TNPL 2023: ಕೊನೆಯ ಎಸೆತದಲ್ಲಿ 18 ರನ್! ಇತಿಹಾಸ ಸೃಷ್ಟಿಸಿದ ತಮಿಳುನಾಡು ಪ್ರೀಮಿಯರ್ ಲೀಗ್

TNPL 2023: ಸೇಲಂ ಸ್ಪಾರ್ಟನ್ಸ್ ತಂಡದ ವೇಗಿ ಅಭಿಷೇಕ್ ತನ್ವರ್ ಇನ್ನಿಂಗ್ಸ್​ನ ಕೊನೆಯ ಓವರ್ ಬೌಲ್ ಮಾಡಿ ಈ ಓವರ್​ನ ಕೊನೆಯ ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿ ಟಿ20 ಕ್ರಿಕೆಟ್​ನಲ್ಲಿ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು.

|

Updated on:Jun 14, 2023 | 8:11 AM

ಸಾಮಾನ್ಯವಾಗಿ ನಾವು ಟಿ20 ಕ್ರಿಕೆಟ್​ನಲ್ಲಿ ಒಬ್ಬ ಬ್ಯಾಟರ್ 6 ಬಾಲ್​ಗೆ 6 ಸಿಕ್ಸರ್ ಹೊಡೆಯವುದನ್ನು ನೋಡಿದ್ದೇವೆ. ಹಾಗೆಯೇ ಇನ್ನಿಂಗ್ಸ್​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವುದನ್ನು ನೋಡಿದ್ದೇವೆ. ಆದರೆ ಜೂ.12 ರಿಂದ ಆರಂಭವಾಗಿರುವ ತಮಿಳುನಾಡು ಪ್ರೀಮಿಯರ್ ಲೀಗ್​ ಟಿ20 ಕ್ರಿಕೆಟ್​ನ ಇತಿಹಾಸದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ನಾವು ಟಿ20 ಕ್ರಿಕೆಟ್​ನಲ್ಲಿ ಒಬ್ಬ ಬ್ಯಾಟರ್ 6 ಬಾಲ್​ಗೆ 6 ಸಿಕ್ಸರ್ ಹೊಡೆಯವುದನ್ನು ನೋಡಿದ್ದೇವೆ. ಹಾಗೆಯೇ ಇನ್ನಿಂಗ್ಸ್​ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವುದನ್ನು ನೋಡಿದ್ದೇವೆ. ಆದರೆ ಜೂ.12 ರಿಂದ ಆರಂಭವಾಗಿರುವ ತಮಿಳುನಾಡು ಪ್ರೀಮಿಯರ್ ಲೀಗ್​ ಟಿ20 ಕ್ರಿಕೆಟ್​ನ ಇತಿಹಾಸದಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

1 / 7
ಜೂ.13 ರಂದು ನಡೆದ ಲೀಗ್​ನ 2ನೇ ಪಂದ್ಯ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಸೇಲಂ ಸ್ಪಾರ್ಟನ್ಸ್ ತಂಡದ ವೇಗಿ ಅಭಿಷೇಕ್ ತನ್ವರ್ ಇನ್ನಿಂಗ್ಸ್​ನ ಕೊನೆಯ ಓವರ್ ಬೌಲ್ ಮಾಡಿ ಈ ಓವರ್​ನ ಕೊನೆಯ ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿ ಟಿ20 ಕ್ರಿಕೆಟ್​ನಲ್ಲಿ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು.

ಜೂ.13 ರಂದು ನಡೆದ ಲೀಗ್​ನ 2ನೇ ಪಂದ್ಯ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಸೇಲಂ ಸ್ಪಾರ್ಟನ್ಸ್ ತಂಡದ ವೇಗಿ ಅಭಿಷೇಕ್ ತನ್ವರ್ ಇನ್ನಿಂಗ್ಸ್​ನ ಕೊನೆಯ ಓವರ್ ಬೌಲ್ ಮಾಡಿ ಈ ಓವರ್​ನ ಕೊನೆಯ ಎಸೆತದಲ್ಲಿ ಬರೋಬ್ಬರಿ 18 ರನ್ ನೀಡಿ ಟಿ20 ಕ್ರಿಕೆಟ್​ನಲ್ಲಿ ಬೇಡದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು.

