AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮೂಲಕ ಮೈಸೂರು ಸೆಂಗೊಟ್ಟೈ ಮಧ್ಯೆ 2 ವಿಶೇಷ ರೈಲು: ಸಮಯ, ನಿಲುಗಡೆ ವಿವರ ಇಲ್ಲಿದೆ

ಬೆಂಗಳೂರು, ಆಗಸ್ಟ್ 29: ನೈಋತ್ಯ ರೈಲ್ವೆಯು ಹಬ್ಬಗಳ ಸೀಸನ್​ನಲ್ಲಿ ಕರ್ನಾಟಕದ ಮತ್ತು ಇತರ ರಾಜ್ಯಗಳ ಮಧ್ಯೆ ಅನೇಕ ವಿಶೇಷ ರೈಲುಗಳ ಸೇವೆ ಒದಗಿಸುತ್ತಿದೆ. ಈ ವರ್ಷವೂ ಹಲವು ವಿಶೇಷ ರೈಲುಗಳನ್ನು ಘೋಷಿಸಿದೆ. ಇದೀಗ ಮೈಸೂರು ಮತ್ತು ತಮಿಳುನಾಡಿನ ಸೆಂಗೊಟ್ಟೈ ಮಧ್ಯೆ ಬೆಂಗಳೂರು ಮಾರ್ಗವಾಗಿ 2 ವಿಶೇಷ ರೈಲುಗಳನ್ನು ಪ್ರಕಟಿಸಿದೆ. ಆ ಕುರಿತ ವಿವರ ಇಲ್ಲಿದೆ.

ಗಣಪತಿ ಶರ್ಮಾ
|

Updated on: Aug 29, 2024 | 1:16 PM

Share
ಹಬ್ಬಗಳ ಸೀಸನ್​ನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಸೆಪ್ಟೆಂಬರ್‌ನಲ್ಲಿ ಮೈಸೂರು ಮತ್ತು ಸೆಂಗೊಟ್ಟೈ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಮೈಸೂರು-ಸೆಂಗೊಟ್ಟೈ ಎಕ್ಸ್‌ಪ್ರೆಸ್ ವಿಶೇಷ ರೈಲು (06241) ಮೈಸೂರಿನಿಂದ ಸೆಪ್ಟೆಂಬರ್ 4 ಮತ್ತು 7 ರಂದು ರಾತ್ರಿ 9.20 ಕ್ಕೆ ಹೊರಟು ಮರುದಿನ ಸಂಜೆ 4.50 ಕ್ಕೆ ಸೆಂಗೊಟ್ಟೈ ತಲುಪಲಿದೆ.

ಹಬ್ಬಗಳ ಸೀಸನ್​ನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಸೆಪ್ಟೆಂಬರ್‌ನಲ್ಲಿ ಮೈಸೂರು ಮತ್ತು ಸೆಂಗೊಟ್ಟೈ ನಡುವೆ ವಿಶೇಷ ರೈಲುಗಳನ್ನು ಘೋಷಿಸಿದೆ. ನೈಋತ್ಯ ರೈಲ್ವೆ ಪ್ರಕಟಣೆಯ ಪ್ರಕಾರ, ಮೈಸೂರು-ಸೆಂಗೊಟ್ಟೈ ಎಕ್ಸ್‌ಪ್ರೆಸ್ ವಿಶೇಷ ರೈಲು (06241) ಮೈಸೂರಿನಿಂದ ಸೆಪ್ಟೆಂಬರ್ 4 ಮತ್ತು 7 ರಂದು ರಾತ್ರಿ 9.20 ಕ್ಕೆ ಹೊರಟು ಮರುದಿನ ಸಂಜೆ 4.50 ಕ್ಕೆ ಸೆಂಗೊಟ್ಟೈ ತಲುಪಲಿದೆ.

1 / 5
ಸೆಂಗೊಟ್ಟೈ - ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06242) ಸೆಪ್ಟೆಂಬರ್ 5 ಮತ್ತು 8 ರಂದು ಸಂಜೆ 7.45 ಕ್ಕೆ ಸೆಂಗೊಟ್ಟೈನಿಂದ ಹೊರಟು ಮರುದಿನ ಮಧ್ಯಾಹ್ನ 2.20 ಕ್ಕೆ ಮೈಸೂರು ತಲುಪಲಿದೆ.

ಸೆಂಗೊಟ್ಟೈ - ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06242) ಸೆಪ್ಟೆಂಬರ್ 5 ಮತ್ತು 8 ರಂದು ಸಂಜೆ 7.45 ಕ್ಕೆ ಸೆಂಗೊಟ್ಟೈನಿಂದ ಹೊರಟು ಮರುದಿನ ಮಧ್ಯಾಹ್ನ 2.20 ಕ್ಕೆ ಮೈಸೂರು ತಲುಪಲಿದೆ.

