AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರುವೆಗಳು ದಿನಕ್ಕೆ ಎಷ್ಟು ಗಂಟೆಗಳ ಕಾಲ ನಿದ್ರಿಸುತ್ತವೆ? ಇಲ್ಲಿದೆ ಮಾಹಿತಿ

ಮನೆಯಲ್ಲಿ ಸಿಹಿತಿಂಡಿ ಏನಾದರೂ ಇದ್ದರೆ ಕಣ್ಣು ಮುಚ್ಚಿ ಬಿಡುವುದರೊಳಗಾಗಿ ಇರುವೆಗಳ ರಾಶಿಯೇ ತುಂಬಿರುತ್ತದೆ. ಸಾಮಾನ್ಯವಾಗಿ ಒಂದು ಕಡೆ ನಿಂತುಕೊಳ್ಳದೇ ಓಡಾಡುವ ಇರುವೆಗಳನ್ನು ನೋಡಿರುತ್ತೀರಿ. ಸಾಲುಗಟ್ಟಿ ಅತ್ತಿಂದ ಇತ್ತ ಓಡಾಡುವ ಇರುವೆಗಳು ಕೂಡ ವಿಶ್ರಾಂತಿ ಪಡೆದುಕೊಳ್ಳುತ್ತವೆ ಎನ್ನುವುದು ತಿಳಿದರೆ ಅಚ್ಚರಿಯೆನಿಸಬಹುದು. ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಸಾಯಿನಂದಾ
|

Updated on: Apr 28, 2025 | 5:35 PM

Share
ಇರುವೆಗಳನ್ನು ಯಾರು ನೋಡಿರಲ್ಲ ಹೇಳಿ, ಕೆಂಪು, ಕಪ್ಪು ಹೀಗೆ ಬಗೆ ಬಗೆಯ ಜಾತಿಯ ಇರುವೆಗಳಿವೆ. ಮನೆಯಲ್ಲಿ ಸಿಹಿತಿಂಡಿ ತಿನಿಸುಗಳನ್ನು ಎಲ್ಲಿಯೇ ಅಡಗಿಸಿಟ್ಟರೂ ಕೂಡ ಈ ಇರುವೆಗಳ ಕಣ್ಣು ತಪ್ಪಿಸಲು ಸಾಧ್ಯವೇ ಇಲ್ಲ. ಯಾವ ಮೂಲೆಯಲ್ಲಿ ಇಟ್ಟರೂ ಸಿಹಿ ತಿಂಡಿಗೆ ಇರುವೆಗಳು ಮುತ್ತಿಕೊಳ್ಳುತ್ತವೆ.

ಇರುವೆಗಳನ್ನು ಯಾರು ನೋಡಿರಲ್ಲ ಹೇಳಿ, ಕೆಂಪು, ಕಪ್ಪು ಹೀಗೆ ಬಗೆ ಬಗೆಯ ಜಾತಿಯ ಇರುವೆಗಳಿವೆ. ಮನೆಯಲ್ಲಿ ಸಿಹಿತಿಂಡಿ ತಿನಿಸುಗಳನ್ನು ಎಲ್ಲಿಯೇ ಅಡಗಿಸಿಟ್ಟರೂ ಕೂಡ ಈ ಇರುವೆಗಳ ಕಣ್ಣು ತಪ್ಪಿಸಲು ಸಾಧ್ಯವೇ ಇಲ್ಲ. ಯಾವ ಮೂಲೆಯಲ್ಲಿ ಇಟ್ಟರೂ ಸಿಹಿ ತಿಂಡಿಗೆ ಇರುವೆಗಳು ಮುತ್ತಿಕೊಳ್ಳುತ್ತವೆ.

