- TV9 Kannada Photo gallery Kanyakumari to Kashmir Solo Bike Ride: Diploma Student's Epic Journey, Karnataka news in kannada
ಕನ್ಯಾಕುಮಾರಿ ಟು ಕಾಶ್ಮೀರ: ಸ್ಕೂಟಿಲಿ 8033 ಕಿಮೀ ರೈಡ್ ಮಾಡಿದ ಬಾಗಲಕೋಟೆ ಯುವತಿ
ನಾಗರತ್ನಾ ಮೇಟಿ ಎಂಬ ಡಿಪ್ಲೋಮಾ ವಿದ್ಯಾರ್ಥಿನಿ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಏಕಾಂಗಿ ಬೈಕ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. 8033 ಕಿಮೀ ದೂರವನ್ನು ಬೈಕಿನಲ್ಲಿ ಪ್ರಯಾಣಿಸಿ, ಕಾಶ್ಮೀರದಲ್ಲಿ ಕನ್ನಡ ಧ್ವಜವನ್ನು ಹಾರಿಸಿದ್ದಾರೆ. ಈ ಸಾಹಸಯಾತ್ರೆಯಲ್ಲಿ ಎದುರಾದ ಸವಾಲುಗಳನ್ನು ಎದುರಿಸಿ ಅವರು ತಮ್ಮ ಗುರಿಯನ್ನು ತಲುಪಿದ್ದಾರೆ.
Updated on:Jan 17, 2025 | 9:18 PM

ಬಾಗಲಕೋಟೆಯ ಯುವತಿ ಕೊನೆಗೂ ತಾನು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾಳೆ. ಬೈಕ್ನಲ್ಲಿ ಸೋಲೋ ರೈಡಿಂಗ್ ಮೂಲಕ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ದಾಖಲೆ ಬರೆದಿದ್ದಾಳೆ.

ಈ ಯುವತಿ ಹೆಸರು ನಾಗರತ್ನಾ ಮೇಟಿ. ಸದ್ಯ ಡಿಪ್ಲೊಮಾ ಅಂತಿಮ ವರ್ಷದ ವಿದ್ಯಾರ್ಥಿನಿ. ಈಕೆ ಇದೀಗ ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಬೈಕ್ ರೈಡ್ ಮಾಡಿ ಸಾಧನೆ ಮಾಡಿದ್ದಾಳೆ. ಅದು ಸ್ಕೂಟಿಯಲ್ಲಿ ಸೋಲೋ ರೈಡ್ ಮಾಡಿ ದಾಖಲೆ ಮಾಡಿದ್ದಾಳೆ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ 8033 ಕಿಮೀ ಸೋಲೋ ರೈಡ್ ಮಾಡಿ ಕಾಶ್ಮೀರದಲ್ಲಿ ಕನ್ನಡ ಧ್ವಜ ಹಾರಿಸಿದ್ದಾಳೆ.

ನಾಗರತ್ನಾ ಡಿಸೆಂಬರ್ 24 ರಂದು ಬಾಗಲಕೋಟೆಯಿಂದ ತನ್ನ ಪ್ರಯಾಣ ಆರಂಭಿಸಿದ್ದಳು. ಅಲ್ಲಿಂದ ಕನ್ಯಾಕುಮಾರಿ ಹೋಗಿ ಬಳಿಕ ಗುಜರಾತ್, ರಾಜಸ್ಥಾನ, ಜಯಪುರ, ಉದಯಪುರ, ದೆಹಲಿ, ಅಮೃತಸರ ಮಾರ್ಗವಾಗಿ ಕಾಶ್ಮೀರದ ಶ್ರೀನಗರ ತಲುಪಿದ್ದರು. ಇದೀಗ ಪ್ರವಾಸ ಮುಗಿಸಿ ಜನವರಿ 14ರಂದು ವಾಪಸ್ ಆಗಿದ್ದಾರೆ.

ಈಕೆಯ ಮೊಬೈಲ್ ನಿರಂತರವಾಗಿ ಟ್ರ್ಯಾಕ್ನಲ್ಲಿತ್ತು. ರೂಟ್ ಮ್ಯಾಪ್ ಮೂಲಕ ಸವಾರಿ ಮಾಡಿದ್ದು, ಕಾಶ್ಮೀರದಲ್ಲಿ ಕೊರೆಯುವ ಚಳಿಯಲ್ಲಿ ರೈಡ್ ಮಾಡಿದ್ದಾಳೆ. ಸವಾರಿ ವೇಳೆ ಒಂದು ಸಾರಿ ಬೈಕ್ನಿಂದ ಬಿದ್ದಿದ್ದು, ಎಲ್ಲಾ ಅಡಚಣೆಗಳನ್ನು ಎದುರಿಸಿ ವಾಪಸ್ ಬಂದಿದ್ದಾಳೆ.

ನಾಗರತ್ನಾ ಊರಿಗೆ ಬರುತ್ತಿದ್ದಂತೆ ಸ್ಥಳೀಯರು ಸನ್ಮಾನ ಮಾಡಿ ಬರಮಾಡಿಕೊಂಡಿದ್ದಾರೆ. ಯುವತಿಯ ತಾಯಿ ಹಾಗೂ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಯುವತಿ ಚಿಕ್ಕ ವಯಸ್ಸಲ್ಲಿ ಮಹಾನ್ ಸಾಧನೆ ಮಾಡಿದ್ದು ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Published On - 9:17 pm, Fri, 17 January 25

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.
Read More



