Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Final: ಎಷ್ಟು ಗಂಟೆಗೆ ಪಂದ್ಯ ಶುರುವಾದರೆ, ಎಷ್ಟು ಓವರ್​ಗಳ ಆಟ ನಡೆಯಲಿದೆ? ಇಲ್ಲಿದೆ ಮಾಹಿತಿ

IPL 2023 Final CSK Vs GT: 7.30 ಕ್ಕೆ ಶುರುವಾಗಬೇಕಿರುವ ಪಂದ್ಯವು ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಅಂದರೆ 2 ತಂಡಗಳು 20 ಓವರ್​ಗಳನ್ನು ಆಡಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 29, 2023 | 4:34 PM

IPL 2023 Final CSK Vs GT: ಅಹಮದಾಬಾದ್​ನ ನರೇಂದ್ರ ಸ್ಟೇಡಿಯಂ ನಡೆಯಲಿರುವ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ ನಡೆಯಬೇಕಿದ್ದ ಈ ಪಂದ್ಯವವನ್ನು ಮಳೆಯ ಹಿನ್ನಲೆಯಲ್ಲಿ ಸೋಮವಾರಕ್ಕೆ ಮುಂದೂಡಲಾಗಿದೆ.

IPL 2023 Final CSK Vs GT: ಅಹಮದಾಬಾದ್​ನ ನರೇಂದ್ರ ಸ್ಟೇಡಿಯಂ ನಡೆಯಲಿರುವ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಭಾನುವಾರ ನಡೆಯಬೇಕಿದ್ದ ಈ ಪಂದ್ಯವವನ್ನು ಮಳೆಯ ಹಿನ್ನಲೆಯಲ್ಲಿ ಸೋಮವಾರಕ್ಕೆ ಮುಂದೂಡಲಾಗಿದೆ.

1 / 11
ಆದರೆ ಇದೀಗ ಸೋಮವಾರ ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಬಿಬಿಸಿ ಹವಾಮಾನ ವರದಿ ಪ್ರಕಾರ, ಸಂಜೆ 6.30 ರಿಂದ ಅಹಮದಾಬಾದ್​ನತ್ತ ಸುತ್ತ ಮುತ್ತ ಮಳೆಯಾಗಲಿದೆ. ಈ ತುಂತುರು ಮಳೆಯು ರಾತ್ರಿ 10.30 ರವರೆಗೆ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಆದರೆ ಇದೀಗ ಸೋಮವಾರ ಕೂಡ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಬಿಬಿಸಿ ಹವಾಮಾನ ವರದಿ ಪ್ರಕಾರ, ಸಂಜೆ 6.30 ರಿಂದ ಅಹಮದಾಬಾದ್​ನತ್ತ ಸುತ್ತ ಮುತ್ತ ಮಳೆಯಾಗಲಿದೆ. ಈ ತುಂತುರು ಮಳೆಯು ರಾತ್ರಿ 10.30 ರವರೆಗೆ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

2 / 11
ಇತ್ತ ಮೀಸಲು ದಿನದಂದು ಕೂಡ ಮಳೆಯಾದರೆ ಓವರ್​ಗಳ ಕಡಿತದೊಂದಿಗೆ ಪಂದ್ಯ ಆಯೋಜಿಸುವುದು ಖಚಿತ. ಏಕೆಂದರೆ ನಿಗದಿತ ಸಮಯದೊಳಗೆ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ 1 ಗಂಟೆಯನ್ನು ಬಳಸಲಾಗುತ್ತದೆ.

ಇತ್ತ ಮೀಸಲು ದಿನದಂದು ಕೂಡ ಮಳೆಯಾದರೆ ಓವರ್​ಗಳ ಕಡಿತದೊಂದಿಗೆ ಪಂದ್ಯ ಆಯೋಜಿಸುವುದು ಖಚಿತ. ಏಕೆಂದರೆ ನಿಗದಿತ ಸಮಯದೊಳಗೆ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ 1 ಗಂಟೆಯನ್ನು ಬಳಸಲಾಗುತ್ತದೆ.

