾಜ ಸೇವೆಗೂ ಮೀರಿ ಅವರ ಬಹುಮುಖತೆಯನ್ನು ಪ್ರದರ್ಶಿಸಿದ್ದಾರೆ. ಪೊಲೀಸರ ನೂತನ ಪ್ರಯತ್ನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 15, 2025 | 10:23 PM

ಒಂದಲ್ಲ ಒಂದು ಕಾರಣಕ್ಕೆ ಸದಾ ಬ್ಯುಸಿ ಆಗಿರುವ ಪೊಲೀಸರು ಬಣ್ಣ ಹಚ್ಚಿದ್ರೆ ಹೇಗಿರುತ್ತೆ, ಕಲಾವಿದರಾಗಿ ಜನರಿಗೆ ರಂಜಿಸುವುಕ್ಕೆ ಶುರುಮಾಡಿದರೆ ಜನ ಹೇಗೆ ಸ್ವೀಕರಿಸುತ್ತಾರೆ, ಇಂತಹದ್ದೇ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ ಹಾಸನದ ಪೊಲೀಸರು. ತಮ್ಮೆಲ್ಲಾ ಒತ್ತಡವನ್ನು ಬದಿಗಿಟ್ಟು ಎರಡು-ಮೂರು ತಿಂಗಳು ಅಭ್ಯಾಸ  ಮಾಡಿ ವೇದಿಕೆಯಲ್ಲಿ ಅದ್ಭುತವಾಗಿ ಪೌರಾಣಿಕ ನಾಟಕ ಪ್ರದರ್ಶನ ಮಾಡುವ ಮೂಲಕ ಜನರಿಂದ ಸೈ ಎನಿಸಿಕೊಂಡಿದ್ದಾರೆ. 

ಒಂದಲ್ಲ ಒಂದು ಕಾರಣಕ್ಕೆ ಸದಾ ಬ್ಯುಸಿ ಆಗಿರುವ ಪೊಲೀಸರು ಬಣ್ಣ ಹಚ್ಚಿದ್ರೆ ಹೇಗಿರುತ್ತೆ, ಕಲಾವಿದರಾಗಿ ಜನರಿಗೆ ರಂಜಿಸುವುಕ್ಕೆ ಶುರುಮಾಡಿದರೆ ಜನ ಹೇಗೆ ಸ್ವೀಕರಿಸುತ್ತಾರೆ, ಇಂತಹದ್ದೇ ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ ಹಾಸನದ ಪೊಲೀಸರು. ತಮ್ಮೆಲ್ಲಾ ಒತ್ತಡವನ್ನು ಬದಿಗಿಟ್ಟು ಎರಡು-ಮೂರು ತಿಂಗಳು ಅಭ್ಯಾಸ  ಮಾಡಿ ವೇದಿಕೆಯಲ್ಲಿ ಅದ್ಭುತವಾಗಿ ಪೌರಾಣಿಕ ನಾಟಕ ಪ್ರದರ್ಶನ ಮಾಡುವ ಮೂಲಕ ಜನರಿಂದ ಸೈ ಎನಿಸಿಕೊಂಡಿದ್ದಾರೆ. 

1 / 7
ಹಾಸನ ಜಿಲ್ಲೆಯ ಹೊಳೆನರಸೀಪುರ ಉಪವಿಭಾಗದ ಹೊಳೆನರಸೀಪುರ ವೃತ್ತದ ಪೊಲೀಸ್ ಸಿಬ್ಬಂದಿ ಕುರುಕ್ಷೇತ್ರ ನಾಟಕ ಕಲಿತು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದಶಕಗಳಿಂದಲೂ ಈ ವೃತ್ತದ ಪೊಲೀಸರು ಇಂತಹದ್ದೊಂದು ಕಲೆಯನ್ನ ಪ್ರದರ್ಶನ ಮಾಡುತ್ತಾ ಹೊಸ ಪರಂಪರೆ ಹುಟ್ಟು ಹಾಕಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಉಪವಿಭಾಗದ ಹೊಳೆನರಸೀಪುರ ವೃತ್ತದ ಪೊಲೀಸ್ ಸಿಬ್ಬಂದಿ ಕುರುಕ್ಷೇತ್ರ ನಾಟಕ ಕಲಿತು ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದಶಕಗಳಿಂದಲೂ ಈ ವೃತ್ತದ ಪೊಲೀಸರು ಇಂತಹದ್ದೊಂದು ಕಲೆಯನ್ನ ಪ್ರದರ್ಶನ ಮಾಡುತ್ತಾ ಹೊಸ ಪರಂಪರೆ ಹುಟ್ಟು ಹಾಕಿದ್ದಾರೆ.