2 / 5
ಬೆಂಗಳೂರು ಮೂಲಕ ಹಾದುಹೋಗಲಿವೆ: ಎರಡೂ ವಿಶೇಷ ರೈಲುಗಳು ಕೆಎಸ್‌ಆರ್ ಬೆಂಗಳೂರು, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಕಾರೈಕ್ಕುಡಿ, ಮನನಮದುರೈ, ಅರುಪ್ಪುಕ್ಕೊಟ್ಟೈ, ವಿರುದುನಗರ, ರಾಜಪಾಳ್ಯಂ ಮತ್ತು ತೆಂಕಶಿ ಮೂಲಕ ಹಾದುಹೋಗಲಿವೆ.

ಬೆಂಗಳೂರು ಮೂಲಕ ಹಾದುಹೋಗಲಿವೆ: ಎರಡೂ ವಿಶೇಷ ರೈಲುಗಳು ಕೆಎಸ್‌ಆರ್ ಬೆಂಗಳೂರು, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಕಾರೈಕ್ಕುಡಿ, ಮನನಮದುರೈ, ಅರುಪ್ಪುಕ್ಕೊಟ್ಟೈ, ವಿರುದುನಗರ, ರಾಜಪಾಳ್ಯಂ ಮತ್ತು ತೆಂಕಶಿ ಮೂಲಕ ಹಾದುಹೋಗಲಿವೆ.

3 / 5
ಎರಡು ಎಸಿ 2 ಟೈರ್, ಎರಡು ಎಸಿ 3 ಟೈರ್, ಆರು ಸ್ಲೀಪರ್ ಕೋಚ್​, ಆರು ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಈ ವಿಶೇಷ ರೈಲುಗಳು ಒಳಗೊಂಡಿರಲಿವೆ.

ಎರಡು ಎಸಿ 2 ಟೈರ್, ಎರಡು ಎಸಿ 3 ಟೈರ್, ಆರು ಸ್ಲೀಪರ್ ಕೋಚ್​, ಆರು ಸಾಮಾನ್ಯ ಸೆಕೆಂಡ್ ಕ್ಲಾಸ್ ಮತ್ತು ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಈ ವಿಶೇಷ ರೈಲುಗಳು ಒಳಗೊಂಡಿರಲಿವೆ.

4 / 5
ವಿಶೇಷ ರೈಲುಗಳಿಗೆ ಎಲ್ಲೆಲ್ಲಿ ನಿಲುಗಡೆ?: ಯೆಲಿಯೂರು, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕ್ಕುಡಿ, ಶಿವಗಂಗಾ, ಮನಮದುರೈ, ಅರಪ್ಪುಕ್ಕೋಟ್ಟೈ, ರಾಜಪಾಲಂ ಶ್ರೀನಗರ, ಅರಪ್ಪುಕ್ಕೊಟ್ಟೈ, ವಿರುದ್‌ಕೊಟ್ಟು, ಶಂಕರಕೋವಿಲ್, ಪಮಾಬ ಕೋವಿಲ್ ಶಾಂಡಿ, ಕಡಯನಲ್ಲೂರು ಮತ್ತು ತೆಂಕಶಿ ನಿಲ್ದಾಣಗಳಲ್ಲಿ ವಿಶೇಷ ರೈಲುಗಳಿಗೆ ನಿಲುಗಡೆ ಇದೆ.

ವಿಶೇಷ ರೈಲುಗಳಿಗೆ ಎಲ್ಲೆಲ್ಲಿ ನಿಲುಗಡೆ?: ಯೆಲಿಯೂರು, ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ, ಪುದುಕ್ಕೊಟ್ಟೈ, ಕಾರೈಕ್ಕುಡಿ, ಶಿವಗಂಗಾ, ಮನಮದುರೈ, ಅರಪ್ಪುಕ್ಕೋಟ್ಟೈ, ರಾಜಪಾಲಂ ಶ್ರೀನಗರ, ಅರಪ್ಪುಕ್ಕೊಟ್ಟೈ, ವಿರುದ್‌ಕೊಟ್ಟು, ಶಂಕರಕೋವಿಲ್, ಪಮಾಬ ಕೋವಿಲ್ ಶಾಂಡಿ, ಕಡಯನಲ್ಲೂರು ಮತ್ತು ತೆಂಕಶಿ ನಿಲ್ದಾಣಗಳಲ್ಲಿ ವಿಶೇಷ ರೈಲುಗಳಿಗೆ ನಿಲುಗಡೆ ಇದೆ.

5 / 5
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