3 / 11
7.30 ಕ್ಕೆ ಶುರುವಾಗಬೇಕಿರುವ ಪಂದ್ಯವು ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಅಂದರೆ 2 ತಂಡಗಳು 20 ಓವರ್​ಗಳನ್ನು ಆಡಲಿದೆ. ಒಂದು ವೇಳೆ 9.40 ರ ಬಳಿಕ ಪಂದ್ಯ ಆರಂಭವಾದರೆ ಓವರ್​ಗಳನ್ನು ಕಡಿತ ಮಾಡಲಾಗುತ್ತದೆ.

7.30 ಕ್ಕೆ ಶುರುವಾಗಬೇಕಿರುವ ಪಂದ್ಯವು ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಅಂದರೆ 2 ತಂಡಗಳು 20 ಓವರ್​ಗಳನ್ನು ಆಡಲಿದೆ. ಒಂದು ವೇಳೆ 9.40 ರ ಬಳಿಕ ಪಂದ್ಯ ಆರಂಭವಾದರೆ ಓವರ್​ಗಳನ್ನು ಕಡಿತ ಮಾಡಲಾಗುತ್ತದೆ.

4 / 11
ಇಲ್ಲಿ 9.45 ಕ್ಕೆ ಪಂದ್ಯವನ್ನು ಆರಂಭಿಸಿದರೆ 1 ಓವರ್ ಅನ್ನು ಕಡಿತ ಮಾಡಲಾಗುತ್ತದೆ. ಅಂದರೆ ತಲಾ 19 ಓವರ್​ಗಳ ಪಂದ್ಯ ನಡೆಯಲಿದೆ. ಇನ್ನು ಉಭಯ ತಂಡಗಳಿಗೂ ಟೈಮ್ ಔಟ್ ಕೂಡ ಇರಲಿದೆ.

ಇಲ್ಲಿ 9.45 ಕ್ಕೆ ಪಂದ್ಯವನ್ನು ಆರಂಭಿಸಿದರೆ 1 ಓವರ್ ಅನ್ನು ಕಡಿತ ಮಾಡಲಾಗುತ್ತದೆ. ಅಂದರೆ ತಲಾ 19 ಓವರ್​ಗಳ ಪಂದ್ಯ ನಡೆಯಲಿದೆ. ಇನ್ನು ಉಭಯ ತಂಡಗಳಿಗೂ ಟೈಮ್ ಔಟ್ ಕೂಡ ಇರಲಿದೆ.

5 / 11
ಇನ್ನು 10 ಗಂಟೆಗೆ ಪಂದ್ಯ ಆರಂಭವಾದರೆ ತಲಾ 17 ಓವರ್​ಗಳ ಪಂದ್ಯ ನಡೆಯಲಿದೆ. ಹಾಗೆಯೇ 10.15 ಕ್ಕೆ ಅಥವಾ 10.30 ಕ್ಕೆ ಪಂದ್ಯ ಶುರುವಾದರೆ ಉಭಯ ತಂಡಗಳ ಇನಿಂಗ್ಸ್​ 15 ಓವರ್​ಗಳಿಗೆ ಸೀಮಿತವಾಗಿರಲಿದೆ.

ಇನ್ನು 10 ಗಂಟೆಗೆ ಪಂದ್ಯ ಆರಂಭವಾದರೆ ತಲಾ 17 ಓವರ್​ಗಳ ಪಂದ್ಯ ನಡೆಯಲಿದೆ. ಹಾಗೆಯೇ 10.15 ಕ್ಕೆ ಅಥವಾ 10.30 ಕ್ಕೆ ಪಂದ್ಯ ಶುರುವಾದರೆ ಉಭಯ ತಂಡಗಳ ಇನಿಂಗ್ಸ್​ 15 ಓವರ್​ಗಳಿಗೆ ಸೀಮಿತವಾಗಿರಲಿದೆ.

6 / 11
ಹಾಗೆಯೇ 10.45 ಕ್ಕೆ ಪಂದ್ಯ ಆರಂಭವಾದರೆ ಓವರ್​ಗಳ ಸಂಖ್ಯೆಯನ್ನು 14 ಕ್ಕೆ ಇಳಿಸಲಾಗುತ್ತದೆ. ಅದಂತೆ ಉಭಯ ತಂಡಗಳು ತಲಾ 14 ಓವರ್​ ಓವರ್​ಗಳ ಇನಿಂಗ್ಸ್ ಆಡಲಿದೆ. ಇನ್ನು 11 ಗಂಟೆಗೆ ಪಂದ್ಯ ಆರಂಭವಾದರೆ ತಲಾ 12 ಓವರ್​ಗಳ ಪಂದ್ಯ ನಡೆಯಲಿದೆ.

