AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಠಾತ್ತಾಗಿ ತಂಡದ ನಾಯಕನನ್ನು ಬದಲಾಯಿಸಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸ್..!

Mumbai Indians: ವಿಶ್ವದ ವಿವಿದ ಟಿ20 ಲೀಗ್​ಗಳಲ್ಲಿ ತಂಡಗಳನ್ನು ಖರೀದಿಸಿರುವ ಮುಂಬೈ ಇಂಡಿಯನ್ಸ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡುವ ತನ್ನ ಒಡೆತನದ MI ಕೇಪ್ ಟೌನ್ ತಂಡದ ನಾಯಕತ್ವದಲ್ಲಿ ಬದಲಾವಣೆ ತಂದಿದೆ.

ಪೃಥ್ವಿಶಂಕರ
|

Updated on:Jan 07, 2024 | 5:54 PM

Share
ಕಳೆದ ತಿಂಗಳಷ್ಟೇ ಐಪಿಎಲ್​ನ ಅತ್ಯಂತ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ತನ್ನ ತಂಡದ ನಾಯಕನನ್ನು ಬದಲಿಸಿ ಸಾಕಷ್ಟು ಸುದ್ದಿಯಾಗಿತ್ತು. ಅಲ್ಲದೆ ಗುಜರಾತ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಟ್ರೇಡಿಂಗ್ ಮೂಲಕ ಖರೀದಿ ಅವರಿಗೆ ನಾಯಕತ್ವ ನೀಡಿತ್ತು.

ಕಳೆದ ತಿಂಗಳಷ್ಟೇ ಐಪಿಎಲ್​ನ ಅತ್ಯಂತ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ತನ್ನ ತಂಡದ ನಾಯಕನನ್ನು ಬದಲಿಸಿ ಸಾಕಷ್ಟು ಸುದ್ದಿಯಾಗಿತ್ತು. ಅಲ್ಲದೆ ಗುಜರಾತ್ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಟ್ರೇಡಿಂಗ್ ಮೂಲಕ ಖರೀದಿ ಅವರಿಗೆ ನಾಯಕತ್ವ ನೀಡಿತ್ತು.

1 / 7
ಇದೀಗ ತನ್ನ ಮಾಲೀಕತ್ವದ ಇನ್ನೊಂದು ತಂಡದ ನಾಯಕನನ್ನು ಇದಕ್ಕಿದ್ದಂತೆ ಬದಲಿಸಿದೆ. ವಾಸ್ತವವಾಗಿ ವಿಶ್ವದ ವಿವಿದ ಲೀಗ್​ಗಳಲ್ಲಿ ತಂಡಗಳನ್ನು ಖರೀದಿಸಿರುವ ಮುಂಬೈ ಇಂಡಿಯನ್ಸ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡುವ ತನ್ನ ಒಡೆತನದ MI ಕೇಪ್ ಟೌನ್ ತಂಡದ ನಾಯಕತ್ವದಲ್ಲಿ ಬದಲಾವಣೆ ತಂದಿದೆ.

ಇದೀಗ ತನ್ನ ಮಾಲೀಕತ್ವದ ಇನ್ನೊಂದು ತಂಡದ ನಾಯಕನನ್ನು ಇದಕ್ಕಿದ್ದಂತೆ ಬದಲಿಸಿದೆ. ವಾಸ್ತವವಾಗಿ ವಿಶ್ವದ ವಿವಿದ ಲೀಗ್​ಗಳಲ್ಲಿ ತಂಡಗಳನ್ನು ಖರೀದಿಸಿರುವ ಮುಂಬೈ ಇಂಡಿಯನ್ಸ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಆಡುವ ತನ್ನ ಒಡೆತನದ MI ಕೇಪ್ ಟೌನ್ ತಂಡದ ನಾಯಕತ್ವದಲ್ಲಿ ಬದಲಾವಣೆ ತಂದಿದೆ.

2 / 7
ಈ ಮೊದಲು MI ಕೇಪ್ ಟೌನ್ ತಂಡದ ನಾಯಕನಾಗಿದ್ದ ಅಫ್ಘಾನಿಸ್ತಾನ ತಂಡದ ಸ್ಪಿನ್ ಆಲ್​ರೌಂಡರ್ ರಶೀದ್ ಖಾನ್​ರನ್ನು ಕೆಳಗಿಳಿಸಿರುವ ಫ್ರಾಂಚೈಸ್, ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಲ್​ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು ನೂತನ ನಾಯಕನಾಗಿ ಆಯ್ಕೆ ಮಾಡಿದೆ.

ಈ ಮೊದಲು MI ಕೇಪ್ ಟೌನ್ ತಂಡದ ನಾಯಕನಾಗಿದ್ದ ಅಫ್ಘಾನಿಸ್ತಾನ ತಂಡದ ಸ್ಪಿನ್ ಆಲ್​ರೌಂಡರ್ ರಶೀದ್ ಖಾನ್​ರನ್ನು ಕೆಳಗಿಳಿಸಿರುವ ಫ್ರಾಂಚೈಸ್, ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಆಲ್​ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು ನೂತನ ನಾಯಕನಾಗಿ ಆಯ್ಕೆ ಮಾಡಿದೆ.