2 / 7
ಕೊರೊನಾ ಬಳಿಕ ನಿಂತು ಹೋಗಿದ್ದ ಈ ನಾಟಕ ಕಲೆಗೆ ಮರು ಜೀವ ನೀಡಿದ ಇಲ್ಲಿನ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ತಂಡ ಪೊಲೀಸರು ಕೂಡ ಮನಸ್ಸು ಮಾಡಿದರೆ ಜನರನ್ನ ರಂಜಿಸಬಲ್ಲರು ಎಂದು ಸಾಬೀತು ಮಾಡಿದ್ದಾರೆ. ಸ್ವತಃ ಇನ್ಸ್ಪೆಕ್ಟರ್ ಪ್ರದೀಪ್ ಕೃಷ್ಣನ ಪಾತ್ರದಲ್ಲಿ ಮಿಂಚಿದ್ದು, ಪಿಎಸ್​ಐ ರಂಗಸ್ವಾಮಿ ದುರ್ಯೋದನ, ಪೊಲೀಸ್ ಸಿಬ್ಬಂದಿ ದೇವಯ್ಯ ಅರ್ಜುನನಾಗಿ ಕಾಣಿಸಿಕೊಂಡಿದ್ದರೆ. ಭೀಮ, ಅರ್ಜುನ, ನಕುಲ ಸಹದೇವರು, ಧರ್ಮರಾಯ, ಕರ್ಣ ಪಾತ್ರದಲ್ಲಿ ಒಬ್ಬೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮನೋಜ್ಞ ಅಭಿನಯಕ್ಕೆ ಕಲಾಸಕ್ತರು ಬೆರಗಾಗಿದ್ದಾರೆ.

ಕೊರೊನಾ ಬಳಿಕ ನಿಂತು ಹೋಗಿದ್ದ ಈ ನಾಟಕ ಕಲೆಗೆ ಮರು ಜೀವ ನೀಡಿದ ಇಲ್ಲಿನ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ತಂಡ ಪೊಲೀಸರು ಕೂಡ ಮನಸ್ಸು ಮಾಡಿದರೆ ಜನರನ್ನ ರಂಜಿಸಬಲ್ಲರು ಎಂದು ಸಾಬೀತು ಮಾಡಿದ್ದಾರೆ. ಸ್ವತಃ ಇನ್ಸ್ಪೆಕ್ಟರ್ ಪ್ರದೀಪ್ ಕೃಷ್ಣನ ಪಾತ್ರದಲ್ಲಿ ಮಿಂಚಿದ್ದು, ಪಿಎಸ್​ಐ ರಂಗಸ್ವಾಮಿ ದುರ್ಯೋದನ, ಪೊಲೀಸ್ ಸಿಬ್ಬಂದಿ ದೇವಯ್ಯ ಅರ್ಜುನನಾಗಿ ಕಾಣಿಸಿಕೊಂಡಿದ್ದರೆ. ಭೀಮ, ಅರ್ಜುನ, ನಕುಲ ಸಹದೇವರು, ಧರ್ಮರಾಯ, ಕರ್ಣ ಪಾತ್ರದಲ್ಲಿ ಒಬ್ಬೊಬ್ಬ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮನೋಜ್ಞ ಅಭಿನಯಕ್ಕೆ ಕಲಾಸಕ್ತರು ಬೆರಗಾಗಿದ್ದಾರೆ.

3 / 7
ಗಂಟೆಗಟ್ಟಲೇ ಡೈಲಾಗ್ ಹೇಳುತ್ತಾ, ರಾಗಬದ್ದವಾಗಿ ಹಾಡು ಹಾಡಿ ನೆರೆದಿದ್ದವನರನ್ನೆಲ್ಲಾ ಇಡೀ ರಾತ್ರಿರಂಜಿಸಿದ್ದಾರೆ. ಪೊಲೀಸ್ ಎಂದ್ರೆ ಭಯ ಅಲ್ಲ, ಪೊಲೀಸ್​ ಅಂದರೆ ಭರವಸೆ, ಸಮಾಜದೊಟ್ಟಗೆ ಪೊಲೀಸ್ ಇರ್ತಾರೆ ಎನ್ನೋದನ್ನ ಸಾಬೀತು ಮಾಡಿದರೆ, ತಮ್ಮ ಸಿಬ್ಬಂದಿಗಳ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಲು ಬಂದಿದ್ದ ದಕ್ಷಿಣ ವಲಯ ಐಜಿಪಿ ಡಾ ಬೋರಲಿಂಗಯ್ಯ ತಮ್ಮ ಅಧಿಕಾರಿ ಸಿಬ್ಬಂದಿಗಳ ಪ್ರಯತ್ನವನ್ನ ಶ್ಲಾಘಿಸಿದರು. 