ಹಾಗೆಯೇ 10.45 ಕ್ಕೆ ಪಂದ್ಯ ಆರಂಭವಾದರೆ ಓವರ್​ಗಳ ಸಂಖ್ಯೆಯನ್ನು 14 ಕ್ಕೆ ಇಳಿಸಲಾಗುತ್ತದೆ. ಅದಂತೆ ಉಭಯ ತಂಡಗಳು ತಲಾ 14 ಓವರ್​ ಓವರ್​ಗಳ ಇನಿಂಗ್ಸ್ ಆಡಲಿದೆ. ಇನ್ನು 11 ಗಂಟೆಗೆ ಪಂದ್ಯ ಆರಂಭವಾದರೆ ತಲಾ 12 ಓವರ್​ಗಳ ಪಂದ್ಯ ನಡೆಯಲಿದೆ.

7 / 11
ಒಂದು ವೇಳೆ 11.15 ಕ್ಕೆ ಪಂದ್ಯ ಶುರುವಾದರೆ 10 ಓವರ್​ಗಳ ಇನಿಂಗ್ಸ್​ಗಳನ್ನು ಆಡಲಾಗುತ್ತದೆ. ಹಾಗೆಯೇ 11.30 ಕ್ಕೆ ಪಂದ್ಯ ಆರಂಭವಾಗುವುದಾದರೆ ಓವರ್ ಸಂಖ್ಯೆ 9 ಕ್ಕೆ ಇಳಿಯಲಿದೆ. 11.45 ರಿಂದ ಪಂದ್ಯ ಶುರುವಾಗುವುದಾದರೆ ತಲಾ 7 ಓವರ್​ಗಳ ಇನಿಂಗ್ಸ್ ನಡೆಯಲಿದೆ.

ಒಂದು ವೇಳೆ 11.15 ಕ್ಕೆ ಪಂದ್ಯ ಶುರುವಾದರೆ 10 ಓವರ್​ಗಳ ಇನಿಂಗ್ಸ್​ಗಳನ್ನು ಆಡಲಾಗುತ್ತದೆ. ಹಾಗೆಯೇ 11.30 ಕ್ಕೆ ಪಂದ್ಯ ಆರಂಭವಾಗುವುದಾದರೆ ಓವರ್ ಸಂಖ್ಯೆ 9 ಕ್ಕೆ ಇಳಿಯಲಿದೆ. 11.45 ರಿಂದ ಪಂದ್ಯ ಶುರುವಾಗುವುದಾದರೆ ತಲಾ 7 ಓವರ್​ಗಳ ಇನಿಂಗ್ಸ್ ನಡೆಯಲಿದೆ.

8 / 11
ಇನ್ನು 11.56 ರೊಳಗೆ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 12.06 ರಿಂದ ಶುರುವಾಗಲಿದೆ.

ಇನ್ನು 11.56 ರೊಳಗೆ ಪಂದ್ಯವನ್ನು ನಡೆಸಲು ಸಾಧ್ಯವಾಗದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದೆ. ಈ 5 ಓವರ್​ಗಳ ಪಂದ್ಯವು ರಾತ್ರಿ 12.06 ರಿಂದ ಶುರುವಾಗಲಿದೆ.

9 / 11
ಒಂದು ವೇಳೆ ರಾತ್ರಿ 12.06 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಕೂಡ ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೊರೆ ಹೋಗಲಾಗುತ್ತದೆ. ಇಲ್ಲಿ ಸೂಪರ್ ಓವರ್ ನಡೆಸಲು ಪಿಚ್ ಸಿದ್ಧವಿದೆಯಾ ಎಂಬುದನ್ನು ಮುಖ್ಯವಾಗಿ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ.