3 / 7
ಫ್ರಾಂಚೈಸಿಯ ಈ ಬದಲಾವಣೆಗೂ ಕಾರಣವಿದ್ದು, ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಶೀದ್ ಖಾನ್, ದಕ್ಷಿಣ ಆಫ್ರಿಕಾದ ನಡೆಯಲ್ಲಿರುವ ಟಿ20 ಲೀಗ್‌ನ ಹೊಸ ಆವೃತ್ತಿಗೆ ಲಭ್ಯವಿರುವುದಿಲ್ಲ. ಅಲ್ಲದೆ ಇದರಿಂದಾಗಿ ರಶೀದ್ ಬಿಗ್ ಬ್ಯಾಷ್ ಲೀಗ್ ಕೂಡ ಆಡಲು ಸಾಧ್ಯವಾಗಿಲ್ಲ. ಆದರೆ ಭಾರತ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡದಲ್ಲಿ ಆಯ್ಕೆಯಾಗಿರುವ ರಶೀದ್, ಈ ಸರಣಿಯಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಇದೆ.

ಫ್ರಾಂಚೈಸಿಯ ಈ ಬದಲಾವಣೆಗೂ ಕಾರಣವಿದ್ದು, ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಶೀದ್ ಖಾನ್, ದಕ್ಷಿಣ ಆಫ್ರಿಕಾದ ನಡೆಯಲ್ಲಿರುವ ಟಿ20 ಲೀಗ್‌ನ ಹೊಸ ಆವೃತ್ತಿಗೆ ಲಭ್ಯವಿರುವುದಿಲ್ಲ. ಅಲ್ಲದೆ ಇದರಿಂದಾಗಿ ರಶೀದ್ ಬಿಗ್ ಬ್ಯಾಷ್ ಲೀಗ್ ಕೂಡ ಆಡಲು ಸಾಧ್ಯವಾಗಿಲ್ಲ. ಆದರೆ ಭಾರತ ವಿರುದ್ಧದ ಟಿ20 ಸರಣಿಗೆ ಅಫ್ಘಾನಿಸ್ತಾನ ತಂಡದಲ್ಲಿ ಆಯ್ಕೆಯಾಗಿರುವ ರಶೀದ್, ಈ ಸರಣಿಯಲ್ಲಿ ಆಡುವ ಬಗ್ಗೆ ಸಸ್ಪೆನ್ಸ್ ಇದೆ.

4 / 7
ಹೀಗಾಗಿ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಹೊಸ ಸೀಸನ್​ಗಾಗಿ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಕೇಪ್ ಟೌನ್‌ ತಂಡದ ಹೊಸ ನಾಯಕನಾಗಿ ನೇಮಿಸಿದೆ .

ಹೀಗಾಗಿ ಫ್ರಾಂಚೈಸಿಯು ದಕ್ಷಿಣ ಆಫ್ರಿಕಾ ಟಿ20 ಲೀಗ್‌ನ ಹೊಸ ಸೀಸನ್​ಗಾಗಿ ವೆಸ್ಟ್ ಇಂಡೀಸ್‌ನ ಮಾಜಿ ಆಲ್‌ರೌಂಡರ್ ಕೀರಾನ್ ಪೊಲಾರ್ಡ್ ಅವರನ್ನು ಮುಂಬೈ ಇಂಡಿಯನ್ಸ್ ಕೇಪ್ ಟೌನ್‌ ತಂಡದ ಹೊಸ ನಾಯಕನಾಗಿ ನೇಮಿಸಿದೆ .

5 / 7
ಇದಕ್ಕೂ ಮೊದಲು, ಮುಂಬೈ ಫ್ರಾಂಚೈಸಿಯು ILT20 ಲೀಗ್​ನಲ್ಲಿ ತನ್ನ MI ಎಮಿರೇಟ್ಸ್‌ ತಂಡದ ನಾಯಕನಾಗಿ ಕೀರಾನ್ ಪೊಲಾರ್ಡ್ ಅವರನ್ನು ಮಾಡಿತ್ತು. ಆದರೆ SA20 ಮತ್ತು ILT20 ಬಹುತೇಕ ಏಕಕಾಲಿದಲ್ಲಿ ನಡೆಯುವ ಕಾರಣ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ಪೊಲಾರ್ಡ್ ಬದಲಿಗೆ ನಾಯಕನನ್ನಾಗಿ ಆಯ್ಕೆ ಮಾಡಿದೆ.

