Dharwad Snakes: ನೆಲದಲ್ಲಿ ಅವಿತಿದ್ದವು ರಾಶಿ ರಾಶಿ ನಾಗರಹಾವುಗಳು, ಹೆಡೆ ಎತ್ತಿ ಹೊರ ಬಂದ ತಾಯಿ
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿವೆ.
Updated on:Jun 10, 2023 | 10:13 AM
Share

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ನಾಗರ ಹಾವಿನ ಮರಿಗಳು ಪತ್ತೆಯಾಗಿವೆ.

ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿದ್ದು ಹಾವುಗಳನ್ನು ನೋಡಿ ಜನ ಹೌಹಾರಿದರು.

ಕಳೆದ ಹಲವು ದಿನಗಳಿಂದ ಬಸವರಾಜ ಕಟ್ಟಿಮನಿ ಎಂಬುವವರ ಮನೆ ಬಳಿ ನಾಗರಹಾವು ಓಡಾಡುತ್ತಿತ್ತು. ಹೀಗಾಗಿ ಉರಗ ತಜ್ಞರನ್ನು ಮನೆಗೆ ಕರೆಸಿದ್ದರು.

ಉರಗ ತಜ್ಞ ಹಾವಿನ ಬಿಲ ಕಂಡು ಹಿಡಿದು, ನೆಲ ಅಗೆದಾಗ ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹೆಡೆ ಎತ್ತಿ ಹೊರ ಬಂದಿದೆ.

ತಾಯಿ ನಾಗರಹಾವು ಹೊರ ಬಂದ ಬಳಿಕ 25 ಮರಿ ನಾಗರಹಾವುಗಳನ್ನೂ ಕೂಡ ಹೊರಕ್ಕೆ ತೆಗೆದು ರಕ್ಷಿಸಲಾಗಿದೆ.

ತಾಯಿ ಹಾವನ್ನು ಹಿಡಯುತಿದ್ದಂತೆಯೇ ಮರಿ ಹಾವುಗಳು ಬಿಲದಿಂದ ಹೊರಕ್ಕೆ ಬಂದಿದ್ದು ಹಾವುಗಳನ್ನು ರಕ್ಷಿಸಿ ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ.
Published On - 9:52 am, Sat, 10 June 23
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