2 / 7
ವಾಸ್ತವವಾಗಿ ಅಭಿಷೇಕ್ ತನ್ವರ್ ಎಸೆದ 20ನೇ ಓವರ್​ನ ಕೊನೆಯ ಎಸೆತವನ್ನು ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ಬ್ಯಾಟರ್ ಸಂಜಯ್ ಯಾದವ್ ಎದುರಿಸಿದರು. ಆದರೆ ಈ ಎಸೆತದಲ್ಲಿ ಅವರು ಕ್ಲಿನ್ ಬೌಲ್ಡ್ ಆದರು. ಆದರೆ ದುರಾದೃಷ್ಟ ಎಂಬಂತೆ ಈ ಎಸೆತ ನೋ ಬಾಲ್ ಆಗಿತ್ತು.

ವಾಸ್ತವವಾಗಿ ಅಭಿಷೇಕ್ ತನ್ವರ್ ಎಸೆದ 20ನೇ ಓವರ್​ನ ಕೊನೆಯ ಎಸೆತವನ್ನು ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ಬ್ಯಾಟರ್ ಸಂಜಯ್ ಯಾದವ್ ಎದುರಿಸಿದರು. ಆದರೆ ಈ ಎಸೆತದಲ್ಲಿ ಅವರು ಕ್ಲಿನ್ ಬೌಲ್ಡ್ ಆದರು. ಆದರೆ ದುರಾದೃಷ್ಟ ಎಂಬಂತೆ ಈ ಎಸೆತ ನೋ ಬಾಲ್ ಆಗಿತ್ತು.

3 / 7
ನೋ ಬಾಲ್​ನ ಪ್ರಯೋಜನ ಪಡೆದ ಸಂಜಯ್ ಯಾದವ್, ಭರ್ಜರಿ ಸಿಕ್ಸರ್ ಸಿಡಿಸಿದರು. ಅಚ್ಚರಿ ಎಂಬಂತೆ ಆ ಚೆಂಡು ಮತ್ತೆ ನೋ ಬಾಲ್ ಆಯಿತು. ಇಲ್ಲಿಯವರೆಗೆ 8 ರನ್ ನೀಡಿದ ಅಭಿಷೇಕ್ ತನ್ವರ್ ಮತ್ತೊಂದು ಬಾಲ್ ಮಾಡಿದರು. ಈ ಎಸೆತದಲ್ಲಿ ಬ್ಯಾಟ್ಸ್​ಮನ್ 2 ರನ್ ತೆಗೆದುಕೊಂಡರು.

ನೋ ಬಾಲ್​ನ ಪ್ರಯೋಜನ ಪಡೆದ ಸಂಜಯ್ ಯಾದವ್, ಭರ್ಜರಿ ಸಿಕ್ಸರ್ ಸಿಡಿಸಿದರು. ಅಚ್ಚರಿ ಎಂಬಂತೆ ಆ ಚೆಂಡು ಮತ್ತೆ ನೋ ಬಾಲ್ ಆಯಿತು. ಇಲ್ಲಿಯವರೆಗೆ 8 ರನ್ ನೀಡಿದ ಅಭಿಷೇಕ್ ತನ್ವರ್ ಮತ್ತೊಂದು ಬಾಲ್ ಮಾಡಿದರು. ಈ ಎಸೆತದಲ್ಲಿ ಬ್ಯಾಟ್ಸ್​ಮನ್ 2 ರನ್ ತೆಗೆದುಕೊಂಡರು.