1 / 6
ತುಂಬಾ ಚುರುಕಿನ ಜೀವಿಯಾಗಿರುವ ಇರುವೆ  ಶಿಸ್ತಿಗೆ ಮತ್ತೊಂದು ಹೆಸರೇ ಇವುಗಳು ಎನ್ನಬಹುದು. ಸಾಲುಗಟ್ಟಿ ಹೋಗುವ ಈ ಪುಟ್ಟ ಜೀವಿಗಳು ತೊಂದರೆ ಎದುರಾದರೆ ತನ್ನ ಬಳಗಕ್ಕೆ ಸೂಚನೆ ನೀಡುವ ರೀತಿಯನ್ನೇ ನೋಡಿದರೂ ಎಷ್ಟು ಬುದ್ಧಿವಂತ ಜೀವಿಗಳು ಎನಿಸುತ್ತದೆ. ಆದರೆ ಈ ಇರುವೆಗಳು ಕೂಡ ವಿಶ್ರಾಂತಿ ಪಡೆಯುತ್ತವೆಯಂತೆ.

ತುಂಬಾ ಚುರುಕಿನ ಜೀವಿಯಾಗಿರುವ ಇರುವೆ ಶಿಸ್ತಿಗೆ ಮತ್ತೊಂದು ಹೆಸರೇ ಇವುಗಳು ಎನ್ನಬಹುದು. ಸಾಲುಗಟ್ಟಿ ಹೋಗುವ ಈ ಪುಟ್ಟ ಜೀವಿಗಳು ತೊಂದರೆ ಎದುರಾದರೆ ತನ್ನ ಬಳಗಕ್ಕೆ ಸೂಚನೆ ನೀಡುವ ರೀತಿಯನ್ನೇ ನೋಡಿದರೂ ಎಷ್ಟು ಬುದ್ಧಿವಂತ ಜೀವಿಗಳು ಎನಿಸುತ್ತದೆ. ಆದರೆ ಈ ಇರುವೆಗಳು ಕೂಡ ವಿಶ್ರಾಂತಿ ಪಡೆಯುತ್ತವೆಯಂತೆ.

2 / 6
ಶ್ರಮ ಜೀವಿಗಳಾದ ಈ ಇರುವೆಗಳು ಕಷ್ಟಪಟ್ಟು ಆಹಾರ ಸಂಗ್ರಹಿಸುತ್ತದೆ. ಅಷ್ಟೇ ಅಲ್ಲದೇ ಈ ಇರುವೆಗಳು ದಿನ ಎಷ್ಟು ಗಂಟೆಗಳ ಕಾಲ ವಿಶ್ರಾಂತಿ ಪಡೆಯುತ್ತವೆ ಹಾಗೂ ನಿದ್ರಿಸುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

ಶ್ರಮ ಜೀವಿಗಳಾದ ಈ ಇರುವೆಗಳು ಕಷ್ಟಪಟ್ಟು ಆಹಾರ ಸಂಗ್ರಹಿಸುತ್ತದೆ. ಅಷ್ಟೇ ಅಲ್ಲದೇ ಈ ಇರುವೆಗಳು ದಿನ ಎಷ್ಟು ಗಂಟೆಗಳ ಕಾಲ ವಿಶ್ರಾಂತಿ ಪಡೆಯುತ್ತವೆ ಹಾಗೂ ನಿದ್ರಿಸುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.

3 / 6
ಹೌದು, ಚುರುಕಿನ ಜೀವಿಗಳಾಗಿರುವ ಈ ಇರುವೆಗಳು ಪ್ರತಿ 12 ಗಂಟೆಗಳಿಗೊಮ್ಮೆ ಸರಾಸರಿ 8 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತವೆಯಂತೆ. ಒಂದೇ ಬಾರಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳುವುದಿಲ್ಲ. ಸ್ವಲ್ಪ ಸಮಯ ಆಹಾರ ಸಂಗ್ರಹಿಸಿ ತನ್ನ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ಕೆಲವೇ ಕೆಲವು ನಿಮಿಷ ವಿಶ್ರಾಂತಿ ಪಡೆದು ಮತ್ತೆ ತನ್ನ ಕೆಲಸದಲ್ಲಿ ನಿರತವಾಗುತ್ತವೆ.