ಇದಕ್ಕೂ ಮೊದಲು, ಮುಂಬೈ ಫ್ರಾಂಚೈಸಿಯು ILT20 ಲೀಗ್​ನಲ್ಲಿ ತನ್ನ MI ಎಮಿರೇಟ್ಸ್‌ ತಂಡದ ನಾಯಕನಾಗಿ ಕೀರಾನ್ ಪೊಲಾರ್ಡ್ ಅವರನ್ನು ಮಾಡಿತ್ತು. ಆದರೆ SA20 ಮತ್ತು ILT20 ಬಹುತೇಕ ಏಕಕಾಲಿದಲ್ಲಿ ನಡೆಯುವ ಕಾರಣ, ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಅವರನ್ನು ಪೊಲಾರ್ಡ್ ಬದಲಿಗೆ ನಾಯಕನನ್ನಾಗಿ ಆಯ್ಕೆ ಮಾಡಿದೆ.

6 / 7
ಇದರೊಂದಿಗೆ ಮುಂಬೈ ಇಂಡಿಯನ್ಸ್ ಮೂರು ವಿಭಿನ್ನ ಲೀಗ್‌ಗಳಲ್ಲಿ ತಮ್ಮ ತಂಡದ ನಾಯಕರನ್ನು ಬದಲಾಯಿಸಿದೆ. ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕರನ್ನಾಗಿ ನೇಮಕ ಮಾಡಿರುವ ಫ್ರಾಂಚೈಸ್, ಇದೀಗ ದಕ್ಷಿಣ ಆಫ್ರಿಕಾ T20 ಲೀಗ್‌ನಲ್ಲಿ ಕೀರಾನ್ ಪೊಲಾರ್ಡ್ ಅವರನ್ನು ನಾಯಕನಾಗಿ ನೇಮಿಸಿದೆ. ಹಾಗೆಯೇ ನಿಕೋಲಸ್ ಪೂರನ್ ಅವರನ್ನು ILT20 ಗೆ MI ಎಮಿರೇಟ್ಸ್‌ನ ನಾಯಕನನ್ನಾಗಿ ಆಯ್ಕೆಮಾಡಿದೆ.

ಇದರೊಂದಿಗೆ ಮುಂಬೈ ಇಂಡಿಯನ್ಸ್ ಮೂರು ವಿಭಿನ್ನ ಲೀಗ್‌ಗಳಲ್ಲಿ ತಮ್ಮ ತಂಡದ ನಾಯಕರನ್ನು ಬದಲಾಯಿಸಿದೆ. ಐಪಿಎಲ್​ನಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕರನ್ನಾಗಿ ನೇಮಕ ಮಾಡಿರುವ ಫ್ರಾಂಚೈಸ್, ಇದೀಗ ದಕ್ಷಿಣ ಆಫ್ರಿಕಾ T20 ಲೀಗ್‌ನಲ್ಲಿ ಕೀರಾನ್ ಪೊಲಾರ್ಡ್ ಅವರನ್ನು ನಾಯಕನಾಗಿ ನೇಮಿಸಿದೆ. ಹಾಗೆಯೇ ನಿಕೋಲಸ್ ಪೂರನ್ ಅವರನ್ನು ILT20 ಗೆ MI ಎಮಿರೇಟ್ಸ್‌ನ ನಾಯಕನನ್ನಾಗಿ ಆಯ್ಕೆಮಾಡಿದೆ.

7 / 7

Published On - 5:52 pm, Sun, 7 January 24

Follow Us
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದರು: ವಿದ್ಯಾರ್ಥಿ ಗಂಭೀರ ಆರೋಪ
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ತೆಲಂಗಾಣದಲ್ಲಿ ತಂದೆ ಮಗಳ ರಾಜಕೀಯ ಜಿದ್ದು: ಹೊಸ ಪಕ್ಷ ಘೋಷಿಸಿದ ಕವಿತಾ!
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ಕಲಬುರಗಿ ಜಿಲ್ಲೆ ಡಿಸಿ ಕಚೇರಿಯಲ್ಲೇ ಇಲ್ಲ ಕುಡಿಯುವ ನೀರು
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ವಿನಯ್ ಕುಲಕರ್ಣಿ ಬೆಂಬಲಕ್ಕೆ ನಿಂತ ಅಭಿಮಾನಿಗಳು!
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ರಣವೀರ್ ಸಿಂಗ್ ದೈವಕ್ಕೆ ಅವಮಾನ ಮಾಡಿದ ಪ್ರಕರಣ ಇತ್ಯರ್ಥ; ಷರತ್ತುಗಳೇನು?
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ಜೀವಾವಧಿ ಶಿಕ್ಷೆಗೆ ತಡೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಿನಯ್ ಕುಲಕರ್ಣಿ!
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?
ದೆಹಲಿಯಲ್ಲಿ ಡಿಕೆಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಮಣಿಪಾಲ: ಪಬ್ಲಿಕ್​ನಲ್ಲೇ ಯುವಜೋಡಿಯ ಸರಸ ಸಲ್ಲಾಪ! ವಿಡಿಯೋ ವೈರಲ್
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ
ಶರಬತ್​ನಂತೆಯೇ ಕಾಣ್ಸುತ್ತೆ, ಕುಡಿದ್ರೆ ಇಡೀ ದಿನ ನಶೆಯಲ್ಲಿ ತೇಲಾಡೋದು ಪಕ್ಕಾ