ಒಂದು ವೇಳೆ ರಾತ್ರಿ 12.06 ರಿಂದ 12.50 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಕೂಡ ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೊರೆ ಹೋಗಲಾಗುತ್ತದೆ. ಇಲ್ಲಿ ಸೂಪರ್ ಓವರ್ ನಡೆಸಲು ಪಿಚ್ ಸಿದ್ಧವಿದೆಯಾ ಎಂಬುದನ್ನು ಮುಖ್ಯವಾಗಿ ಪರಿಗಣನೆ ತೆಗೆದುಕೊಳ್ಳಲಾಗುತ್ತದೆ.

10 / 11
ಈ ಬಗ್ಗೆ ಉಭಯ ತಂಡಗಳ ನಾಯಕರುಗಳೊಂದಿಗೆ ಚರ್ಚಿಸಿದ ಬಳಿಕ ಅಂಪೈರ್ ಸೂಪರ್ ಓವರ್​ ನಡೆಸಲು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಸೂಪರ್ ಓವರ್ ನಡೆಸಲು ಕೂಡ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಲಿದೆ.

ಈ ಬಗ್ಗೆ ಉಭಯ ತಂಡಗಳ ನಾಯಕರುಗಳೊಂದಿಗೆ ಚರ್ಚಿಸಿದ ಬಳಿಕ ಅಂಪೈರ್ ಸೂಪರ್ ಓವರ್​ ನಡೆಸಲು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಸೂಪರ್ ಓವರ್ ನಡೆಸಲು ಕೂಡ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ಗುಜರಾತ್ ಟೈಟಾನ್ಸ್ ತಂಡ ಚಾಂಪಿಯನ್ ಆಗಲಿದೆ.

11 / 11
Follow us
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಟಿವಿ ಶೋಗಳಲ್ಲಿ ಚೈತ್ರಾ ಕುಂದಾಪುರ ಬ್ಯುಸಿ; ಅಭಿಮಾನಿಗಳಿಗೆ ಒಂದು ಪ್ರಶ್ನೆ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ಪುಟ್ಟ ಅಭಿಮಾನಿಗೆ ಮುತ್ತಿಟ್ಟು, ಸೆಲ್ಫಿ ತೆಗೆದುಕೊಂಡ ಜಗನ್ ಮೋಹನ್ ರೆಡ್ಡಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ವಿಮಾನದಲ್ಲಿ ಕೂತ ಮಹಿಳೆಯರ ಮುಖದಲ್ಲಿ ಸಂತಸ, ಸಂಭ್ರಮ ಜೊತೆ ಗಾಬರಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಪವನ್ ಕಲ್ಯಾಣ್; ವಿಡಿಯೋ ನೋಡಿ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಮಹಾಕುಂಭಮೇಳ ವಾರದ ನಂತರ ಮಹಾಶಿವರಾತ್ರಿಯಂದು ಸಂಪನ್ನಗೊಳ್ಳಲಿದೆ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಯುವತಿ ಹೇಳುವ ಮಾತುಗಳು ಗೊಂದಲ ಹುಟ್ಟಿಸುತ್ತವೆ, ಸ್ಪಷ್ಟ ಚಿತ್ರಣ ಸಿಗಲ್ಲ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಮಹಾಕುಂಭದಲ್ಲಿ ಕುಟುಂಬದೊಂದಿಗೆ ಪವಿತ್ರ ಸ್ನಾನ ಮಾಡಿದ ಸಚಿವ ಪ್ರಲ್ಹಾದ್ ಜೋಶಿ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಇ ಖಾತಾ ಅಭಿಯಾನ ಗಡುವು ವಿಸ್ತರಿಸಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ: ಶಾಸಕ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕೇಳಿದ ಪ್ರಶ್ನೆಗಳಿಗೆ ಪತ್ರಿಕಾ ಗೋಷ್ಠಿಯಲ್ಲಿ ಉತ್ತರಿಸುವುನೆಂದ ವಿಜಯೇಂದ್ರ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ
ಕುಮಾರಸ್ವಾಮಿ ಮತ್ತು ಸಂಬಂಧಿಕರು ಗೋಮಾಳ ಕಬಳಿಸಿರುವರೆಂದು ಹಿರೇಮಠ ಆರೋಪ