ಹೌದು, ಚುರುಕಿನ ಜೀವಿಗಳಾಗಿರುವ ಈ ಇರುವೆಗಳು ಪ್ರತಿ 12 ಗಂಟೆಗಳಿಗೊಮ್ಮೆ ಸರಾಸರಿ 8 ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತವೆಯಂತೆ. ಒಂದೇ ಬಾರಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳುವುದಿಲ್ಲ. ಸ್ವಲ್ಪ ಸಮಯ ಆಹಾರ ಸಂಗ್ರಹಿಸಿ ತನ್ನ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ಕೆಲವೇ ಕೆಲವು ನಿಮಿಷ ವಿಶ್ರಾಂತಿ ಪಡೆದು ಮತ್ತೆ ತನ್ನ ಕೆಲಸದಲ್ಲಿ ನಿರತವಾಗುತ್ತವೆ.

4 / 6
ರಾಣಿ ಇರುವೆಗಳ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬಹುದು. ಈ ಇರುವೆಗಳು ವಿಶ್ರಾಂತಿ ತೆಗೆದುಕೊಳ್ಳುವುದು ಹಾಗೂ ನಿದ್ರಿಸುವ ಸಮಯವು ತುಂಬಾನೇ ಕಡಿಮೆ ಎನ್ನಬಹುದು. ದಿನದಲ್ಲಿ ಕೇವಲ 92 ಬಾರಿ ಮಾತ್ರ ನಿದ್ರಿಸುವ ಮೂಲಕ ವಿಶ್ರಾಂತಿ ಪಡೆದುಕೊಳ್ಳುತ್ತವೆ.

ರಾಣಿ ಇರುವೆಗಳ ವಿಶ್ರಾಂತಿ ತೆಗೆದುಕೊಳ್ಳುವ ಸಮಯದಲ್ಲಿ ಸಾಕಷ್ಟು ವ್ಯತ್ಯಾಸ ಕಾಣಬಹುದು. ಈ ಇರುವೆಗಳು ವಿಶ್ರಾಂತಿ ತೆಗೆದುಕೊಳ್ಳುವುದು ಹಾಗೂ ನಿದ್ರಿಸುವ ಸಮಯವು ತುಂಬಾನೇ ಕಡಿಮೆ ಎನ್ನಬಹುದು. ದಿನದಲ್ಲಿ ಕೇವಲ 92 ಬಾರಿ ಮಾತ್ರ ನಿದ್ರಿಸುವ ಮೂಲಕ ವಿಶ್ರಾಂತಿ ಪಡೆದುಕೊಳ್ಳುತ್ತವೆ.

5 / 6
ಪ್ರತಿ ಸಲವೂ ಆರು ನಿಮಿಷಗಳಷ್ಟೇ ನಿದ್ರೆಗಾಗಿ ಸಮಯವನ್ನು ಮೀಸಲಿಡುತ್ತದೆ. ದಿನದಲ್ಲಿ ಒಂಭತ್ತೂವರೆ ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತವೆಯಂತೆ. ಅದಲ್ಲದೇ, ಈ ಕೆಲಸಗಾರ ಇರುವೆಗಳು ಶಿಫ್ಟ್ ಪ್ರಕಾರವಾಗಿ ಕೆಲಸವನ್ನು ಮಾಡಿ ಮುಗಿಸುತ್ತವೆಯಂತೆ. ಈ ಕೆಲಸಗಾರ ಇರುವೆಗಳು ದಿನಕ್ಕೆ 253 ಬಾರಿ ನಿದ್ರಿಸುತ್ತವೆ.

ಪ್ರತಿ ಸಲವೂ ಆರು ನಿಮಿಷಗಳಷ್ಟೇ ನಿದ್ರೆಗಾಗಿ ಸಮಯವನ್ನು ಮೀಸಲಿಡುತ್ತದೆ. ದಿನದಲ್ಲಿ ಒಂಭತ್ತೂವರೆ ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತವೆಯಂತೆ. ಅದಲ್ಲದೇ, ಈ ಕೆಲಸಗಾರ ಇರುವೆಗಳು ಶಿಫ್ಟ್ ಪ್ರಕಾರವಾಗಿ ಕೆಲಸವನ್ನು ಮಾಡಿ ಮುಗಿಸುತ್ತವೆಯಂತೆ. ಈ ಕೆಲಸಗಾರ ಇರುವೆಗಳು ದಿನಕ್ಕೆ 253 ಬಾರಿ ನಿದ್ರಿಸುತ್ತವೆ.

6 / 6
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