AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI 1st Test: ಭಾರತ- ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್​ನ ನಾಲ್ಕು ಮತ್ತು ಐದನೇ ದಿನ ಪಂದ್ಯ ನಡೆಯುವುದು ಅನುಮಾನ

Weather Report: ಭಾರತ- ವೆಸ್ಟ್ ಇಂಡೀಸ್ ಪ್ರಥಮ ಟೆಸ್ಟ್​ ಪಂದ್ಯದಲ್ಲಿ ನಾಲ್ಕನೇ ಮತ್ತು ಐದನೇ ದಿನದಾಟ ನಡೆಯುವುದು ಅನುಮಾನ. ಯಾಕೆಂದರೆ ಹವಾಮಾನ ವರದಿಯ ಪ್ರಕಾರ ಪ್ರಥಮ ಟೆಸ್ಟ್​ನ ನಾಲ್ಕನೇ ಮತ್ತು ಐದನೇ ದಿನ ಜೋರು ಮಳೆ ಆಗಲಿದೆಯಂತೆ.

Vinay Bhat
|

Updated on: Jul 13, 2023 | 9:54 AM

Share
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಗೆ ಚಾಲನೆ ಸಿಕ್ಕಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್​ನಲ್ಲಿ ಪ್ರಥಮ ಟೆಸ್ಟ್ ಆರಂಭವಾಗಿದ್ದು, ಮೊದಲ ದಿನವೇ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಗೆ ಚಾಲನೆ ಸಿಕ್ಕಿದೆ. ಡೊಮಿನಿಕಾದ ವಿಂಡ್ಸರ್ ಪಾರ್ಕ್​ನಲ್ಲಿ ಪ್ರಥಮ ಟೆಸ್ಟ್ ಆರಂಭವಾಗಿದ್ದು, ಮೊದಲ ದಿನವೇ ಟೀಮ್ ಇಂಡಿಯಾ ಮೇಲುಗೈ ಸಾಧಿಸಿದೆ.

1 / 8
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 64.3 ಓವರ್​ಗಳಲ್ಲಿ ಕೇವಲ 150 ರನ್​ಗೆ ಆಲೌಟ್ ಆಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 64.3 ಓವರ್​ಗಳಲ್ಲಿ ಕೇವಲ 150 ರನ್​ಗೆ ಆಲೌಟ್ ಆಯಿತು.

2 / 8
ಕೆರಿಬಿಯನ್ ತಂಡದ ಪರ ಅಲಿಕ್ ಅಥನಾಜೆ 47 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ಬೇಗನೆ ನಿರ್ಗಮಿಸಿದರು. ಭಾರತ ಪರ ಆರ್. ಅಶ್ವಿನ್ 5 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು.

ಕೆರಿಬಿಯನ್ ತಂಡದ ಪರ ಅಲಿಕ್ ಅಥನಾಜೆ 47 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳೆಲ್ಲ ಬೇಗನೆ ನಿರ್ಗಮಿಸಿದರು. ಭಾರತ ಪರ ಆರ್. ಅಶ್ವಿನ್ 5 ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ 3 ವಿಕೆಟ್ ಪಡೆದರು.

3 / 8
ನಂತರ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 23 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 80 ರನ್ ಬಾರಿಸಿದೆ. ನಾಯಕ ರೋಹಿತ್ ಶರ್ಮಾ (30) ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ನಂತರ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 23 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 80 ರನ್ ಬಾರಿಸಿದೆ. ನಾಯಕ ರೋಹಿತ್ ಶರ್ಮಾ (30) ಹಾಗೂ ಯಶಸ್ವಿ ಜೈಸ್ವಾಲ್ 40 ರನ್ ಗಳಿಸಿ ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

4 / 8
ಈ ಟೆಸ್ಟ್​ ಪಂದ್ಯದಲ್ಲಿ ನಾಲ್ಕನೇ ಮತ್ತು ಐದನೇ ದಿನದಾಟ ನಡೆಯುವುದು ಅನುಮಾನ. ಯಾಕೆಂದರೆ ಹವಾಮಾನ ವರದಿಯ ಪ್ರಕಾರ ಪ್ರಥಮ ಟೆಸ್ಟ್​ನ ನಾಲ್ಕನೇ ಮತ್ತು ಐದನೇ ದಿನ ಜೋರು ಮಳೆ ಆಗಲಿದೆಯಂತೆ.