4 / 7
ಆದರೆ ಚೆಂಡು ಮತ್ತೆ ನೋ ಬಾಲ್ ಆಯಿತು. ದುರಾದೃಷ್ಟವೆಂಬಂತೆ ಮುಂದಿನ ಚೆಂಡು ನೋ ಬಾಲ್ ಆಗದೆ ವೈಡ್ ಆಯಿತು. ಇದರೊಂದಿಗೆ ಬೌಲರ್ ಕೊನೆಯ ಎಸೆತ ಇನ್ನೂ ಬಾಕಿ ಇರುವಾಗಲೇ 12 ರನ್ ನೀಡಿದ್ದರು.

ಆದರೆ ಚೆಂಡು ಮತ್ತೆ ನೋ ಬಾಲ್ ಆಯಿತು. ದುರಾದೃಷ್ಟವೆಂಬಂತೆ ಮುಂದಿನ ಚೆಂಡು ನೋ ಬಾಲ್ ಆಗದೆ ವೈಡ್ ಆಯಿತು. ಇದರೊಂದಿಗೆ ಬೌಲರ್ ಕೊನೆಯ ಎಸೆತ ಇನ್ನೂ ಬಾಕಿ ಇರುವಾಗಲೇ 12 ರನ್ ನೀಡಿದ್ದರು.

5 / 7
 ಅಂತಿಮವಾಗಿ ಕೊನೆಯ ಬಾಲ್​ನಲ್ಲೂ ಕೂಡ ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು. ಈ ಮೂಲಕ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ 18 ರನ್ ಬಂದವು. ಒಟ್ಟಾರೆ 20ನೇ ಓವರ್​ನ ಕೊನೆಯ ಎಸೆತದಲ್ಲಿ 3 ನೋ ಬಾಲ್ ಮತ್ತು 1 ವೈಡ್ ಸೇರಿದಂತೆ ಬೌಲರ್ 18 ರನ್ ನೀಡಿದರು.

ಅಂತಿಮವಾಗಿ ಕೊನೆಯ ಬಾಲ್​ನಲ್ಲೂ ಕೂಡ ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು. ಈ ಮೂಲಕ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ 18 ರನ್ ಬಂದವು. ಒಟ್ಟಾರೆ 20ನೇ ಓವರ್​ನ ಕೊನೆಯ ಎಸೆತದಲ್ಲಿ 3 ನೋ ಬಾಲ್ ಮತ್ತು 1 ವೈಡ್ ಸೇರಿದಂತೆ ಬೌಲರ್ 18 ರನ್ ನೀಡಿದರು.

6 / 7
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆಪಾಕ್ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 217 ರನ್ ಕಲೆಹಾಕಿತು. ಇದರಲ್ಲಿ ಕೊನೆಯ ಎಸೆತದಲ್ಲಿ 18 ರನ್ ಗಳಿಸಿದ ಸಂಜಯ್ ಯಾದವ್ 12 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು. 218 ರನ್‌ಗಳನ್ನು ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ಕೇವಲ 169 ರನ್ ಗಳಿಸಲಷ್ಟೇ ಶಕ್ತವಾಗಿ 52 ರನ್‌ಗಳ ಅಂತರದಿಂದ ಸೋಲನುಭವಿಸಿತು.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆಪಾಕ್ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 217 ರನ್ ಕಲೆಹಾಕಿತು. ಇದರಲ್ಲಿ ಕೊನೆಯ ಎಸೆತದಲ್ಲಿ 18 ರನ್ ಗಳಿಸಿದ ಸಂಜಯ್ ಯಾದವ್ 12 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು. 218 ರನ್‌ಗಳನ್ನು ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ಕೇವಲ 169 ರನ್ ಗಳಿಸಲಷ್ಟೇ ಶಕ್ತವಾಗಿ 52 ರನ್‌ಗಳ ಅಂತರದಿಂದ ಸೋಲನುಭವಿಸಿತು.

7 / 7

Published On - 8:07 am, Wed, 14 June 23

Follow us
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