ಗಂಟೆಗಟ್ಟಲೇ ಡೈಲಾಗ್ ಹೇಳುತ್ತಾ, ರಾಗಬದ್ದವಾಗಿ ಹಾಡು ಹಾಡಿ ನೆರೆದಿದ್ದವನರನ್ನೆಲ್ಲಾ ಇಡೀ ರಾತ್ರಿರಂಜಿಸಿದ್ದಾರೆ. ಪೊಲೀಸ್ ಎಂದ್ರೆ ಭಯ ಅಲ್ಲ, ಪೊಲೀಸ್​ ಅಂದರೆ ಭರವಸೆ, ಸಮಾಜದೊಟ್ಟಗೆ ಪೊಲೀಸ್ ಇರ್ತಾರೆ ಎನ್ನೋದನ್ನ ಸಾಬೀತು ಮಾಡಿದರೆ, ತಮ್ಮ ಸಿಬ್ಬಂದಿಗಳ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಲು ಬಂದಿದ್ದ ದಕ್ಷಿಣ ವಲಯ ಐಜಿಪಿ ಡಾ ಬೋರಲಿಂಗಯ್ಯ ತಮ್ಮ ಅಧಿಕಾರಿ ಸಿಬ್ಬಂದಿಗಳ ಪ್ರಯತ್ನವನ್ನ ಶ್ಲಾಘಿಸಿದರು. 

4 / 7
ಹೊಳೆನರಸೀಪುರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿನರಸಿಂಹ ಜಾತ್ರಾಮಹೋತ್ಸವದ ವೇಳೆ ಪೊಲೀಸರಿಂದ ನಡೆಯುತ್ತಿದ್ದ ನಾಟಕ ಪ್ರದರ್ಶನ ಒಂದು ಪರಂಪರೆಯಾಗಿ ನಡೆದುಕೊಂಡು ಬಂದಿತ್ತು. ಆದರೆ ಕಾಲಾನಂತರ ಭದ್ರತೆ ಕಾರಣದಿಂದ ಆ ಸಮಯದ ಬದಲಾಗಿ ಪ್ರತಿ ವರ್ಷ ಸಂಕ್ರಾಂತಿ ದಿನ ನಾಟಕ ಪ್ರದರ್ಶನಕ್ಕೆ ದಿನ ನಿಗದಿ ಮಾಡಲಾಗಿತ್ತು.

ಹೊಳೆನರಸೀಪುರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿನರಸಿಂಹ ಜಾತ್ರಾಮಹೋತ್ಸವದ ವೇಳೆ ಪೊಲೀಸರಿಂದ ನಡೆಯುತ್ತಿದ್ದ ನಾಟಕ ಪ್ರದರ್ಶನ ಒಂದು ಪರಂಪರೆಯಾಗಿ ನಡೆದುಕೊಂಡು ಬಂದಿತ್ತು. ಆದರೆ ಕಾಲಾನಂತರ ಭದ್ರತೆ ಕಾರಣದಿಂದ ಆ ಸಮಯದ ಬದಲಾಗಿ ಪ್ರತಿ ವರ್ಷ ಸಂಕ್ರಾಂತಿ ದಿನ ನಾಟಕ ಪ್ರದರ್ಶನಕ್ಕೆ ದಿನ ನಿಗದಿ ಮಾಡಲಾಗಿತ್ತು.

5 / 7
ಇಲ್ಲಿಗೆ ಬರುವ ವೃತ್ತ ನಿರೀಕ್ಷಕರ ಆಸಕ್ತಿಗೆ ಅನುಗುಣವಾಗಿ ಕುರುಕ್ಷೇತ್ರ ಅಥವಾ ಬೇರೆ ನೇರೆ ನಾಟಕಗಳು ನಡೆದುಕೊಂಡು ಬಂದಿವೆ, ಆದರೆ ಕೊರೊನ ಬಳಿಕ ನಾಟಕ ಪ್ರದರ್ಶನ ನಡೆದಿರಲಿಲ್ಲ, ಈ ವರ್ಷ ಸತತ ಮೂರು ತಿಂಗಳು ಪೌರಾಣಿಕ ನಾಟಕ ನಿರ್ದೇಶಕರಾದ ಮಲ್ಲತಮ್ಮನಹಳ್ಲೀಯ ಎಂ.ಪಿ. ಪದ್ಮರಾಜ್ ಅವರ ಮಾರ್ಗದರ್ಶನದಲ್ಲಿ ನಾಟಕವನ್ನ ಅಭ್ಯಾಸ ಮಾಡಿದ ಪೊಲೀಸರು, ಕೆಲ ಮಹಿಳಾ ವೃತ್ತಿಪರ ಕಲಾವಿದರ ಸಹಕಾರದಿಂದ ಕುರುಕ್ಷೇತ್ರ ನಾಟಕವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ. 