ಈ ಟೆಸ್ಟ್​ ಪಂದ್ಯದಲ್ಲಿ ನಾಲ್ಕನೇ ಮತ್ತು ಐದನೇ ದಿನದಾಟ ನಡೆಯುವುದು ಅನುಮಾನ. ಯಾಕೆಂದರೆ ಹವಾಮಾನ ವರದಿಯ ಪ್ರಕಾರ ಪ್ರಥಮ ಟೆಸ್ಟ್​ನ ನಾಲ್ಕನೇ ಮತ್ತು ಐದನೇ ದಿನ ಜೋರು ಮಳೆ ಆಗಲಿದೆಯಂತೆ.

5 / 8
ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹವಾಮಾನವು ಆಟಕ್ಕೆ ಉತ್ತಮವಾಗಿದೆ. ಆದಾಗ್ಯೂ, ಜುಲೈ 15 ಮತ್ತು 16 ರಂದು ಭಾರೀ ಮಳೆಯ ಮುನ್ಸೂಚನೆಯಿರುವುದರಿಂದ 4 ಮತ್ತು 5 ನೇ ದಿನದಾಟ ನಡೆಯುವುದು ಅನುಮಾನ. ಗರಿಷ್ಠ ತಾಪಮಾನವು 30o C ನಿಂದ 32o C ಗೆ ಏರಿಳಿತ ಇರುತ್ತದೆ.

ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಹವಾಮಾನವು ಆಟಕ್ಕೆ ಉತ್ತಮವಾಗಿದೆ. ಆದಾಗ್ಯೂ, ಜುಲೈ 15 ಮತ್ತು 16 ರಂದು ಭಾರೀ ಮಳೆಯ ಮುನ್ಸೂಚನೆಯಿರುವುದರಿಂದ 4 ಮತ್ತು 5 ನೇ ದಿನದಾಟ ನಡೆಯುವುದು ಅನುಮಾನ. ಗರಿಷ್ಠ ತಾಪಮಾನವು 30o C ನಿಂದ 32o C ಗೆ ಏರಿಳಿತ ಇರುತ್ತದೆ.

6 / 8
ಪಿಚ್ ಬಗ್ಗೆ ನೋಡುವುದಾದರೆ ಎರಡು ಮತ್ತು ಮೂರನೇ ದಿನಗಳಲ್ಲಿ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ. ಆದಾಗ್ಯೂ, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಕೊನೆಯ ಎರಡು ದಿನಗಳಲ್ಲಿ ಮಾರಕವಾಗುತ್ತಾರೆ.

ಪಿಚ್ ಬಗ್ಗೆ ನೋಡುವುದಾದರೆ ಎರಡು ಮತ್ತು ಮೂರನೇ ದಿನಗಳಲ್ಲಿ ಬ್ಯಾಟಿಂಗ್ ಮಾಡಲು ಸುಲಭವಾಗುತ್ತದೆ. ಆದಾಗ್ಯೂ, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಕೊನೆಯ ಎರಡು ದಿನಗಳಲ್ಲಿ ಮಾರಕವಾಗುತ್ತಾರೆ.

7 / 8
ಸರಾಸರಿ ಸ್ಕೋರ್‌ಗಳನ್ನು ಗಮನಿಸಿದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡವು ಹೆಚ್ಚು ರನ್ ಗಳಿಸಿದೆ. ಜೊತೆಗೆ ಅಂತಿಮ ಇನ್ನಿಂಗ್ಸ್ ನಲ್ಲಿ ಚೇಸಿಂಗ್ ಮಾಡುವ ತಂಡಗಳು ಯಶಸ್ಸು ಸಾಧಿಸಿದೆ. ಸ್ಪಿನ್ನರ್‌ಗಳು ಮತ್ತು ವೇಗಿಗಳು ಇಬ್ಬರೂ ವಿಕೆಟ್‌ ಪಡೆಯುತ್ತಾರೆ.

ಸರಾಸರಿ ಸ್ಕೋರ್‌ಗಳನ್ನು ಗಮನಿಸಿದರೆ ಎರಡನೇ ಬ್ಯಾಟಿಂಗ್ ಮಾಡುವ ತಂಡವು ಹೆಚ್ಚು ರನ್ ಗಳಿಸಿದೆ. ಜೊತೆಗೆ ಅಂತಿಮ ಇನ್ನಿಂಗ್ಸ್ ನಲ್ಲಿ ಚೇಸಿಂಗ್ ಮಾಡುವ ತಂಡಗಳು ಯಶಸ್ಸು ಸಾಧಿಸಿದೆ. ಸ್ಪಿನ್ನರ್‌ಗಳು ಮತ್ತು ವೇಗಿಗಳು ಇಬ್ಬರೂ ವಿಕೆಟ್‌ ಪಡೆಯುತ್ತಾರೆ.

8 / 8
Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