ಬೀದರ್ ಜನತೆಯನ್ನು ರೋಮಾಂಚನಗೊಳಿಸಿದ ವಾಯುಸೇನೆ ಏರ್ ಶೋ, ಫೋಟೋಸ್ ನೋಡಿ
ಬೀದರ್ ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನು ಜನರಿಗೆ, ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ ಆವರಣದಲ್ಲಿ ಬೀದರ್ನ ಏರ್ ಬೇಸ್ ವತಿಯಿಂದ ಎರಡು ದಿನಗಳ ಕಾಲ ಏರ್ ಶೋ ಆಯೋಜನೆ ಮಾಡಲಾಗಿದೆ. ಶನಿವಾರ ನಡೆದ ಏರ್ ಶೋ ರೋಮಜನಕಾರಿಯಾಗಿತ್ತು. ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.
Updated on: Sep 22, 2024 | 7:49 AM

ಬೀದರ್ನ ಕೋಟೆ ಆವರಣದಲ್ಲಿ ಶನಿವಾರ ನಡೆದ ಏರ್ ಶೋ ರೋಮಜನಕಾರಿಯಾಗಿತ್ತು. ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಯುದ್ದ ವಿಮಾನಗಳು ಆಕಾಶದಲ್ಲಿ ಬಣ್ಣದಿಂದ ಬಿಡಿಸಿದ ತ್ರಿವರ್ಣ ಧ್ವಜ ನೋಡಲು ಎರಡು ಕಣ್ಣು ಸಾಲದು.

ಬೀದರ್ ಜಿಲ್ಲೆಯ ಜನರ ಆಸೆಯಂತೆ ವಾಯು ಸೇನೆಯ ಶಕ್ತಿಯನ್ನು ಜನರಿಗೆ, ಮಕ್ಕಳಿಗೆ ತೋರಿಸುವ ಉದ್ದೇಶದಿಂದ ಬೀದರ್ ಕೋಟೆ ಆವರಣದಲ್ಲಿ ಬೀದರ್ನ ಏರ್ ಬೇಸ್ ವತಿಯಿಂದ ಎರಡು ದಿನಗಳ ಕಾಲ ಏರ್ ಶೋ ಆಯೋಜನೆ ಮಾಡಲಾಗಿದೆ.

ಶನಿವಾರ ನಡೆದ ಏರ್ ಶೋನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. 10 ನಿಮಿಷಗಳ ಕಾಲ ಸೂರ್ಯಕಿರಣ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ಮಕ್ಕಳ ಹಾಗೂ ನೇರದಿದ್ದವರಲ್ಲಿ ರೋಮಾಚನ ಉಂಟುಮಾಡಿದವು.

ಇದು ಎರಡುನೇ ಬಾರಿಗೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮತ್ತು ಸೈನಿಕರ ಕುಟುಂಬಸ್ಥರಿಗೆ ಏರ್ ಶೋ ನೋಡಲು ಅವಕಾಶ ಕಲ್ಪಿಸಲಾಗಿದೆ. ಸೂರ್ಯ ಕಿರಣ ಯುದ್ಧ ವಿಮಾನಗಳು ಹೃದಯ ನಡುಗಿಸುವಂತಹ ಶಬ್ಧಮಾಡುತ್ತಾ ಮೇಲಕ್ಕೇರಿ ಓರೆಯಾದ ತಿರುವಿನೊಂದಿಗೆ ಮುಂದೆ ಸಾಗುವುದನ್ನು ಕಂಡು ಪ್ರೇಕ್ಷಕರು ರೋಮಾಂಚನಗೊಂಡರು.

ಮತ್ತೆ ಕೆಲ ವಿಮಾನಗಳು ಮೇಲಕ್ಕೆ ಹೋಗಿ ತಲೆ ಕೆಳಗಾಗಿ ರಫ್ ಅಂತ ಸ್ವಲ್ಪ ಕೆಳೆಗೆ ಬಂದು, ಪಲ್ಟಿ ಹೊಡೆದಿರುವುದನ್ನು ಕಂಡು ಜನರನ್ನು ಕಕ್ಕಾಬಿಕ್ಕಿಯಾಗಿಸಿದವು. ಲೋಹದ ಹಕ್ಕಿಗಳನ್ನು ಹತ್ತಿರದಿಂದ ನೋಡಿ, ಆಕಾಶದಲ್ಲಿ ಅದು ಹಾರಾಡುವುದನ್ನು ಕಂಡು ಹಾಗೂ ಅದನ್ನು ಚಾಲನೆ ಮಾಡಿದ ಪೈಲಟ್ ಕಂಡು ವಿದ್ಯಾರ್ಥಿಗಳು ಖುಷಿ ಪಟ್ಟರು ನಾವೂ ಪೈಲೆಟ್ ಆಗಬೇಕೆಂಬ ಆಸೆ ವ್ಯಕ್ತಪಡಿಸಿದ್ದರು.

ಶನಿವಾರ ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಏರ್ ಶೋ ವೀಕ್ಷಿಸಿದರು. ವಾಯುಸೇನೆಯ ಯುದ್ಧ ವಿಮಾನಗಳ ಹಾರಾಟ ಕಂಡು ಖುಷಿ ಪಟ್ಟರು. ಸೂರ್ಯಕಿರಣ ಯುದ್ಧ ವಿಮಾನಗಳ ಶಕ್ತಿ ಪ್ರದರ್ಶನ ಎಲ್ಲೆರ ಗಮನ ಸೆಳೆದವು.

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...
Read More