ಇಲ್ಲಿಗೆ ಬರುವ ವೃತ್ತ ನಿರೀಕ್ಷಕರ ಆಸಕ್ತಿಗೆ ಅನುಗುಣವಾಗಿ ಕುರುಕ್ಷೇತ್ರ ಅಥವಾ ಬೇರೆ ನೇರೆ ನಾಟಕಗಳು ನಡೆದುಕೊಂಡು ಬಂದಿವೆ, ಆದರೆ ಕೊರೊನ ಬಳಿಕ ನಾಟಕ ಪ್ರದರ್ಶನ ನಡೆದಿರಲಿಲ್ಲ, ಈ ವರ್ಷ ಸತತ ಮೂರು ತಿಂಗಳು ಪೌರಾಣಿಕ ನಾಟಕ ನಿರ್ದೇಶಕರಾದ ಮಲ್ಲತಮ್ಮನಹಳ್ಲೀಯ ಎಂ.ಪಿ. ಪದ್ಮರಾಜ್ ಅವರ ಮಾರ್ಗದರ್ಶನದಲ್ಲಿ ನಾಟಕವನ್ನ ಅಭ್ಯಾಸ ಮಾಡಿದ ಪೊಲೀಸರು, ಕೆಲ ಮಹಿಳಾ ವೃತ್ತಿಪರ ಕಲಾವಿದರ ಸಹಕಾರದಿಂದ ಕುರುಕ್ಷೇತ್ರ ನಾಟಕವನ್ನು ಅದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ. 

6 / 7
ಗ್ರಾಮೀಣ ಕಲೆಗಳು ತರೆಮರೆಗೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಒಂದಿಡೀ ರಾತ್ರಿ ಜನರನ್ನ ರಂಜಿಸುವ ಪೊಲೀಸರ ಯತ್ನ ಎಲ್ಲರ ಮೆಚ್ಚುಗೆ ಗಳಿಸಿದೆ. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಕಲಾಸಕ್ತರು ಪೊಲೀಸರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿಬ್ಬಂದಿಗಳ ಪ್ರಯತ್ನಕ್ಕೆ ಸಾಕ್ಷಿಯಾದ ಹಿರಿಯ ಅಧಿಕಾರಿಗಳು ಯೂನಿಫಾರ್ಮ್ ಹಾಕಿ ಗತ್ತು ಗೈರತ್ತಿನಲ್ಲಿ ಡ್ಯೂಟಿ ಮಾಡುವ ತಮ್ಮ ಸಿಬ್ಬಂದಿಯೊಳಗಿರುವ ಕಲಾವಿದರನ್ನ ಕಂಡು ಬೆರಗಾದರು. 

ಗ್ರಾಮೀಣ ಕಲೆಗಳು ತರೆಮರೆಗೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಒಂದಿಡೀ ರಾತ್ರಿ ಜನರನ್ನ ರಂಜಿಸುವ ಪೊಲೀಸರ ಯತ್ನ ಎಲ್ಲರ ಮೆಚ್ಚುಗೆ ಗಳಿಸಿದೆ. ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಕಲಾಸಕ್ತರು ಪೊಲೀಸರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸಿಬ್ಬಂದಿಗಳ ಪ್ರಯತ್ನಕ್ಕೆ ಸಾಕ್ಷಿಯಾದ ಹಿರಿಯ ಅಧಿಕಾರಿಗಳು ಯೂನಿಫಾರ್ಮ್ ಹಾಕಿ ಗತ್ತು ಗೈರತ್ತಿನಲ್ಲಿ ಡ್ಯೂಟಿ ಮಾಡುವ ತಮ್ಮ ಸಿಬ್ಬಂದಿಯೊಳಗಿರುವ ಕಲಾವಿದರನ್ನ ಕಂಡು ಬೆರಗಾದರು. 

7 / 7
Follow us
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